Latest Updates
-
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ -
ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ! -
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ
ನಿಮ್ಮ ಈ ಅಭ್ಯಾಗಳು ಕಿಡ್ನಿ ಸಮಸ್ಯೆಗೆ ಮುಖ್ಯ ಕಾರಣ..! ಇಂದೇ ನಿಲ್ಲಿಸಿ!
ನಮ್ಮ ದೇಹದಲ್ಲಿನ ಪ್ರತಿಯೊಂದು ಅಂಗಗಳು ಬಹುಮುಖ್ಯ ಎಂದು ಪರಿಗಣಿಸಲಾಗಿದೆ. ಹಾಗೆ ಕಿಡ್ನಿಯು ಕೂಡ ಬಹಳ ಮುಖ್ಯ ಅಂಗ ಎನ್ನುವುದರಲ್ಲಿ ಅನುಮಾನವಿಲ್ಲ. ಮೂತ್ರಪಿಂಡ ನಮ್ಮ ದೇಹದಲ್ಲಿನ ಕಲ್ಮಶಗಳ ಹೊರಹಾಕಲು ಬಹುಮುಖ್ಯ ಅಂಗವಾಗಿ ಕಾರ್ಯ ನಿರ್ವಹಿಸಲಿದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸದ್ದಿಲ್ಲದೆ ಕೆಲಸ ಮಾಡುವ ಪ್ರಮುಖ ಅಂಗಗಳಾಗಿವೆ.
ಆದ್ರೆ ಕಿಡ್ನಿ ಮೇಲಿನ ಅನಗತ್ಯ ಹೊರೆಯು ಮೂತ್ರಪಿಂಡದ ಶ್ರಮವನ್ನು ಹೆಚ್ಚಿಸಲಿದೆ. ಹಾಗೆ ಹಲವು ರೀತಿಯಾಗಿ ಅದು ನಮ್ಮ ದೇಹಸ ಸಮತೋಲನ ಕಾಪಾಡುವ ಅಂಗವೂ ಆಗಿರಲಿದೆ. ಆದ್ರೆ ಇತ್ತೀದಿನ ದಿನಗಳಲ್ಲಿ ಮೂತ್ರಪಿಂಡಕ್ಕೆ ನಾವು ಬಹಳಷ್ಟು ರೀತಿಯಲ್ಲಿ ಹಾನಿ ಮಾಡುತ್ತಿದ್ದೇವೆ. ಅದ್ರಲ್ಲೂ ನಾವು ನಿತ್ಯ ಮಾಡುವ ಕೆಲವೊಂದು ಕೆಲಸದಿಂದಾಗಿ ಕಿಡ್ನಿ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ.

ನಮ್ಮ ನಿತ್ಯದ ತಪ್ಪುಗಳಿಂದಾಗಿ ಕಿಡ್ನಿ ಮೇಲೆ ಒತ್ತಡ ಹೆಚ್ಚಾಗುವುದರ ಜೊತೆಗೆ ಅದರ ಕಾರ್ಯಕ್ಷಮತೆ ಕಡಿಮೆಯಾಗುವುದಕ್ಕೆ ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ. ಹೌದು ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಕಿಡ್ನಿಗೆ ಹಾನಿ ಮಾಡುವುದು ನೊಡಬಹುದು. ಹಾಗಾದ್ರೆ ಯಾವೆಲ್ಲಾ ವಿಚಾರಗಳು, ತಪ್ಪು ಕೆಲಸಗಳು ಕಿಡ್ನಿಗೆ ಹಾನಿ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ಅನಗತ್ಯ ಹೊರೆಯಿಂದಾಗಿ ಕಿಡ್ನಿಯ ಸಮಸ್ಯೆ ಉಂಟಾಗುತ್ತದೆ. ಹಾಗೆ ಕಿಡ್ನಿ ದಿನದ 24 ಗಂಟೆ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ನಿಮ್ಮ ಕೆಲವು ಅಭ್ಯಾಸಗಳು ಕಿಡ್ನಿಯಲ್ಲಿ ಹಾನಿಗೆ ಕಾರಣವಾಗಬಹುದು.
ಅತಿಯಾದ ಪೈನ್ ಕಿಲ್ಲರ್ ಸೇವನೆ
ನೀವು ಸಣ್ಣ ಪುಟ್ಟ ವಿಚಾರಕ್ಕೂ ಪೈನ್ ಕಿಲ್ಲರ್ ಅಥವಾ ನೋವು ನಿವಾರಕ ಮಾತ್ರೆಗಳ ಸೇವಿಸುವುದು ನಿಮ್ಮ ಕಿಡ್ನಿಯ ಮೇಲೆ ಹೆಚ್ಚು ಉತ್ತಡ ತರಲಿದೆ. ಇದರಿಂದ ಕಿಡ್ನಿಯ ಕಾರ್ಯಕ್ಷಮತೆ ಕಡಿಮೆ ಆಗಲು ಕಾರಣವಾಗಬಹುದು. ಐಬುಪ್ರೊಫೇನ್ ಮತ್ತು ನ್ಯಾಪ್ರೋಕ್ಸೆನ್ನಂತಹ ನಾನ್-ಸ್ಟೆರಾಯ್ಡ್ ಉರಿಯೂತದ ಔಷಧಗಳು ಅಥವಾ NSAID ಗಳನ್ನು - ತಲೆನೋವು, ದೇಹದ ನೋವು ಅಥವಾ ಋತುಚಕ್ರದ ನೀವು ನಿವಾರಣೆಯಾಗಿ ತೆಗೆದುಕೊಳ್ಳುವ ಮಾತ್ರೆಗಳು ಹಾನಿಕಾರಕವಾಗಬಹುದು.
ಅತಿಯಾದ ಉಪ್ಪು ಸೇವನೆ
ನೀವು ಎಲ್ಲಾ ಪದಾರ್ಥದಲ್ಲು ಸ್ವಲ್ಪ ಹೆಚ್ಚಿಗೆ ಪ್ರಮಾಣದ ಉಪ್ಪು ಸೇವಿಸುತ್ತಿದ್ದರೆ ಅದು ಕೂಡ ನಿಮ್ಮ ಕಿಡ್ನಿ ಮೇಲೆ ಒತ್ತಡ ಹೆಚ್ಚುವಂತೆ ಮಾಡಲಿದೆ.
ಸಮುದ್ರ ಉಪ್ಪು ಲವಣಗಳು ರಾಸಾಯನಿಕವಾಗಿ ಒಂದೇ ಆಗಿರುತ್ತವೆ - ಸೋಡಿಯಂ ಕ್ಲೋರೈಡ್ ಮಟ್ಟಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ, ಇದು ಮೂತ್ರಪಿಂಡದ ಹಾನಿಗೆ ಪ್ರಮುಖ ಕಾರಣವಾಗಿದೆ. ದೇಹವು ಉಪ್ಪಿನಿಂದ ತುಂಬಿರುವಾಗ, ಮೂತ್ರಪಿಂಡಗಳು ಹೆಚ್ಚುವರಿವನ್ನು ಹೊರಹಾಕಲು ಹೆಚ್ಚು ಶ್ರಮಿಸಬೇಕು. ಇದು ನಿಮ್ಮ ಕಿಡ್ನಿ ಕಾಲಾನಂತರದಲ್ಲಿ ಹಾನಿಗೆ ಕಾರಣವಾಗಬಹುದು.
ಅತಿಯಾದ ದ್ರವ ಪದಾರ್ಥ ಸೇವನೆ
ಸಾಕಷ್ಟು ನೀರು ಕುಡಿಯುವುದು ಮತ್ತು ದ್ರವ ಪದಾರ್ಥ ಸೇವನೆ ಕೂಡ ಕಿಡ್ನಿ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ದಿನಕ್ಕೆ ಆರರಿಂದ ಏಳು ಲೀಟರ್ ನೀರು ಕುಡಿಯುವುದರಿಂದ ಮೂತ್ರಪಿಂಡಗಳನ್ನು ರಕ್ಷಿಸುವುದಿಲ್ಲ ಮತ್ ಹಾನಿಕಾರಕವೂ ಆಗಿರಬಹುದು. ಅತಿಯಾದ ನೀರಿನ ಸೇವನೆಯು ಹೈಪೋನಾಟ್ರೀಮಿಯಾಕ್ಕೆ ಕಾರಣವಾಗಬಹುದು, ಇದು ರಕ್ತದಲ್ಲಿನ ಸೋಡಿಯಂ ಮಟ್ಟಗಳು ತುಂಬಾ ಕಡಿಮೆಯಾಗುವ ಸ್ಥಿತಿಯಾಗಿದೆ. ಇದು ಮೂತ್ರಪಿಂಡಗಳು ಹೆಚ್ಚುವರಿ ನೀರನ್ನು ಹೊರಹಾಕಲು ಹೆಚ್ಚು ಸಮಯ ಶ್ರಮ ಹಾಕಿ ಕೆಲಸ ಮಾಡಬೇಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











