Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಶ್ವಾಸಕೋಶದ ಆರೋಗ್ಯ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ
ಕೊರೊನಾವೈರಸ್ ಬಂದಾಗಿನಿಂದ ಎಲ್ಲರೂ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಕೊರೊನಾವೈರಸ್ ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅವರ ದೇಹವನ್ನು ಬೇಗ ಸೇರಿಕೊಂಡು ಅವರ ಶ್ವಾಸಕೋಶವನ್ನು ಹಾಳು ಮಾಡಿ ದೇಹವನ್ನು ದುರ್ಬಲಗೊಳಿಸುವ ಕಾರ್ಯ ಮಾಡುತ್ತದೆ.
ಕೊರೊನಾವೈರಸ್ ಬಗ್ಗೆ ಭಯ, ಆಗಾಗ ಬಿಸಿ ಬಿಸಿಯಾದ ನೀರು ಕುಡಿಯಿರಿ, ಕಷಾಯ ಕುಡಿಯಿರಿ ಇವುಗಳು ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಆಯುರ್ವೇದ ವೈದ್ಯರುಗಳು ಕೂಡ ಸಲಹೆ ನೀಡುತ್ತಿದ್ದಾರೆ.

ನಮ್ಮಲ್ಲಿ ಹಿಂದಿನ ಕಾಲದಲ್ಲಿ ಸಾಧಾರಣ ಕೆಮ್ಮು, ಶೀತ ಉಂಟಾದಾಗ ಆಸ್ಪತ್ರೆಗೆ ಹೋಗುವ ಬದಲು ಕಷಾಯಗಳನ್ನು ಮಾಡಿ ಕುಡಿದು ವಾಸಿ ಮಾಡುತ್ತಿದ್ದರು. ಮನೆಯಲ್ಲಿರುವ ಶುಂಠಿ ತುಳಸಿ, ಶುಂಠಿ, ಏಲಕ್ಕಿ, ಚಕ್ಕೆ ಇವುಗಳಿಗೆಲ್ಲಾ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳಿವೆ, ಅಲ್ಲದೆ ಶ್ವಾಸಕೋಶದ ಆರೋಗ್ಯವನ್ನು ಕೂಡ ಕಾಪಾಡುತ್ತದೆ.
ಇಲ್ಲಿ ನಾವು ಅಂಥದ್ದೇ ಪರಿಣಾಮಕಾರಿಯಾದ ಕಷಾಯ ನೀಡಿದ್ದೇವೆ. ಇದನ್ನು ಪ್ರಸಿದ್ಧ ಲೈಫ್ಸ್ಟೈಲ್ ಎಕ್ಸ್ಪರ್ಟ್ ಲುಕೆ ಕೌಂಟಿನೋ ಕೂಡ ನೀಡಿದ್ದಾರೆ. ಈ ಕಷಾಯ ಗಂಟಲಿನ ಆರೋಗ್ಯ ಕಾಪಾಡುತ್ತದೆ ಹಾಗೂ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಕಷಾಯ ರೆಸಿಪಿ
ಬೇಕಾಗುವ ಸಾಮಗ್ರಿ
ಒಂದು ಇಂಚಿನಷ್ಟು ಉದ್ದದ ಶುದ್ಧ ಶುಂಠಿ
ಚಕ್ಕೆ ಒಂದು ಚಿಕ್ಕ ಪೀಸ್
ಅರ್ಧ ಚಮಚ ತಳಸಿ ಪುಡಿ/ಎಲೆ
3 ಕಾಳು ಮೆಣಸು
2 ಏಲಕ್ಕಿ
1/4 ಚಮಚ ಸೊಂಪು
ಚಿಟಿಕೆಯಷ್ಟು ಅಜ್ವೈನ್
1/4 ಜೀರಿಗೆ
1-2 ಎಸಳು ಬೆಳ್ಳುಳ್ಳಿ (ಬೇಕಿದ್ದರೆ ಬಳಸಬಹುದು)
2 ಕಪ್ ನೀರಿನಲ್ಲಿ 10 ನಿಮಿಷ ಬೇಯಿಸಿ, ನಂತರ ಸೋಸಿ ಅದಕ್ಕೆ ಜೇನು ಸೇರಿಸಿ ಬಿಸಿ ಬಿಸಿ ಕುಡಿಯಿರಿ.
ಇದಕ್ಕೆ ಸಿಹಿ ಬೇಕೆಂದರೆ ಜೇನು ಅಥವಾ ಬೆಲ್ಲ ಹಾಕಿ ಕುಡಿಯಬಹುದು.

ಕಷಾಯದ ಪ್ರಯೋಜನಗಳು
ಗಂಟಲಿನ ಸ್ವಾಸ್ಥ್ಯ ಹೆಚ್ಚುವುದು
ಇದನ್ನು ದಿನದಲ್ಲಿ ಎರಡು ಬಾರಿ ಮಾಡಿ ಕುಡಿಯಿರಿ. ಟೀ ಬದಲಿಗೆ ಈ ರೀತಿಯ ಕಷಾಯ ಕುಡಿಯಿರಿ. ಇದು ಸಾಧಾರಣ ಕೆಮ್ಮು, ಶೀತ ಹೋಗಲಾಡಿಸುವುದು ಹಾಗೂ ಯಾವುದೇ ವೈರಾಣು, ಬ್ಯಾಕ್ಟಿರಿಯಾ ಶ್ವಾಸಕೋಶಕ್ಕೆ ಹಾನಿ ಮಾಡದಂತೆ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುವುದು
ಈಗ ನಾವೆಲ್ಲಾ ಇರುವ ಪರಿಸ್ಥಿತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಎಷ್ಟು ಅವಶ್ಯಕ ಎಂದು ತಿಳಿದಿರುತ್ತದೆ. ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ವಯಸ್ಸಾದವರಿಗೆ ಈ ಕಷಾಯ ದಿನದಲ್ಲಿ ಎರಡು ಬಾರಿ ಕೊಡಿ. ಮಕ್ಕಳಿಗೆ ಕೊಡುವ ಮುನ್ನ ಮಕ್ಕಳ ತಜ್ಞರು ಅಥವಾ ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ. ಒಂದು ವರ್ಷದ ಕೆಳಗಿನ ಮಕ್ಕಳಿಗೆ ವೈದ್ಯರ ಸಲಹೆ ಪಡೆಯದೇ ಯಾವುದೇ ಮನೆಮದ್ದು ಮಾಡಬೇಡಿ.
ಸೂಚನೆ: ಈ ಕಷಾಯವನ್ನು ದಿನದಲ್ಲಿ 1-2 ಬಾರಿಯಷ್ಟೆ ತೆಗೆದುಕೊಳ್ಳಿ, ಇಲ್ಲದಿದ್ದರೆ ಮೈ ಉಷ್ಣತೆ ಹೆಚ್ಚಿ, ಮೂತ್ರವಿಸರ್ಜನೆಗೆ ಹೋಗುವಾಗ ಉರಿಯಾಗುವುದು. ಇದು ಬೇಸಿಗೆಯಾಗಿರುವುದರಿಂದ ಮೈ ಉಷ್ಣತೆ ತುಂಬಾ ಹೆಚ್ಚಿಸಲೂ ಬೇಡಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇತರ ಸಲಹೆ
- ಬಿಸಿಬಿಸಿಯಾದ ನೀರು ಕುಡಿಯಿರಿ
- ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯಿರಿ
- ಹಣ್ಣಿನ ಜ್ಯೂಸ್ ತೆಗೆದುಕೊಳ್ಳಿ
- ಆಹಾರವನ್ನು ಬಿಸಿ ಬಿಸಿ ತಿನ್ನಿ. ಫ್ರಿಡ್ಜ್ನಲ್ಲಿ ಇಟ್ಟು ತಿನ್ನುವುದು ಕಡಿಮೆ ಮಾಡಿ.
- ವ್ಯಾಯಾಮ ಮಾಡಿ.
- ಆತಂಕ ಹೆಚ್ಚಿಸುವ ನ್ಯೂಸ್ ಹೆಚ್ಚು ನೋಡಬೇಡಿ, ನೀವು ಆರೋಗ್ಯವಾಗಿದ್ದೀರಿ ಎಂದು ಮೊದಲು ನಿಮ್ಮ ಮನಸ್ಸನ್ನು ದೃಢಪಡಿಸಿ ಆಗ ದೇಹವೂ ಆರೋಗ್ಯವಾಗಿರುವುದು.
ಲಾಕ್ಡೌನ್ ಮುಗಿಯುವವರೆಗೆ ಮನೆಯಿಂದ ಹೊರಗಡೆ ಬರಬೇಡಿ, ಮನೆಯಲ್ಲಿಯೇ ಇರಿ, ಆರೋಗ್ಯವಾಗಿರಿ.



Click it and Unblock the Notifications
