Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಈ ಹವ್ಯಾಸ ನಿಮ್ಮಲ್ಲಿದ್ದರೆ ಮರೆವು ಕಟ್ಟಿಟ್ಟ ಬುತ್ತಿ
ಮರೆವು ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ, ಮರೆವು ಸಮಸ್ಯೆ ಉಂಟಾದರೆ ಅದು ಮಾನಸಿಕವಾಗಿ ಹಾಗೂ ದೈಹಿಕವಾಗಿ ನಮ್ಮನ್ನು ಕುಗ್ಗಿಸಿ ಬಿಡುತ್ತದೆ, ನಮ್ಮಲ್ಲಿನ ಆತ್ಮವಿಶ್ವಾಸ ಕಡಿಮೆ ಮಾಡುತ್ತದೆ.

ನಮಗೇ ಗೊತ್ತಿಲ್ಲದೆ ನಮ್ಮ ಕೆಲವೊಂದು ಹವ್ಯಾಸಗಳು ನಮ್ಮ ಮೆದುಳಿಗೆ ತುಂಬಾನೇ ಹಾನಿ ಮಾಡಿರುತ್ತದೆ. ಇಲ್ಲಿ ನಾವು ನಮ್ಮ ಮೆದುಳನ್ನು ಹಾಳು ಮಾಡುವ ಕೆಲವೊಂದು ಅಭ್ಯಾಸಗಳ ಬಗ್ಗೆ ಹೇಳಿದ್ದೇವೆ.
ವಿಶ್ವ ಮೆದುಳಿನ ಆರೋಗ್ಯದ ದಿನವಾದ ಇಂದು (ಜುಲೈ22) ನಾವು ನಮ್ಮ ನೆನಪಿನ ಶಕ್ತಿ ಹಾಳು ಮಾಡುವ ನಮ್ಮ ಹವ್ಯಾಸಗಳಾವುವು ಎಂದು ತಿಳಿಯೋಣ. ಈ ಹವ್ಯಾಸಗಳು, ಅಭ್ಯಾಸಗಳು ನಿಮ್ಮಲ್ಲಿ ಇದ್ದರೆ ಅದಕ್ಕೆ ಗುಡ್ಬೈ ಹೇಳಿ ನೆನಪಿನ ಶಕ್ತಿ ಕಾಪಾಡೋಣ.

ಬೆಳಗ್ಗೆ ಉಪಾಹಾರ ಸೇವಿಸದಿರುವುದು
ಹೆಚ್ಚಿನವರಿಗೆ ಈ ಅಭ್ಯಾಸವಿರುತ್ತದೆ. ಬೆಳಗ್ಗೆ ಹಸಿವು ಇಲ್ಲವೆಂದೂ, ಸಮಯವಿಲ್ಲವೆಂದೂ ಇಲ್ಲ ಡಯಟ್ ಹೆಸರಿನಲ್ಲೋ ಬೆಳಗ್ಗೆ ಏನು ತಿನ್ನುವುದೇ ಇಲ್ಲ. ಯಾರಲ್ಲಿ ಈ ಅಭ್ಯಾಸ ಇದೆಯೋ ಅವರು ಒಂದು ವಿಷಯ ನೆನಪಿಟ್ಟುಕೊಳ್ಳಿ, ಕ್ರಮೇಣ ನೆನಪಿಟ್ಟುಕೊಳ್ಳಲು ನಿಮ್ಮಲ್ಲಿ ನೆನಪಿನ ಶಕ್ತಿ ಕ್ಷೀಣಿಸುವುದು. ಬೆಳಗ್ಗೆ ಪೋಷಕಾಶವಿರುವ ಆಹಾರ ಸೇವಿಸಬೇಕು, ಇಲ್ಲದಿದ್ದರೆ ದೇಹಕ್ಕೆ ಅಗ್ಯತವಾದ ಪೋಷಕಾಂಶ ಸಿಗದೆ ಆರೋಗ್ಯ ಹಾಳಾಗುವುದು, ಮೆದುಳಿನ ಸಾಮಾರ್ಥ್ಯ ಕೂಡ ಕ್ಷೀಣಿಸುವುದು.

ತುಂಬಾ ತಿನ್ನುವುದು
ಸಮತೋಲನ ಆಹಾರ ಆರೋಗ್ಯಕ್ಕೆ ಒಳ್ಳೆಯದು, ಆದರೆ ಕೆಲವರಿಗೆ ತುಂಬಾ ತಿನ್ನುವುದು ಒಳ್ಳೆಯದು. ಊಟ ಹೆಚ್ಚು ತಿನ್ನುವುದರಿಂದ ಬ್ಲೇಡ್ ಬ್ರಸೆಲ್ಸ್ನಲ್ಲಿ ಕೊಬ್ಬಿನಂಶ ಶೇಖರವಾಗುತ್ತದೆ ಇದು ಕೂಡ ಮೆದುಳಿಗೆ ಹಾನಿಯುಂಟು ಮಾಡಿ, ಕ್ಷೀಣಿಸುವುದು.

ಧೂಮಪಾನ
ಧೂಮಪಾನ ಮಾಡುವುದರಿಂದ ಶ್ವಾಸಕೋಶದ ಆರೋಗ್ಯ ಹಾಳು ಮಾಡುವುದು ಮಾತ್ರವಲ್ಲ ಮೆದುಳಿನ ಆರೋಗ್ಯ ಹಾಳು ಮಾಡಿತ್ತದೆ, ಧೂಮಪಾನ ಮಾಡುವವರಿಗೆ ಮೆದುಳಿನ ಸ್ಟ್ರೋಕ್ ಕೂಡ ಉಂಟಾಗುವುದು. ವಿಶ್ವದಲ್ಲಿ 11 ಮಿಲಿಯನ್ಗೂ ಅಧಿಕ ಜನರು ಧೂಮಪಾನದಿಂದಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮೊಬೈಲ್ ಬಳಕೆ
ರಾತ್ರಿ ತುಂಬಾ ಹೊತ್ತು ಮೊಬೈಲ್ ನೋಡುತ್ತಿದ್ದೀರಾ? ಹಾಗಾದರೆ ನಿದ್ರಾಹೀನತೆ ಜೊತೆಗೆ ಮರೆವು ಸಮಸ್ಯೆ ಕಾಡಬಹುದು. ತುಂಬಾ ಹೊತ್ತು ಮೊಬೈಲ್ ನೋಡುವುದರಿಂದ ಕಣ್ಣಿಗೆ ಮಾತ್ರವಲ್ಲ ಮೆದುಳಿಗೆ ಕೂಡ ಹಾನಿ ನಿಯುಂಟಾಗುತ್ತದೆ. ಇದರಿಂದ ಮೆದುಳಿನ ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚಿರುತ್ತದೆ. ವಾಯು ಮಾಲಿನ್ಯ ಅಧಿಕ ಇರುವ ಜಾಗದಲ್ಲಿ ವಾಸಿಸುವವರಿಗೆ ಮರೆವು ಸಮಸ್ಯೆ ಕಾಡಬಹುದು.

ಮುಖಕ್ಕೆ ಮುಸುಕು ಹಾಕಿ ಮಲಗುವುದು
ಇನ್ನು ಕೆಲವರಿಗೆ ಮುಸುಕು ಹಾಕಿ ಮಲಗದಿದ್ದರೆ ನಿದ್ದೆನೇ ಬರುವುದಿಲ್ಲ, ಅಂಥವರಿಗೆ ಆಮ್ಲಜನಕ ಸರಿಯಾಗಿ ಸಿಗುವುದಿಲ್ಲ, ಇದರಿಂದ ದೇಹದ ಮೇಲೆ ಕೆfಟ ಪರಿಣಾಮ ಬೀರುವುದು, ಮೆದುಳಿನ ಸಾಮಾರ್ಥ್ಯ ಕೂಡ ಕಡಿಮೆಯಾಗುವುದು.

ಅಧಿಕ ಮಾನಸಿಕ ಒತ್ತಡ
ಯಾರು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಿ ಕೆಲಸ ಮಾಡುತ್ತಾರೀ ಅವರ ಮೆದುಳು ಸಾಕಷ್ಟು ಒತ್ತಡಕ್ಕೆ ಒಳಗಾಗಿ ಹಾನಿಯುಂಟಾಗುವುದು. ಅಧಿಕ ಮಾನಸಿಕ ಒತ್ತಡ ದೈಹಿಕ, ಮಾನಸಿಕ ಆರೋಗ್ಯ ಹಾಳು ಮಾಡುವುದರ ಜೊತೆಗೆ ಮರೆವು ಸಮಸ್ಯೆ ಉಂಟಾಗುವುದು. ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗದಿರಲು ಧ್ಯಾನ, ಯೋಗ ಮಾಡಿ.

ಚಿಂತೆ
ಚಿಂತೆ ಚಿತೆಗೆ ದಾರಿ ಎಂದು ಹೇಳುತ್ತಾರೆ, ತುಂಬಾ ಚಿಂತೆ ಮಾಡುತ್ತಿದ್ದರೆ ಅದು ಮೆದುಳಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ತುಂಬಾ ಚಿಂತೆ ಮಾಡುತ್ತಿದ್ದರೆ ಮೆದುಳು ಕ್ರಿಯಾಶೀಲತೆ ಕಳೆದುಕೊಂಡು ಮರೆವಿನ ಸಮಸ್ಯೆ ಉಂಟಾಗುವುದು.

ಕಮ್ಮಿ ಮಾತಾಡುವುದು
ಜನರ ಜೊತೆ ಸಂವಹನ ಮಾಡದೆ ಮೊಬೈಲ್ನಲ್ಲಿ ಸಮಯ ಕಳೆಯುತ್ತಿದ್ದರೆ, ಅತೀ ಹೆಚ್ಚು ಟಿವಿ ನೋಡುತ್ತಿದ್ದರೆ, ಸಣ್ಣ -ಪುಟ್ಟ ಲೆಕ್ಕಕ್ಕೆ ಕ್ಯಾಲ್ಕ್ಯೂಲೇಟರ್ ಬಳಸುತ್ತಿದ್ದರೆ ಮೆದುಳಿನ ಸಾಮಾರ್ಥ್ಯ ಕಡಿಮೆಯಾಗುವುದು.



Click it and Unblock the Notifications










