Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೈದ್ಯರ ದಿನಾಚರಣೆ 2019: ರೋಗ ರುಜಿನಗಳಿಂದ ದೂರ ಉಳಿಯಲು ಸ್ವಚ್ಛತೆಯ ಮಹತ್ವದ ಸಲಹೆಗಳು
ನಾವು ಬಾಲ್ಯದಿಂದಲೇ ಕೆಲವೊಂದು ಸ್ವಚ್ಛತೆ ಬಗ್ಗೆ ತಿಳಿದುಕೊಂಡು ಬರುತ್ತಿದ್ದೇವೆ. ಮನೆಯಲ್ಲಿ, ಶಾಲೆಯಲ್ಲಿ, ಸ್ನೇಹಿತರು ಹಾಗೂ ಹಿತೈಷಿಗಳು ನಮಗೆ ಹಲವಾರು ಬಗೆಯಿಂದ ಸ್ವಚ್ಛತೆ ಕಾಪಾಡಿಕೊಂಡು ಹಲವಾರು ರೀತಿಯ ಸೋಂಕುಗಳನ್ನು ದೂರ ಮಾಡಿಕೊಳ್ಳುವುದು ಹೇಗೆ ಎಂದು ಹೇಳಿಕೊಟ್ಟಿರುವರು. ಸ್ವಚ್ಛತೆ ಇದ್ದರೆ ಅದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯ ಪರಿಣಾಮ ಬೀರುವುದು. ಅದೇ ರೀತಿಯಾಗಿ ಸ್ವಚ್ಛತೆಯು ಇಲ್ಲವೆಂದಾದಲ್ಲಿ ಹಲವಾರು ಕಾಯಿಲೆಗಳು ಬರುವುದು. ಇಂತಹ ಸಂದರ್ಭದಲ್ಲಿ ನಾವು ಆರೋಗ್ಯದ ಕಡೆ ಗಮನಹರಿಸಬೇಕು.

ಇಂದಿನ ದಿನಗಳಲ್ಲಿ ನಾವು ಅತಿಯಾದ ಒತ್ತಡದಲ್ಲಿ ಕೆಲಸ ಮಾಡುವ ಪರಿಣಾಮವಾಗಿ ಸ್ವಚ್ಛತೆ ಕಡೆ ಪ್ರತಿನಿತ್ಯವು ಗಮನಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೆಲವು ಮಹತ್ವದ ಸಲಹೆಗಳನ್ನು ಕಡೆಗಣಿಸುತ್ತೇವೆ. ನಾವು ಈ ಸಲಹೆಗಳನ್ನು ಪಾಲಿಸಿಕೊಂಡು ಹೋಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಇದು ಹೇಗೆ ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ. ಓದುಗರೇ ನಾವು ಈ ಲೇಖನದಲ್ಲಿ ನಿಮಗೆ ಕೆಲವೊಂದು ಸ್ವಚ್ಛತೆಯ ಮಹತ್ವದ ಸಲಹೆಗಳನ್ನು ನೀಡಲಿದ್ದೇವೆ. ಇದನ್ನು ನೀವು ಪಾಲಿಸಿಕೊಂಡು ಹೋಗಿ ಬರುವಂತಹ ರೋಗ ರುಜಿನಗಳಿಂದ ದೂರ ಉಳಿಯಬಹುದಾಗಿದೆ. ವೈದ್ಯರ ದಿನದ ಪ್ರಯುಕ್ತ ಬೆಂಗಳೂರಿನ ಜನಪ್ರಿಯ ಮಕ್ಕಳ ಶ್ವಾಸಕೋಶ ಶಾಸ್ತ್ರಜ್ಷ ಆಗಿರುವಂತಹ ಡಾ. ಎಚ್ ಪರಮೇಶ್ ಅವರು ಕೆಲವು ಮಹತ್ವದ ಸಲಹೆಗಳನ್ನು ನೀಡಿರುವರು. ಇದರಿಂದ ಸೋಂಕನ್ನು ದೂರ ಮಾಡಿಕೊಳ್ಳಬಹುದಾಗಿದೆ.

ಮೊದಲ ಸಲಹೆ
ಹೊರಗಡೆ ತೆರೆದಿಟ್ಟಿರುವ ಆಹಾರ ಸೇವಿಸಬೇಡಿ ತೆರೆದಿಟ್ಟಿರುವಂತಹ ಆಹಾರಗಳಲ್ಲಿ ಯಾವಾಗಲೂ ಸೊಳ್ಳೆಗಳು ಮತ್ತು ಕೀಟಗಳು ಹೋಗಿ ಕುಳಿತುಕೊಳ್ಳುವುದನ್ನು ನಾವು ಎಷ್ಟೋ ಸಲ ನೋಡಿದ್ದೇವೆ. ರೋಗಗಳನ್ನು ಉಂಟು ಮಾಡುವಂತಹ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಈ ಕೀಟ ಹಾಗೂ ಸೊಳ್ಳೆಗಳ ಮೂಲಕ ಆಹಾರಕ್ಕೆ ಬಂದು ಸೇರುವುದು ತುಂಬಾ ಸುಲಭವಾಗಿರುವುದು ಎಂದು ವೈದ್ಯರು ಹೇಳುತ್ತಾರೆ. ಇದರಿಂದ ನೀವು ಹೊರಗಡೆ ತೆರೆದ ಆಹಾರ ತಿನ್ನಬೇಡಿ ಮತ್ತು ಮನೆಯಲ್ಲಿ ಕೂಡ ಆಹಾರಗಳನ್ನು ಯಾವಾಗಲೂ ಮುಚ್ಚಿಟ್ಟುಕೊಳ್ಳಿ. ಯಾಕೆಂದರೆ ಇದರಿಂದ ಸೊಳ್ಳೆಗಳು ಹಾಗೂ ಕೀಟಗಳು ಮುತ್ತಿಕೊಳ್ಳುವುದು ತಪ್ಪುವುದು.

ಎರಡನೇ ಸಲಹೆ
ಕೆಮ್ಮುವಾಗ ನೀವು ಬಾಯಿಗೆ ಕರವಸ್ತ್ರ ಹಿಡಿಯಿರಿ
ಕೆಮ್ಮು ಬರುವಾಗ ಕೈ ಅಥವಾ ಕರವಸ್ತ್ರ ಅಡ್ಡ ಹಿಡಿಯದೆ ಕೆಮ್ಮುವುದು ನಮಗೆ ತುಂಬಾ ರೇಜಿಗೆ ಉಂಟು ಮಾಡುವುದು. ಇದರಿಂದಾಗಿ ಹೆಚ್ಚಿನ ಕೀಟಾಣುಗಳು ಪಸರಿಸುವುದು. ಕೆಮ್ಮುವಾಗ ಅಥವಾ ಶೀನುವಾಗ ಈ ಕರವಸ್ತ್ರದಿಂದ ಬಾಯಿ ಮುಚ್ಚಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
•ಅನಿಯಂತ್ರಿತವಾಗಿ ಕೆಮ್ಮು ಅಥವಾ ಶೀನು ಬಂದರೆ ಆಗ ಟಿಶ್ಯೂ ಅಥವಾ ಕರವಸ್ತ್ರದಿಂದ ಬಾಯಿ ಮುಚ್ಚಿಕೊಳ್ಳಿ.
•ಟಿಶ್ಯೂ ಬಳಸಿದ್ದರೆ ಆಗ ನೀವು ಕೆಮ್ಮಿದ ಬಳಿಕ ಇದನ್ನು ಹೋಗಿ ಕಸದ ಡಬ್ಬಿಗೆ ಹಾಕಿಬಿಡಿ.
•ಕೆಮ್ಮಿದ ಬಳಿಕ ನೀವು ಹೋಗಿ ಕೈ ತೊಳೆಯಿರಿ.
•ಈ ರೀತಿಯ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಆಗ ನೀವು ಹಲವಾರು ರೀತಿಯ ಕಾಯಿಲೆಗಳನ್ನು ದೂರವಿಡಬಹುದು.

ಮೂರನೇ ಸಲಹೆ
ನೀವು ಬಳಸುವಂತಹ ಯಾವುದೇ ವೈಯಕ್ತಿಕ ವಸ್ತುಗಳು ಅದು ನಿಮ್ಮದಾಗಿಯೇ ಇರಲಿ ಮತ್ತು ಅದನ್ನು ಬೇರೆಯವರ ಜತೆಗೆ ಹಂಚಿಕೊಳ್ಳಲು ಹೋಗಬೇಡಿ. ಬೇರೆಯವರು ನಿಮ್ಮನ್ನು ತುಂಬಾ ಸ್ವಾರ್ಥಿ ಎಂದು ಭಾವಿಸಿದರೂ ಚಿಂತೆಯಿಲ್ಲ. ನಿಯಮವನ್ನು ಪಾಲಿಸದೆ ಇದ್ದರೆ ಆಗ ಕೆಲವೊಂದು ಮಾರಕ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡುತ್ತದೆ.
ನಿಮ್ಮ ಸ್ನೇಹಿತರು ಅಥವಾ ಎಷ್ಟೇ ಆಪ್ತರಾಗಿದ್ದರೂ ಅವರೊಂದಿಗೆ ಲಿಪ್ ಸ್ಟಿಕ್ ಹಂಚಿಕೊಳ್ಳಬೇಡಿ. ಯಾಕೆಂದರೆ ತುಟಿಗಳಲ್ಲಿ ಹೆಚ್ಚಾಗಿ ಕೀಟಾಣುಗಳು ಇರುತ್ತದೆ. ಇದರಲ್ಲಿ ಕೆಲವು ಯಾವುದೇ ಪರಿಣಾಮ ಬೀರದು. ಇನ್ನು ಕೆಲವೊಂದು ತುಂಬಾ ಹಾನಿ ಉಂಟು ಮಾಡುವುದು. ಅದೇ ಲಿಪ್ ಸ್ಟಿಕ್ ನ್ನು ನೀವು ಕೂಡ ಬಳಸಿದರೆ ಆಗ ಹೇಗೆ ಆಗಬಹುದು ಎಂದು ನೀವೇ ಆಲೋಚನೆ ಮಾಡಿಕೊಳ್ಳಿ. ಇದರಿಂದ ನೀವು ಇದನ್ನು ಹಂಚಲು ಹೋಗಬೇಡಿ.

ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ
ರಸ್ತೆ ಬದಿಯಲ್ಲಿ ಕೆಲವೊಂದು ಆಹಾರವನ್ನು ಮಾರಾಟ ಮಾಡುತ್ತಿರುವ ವೇಳೆ ನಿಮ್ಮ ಬಾಯಲ್ಲಿ ನೀರು ಸುರಿದಿರಬಹುದು. ಆದರೆ ಇದು ನಮ್ಮನ್ನು ಸೆಳೆಯುತ್ತದೆ. ಆದರೆ ದೀರ್ಘಕಾಲದ ದೃಷ್ಟಿಯಿಂದ ನೋಡಿದರೆ ಇದು ನಮ್ಮಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಇದರಿಂದಾಗಿ ನೀವು ಮನೆಯಲ್ಲೇ ತಯಾರಿಸಿರುವಂತಹ ತುಂಬಾ ಸ್ವಚ್ಛವಾಗಿರುವ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ತಯಾರಿಸಿಟ್ಟಿರುವಂತಹ ಆಹಾರಗಳು ನಮ್ಮ ಜೀವನಶೈಲಿಗೆ ಅನುಗುಣವಾಗಿ ಲಭ್ಯವಿದೆ. ಆದರೆ ಇದು ಹೊಟ್ಟೆಯ ಸಮಸ್ಯೆಗಳನ್ನು ಉಂಟು ಮಾಡಬಹುದು. ರಸ್ತೆ ಬದಿಯ ಆಹಾರ ಸೇವನೆ ಮಾಡುವ ಮೊದಲು ನೀವು ಮತ್ತೊಂದು ಸಲ ಆಲೋಚನೆ ಮಾಡಿ. ಒಳ್ಳೆಯ ಸ್ವಚ್ಛತೆ ಮತ್ತು ಅದೇ ರೀತಿಯಾಗಿ ಲೈಂಗಿಕ ಜೀವನ ಪಾಲಿಸಿಕೊಂಡು ಹೋಗಬೇಕು. ರಾಸಾಯನಿಕಗಳನ್ನು ಕಡಿಮೆ ಬಳಸಬೇಕು ಮತ್ತು ಶುದ್ಧವಾದ ನೀರು ಕುಡಿಯಬೇಕು. ಇದು ತಜ್ಞರು ಹೇಳಿರುವಂತಹ ಕೆಲವೊಂದು ಸಲಹೆಗಳು. ಇದನ್ನು ನೀವು ತಪ್ಪದೆ ಪಾಲಿಸಿಕೊಂಡು ಹೋದರೆ ಆಗ ನಿಮ್ಮ ಆರೋಗ್ಯವು ತುಮಬಾ ಒಳ್ಳೆಯದಾಗಿ ಇರುತ್ತದೆ.



Click it and Unblock the Notifications