Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಈರುಳ್ಳಿ ಸಿಪ್ಪೆಯನ್ನು ಇನ್ನು ಅಪ್ಪಿತಪ್ಪಿಯೂ ಕಸದ ಬುಟ್ಟಿಗೆ ಬಿಸಾಡಬೇಡಿ!!
ಈರುಳ್ಳಿ ಸಿಪ್ಪೆ, ಹಗುರ ವಸ್ತುಗಳಿಗೆ ಉಪಯೋಗಿಸುವ ವಿಶೇಷಣವಾಗಿದ್ದ ಈ ನಿಕೃಷ್ಟ ಕಸ ವಾಸ್ತವದಲ್ಲಿ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿಯಾ ನಿರೋಧಕ, ಕ್ಯಾನ್ಸರ್ ನಿರೋಧಕ ಹಾಗೂ ಇತರ ಔಷಧೀಯ ಗುಣವುಳ್ಳ ಅದ್ಭುತ ವಸ್ತುವಾಗಿದೆ. ಈ ವಿಷಯ ಅರಿತು ನಿಮ್ಮ ಹುಬ್ಬು ಮೇಲೇರಿದರೂ ಇದು ನಿಜವೆಂದು ಈಗ ಸಾಬೀತಾಗಿದ್ದು ಈ ಸಿಪ್ಪೆಗಳಲ್ಲಿ ಹುದುಗಿರುವ ಪೋಷಕಾಂಶ ಹಾಗೂ ಇತರ ಔಷಧೀಯ ಗುಣಗಳ ಬಗ್ಗೆ ಹಲವು ಮಾಹಿತಿಗಳನ್ನು ಪ್ರಕಟಿಸಲಾಗಿದೆ.
ಈ ಸಿಪ್ಪೆಗಳಲ್ಲಿ ಅಧಿಕ ಪ್ರಮಾಣದ ಕರಗದ ನಾರು, ಫ್ಲೇವನಾಯ್ಡುಗಳು, ವಿಟಮಿನ್ ಎ,ಸಿ ಮತ್ತು ಇ ಇವೆ. ಫ್ಲೇವನಾಯ್ಡುಗಳಲ್ಲಿ ಕ್ವೆರ್ಸಟಿನ್ ಎಂಬ ಪೋಷಕಾಂಶದ ಅಂಶ ಗರಿಷ್ಠ ಪ್ರಮಾಣದಲ್ಲಿದ್ದು ಇದೊಂದು ಉತ್ತಮ ಆಂಟಿ ಆಕ್ಸಿಡೆಂಟು ಹಾಗೂ ಉರಿಯೂತ ನಿವಾರಕವೂ ಆಗಿದೆ. ಈ ಪೋಷಕಾಂಶಕ್ಕೆ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುವ ಗುಣವಿದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ಗಳನ್ನು ನಿವಾರಿಸುವ ಹಾಗೂ ರಕ್ತನಾಳಗಳ ಒಳಗೆ ಜಿಡ್ಡು ಅಂಟಿಕೊಳ್ಳುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.
ಈರುಳ್ಳಿ ಸಿಪ್ಪೆಯನ್ನು ಸೇವಿಸುವ ಮೂಲಕ ಟೈಪ್ -2 ಮಧುಮೇಹವನ್ನೂ ನಿಯಂತ್ರಿಸಲು, ಸ್ಥೂಲಕಾಯ ಕಡಿಮೆಗೊಳಿಸಲು, ಹೃದಯಸಂಬಂಧಿ ತೊಂದರೆಗಳ ಸಾಧ್ಯತೆ ಕಡಿಮೆಗೊಳಿಸಲು, ಕರುಳಿನ ಕ್ಯಾನ್ಸರ್ ಹಾಗೂ ಜೀರ್ಣಾಂಗಗಳ ತೊಂದರೆಗಳು ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಆದರೆ ಇದನ್ನು ಸೇವಿಸುವುದು ಹೇಗೆ? ಉತ್ತರ ಸುಲಭವಾಗಿದೆ, ಈರುಳ್ಳಿ ಸಿಪ್ಪೆಯ ಟೀ ಕುಡಿಯುವುದು. ಅಚ್ಚರಿಯಾಯಿತೇ? ಮುಂದೆ ಓದಿ....

ಈರುಳ್ಳಿ ಸಿಪ್ಪೆಯ ಟೀ ಮಾಡುವ ವಿಧಾನ
ಈರುಳ್ಳಿಯ ಒಣಸಿಪ್ಪೆಗಳನ್ನು ಪ್ರತ್ಯೇಕಿಸಿ ಒಂದು ಗಾಜಿನ ಜಾಡಿಯಲ್ಲಿ ಹಾಕಿಡಿ. ಟೀ ಕುಡಿಯಬೇಕೆಂದಾಗ ಒಂದು ಲೋಟ ನೀರನ್ನು ಕುದಿಸಿ ಉರಿ ಆರಿಸಿ.
ಈ ನೀರಿನಲ್ಲಿ ಕೊಂಚ ಒಣಸಿಪ್ಪೆಗಳನ್ನು ಸುಮಾರು ಹದಿನೈದು ನಿಮಿಷಗಳ ಕಾಲ ಮುಳುಗಿಸಿಡಿ. ಬಳಿಕ ಈ ನೀರನ್ನು ಸೋಸಿ
ಪ್ರತಿದಿನ ಮಲಗುವ ಮುನ್ನ ದಿನದ ಕಡೆಯ ಆಹಾರವಾಗಿ ಸೇವಿಸಿ ಮಲಗಿ.

ಚೆನ್ನಾಗಿ ನಿದ್ದೆ ಬರಲು...
ರಾತ್ರಿ ಮಲಗುವ ಮುನ್ನ ಸೇವಿಸುವುದೇ ಉತ್ತಮವೇಕೆಂದರೆ ಕ್ವೆರ್ಸಟಿನ್ ಪೋಷಕಾಂಶ ಒಂದು ಲಘು ನಿದ್ರಾಜನಕವಾಗಿದ್ದು ಶೀಘ್ರದಲ್ಲಿಯೇ ನಿದ್ದೆಗೆ ಜಾರಲು ನೆರವಾಗುತ್ತದೆ. ಆದರೆ ಈ ಟೀ ಗರ್ಭಿಣಿಯರಿಗೆ ಹಾಗೂ ಇನ್ನೂ ತಾಯಿಹಾಲು ಕುಡಿಯುತ್ತಿರುವ ಮಗುವಿನ ತಾಯಂದಿರಿಗೆ ಸೂಕ್ತವಲ್ಲ.

ಚೆನ್ನಾಗಿ ನಿದ್ದೆ ಬರಲು...
ಟೀ ಮಾಡುವ ಹೊರತಾಗಿ ಈರುಳ್ಳಿ ಸಿಪ್ಪೆಯ ಸೂಪ್ ಕೂಡ ಮಾಡಬಹುದು. ಈ ಸಿಪ್ಪೆಗಳನ್ನು ಹಾಗೇ ತಿನ್ನಲು ಸಾಧ್ಯವಿಲ್ಲ. ಹಾಗಾಗಿ ಇವನ್ನು ಬೇಯಿಸಿದ ಬಳಿಕ ಇವನ್ನು ಸೋಸಿ ನೀರನ್ನು ಮಾತ್ರವೇ ಸಂಗ್ರಹಿಸಬೇಕು. ಈ ನೀರನ್ನು ನಿಮ್ಮ ನೆಚ್ಚಿನ ಇತರ ಖಾದ್ಯಗಳೊಡನೆ ಬೆರೆಸಿ ಸೇವಿಸುವ ಮೂಲಕವೂ ಇದರ ಉತ್ತಮ ಗುಣಗಳನ್ನು ಪಡೆಯಬಹುದು.

ಮಲಬದ್ಧತೆಯ ಸಮಸ್ಯೆಗೆ...
ಈ ನೀರಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವ ಕಾರಣ ನಿಮ್ಮ ನಿತ್ಯದ ಆಹಾರದೊಡನೆ ಸೇವಿಸಲು ಅತ್ಯುತ್ತಮವಾಗಿದೆ ಎಂದು ಸಂಶೋಧನೆಗಳು ತಿಳಿಸುತ್ತವೆ.

ಮಲಬದ್ಧತೆಯ ಸಮಸ್ಯೆಗೆ...
ಕರಗದ ನಾರು ಮಲಬದ್ಧತೆಯಾಗದಂತೆ ರಕ್ಷಿಸುತ್ತದೆ ಹಾಗೂ ಕಲ್ಮಶಗಳನ್ನು ಹೊರಹಾಕಲು ಹಾಗೂ ಕರುಳುಗಳಲ್ಲಿ ಪಿ ಎಚ್ ಮಟ್ಟ ಸಂತುಲಿತ ಮಟ್ಟದಲ್ಲಿರಲು ನೆರವಾಗುತ್ತದೆ.

ಈರುಳ್ಳಿ ಸಿಪ್ಪೆಯ ಇತರ ಉಪಯೋಗಗಳು
ಒಂದು ವೇಳೆ ನಿಮಗೆ ಚರ್ಮದಲ್ಲಿ ತುರಿಕೆ ಮೊದಲಾದ ತೊಂದರೆ ಇದ್ದರೆ ಈ ಸಿಪ್ಪೆಯನ್ನು ಕುದಿಸಿದ ನೀರಿನಿಂದ ಚರ್ಮವನ್ನು ತೊಳೆದುಕೊಳ್ಳಲು ಉಪಯೋಗಿಸಬಹುದು. ಇದರಲ್ಲಿರುವ ಆಂಟಿಆಕ್ಸಿಡೆಂಟುಗಳು ಚರ್ಮದ ಆಳಕ್ಕೆ ಇಳಿದು ಉತ್ತೇಜಿಸುವ ಮೂಲಕ ಚರ್ಮಕ್ಕೆ ಮೊದಲಿನ ಕಳೆ ನೀಡಲು ಸಾಧ್ಯವಾಗುತ್ತದೆ.

ಕೂದಲಿನ ಆರೈಕೆಗೆ
ಈ ನೀರನ್ನು ಕೂದಲ ಪೋಷಣೆಗೂ ಬಳಸಬಹುದು. ಇದಕ್ಕಾಗಿ ಹೆಚ್ಚಿನ ಪ್ರಮಾಣದ ಈರುಳ್ಳಿ ಸಿಪ್ಪೆಯನ್ನು ಕುದಿಸಿದ ನೀರನ್ನು ತಣಿಸಿ ಉಗುರುಬೆಚ್ಚಗಾದಾಗ ಕೂದಲನ್ನು ತೋಯಿಸಿಕೊಳ್ಳಬೇಕು. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಕೂದಲು ಮೃದುವಾಗಿ ರೇಷ್ಮೆಯಂತೆ ಹೊಳೆಯುತ್ತದೆ.



Click it and Unblock the Notifications









