Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಿವಿ ನೋವೇ? ಬೆಳ್ಳುಳ್ಳಿ ರಸ-ಆಲಿವ್ ಎಣ್ಣೆ ಬೆರೆಸಿ, ಕಿವಿಗೆ ಬಿಡಿ!
ಅಂಕುಡೊಂಕಿನ ಬಾವಿ, ಒಳಗೆ ತೊಟ್ಟೂ ನೀರಿಲ್ಲ - ಕನ್ನಡದ ಈ ಒಗಟಿನ ಉತ್ತರ ಕಿವಿ. ಆದರೆ ಕಿವಿಯ ಒಳಗೆ ಸಂಪೂರ್ಣವಾಗಿ ಒಣಗಿರುವುದಿಲ್ಲ. ಬದಲಿಗೆ ಕಿವಿಯೊಳಗೆ ಇರುವ vestibular system ಎಂಬ ವ್ಯವಸ್ಥೆ ದೇಹ ಸಮತೋಲನ ಪಡೆಯಲು ನೆರವಾಗುತ್ತದೆ. ಅಲ್ಲದೇ ಕೆಲವೊಮ್ಮೆ ಕಿವಿಯೊಳಗೂ ಸೋಂಕು ಉಂಟಾಗುವ ಮೂಲಕ ದ್ರವ ತುಂಬುತ್ತದೆ. ವಿಶೇಷವಾಗಿ ಮಳೆಗಾಲ ಹಾಗೂ ತೇವಾಂಶ ಹೆಚ್ಚಿರುವಾಗ ಗಾಳಿಯಲ್ಲಿ ಹರಡುವ ಕೆಲವು ವೈರಸ್ಸುಗಳ ಮೂಲಕ ಹಲವರು ಈ ಸೋಂಕಿಗೆ ಒಳಗಾಗುತ್ತಾರೆ.
ಈ ಕೀವು ಕೊಂಚ ತುರಿಕೆಯುಂಟು ಮಾಡುವ ಕಾರಣ ಹೆಚ್ಚಿನವರು ಹತ್ತಿಸುತ್ತಿದ ಕಡ್ಡಿಯಿಂದ ಈ ತುರಿಕೆಯನ್ನು ನಿವಾರಿಸಲು ಯತ್ನಿಸುತ್ತಾರೆ. ಆದರೆ ಈ ಪ್ರಯತ್ನದಲ್ಲಿ ಈ ಕೀವನ್ನು ಇನ್ನೂ ಅಗಲವಾಗಿ ಹರಡಿಸಿ ಒಳಗಿವಿಯ ಇನ್ನೂ ಹೆಚ್ಚಿನ ಭಾಗದಲ್ಲಿ ಈ ಸೋಂಕನ್ನು ಅರಿವಿಲ್ಲದೇ ಹರಡಲು ಕಾರಣರಾಗುತ್ತಾರೆ. ಈ ಸೋಂಕನ್ನು ನಿವಾರಿಸಲು ಬೆಳ್ಳುಳ್ಳಿ ರಸ ಅತ್ಯುತ್ತಮ ಮನೆಮದ್ದಾಗಿದ್ದು ಇದರಲ್ಲಿರುವ ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣ ಈ ಸೋಂಕಿಗೆ ಕಾರಣವಾದ ವೈರಸ್ಸುಗಳನ್ನು ಕೊಲ್ಲಲು ಸಮರ್ಥವಾಗಿದೆ.
ಈ ಸೋಂಕಿಗೆ ಒಳಗಾಗುವವರಲ್ಲಿ ಮಕ್ಕಳು ಹಾಗೂ ಹದಿಹರೆಯದವರೇ ಹೆಚ್ಚು. ಏಕೆಂದರೆ ಈ ವೈರಸ್ಸು ಇವರ ದೇಹಕ್ಕೆ ಹೊಸದಾಗಿದ್ದು ಇದನ್ನು ಎದುರಿಸಲು ಇವರ ದೇಹದಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ರೂಪುಗೊಂಡಿರುವುದಿಲ್ಲ. ಸಾಮಾನ್ಯವಾಗಿ ವೈದ್ಯರು ಈ ಸೋಂಕಿಗೆ ಆಂಟಿ ಬಯಾಟಿಕ್ ಗಳನ್ನು ನೀಡುತ್ತಾರೆ. ಆದರೆ ಈ ಔಷಧಿಗಳು ವೈರಸ್ಸುಗಳನ್ನು ಕೊಲ್ಲುವ ಜೊತೆಜೊತೆಗೇ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನೂ ಕೊಂದುಬಿಡುವ ಕಾರಣ ರೋಗ ನಿರೋಧಕ ಶಕ್ತಿ ಕೊಂಚ ಶಿಥಿಲವಾಗುತ್ತದೆ.
ಕಿವಿಯ ಸೋಂಕಿಗೆ ವೈರಸ್ಸು ಮಾತ್ರವಲ್ಲ, ಬ್ಯಾಕ್ಟೀರಿಯಾ, ಶಿಲೀಂಧ್ರಗಳೂ ಕಾರಣವಾಗಬಹುದು. ಕಾರಣ ಯಾವುದೇ ಇರಲಿ, ಎರಡೇ ತೊಟ್ಟು ಬೆಳ್ಳುಳ್ಳಿ ರಸವನ್ನು ಬಿಟ್ಟುಕೊಳ್ಳುವ ಮೂಲಕ ಈ ಸೋಂಕನ್ನು ಸಮರ್ಥವಾಗಿ ನಿವಾರಿಸಬಹುದು. ಬನ್ನಿ, ಈ ರಸವನ್ನು ಕೊಂಚ ಆಲಿವ್ ಎಣ್ಣೆಯ ಮೂಲಕ ಕಿವಿಯ ಸೋಂಕು ನಿವಾರಿಸಲು ಹೇಗೆ ಬಳಸಬಹುದು ಎಂಬುದನ್ನು ನೋಡೋಣ....

ಅಗತ್ಯವಿರುವ ಸಾಮಾಗ್ರಿಗಳು
*ಬೆಳ್ಳುಳ್ಳಿ ರಸ
*ಆಲಿವ್ ಎಣ್ಣೆ

ತಯಾರಿಕಾ ವಿಧಾನ
#1 ಎರಡು ತೊಟ್ಟು ಬೆಳ್ಳುಳ್ಳಿ ರಸಕ್ಕೆ ಒಂದು ತೊಟ್ಟು ಆಲಿವ್ ಎಣ್ಣೆ ಬೆರೆಸಿ ಮಿಶ್ರಣ ಮಾಡಿ

#2
ಇವೆರಡೂ ದ್ರವಗಳ ಮಿಶ್ರಣ ಅತಿ ಹೆಚ್ಚಿನ ಸೂಕ್ಷ್ಮಜೀವಿ ನಿವಾರಕ ಗುಣವನ್ನು ಹೊಂದಿದ್ದು ವೈರಸ್ಸು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಮರ್ಥವಾಗಿದೆ.

#3
ಒಂದು ಚಿಕ್ಕ ಹತ್ತಿಯುಂಡೆಯನ್ನು ಈ ಮಿಶ್ರಣದಲ್ಲಿ ತೋಯಿಸಿ.

#4
ಈ ಉಂಡೆಯನ್ನು ನಿಧಾನವಾಗಿ ಕಿವಿಯೊಳಗೆ ತೂರಿಸಿ ಸೋಂಕಿನ ಭಾಗಕ್ಕೆ ತಗಲುವಂತೆ ಮಾಡಿ. ಕೆಲವೇ ನಿಮಿಷಗಳಲ್ಲಿ ಈ ದ್ರವ ಕೆಲಸ ಮಾಡತೊಡಗುತ್ತದೆ.

#5
ಮರುದಿನ ಈ ಉಂಡೆಯನ್ನು ನಿವಾರಿಸಿ.ಬೆಳ್ಳುಳ್ಳಿ ರಸವನ್ನು ಕಿವಿಯ ಸೋಂಕಿಗೆ ಮಾತ್ರವಲ್ಲ, ಬದಲಿಗೆ ಚರ್ಮದ ತುರಿಕೆ, ಹೊಟ್ಟೆನೋವು, ವಿವರಿಸಲಾಗದ ರಕ್ತಸ್ರಾವ, ಜಜ್ಜಿದ ಭಾಗ, ವಾಕರಿಕೆ, ವಾಂತಿ, ಮಹಿಳೆಯರಿಗೆ ಎದುರಾಗುವ ಬಿಳಿಸೆರಗು, ತುರಿಕೆ ಮೊದಲಾದವುಗಳನ್ನು ನಿಗ್ರಹಿಸಲೂ ಉಪಯೋಗಿಸಬಹುದು.



Click it and Unblock the Notifications











