Just In
- 43 min ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 1 hr ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 1 hr ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 2 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೇಗನೇ ನಿದ್ದೆ ಬರಬೇಕೇ? ಅರಿಶಿನ ಬೆರೆಸಿದ ತೆಂಗಿನ ಹಾಲು ಕುಡಿಯಿರಿ...
ಅರಿಶಿನದ ಪುಡಿ ಬೆರೆಸಿದ ಹಾಲಿನ ಸೇವನೆಯನ್ನು ಆಯುರ್ವೇದದಲ್ಲಿ ಉತ್ತಮ ಎಂದು ಬಣ್ಣಿಸಲಾಗಿದೆ. ವಿಶೇಷವಾಗಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಬೇಗನೇ ನಿದ್ದೆ ಆವರಿಸಲು ನೆರವಾಗುತ್ತದೆ ಹಾಗೂ ದೇಹವನ್ನು ಬೆಚ್ಚಗಿರಿಸಲು ನೆರವಾಗುತ್ತದೆ.
ಇಂದು
ಹಾಲಿನ
ಬದಲು
ತೆಂಗಿನ
ಹಾಲನ್ನು
ಬಳಸಿದರೆ
ಯಾವ
ರೀತಿಯ
ಪ್ರಯೋಜನಗಳಿವೆ
ಎಂಬುದನ್ನು
ನೋಡೋಣ.
ಇದಕ್ಕೆ
ಕೊಂಚವೇ
ಹಸಿಶುಂಠಿ
ಬೆರೆಸಿ
ಇದರ
ಉರಿಯೂತ
ನಿವಾರಕ
ಗುಣಗಳನ್ನು
ಪಡೆಯುವ
ಮೂಲಕ
ಈ
ದ್ರವವನ್ನು
ಇನ್ನಷ್ಟು
ಪ್ರಯೋಜನಕಾರಿಯಾಗಿಸಬಹುದು.
ಅಷ್ಟೇ
ಅಲ್ಲ,
ಕೊಂಚವೇ
ಜೇನನ್ನು
ಬೆರೆಸಿ
ಇದರ
ಆರೋಗ್ಯಕರ
ಗುಣಗಳನ್ನು
ಇನ್ನಷ್ಟು
ವೃದ್ಧಿಸಬಹುದು.
ತೆಂಗಿನ
ಹಾಲಿನಲ್ಲಿ
ಪ್ರಮುಖವಾಗಿ
ಲಾರಿಕ್
ಆಮ್ಲ,
ಕ್ಯಾಪ್ರಿಕ್
ಆಮ್ಲ,
ಬ್ಯಾಕ್ಟೀರಿಯಾ
ನಿರೋಧಕ
ಮೇಧಸ್ಸು
(anti-microbial
lipids)
ಹಾಗೂ
ಆರೋಗ್ಯಕರ
ಕೊಬ್ಬು
ಇವೆ.
ಅಲ್ಲದೇ
ಶಿಲೀಂಧ್ರ
ನಿವಾರಕ
ಹಾಗೂ
ವೈರಸ್
ನಿವಾರಕ
ಗುಣಗಳನ್ನೂ
ಹೊಂದಿದೆ.
ಇವೆಲ್ಲವೂ
ಈ
ಪೇಯವನ್ನು
ಆರೋಗ್ಯಕರ
ಪೇಯವನ್ನಾಗಿಸಿವೆ.
ಇದರ
ಸೇವನೆಯಿಂದ
ಅತಿ
ಕಡಿಮೆ
ಸಮಯದಲ್ಲಿ
ನಿದ್ದೆ
ಆವರಿಸುವುದು
ಇದರ
ಪ್ರಮುಖ
ಪ್ರಯೋಜನವಾಗಿದೆ.
ಬನ್ನಿ,
ಈ
ಪೇಯವನ್ನು
ತಯಾರಿಸುವುದು
ಹೇಗೆ
ಎಂಬುದನ್ನು
ನೋಡೋಣ...
ಅಗತ್ಯವಿರುವ
ಸಾಮಾಗ್ರಿಗಳು:
*ಒಂದು
ಚಿಕ್ಕಚಮಚ
ಜೇನು
*ಚಿಟಿಕೆಯಷ್ಟು
ಕಾಳುಮೆಣಸಿನ
ಪುಡಿ
*ಒಂದು
ಚಿಕ್ಕ
ಚಮಚ
ಅರಿಶಿನ
ಪುಡಿ
*ಒಂದು
ಚಿಕ್ಕ
ತುಂಡು
ಹಸಿಶುಂಠಿ
(ಜಜ್ಜಿದ್ದು)
*ಎರಡು
ಕಪ್
ತೆಂಗಿನ
ಹಾಲು.
ತಯಾರಿಕಾ
ವಿಧಾನ:
*ಜೇನನ್ನು
ಹೊರತುಪಡಿಸಿ
ಬೇರೆಲ್ಲಾ
ಸಾಮಾಗ್ರಿಗಳನ್ನು
ಒಂದು
ಚಿಕ್ಕ
ಬೋಗುಣಿಯಲ್ಲಿ
ಹಾಕಿ
ಮಧ್ಯಮ
ಉರಿಯಲ್ಲಿ
ಕುದಿಯುವವರೆಗೆ
ಬಿಸಿ
ಮಾಡಿ.
*ಕುದಿಯಲು
ಆರಂಭವಾಗುತ್ತಲೂ
ಉರಿಯನ್ನು
ಚಿಕ್ಕದಾಗಿಸಿ
ಐದು
ನಿಮಿಷ
ಕುದಿಸಿ.
ಬಳಿಕ
ಈ
ಪೇಯವನ್ನು
ಸೋಸಿ
*ಇನ್ನೊಂದು
ಪಾತ್ರೆಯಲ್ಲಿ
ಸಂಗ್ರಹಿಸಿ.
ಬಳಿಕ
ಜೇನನ್ನು
ಬೆರೆಸಿ
ಕಲಕಿ.
*ಅರಿಶಿನ
ಪುಡಿಯಲ್ಲಿರುವ
ಕುರ್ಕುಮಿನ್
ಎಂಬ
ಪೋಷಕಾಂಶಕ್ಕೆ
ಉರಿಯೂತ
ನಿವಾರಕ
ಗುಣವಿದೆ.
ಅರಿಶಿನದಲ್ಲಿ
ಆಂಟಿ
ಆಕ್ಸಿಡೆಂಟುಗಳೂ
ಇವೆ.
ಇವುಗಳು
ಸಂಧಿವಾತದಿಂದ
ರಕ್ಷಿಸುತ್ತವೆ
ಹಾಗೂ
ಇತರ
ಉರಿಯೂತಗಳಿಂದಲೂ
ರಕ್ಷಣೆ
ನೀಡುತ್ತವೆ.
ಈ ಪೇಯದ ಸೇವನೆಯ ಬಳಿಕ ಮೆದುಳಿಗೆ ರವಾನೆಯಾಗುವ ಸೆರೋಟೋನಿನ್ ಹಾಗೂ ಡೋಪಮೈನ್ ಎಂಬ ರಸದೂತಗಳ ಪ್ರಮಾಣ ಹೆಚ್ಚುತ್ತದೆ. ಇವು ಮೆದುಳಿಗೆ ಮುದ ನೀಡುವ ರಸದೂತಗಳಾಗಿದ್ದು ಖಿನ್ನತೆಯಿಂದ ರಕ್ಷಿಸುತ್ತವೆ.
ಮನಸ್ಸು ನಿರಾಳವಾಗಿ ಶೀಘ್ರವೇ ನಿದ್ದೆಗೆ ಜಾರಲು ನೆರವಾಗುತ್ತದೆ. ಅಲ್ಲದೇ ವೃದ್ಧಾಪ್ಯ ಆವರಿಸುವ ಗತಿಯನ್ನು ನಿಧಾನವಾಗಿಸುತ್ತದೆ ಹಾಗೂ ಯಕೃತ್ನಲ್ಲಿರುವ ಕಲ್ಮಶಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ಜೀರ್ಣಕ್ರಿಯೆಗೆ ಸಹಕರಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯಲ್ಲಿ ಯಾವುದಾದರೂ ತೊಂದರೆ ಇದ್ದರೆ ಸೂಕ್ತ ಉಪಶಮನವನ್ನೂ ಒದಗಿಸುತ್ತದೆ.