Latest Updates
-
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ?
ಬೇಗನೇ ನಿದ್ದೆ ಬರಬೇಕೇ? ಅರಿಶಿನ ಬೆರೆಸಿದ ತೆಂಗಿನ ಹಾಲು ಕುಡಿಯಿರಿ...
ಅರಿಶಿನದ ಪುಡಿ ಬೆರೆಸಿದ ಹಾಲಿನ ಸೇವನೆಯನ್ನು ಆಯುರ್ವೇದದಲ್ಲಿ ಉತ್ತಮ ಎಂದು ಬಣ್ಣಿಸಲಾಗಿದೆ. ವಿಶೇಷವಾಗಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಬೇಗನೇ ನಿದ್ದೆ ಆವರಿಸಲು ನೆರವಾಗುತ್ತದೆ ಹಾಗೂ ದೇಹವನ್ನು ಬೆಚ್ಚಗಿರಿಸಲು ನೆರವಾಗುತ್ತದೆ.
ಇಂದು ಹಾಲಿನ ಬದಲು ತೆಂಗಿನ ಹಾಲನ್ನು ಬಳಸಿದರೆ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ. ಇದಕ್ಕೆ ಕೊಂಚವೇ ಹಸಿಶುಂಠಿ ಬೆರೆಸಿ ಇದರ ಉರಿಯೂತ ನಿವಾರಕ ಗುಣಗಳನ್ನು ಪಡೆಯುವ ಮೂಲಕ ಈ ದ್ರವವನ್ನು ಇನ್ನಷ್ಟು ಪ್ರಯೋಜನಕಾರಿಯಾಗಿಸಬಹುದು.

ಅಷ್ಟೇ ಅಲ್ಲ, ಕೊಂಚವೇ ಜೇನನ್ನು ಬೆರೆಸಿ ಇದರ ಆರೋಗ್ಯಕರ ಗುಣಗಳನ್ನು ಇನ್ನಷ್ಟು ವೃದ್ಧಿಸಬಹುದು. ತೆಂಗಿನ ಹಾಲಿನಲ್ಲಿ ಪ್ರಮುಖವಾಗಿ ಲಾರಿಕ್ ಆಮ್ಲ, ಕ್ಯಾಪ್ರಿಕ್ ಆಮ್ಲ, ಬ್ಯಾಕ್ಟೀರಿಯಾ ನಿರೋಧಕ ಮೇಧಸ್ಸು (anti-microbial lipids) ಹಾಗೂ ಆರೋಗ್ಯಕರ ಕೊಬ್ಬು ಇವೆ. ಅಲ್ಲದೇ ಶಿಲೀಂಧ್ರ ನಿವಾರಕ ಹಾಗೂ ವೈರಸ್ ನಿವಾರಕ ಗುಣಗಳನ್ನೂ ಹೊಂದಿದೆ. ಇವೆಲ್ಲವೂ ಈ ಪೇಯವನ್ನು ಆರೋಗ್ಯಕರ ಪೇಯವನ್ನಾಗಿಸಿವೆ. ಇದರ ಸೇವನೆಯಿಂದ ಅತಿ ಕಡಿಮೆ ಸಮಯದಲ್ಲಿ ನಿದ್ದೆ ಆವರಿಸುವುದು ಇದರ ಪ್ರಮುಖ ಪ್ರಯೋಜನವಾಗಿದೆ. ಬನ್ನಿ, ಈ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ...
ಅಗತ್ಯವಿರುವ ಸಾಮಾಗ್ರಿಗಳು:
*ಒಂದು ಚಿಕ್ಕಚಮಚ ಜೇನು
*ಚಿಟಿಕೆಯಷ್ಟು ಕಾಳುಮೆಣಸಿನ ಪುಡಿ
*ಒಂದು ಚಿಕ್ಕ ಚಮಚ ಅರಿಶಿನ ಪುಡಿ
*ಒಂದು ಚಿಕ್ಕ ತುಂಡು ಹಸಿಶುಂಠಿ (ಜಜ್ಜಿದ್ದು)
*ಎರಡು ಕಪ್ ತೆಂಗಿನ ಹಾಲು.
ತಯಾರಿಕಾ ವಿಧಾನ:
*ಜೇನನ್ನು ಹೊರತುಪಡಿಸಿ ಬೇರೆಲ್ಲಾ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕುದಿಯುವವರೆಗೆ ಬಿಸಿ ಮಾಡಿ.
*ಕುದಿಯಲು ಆರಂಭವಾಗುತ್ತಲೂ ಉರಿಯನ್ನು ಚಿಕ್ಕದಾಗಿಸಿ ಐದು ನಿಮಿಷ ಕುದಿಸಿ. ಬಳಿಕ ಈ ಪೇಯವನ್ನು ಸೋಸಿ
*ಇನ್ನೊಂದು ಪಾತ್ರೆಯಲ್ಲಿ ಸಂಗ್ರಹಿಸಿ. ಬಳಿಕ ಜೇನನ್ನು ಬೆರೆಸಿ ಕಲಕಿ.
*ಅರಿಶಿನ ಪುಡಿಯಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶಕ್ಕೆ ಉರಿಯೂತ ನಿವಾರಕ ಗುಣವಿದೆ. ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟುಗಳೂ ಇವೆ. ಇವುಗಳು ಸಂಧಿವಾತದಿಂದ ರಕ್ಷಿಸುತ್ತವೆ ಹಾಗೂ ಇತರ ಉರಿಯೂತಗಳಿಂದಲೂ ರಕ್ಷಣೆ ನೀಡುತ್ತವೆ.
ಈ ಪೇಯದ ಸೇವನೆಯ ಬಳಿಕ ಮೆದುಳಿಗೆ ರವಾನೆಯಾಗುವ ಸೆರೋಟೋನಿನ್ ಹಾಗೂ ಡೋಪಮೈನ್ ಎಂಬ ರಸದೂತಗಳ ಪ್ರಮಾಣ ಹೆಚ್ಚುತ್ತದೆ. ಇವು ಮೆದುಳಿಗೆ ಮುದ ನೀಡುವ ರಸದೂತಗಳಾಗಿದ್ದು ಖಿನ್ನತೆಯಿಂದ ರಕ್ಷಿಸುತ್ತವೆ.
ಮನಸ್ಸು ನಿರಾಳವಾಗಿ ಶೀಘ್ರವೇ ನಿದ್ದೆಗೆ ಜಾರಲು ನೆರವಾಗುತ್ತದೆ. ಅಲ್ಲದೇ ವೃದ್ಧಾಪ್ಯ ಆವರಿಸುವ ಗತಿಯನ್ನು ನಿಧಾನವಾಗಿಸುತ್ತದೆ ಹಾಗೂ ಯಕೃತ್ನಲ್ಲಿರುವ ಕಲ್ಮಶಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ಜೀರ್ಣಕ್ರಿಯೆಗೆ ಸಹಕರಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯಲ್ಲಿ ಯಾವುದಾದರೂ ತೊಂದರೆ ಇದ್ದರೆ ಸೂಕ್ತ ಉಪಶಮನವನ್ನೂ ಒದಗಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


