Just In
- 4 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 13 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 13 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 14 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- News Actress Harshika Poonacha: ಪ್ರಹ್ಲಾದ್ ಜೋಶಿ ಭೇಟಿಯಾಗಿ ಧನ್ಯವಾದ ತಿಳಿಸಿದ ನಟಿ ಹರ್ಷಿಕಾ ದಂಪತಿ: ಸಚಿವರ ಅಭಯ
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Movies ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ನೈಸರ್ಗಿಕ ವಿಧಾನದಿಂದ ಎರಡೇ ತಿಂಗಳಲ್ಲಿ ಬೊಜ್ಜು ಕರಗುವುದು ಖಚಿತ
ಇಂದಿನ ದಿನಗಳಲ್ಲಿ ಆರೋಗ್ಯ ಮತ್ತು ದೇಹದಾರ್ಢ್ಯತೆ ಎಂಬ ಪದಗಳಿಗೆ ಹಿಂದಿಗಿಂತಲೂ ಹೆಚ್ಚಿನ ಮಹತ್ವ ದೊರಕಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿದ್ದಾರೆ. ಸ್ಥೂಲಕಾಯ ಆರೋಗ್ಯದ ಮಾನದಂಡವಲ್ಲ ಎಂಬುದನ್ನು ಮನಗಂಡವರು ಸ್ಥೂಲಕಾಯವನ್ನು ಕಳೆದುಕೊಳ್ಳುವತ್ತ ಹಾಗೂ ಹುರಿಗಟ್ಟಿದ ಸ್ನಾಯುಗಳನ್ನು ಪಡೆಯುವತ್ತ ಚಿತ್ತ ಹರಿಸುತ್ತಿದ್ದಾರೆ. ಏಕೆಂದರೆ ಸ್ಥೂಲಕಾಯ ಮುಂದುವರೆಸಿದಷ್ಟೂ ಅನಾರೋಗ್ಯ ಹೆಚ್ಚು ಹೆಚ್ಚು ಹತ್ತಿರಾಗುವುದು ವಾಸ್ತವವಾಗಿದೆ.
ಹುರಿಗಟ್ಟಿದ ಸ್ನಾಯು, ಸಪಾಟಾದ ಹೊಟ್ಟೆ ಹಾಗೂ ದೃಢವಾದ ಶರೀರ ಯಾರಿಗೆ ಬೇಡ? ವಿಶೇಷವಾಗಿ ಸಪಾಟಾದ ಹೊಟ್ಟೆ ಪಡೆಯುವುದು ಎಲ್ಲರ ಕನಸಾಗಿದ್ದು ಸಿನೇಮಾ ತಾರೆಯರೂ ಈ ಬಗ್ಗೆ ಹೆಚ್ಚಿನ ಅಸ್ಥೆಯನ್ನು ವಹಿಸುತ್ತಿದ್ದಾರೆ ಹಾಗೂ ಇತರರಿಗೂ ಮಾದರಿಯಾಗುತ್ತಿದ್ದಾರೆ. ಮುಂದೆ ಬಂದಿರುವ ಹೊಟ್ಟೆ ಇಂದಿನ ದಿನಗಳಲ್ಲಿ ಅನಾರೋಗ್ಯದ ಸಂಕೇತ ಮಾತ್ರವಲ್ಲ, ಸೌಂದರ್ಯ ಕುಂದಿಸುವ ಕೇಂದ್ರವೂ ಆಗಿದೆ.
ಇಂದಿನ ದಿನಗಳಲ್ಲಿ ದೇಹದ ಇತರ ಭಾಗದಲ್ಲಿ ಕೊಬ್ಬು ಹೆಚ್ಚಿರದೇ ಇದ್ದರೂ ಹೊಟ್ಟೆಯ ಮತ್ತು ಸೊಂಟದ ಸುತ್ತಲೇ ಹೆಚ್ಚು ಕೊಬ್ಬು ತುಂಬಿರುವುದು ವಯಸ್ಸು ಮತ್ತು ಅಂತಸ್ತು ಎಂಬ ತಾರತಮ್ಯ ತೋರದೇ ಎಲ್ಲರಲ್ಲಿಯೂ ಕಂಡುಬರುತ್ತಿದೆ. ಅದರಲ್ಲೂ ಇಂದು ಲಭ್ಯವಿರುವ ಹೆಚ್ಚಿನ ಉದ್ಯೋಗಗಳು ಕುಳಿತು ಮಾಡುವ ಉದ್ಯೋಗಗಳಾಗಿದ್ದು ಹೊಟ್ಟೆ ಹೆಚ್ಚಿಸಲು ಪರೋಕ್ಷ ಕಾರಣವೂ ಆಗಿದೆ.
ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!
ಹೊಟ್ಟೆಯ ಗಾತ್ರ ಹೆಚ್ಚುವ ಮೂಲಕ ಸ್ಥೂಲಕಾಯ, ಹೃದಯ ಸಂಬಂಧಿ ತೊಂದರೆಗಳು, ಮಧುಮೇಹ, ಹೃದಯ ಸ್ತಂಭನ ಮತ್ತು ಕ್ಯಾನ್ಸರ್ ಸಹಿತ ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಆದರೆ ಹೊಟ್ಟೆಯನ್ನು ಕರಗಿಸುವುದು ಅಷ್ಟು ಸುಲಭವಲ್ಲ. ವಾಸ್ತವದಲ್ಲಿ ದೇಹದ ಯಾವುದೇ ಕೊಬ್ಬಿಗಿಂತಲೂ ಹೊಟ್ಟೆಯ ಕೊಬ್ಬು ಕರಗಿಸುವುದೇ ಎಲ್ಲಕ್ಕಿಂತ ಕಷ್ಟ ಹಾಗೂ ಕಟ್ಟ ಕಡೆಯದಾಗಿ ಕರಗುವ ಕಾರಣ ಹೆಚ್ಚಿನ ಸಮಯ ಕಬಳಿಸುವ ಕ್ರಿಯೆಯೂ ಆಗಿದೆ. ಆದರೆ ಇದನ್ನು ಎರಡೇ ತಿಂಗಳಲ್ಲಿ ಕರಗಿಸುವ ಸಮರ್ಥ ವಿಧಾನವೊಂದಿಗೆ, ಬನ್ನಿ, ಇದರ ಬಗ್ಗೆ ಅರಿಯೋಣ:
ಅಗತ್ಯವಿರುವ
ಸಾಮಾಗ್ರಿಗಳು:
ಚಿಯಾ
ಕಾಳುಗಳು:
ಎರಡುದೊಡ್ಡ
ಚಮಚ,
ಕೊಬ್ಬು
ರಹಿತ
ಮೊಸರು:
ಎರಡು
ದೊಡ್ಡ
ಚಮಚ
ಈ ವಿಧಾನವನ್ನು ಸರಿಯಾಗಿ ಅನುಸರಿಸಿದರೆ ಎರಡೇ ತಿಂಗಳಲ್ಲಿ ಕೊಬ್ಬು ಕರಗುತ್ತದೆ ಹಾಗೂ ಸ್ನಾಯುಗಳು ಹುರಿಗಟ್ಟುತ್ತವೆ. ಆದರೆ ಈ ಆಹಾರವನ್ನು ಮಾತ್ರ ಸೇವಿಸಿದರೆ ಸಾಲದು, ಇದರೊಂದಿಗೆ ನಿಮ್ಮ ನಿತ್ಯದ ಜೀವನಶೈಲಿಯಲ್ಲಿ ಕೆಲವಾರು ಬದಲಾವಣೆಗಳನ್ನೂ ಮಾಡಬೇಕಾಗುತ್ತದೆ.
ಆರೋಗ್ಯಕರ ಆಹಾರಸೇವನೆ, ಎಣ್ಣೆ ಸೇವನೆಯನ್ನು ನಿಲ್ಲಿಸುವುದು, ಸಕ್ಕರೆ, ಕೆಂಪು ಮಾಂಸದ ಸೇವನೆ ಮಿತಗೊಳಿಸುವುದು, ದಿನಕ್ಕೆ ಕನಿಷ್ಟ ನಲವತ್ತು ನಿಮಿಷ ವ್ಯಾಯಾಮ ಮಾಡುವುದು, ಹೆಚ್ಚು ಕಾಲ ಕುಳಿತುಕೊಳ್ಳದೇ ಇರುವುದು, ಹೊಟ್ಟೆಯ ಸ್ನಾಯುಗಳಿಗೆ ಸೆಳೆತ ನೀಡುವ ವ್ಯಾಯಾಮಗಳಿಗೆ ಹೆಚ್ಚಿನ ಒತ್ತು ನೀಡುವುದು ಮೊದಲಾದವುಗಳನ್ನು ನಿಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ರಜಾದಿನಗಳ ಸಹಿತ!
ಅಷ್ಟೇ ಅಲ್ಲ, ನಿಯಮಿತವಾಗಿ ವೈದ್ಯರ ಬಳಿ ತೆರಳಿ ತಪಾಸಣೆಗೊಳಪಡುವುದು ಹಾಗೂ ಕೊಬ್ಬಿನ ಪ್ರಮಾಣದಿಂದ ದೇಹದ ಮೇಲೆ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರ ಪಡೆದುಕೊಳ್ಳುವುದೂ ಅಗತ್ಯವಾಗಿದೆ. ಚಿಯಾ ಕಾಳುಗಳಲ್ಲಿ ಒಮೆಗಾ-೩ ಕೊಬ್ಬಿನ ಆಮ್ಲಗಳು ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ ಹಾಗೂ ಹೊಟ್ಟೆಯ ಕೊಬ್ಬನ್ನು ಇಳಿಸಲು ನೆರವಾಗುತ್ತದೆ. ಕೊಬ್ಬು ರಹಿತ ಮೊಸರಿನಲ್ಲಿ ಪ್ರೋಟೀನು ಹೆಚ್ಚಾಗಿದ್ದು ಸ್ನಾಯುಗಳ ಸೆಳೆತ ಹೆಚ್ಚಿಸಲು ನೆರವಾಗುತ್ತದೆ. ವಿಶೇಷವಾಗಿ ಹೊಟ್ಟೆಯ ಸ್ನಾಯುಗಳು ಸೆಳೆತಗೊಳ್ಳುವ ಮೂಲಕ ಕೊಬ್ಬು ಕರಗಲು ನೆರವಾಗುತ್ತದೆ.
ತಯಾರಿಕಾ
ವಿಧಾನ:
ಎರಡೂ
ಸಾಮಾಗ್ರಿಗಳನ್ನು
ಒಂದು
ಬೋಗುಣಿಯಲ್ಲಿ
ಹಾಕಿ
ಚೆನ್ನಾಗಿ
ಮಿಶ್ರಣ
ಮಾಡಿ.
ಈ
ಮಿಶ್ರಣವನ್ನು
ಪ್ರತಿದಿನ
ಬೆಳಿಗ್ಗೆ
ಉಪಾಹಾರದ
ಬಳಿಕ
ಸತತವಾಗಿ
ಎರಡು
ತಿಂಗಳು
ಸೇವಿಸಿ.