Just In
- 21 min ago ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- 49 min ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- 3 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 12 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
Don't Miss
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರಿಯಾಗಿ ಊಟ-ತಿಂಡಿ ಮಾಡದಿದ್ದರೆ, ಇಂತಹ ಸಮಸ್ಯೆ ನಿಮಗೂ ಬರಬಹುದು!
ಭೂಮಿ ಮೇಲೆ ಯಾರಿಗೂ ಹಸಿವಾಗದೆ ಇರುತ್ತಾ ಇದ್ದರೆ ಏನಾಗುತ್ತಾ ಇತ್ತು ಎಂದು ಕಲ್ಪನೆ ಮಾಡಿಕೊಳ್ಳುವುದು ಕಷ್ಟ. ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿ ಕೂಡ ಹೊಟ್ಟೆಪಾಡಿಗಾಗಿ ಏನಾದರೊಂದು ಕೆಲಸ ಮಾಡುತ್ತಾ ಇರುತ್ತಾನೆ. ಹಸಿವೇ ಇಲ್ಲದೆ ಇರುತ್ತಿದ್ದರೆ ಯಾರು ಕೆಲಸ ಮಾಡುತ್ತಾ ಇರಲಿಲ್ಲ. ಕೆಲಸ ಮಾಡಲು ನಮ್ಮ ದೇಹಕ್ಕೆ ಶಕ್ತಿ ಬೇಕು. ದೇಹಕ್ಕೆ ಶಕ್ತಿ ಬರುವುದು ನಾವು ತಿನ್ನುವಂತಹ ಆಹಾರದಿಂದ. ತಿನ್ನುವ ಆಹಾರವು ದೇಹಕ್ಕೆ ಪೋಷಕಾಂಶ ಒದಗಿಸುವುದು. ಇದರಿಂದಾಗಿಯೇ ನಾವು ದೈನಂದಿನ ಕೆಲಸಕಾರ್ಯ ಮಾಡಲು ಶಕ್ತಿ ದೊರಕುವುದು.
ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠರಾಗಿರಲು ತಿನ್ನುವಂತಹ ಆಹಾರವು ಸಮತೋಲಿತವಾಗಿರಬೇಕು. ಇಂದಿನ ವ್ಯಸ್ತ ಜೀವನದಲ್ಲಿ ಕೆಲವರಿಗೆ ಸರಿಯಾಗಿ ಊಟ ಮಾಡಲು ಸಮಯವಿರುವುದಿಲ್ಲ. ಇನ್ನು ಕೆಲವರು ದೇಹ ಇನ್ನಷ್ಟು ಸಪೂರವಾಗಬೇಕೆಂಬ ಇಚ್ಛೆಯಲ್ಲಿ ಆಹಾರವನ್ನೇ ತ್ಯಜಿಸುತ್ತಾರೆ. ಊಟ ಮಾಡದೆ ಇರುವುದು ಸರಿಯಾದ ಕ್ರಮವಲ್ಲ ಮತ್ತು ಇದು ಅನಾರೋಗ್ಯಕಾರಿ.
ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ ಮಾಡಲು ನಿಮ್ಮಲ್ಲಿ ಸರಿಯಾದ ಸಮಯವಿಲ್ಲವೆಂದಾದರೆ ಅದರಿಂದ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳ ಕೊರತೆಯಾಗುವುದು. ರಾಷ್ಟ್ರೀಯ ಪೋಷಕಾಂಶಗಳ ವಾರದಂದು ಆಹಾರ ಸೇವನೆ ಮಾಡದೇ ಇದ್ದರೆ ದೇಹಕ್ಕೆ ಏನಾಗಬಹುದು ಎಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ಹೇಳಲಿದೆ.....
ಜೀರ್ಣಕ್ರಿಯೆ ಪರಿಣಾಮ
ನಾವು ತಿನ್ನುವಂತಹ ಎಲ್ಲಾ ಆಹಾರವು ಹೊಟ್ಟೆಗೆ ಹೋಗಿ ಸೇರಿಕೊಳ್ಳುವುದು. ಹಸಿವು ನಿಯಂತ್ರಿಸುತ್ತಾ ಇದ್ದರೆ ಅದರಿಂದ ಕರುಳು ಕುಗ್ಗುವುದು ಮತ್ತು ಇದರಿಂದ ಸಾಮಾನ್ಯವಾಗಿ ಸೇವಿಸುವಷ್ಟು ಆಹಾರ ಸೇವಿಸಲು ಸಾಧ್ಯವಾಗದು. ಹೊಟ್ಟೆಯಲ್ಲಿನ ಆಮ್ಲದ ಉತ್ಪಾದನೆಯು ಕಡಿಮೆಯಾಗುವುದು. ದೀರ್ಘಕಾಲ ತನಕ ಅಥವಾ ನಿಯಮಿತವಾಗಿ ಹಸಿವು ತಡೆದುಕೊಳ್ಳುತ್ತಾ ಇದ್ದರೆ ಹೊಟ್ಟೆಯಲ್ಲಿರುವ ಕಿಣ್ವಗಳು ತಮ್ಮ ಚಟುವಟಿಕೆ ನಿಲ್ಲಿಸಬಹುದು. ಇಂತಹ ಸಮಯದಲ್ಲಿ ನಿಮಗೆ ಚಿಕಿತ್ಸೆ ಬೇಕಾಗಬಹುದು.
ಮಲಬದ್ಧತೆ
ನಾರಿನಾಂಶದ ಸಹಿತ ಕೆಲವೊಂದು ಪ್ರಮುಖ ಪೋಷಕಾಂಶಗಳು ದೇಹಕ್ಕೆ ಲಬ್ಯವಾಗುತ್ತಿಲ್ಲವೆಂದು ಮಲಬದ್ದತೆಯಿಂದ ತಿಳಿದುಬರುವುದು. ನಾರಿನಾಂಶವಿರುವ ಆಹಾರ ಸೇವನೆ ಮಾಡದೆ ಇದ್ದರೆ ಮಲಬದ್ಧತೆ ಉಂಟಾಗುವುದು. ಮಲವು ಗಟ್ಟಿಯಾಗುವುದು ಮತ್ತು ಸೇವಿಸುವ ಆಹಾರದ ಪ್ರಮಾಣವು ಕಡಿಮೆಯಾಗುವುದು.
ಅತಿಯಾಗಿ ಕೂದಲು ಉದುರುವಿಕೆ
ಕೂದಲು ಸಾಮಾನ್ಯವಾಗಿ ಪ್ರೋಟೀನ್ ನಿಂದ ಮಾಡಲ್ಪಟ್ಟಿರುವುದು. ಆದರೆ ಇದಕ್ಕೆ ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಏಕಪರ್ಯಾಪ್ತ ಕೊಬ್ಬಿನಾಮ್ಲವು ಅಗತ್ಯವಿದೆ. ಈ ಎಲ್ಲವೂ ದೇಹಕ್ಕೆ ಸಿಗದೆ ಇದ್ದರೆ ತಲೆಬುರುಡೆಯು ಒಣಗುವುದು ಮತ್ತು ಕೂದಲಿನ ಕಿರುಚೀಲಗಳು ದುರ್ಬಲವಾಗುವುದು. ಇದರಿಂದ ಕೂದಲು ಉದುರುವಿಕೆ ಹೆಚ್ಚಾಗುವುದು.
ಕೋಪ ಮತ್ತು ಕಿರಿಕಿರಿ
ನೀವು ಯಾವಾಗಲೂ ಕುಪಿತರಾಗಲು ಮತ್ತು ಕಿರಿಕಿರಿಯಿಂದ ಇರಲು ಕಾರಣವೇನೆಂದು ಯಾವತ್ತಾದರೂ ಯೋಚಿಸಿದ್ದೀರಾ? ಬೆಳಗ್ಗಿನ ಉಪಾಹಾರ ತ್ಯಜಿಸಿರುವುದೇ ಇದಕ್ಕೆ ಕಾರಣವಾಗಿದೆ. ಇದರ ಹಿಂದೆ ಒಂದು ಸರಳ ನಿಯಮವಿದೆ. ಹೊಟ್ಟೆ ಹಸಿದಿರುವಾಗ ಸೆರೊಟೊನಿನ್ ಮಟ್ಟವು ಕುಸಿಯುವುದು. ಇದರಿಂದ ನಿಮಗೆ ಕೋಪ ಮತ್ತು ಕಿರಿಕಿರಿ ಉಂಟಾಗುವುದು.