Latest Updates
-
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ!
ಸರಿಯಾಗಿ ಊಟ-ತಿಂಡಿ ಮಾಡದಿದ್ದರೆ, ಇಂತಹ ಸಮಸ್ಯೆ ನಿಮಗೂ ಬರಬಹುದು!
ಭೂಮಿ ಮೇಲೆ ಯಾರಿಗೂ ಹಸಿವಾಗದೆ ಇರುತ್ತಾ ಇದ್ದರೆ ಏನಾಗುತ್ತಾ ಇತ್ತು ಎಂದು ಕಲ್ಪನೆ ಮಾಡಿಕೊಳ್ಳುವುದು ಕಷ್ಟ. ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿ ಕೂಡ ಹೊಟ್ಟೆಪಾಡಿಗಾಗಿ ಏನಾದರೊಂದು ಕೆಲಸ ಮಾಡುತ್ತಾ ಇರುತ್ತಾನೆ. ಹಸಿವೇ ಇಲ್ಲದೆ ಇರುತ್ತಿದ್ದರೆ ಯಾರು ಕೆಲಸ ಮಾಡುತ್ತಾ ಇರಲಿಲ್ಲ. ಕೆಲಸ ಮಾಡಲು ನಮ್ಮ ದೇಹಕ್ಕೆ ಶಕ್ತಿ ಬೇಕು. ದೇಹಕ್ಕೆ ಶಕ್ತಿ ಬರುವುದು ನಾವು ತಿನ್ನುವಂತಹ ಆಹಾರದಿಂದ. ತಿನ್ನುವ ಆಹಾರವು ದೇಹಕ್ಕೆ ಪೋಷಕಾಂಶ ಒದಗಿಸುವುದು. ಇದರಿಂದಾಗಿಯೇ ನಾವು ದೈನಂದಿನ ಕೆಲಸಕಾರ್ಯ ಮಾಡಲು ಶಕ್ತಿ ದೊರಕುವುದು.
ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠರಾಗಿರಲು ತಿನ್ನುವಂತಹ ಆಹಾರವು ಸಮತೋಲಿತವಾಗಿರಬೇಕು. ಇಂದಿನ ವ್ಯಸ್ತ ಜೀವನದಲ್ಲಿ ಕೆಲವರಿಗೆ ಸರಿಯಾಗಿ ಊಟ ಮಾಡಲು ಸಮಯವಿರುವುದಿಲ್ಲ. ಇನ್ನು ಕೆಲವರು ದೇಹ ಇನ್ನಷ್ಟು ಸಪೂರವಾಗಬೇಕೆಂಬ ಇಚ್ಛೆಯಲ್ಲಿ ಆಹಾರವನ್ನೇ ತ್ಯಜಿಸುತ್ತಾರೆ. ಊಟ ಮಾಡದೆ ಇರುವುದು ಸರಿಯಾದ ಕ್ರಮವಲ್ಲ ಮತ್ತು ಇದು ಅನಾರೋಗ್ಯಕಾರಿ.
ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ ಮಾಡಲು ನಿಮ್ಮಲ್ಲಿ ಸರಿಯಾದ ಸಮಯವಿಲ್ಲವೆಂದಾದರೆ ಅದರಿಂದ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳ ಕೊರತೆಯಾಗುವುದು. ರಾಷ್ಟ್ರೀಯ ಪೋಷಕಾಂಶಗಳ ವಾರದಂದು ಆಹಾರ ಸೇವನೆ ಮಾಡದೇ ಇದ್ದರೆ ದೇಹಕ್ಕೆ ಏನಾಗಬಹುದು ಎಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ಹೇಳಲಿದೆ.....

ಜೀರ್ಣಕ್ರಿಯೆ ಪರಿಣಾಮ
ನಾವು ತಿನ್ನುವಂತಹ ಎಲ್ಲಾ ಆಹಾರವು ಹೊಟ್ಟೆಗೆ ಹೋಗಿ ಸೇರಿಕೊಳ್ಳುವುದು. ಹಸಿವು ನಿಯಂತ್ರಿಸುತ್ತಾ ಇದ್ದರೆ ಅದರಿಂದ ಕರುಳು ಕುಗ್ಗುವುದು ಮತ್ತು ಇದರಿಂದ ಸಾಮಾನ್ಯವಾಗಿ ಸೇವಿಸುವಷ್ಟು ಆಹಾರ ಸೇವಿಸಲು ಸಾಧ್ಯವಾಗದು. ಹೊಟ್ಟೆಯಲ್ಲಿನ ಆಮ್ಲದ ಉತ್ಪಾದನೆಯು ಕಡಿಮೆಯಾಗುವುದು. ದೀರ್ಘಕಾಲ ತನಕ ಅಥವಾ ನಿಯಮಿತವಾಗಿ ಹಸಿವು ತಡೆದುಕೊಳ್ಳುತ್ತಾ ಇದ್ದರೆ ಹೊಟ್ಟೆಯಲ್ಲಿರುವ ಕಿಣ್ವಗಳು ತಮ್ಮ ಚಟುವಟಿಕೆ ನಿಲ್ಲಿಸಬಹುದು. ಇಂತಹ ಸಮಯದಲ್ಲಿ ನಿಮಗೆ ಚಿಕಿತ್ಸೆ ಬೇಕಾಗಬಹುದು.

ಮಲಬದ್ಧತೆ
ನಾರಿನಾಂಶದ ಸಹಿತ ಕೆಲವೊಂದು ಪ್ರಮುಖ ಪೋಷಕಾಂಶಗಳು ದೇಹಕ್ಕೆ ಲಬ್ಯವಾಗುತ್ತಿಲ್ಲವೆಂದು ಮಲಬದ್ದತೆಯಿಂದ ತಿಳಿದುಬರುವುದು. ನಾರಿನಾಂಶವಿರುವ ಆಹಾರ ಸೇವನೆ ಮಾಡದೆ ಇದ್ದರೆ ಮಲಬದ್ಧತೆ ಉಂಟಾಗುವುದು. ಮಲವು ಗಟ್ಟಿಯಾಗುವುದು ಮತ್ತು ಸೇವಿಸುವ ಆಹಾರದ ಪ್ರಮಾಣವು ಕಡಿಮೆಯಾಗುವುದು.

ಅತಿಯಾಗಿ ಕೂದಲು ಉದುರುವಿಕೆ
ಕೂದಲು ಸಾಮಾನ್ಯವಾಗಿ ಪ್ರೋಟೀನ್ ನಿಂದ ಮಾಡಲ್ಪಟ್ಟಿರುವುದು. ಆದರೆ ಇದಕ್ಕೆ ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಏಕಪರ್ಯಾಪ್ತ ಕೊಬ್ಬಿನಾಮ್ಲವು ಅಗತ್ಯವಿದೆ. ಈ ಎಲ್ಲವೂ ದೇಹಕ್ಕೆ ಸಿಗದೆ ಇದ್ದರೆ ತಲೆಬುರುಡೆಯು ಒಣಗುವುದು ಮತ್ತು ಕೂದಲಿನ ಕಿರುಚೀಲಗಳು ದುರ್ಬಲವಾಗುವುದು. ಇದರಿಂದ ಕೂದಲು ಉದುರುವಿಕೆ ಹೆಚ್ಚಾಗುವುದು.

ಕೋಪ ಮತ್ತು ಕಿರಿಕಿರಿ
ನೀವು ಯಾವಾಗಲೂ ಕುಪಿತರಾಗಲು ಮತ್ತು ಕಿರಿಕಿರಿಯಿಂದ ಇರಲು ಕಾರಣವೇನೆಂದು ಯಾವತ್ತಾದರೂ ಯೋಚಿಸಿದ್ದೀರಾ? ಬೆಳಗ್ಗಿನ ಉಪಾಹಾರ ತ್ಯಜಿಸಿರುವುದೇ ಇದಕ್ಕೆ ಕಾರಣವಾಗಿದೆ. ಇದರ ಹಿಂದೆ ಒಂದು ಸರಳ ನಿಯಮವಿದೆ. ಹೊಟ್ಟೆ ಹಸಿದಿರುವಾಗ ಸೆರೊಟೊನಿನ್ ಮಟ್ಟವು ಕುಸಿಯುವುದು. ಇದರಿಂದ ನಿಮಗೆ ಕೋಪ ಮತ್ತು ಕಿರಿಕಿರಿ ಉಂಟಾಗುವುದು.



Click it and Unblock the Notifications