Just In
- 5 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 5 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 6 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 7 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೋಡಿ, ಈ ಸಮಸ್ಯೆ ಇರುವವರು, ಆದಷ್ಟು ಬಾಳೆಹಣ್ಣಿನಿಂದ ದೂರವಿರಿ..
ಬಾಳೆಹಣ್ಣು ಎನ್ನುವುದು ವಿಶ್ವದ ಯಾವ ಮೂಲೆಗೆ ಹೋದರು ನಿಮಗೆ ಸಿಗುವುದು. ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಬಾಳೆಹಣ್ಣನ್ನು ವಿವಿಧ ದೇಶಗಳಲ್ಲಿ ಬೆಳೆಯುವರು. ಮಾತ್ರವಲ್ಲದೆ, ಬೆಳೆಯದೆ ಇರುವ ದೇಶಗಳಲ್ಲಿ ಆಮದು ಕೂಡ ಮಾಡಿಕೊಳ್ಳುವರು. ಬಾಳೆಹಣ್ಣಿನಿಂದ ಆರೋಗ್ಯಕ್ಕೆ ಆಗುವಂತಹ ಲಾಭವೇ ಇದಕ್ಕೆ ಕಾರಣ. ಬಾಳೆಹಣ್ಣನ್ನು ತುಂಬಾ ಆರೋಗ್ಯಕಾರಿ ಆಹಾರವೆಂದು ಪರಿಗಣಿಸಲಾಗಿದೆ.
ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!
ಇದರಲ್ಲಿರುವಂತಹ ಪೊಟಾಶಿಯಂ, ಮೆಗ್ನಿಶಿಯಂ ಮತ್ತು ವಿಟಮಿನ್ ಬಿ ದೇಹಕ್ಕೆ ತುಂಬಾ ಒಳ್ಳೆಯದು. ಆದರೆ ಅಮೃತ ಕೂಡ ವಿಷವಾಗಬಲ್ಲದು ಎನ್ನುತ್ತಾರಲ್ಲ, ಅದೇ ರೀತಿ ಬಾಳೆಹಣ್ಣನ್ನು ಇತಿಮಿತಿಯಲ್ಲಿ ತಿನ್ನಬೇಕು ಮತ್ತು ಕೆಲವೊಂದು ಸಮಸ್ಯೆ ಇರುವವರು ಬಾಳೆಹಣ್ಣು ಸೇವಿಸಲೇಬಾರದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ ದಿನಕ್ಕೆ 2-3 ಬಾಳೆಹಣ್ಣು ತಿಂದರೆ ಸಾಕು. ಯಾವೆಲ್ಲಾ ಸಮಸ್ಯೆ ಇರುವವರು ಬಾಳೆಹಣ್ಣು ಸೇವಿಸಬಾರದು ಎಂದು ತಿಳಿಯಿರಿ...
ಬೊಜ್ಜು ಅಥವಾ ಹೆಚ್ಚು ತೂಕ ಹೊಂದಿರುವವರು
ಬಾಳೆಹಣ್ಣಿನಲ್ಲಿ ಇರುವ ಅಧಿಕ ಕಾರ್ಬ್ರೋಹೈಡ್ರೇಟ್ಸ್, ಕ್ಯಾಲರಿ ಮತ್ತು ಸಕ್ಕರೆಯಂಶವು ಕೊಬ್ಬನ್ನು ಹೆಚ್ಚಿಸಿ ಬೊಜ್ಜು ಇರುವವರ ಪರಿಸ್ಥಿತಿ ಮತ್ತಷ್ಟು ಕೆಡಿಸಬಹುದು.
ಹೈಪರ್ಕಲೆಮಿಯಾ
ಬಾಳೆಹಣ್ಣಿನಲ್ಲಿ ಇರುವಂತಹ ಪೊಟಾಶಿಯಂ ಹೃದಯದ ಸಂಬಂಧಿಸಿದ ಸಮಸ್ಯೆಗಳ ಅಪಾಯ ಹೆಚ್ಚಿಸಿ ಆತಂಕ ಉಂಟು ಮಾಡುವುದು.
ಮೈಗ್ರೇನ್
ಬಾಳೆಹಣ್ಣಿನಲ್ಲಿ ಇರುವಂತಹ ಥೈಮೇನ್ ತಲೆನೋವು ಹೆಚ್ಚು ಮಾಡಿ ನಿಮ್ಮ ನರವ್ಯವಸ್ಥೆಗೆ ಹಾನಿ ಉಂಟು ಮಾಡಬಹುದು... ಹಾಗಾಗಿಮೈಗ್ರೇನ್ ಸಮಸ್ಯೆ ಇರುವವರು, ಬಾಳೆ ಹಣ್ಣಿನಿಂದ ದೂರವಿರಿ
ಮಧುಮೇಹ
ಬಾಳೆಹಣ್ಣಿನಲ್ಲಿ ಇರುವಂತಹ ಕಾರ್ಬ್ರ್ಸ್ ಮತ್ತು ಸಕ್ಕರೆಯಂಶವು ಸಕ್ಕರೆ ಮಟ್ಟವನ್ನು ಹೆಚ್ಚು ಮಾಡಿ ಅಸಮತೋಲನ ಉಂಟು ಮಾಡಬಹುದು.
ಅಲರ್ಜಿ
ಕೆಲವು ಮಂದಿಗೆ ಬಾಳೆಹಣ್ಣು ತಿನ್ನುವುದರಿಂದ ಅಲರ್ಜಿ ಉಂಟಾಗುತ್ತದೆ. ಊತ, ದೇಹ ಕೆಂಪಾಗುವುದು ಇತ್ಯಾದಿ ಅಲರ್ಜಿ ಉಂಟಾಗಬಹುದು.
ಕಿಡ್ನಿ
ಬಾಳೆಹಣ್ಣಿನಲ್ಲಿ ಇರುವ ಪೊಟಾಶಿಯಂ ಕಿಡ್ನಿಯ ಮೇಲೆ ಭಾರ ಹಾಕುವುದರಿಂದ ಸಮಸ್ಯೆ ಉಂಟಾಗಬಹುದು.