Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!
ಪ್ರತಿಯೊಬ್ಬರೂ ತಮ್ಮ ಜೀವನೋಪಾಯಕ್ಕಾಗಿ ಒಂದಲ್ಲಾ ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಕಂಪೆನಿ, ಆಫೀಸ್ ಮತ್ತು ಇತರ ವಹಿವಾಟುಗಳಲ್ಲಿ ನಿರಂತರವಾಗಿ 8 ರಿಂದ 10 ಗಂಟೆ ಕೆಲಸ ಮಾಡುತ್ತಾರೆ. ತಮ್ಮ ಸುಖ ಜೀವನಕ್ಕಾಗಿ ಕೆಲಸ ಮಾಡುತ್ತೇನೆಂದು ತಿಳಿದು ಆರೋಗ್ಯದ ಕಡೆ ಗಮನ ಕೊಡದೆ ತಮ್ಮ ಜೀವನಶೈಲಿಯ ನಡೆಯಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸಿದೆ ಆಫೀಸಿನಲ್ಲಿ ತಾನು ಕುಳಿತ ಸೀಟಿನಲ್ಲಿ ಆರಾಮದಾಯಕವಾಗಿ ಕುಳಿತುಕೊಂಡು ಹೊತ್ತು ಗೊತ್ತಿಲ್ಲದೆ ಜಂಕ್ ಫುಡ್, ಪಾನೀಯವನ್ನು ಸೇವಿಸಿ ತಮ್ಮ ಆರೋಗ್ಯಕ್ಕೆ ಕೆಡುಕನ್ನು ತಂದುಕೊಳ್ಳುತ್ತಾರೆ.
ಈ ರೀತಿಯ ಸೇವನೆಯಿಂದ ನಮ್ಮ ಬಾಯಿಗೆ ಬಲು ರುಚಿಯಾದರೂ ಆರೋಗ್ಯಕ್ಕೆ ಹಾನಿಕಾರ. ಅದಕ್ಕಾಗಿ ಸತ್ವಯುತ ಆಹಾರ ಊಟ, ತಿಂಡಿ ಒಣಹಣ್ಣುಗಳನ್ನು ಸೇವನೆ ಮಾಡುತ್ತಾ ಬಂದಲ್ಲಿ ದೀರ್ಘ ಆಯುರ್ ಆರೋಗ್ಯವನ್ನು ಪಡೆಯುವ ಕನಸು ಕಾಣಬಹುದು.
ಓದುಗರೇ, ಈ ರೀತಿ ತಮ್ಮ ಆಫೀಸಿನ ಬಿಡುವಿನ ಸಂದರ್ಭದಲ್ಲಿ ಒಳ್ಳೆಯ ವಿಟಮಿನ್ಯುಕ್ತ ಆಹಾರವನ್ನು ಸೇವಿಸಿ ಮಾರುಕಟ್ಟೆಯಲ್ಲಿ ಲಭಿಸುವಂತಹ ಲಘು ಆಹಾರದಿಂದ ದೂರವಿರಿ. ಅದಕ್ಕಾಗಿ ಕೆಲವೊಂದು ಸಲಹೆಗಳು ಈ ಕೆಳಗಿನಂತಿವೆ....

ಮನೆಯಲ್ಲೇ ತಯಾರಿಸಿದ ಆಹಾರವನ್ನು ಕೊಂಡುಹೋಗಿ
ಪ್ರತಿದಿನ ಆಫೀಸಿಗೆ ಹೋಗುವಾಗ ಮನೆಯಲ್ಲೇ ತಯಾರಿಸಿದ ಲಘು ಆಹಾರವನ್ನು ಜೊತೆಯಲ್ಲೇ ಕೊಂಡೊಯ್ಯಲು ಮರೆಯದಿರಿ. ಇದರಿಂದ ಸಮಯ ಹಾಗೂ ಹಣಕಾಸಿನ ಉಳಿತಾಯ ಹಾಗೂ ವಿಟಮಿನ್ ಯುಕ್ತ ಆಹಾರ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು

ಬಿಸಿ ಮಾಡಿದ ನೀರನ್ನು ಬಾಟಲಿಯಲ್ಲಿ ತೆಗೆದುಕೊಂಡು ಹೋಗುವುದು
ನೀರು ಪ್ರತಿಯೊಂದು ಜೀವಿಗೂ ಅವಶ್ಯಕ. ನೀರಿನ ಸೇವನೆಯಿಂದ ಪ್ರತಿಯೊಂದು ಜೀವಿಗೂ ಆರೋಗ್ಯದಾಯಕವಾಗಿರಬಹುದು. ಬಾಯಾರಿದಾಗ ಅಥವಾ ಕೆಲಸದ ಒತ್ತಡದಿಂದ ಸರಿಯಾಗಿ ನೀರಿನ ಸೇವನೆ ಮಾಡದೆ ಇರುವುದರಿಂದ ಮಲಬದ್ಧತೆ, ಮೂತ್ರಪಿಂಡ ರೋಗ ಸಂಬಂಧಿಗಳಾದ ಉರಿ ಮೂತ್ರ, ಮೂತ್ರ ಕೋಶ ಕಲ್ಲು, ಬೆವರು ವಾಸನೆ, ಬೆವರುಸಾಲೆ ಮತ್ತು ಶರೀರದಲ್ಲಿ ನೀರಿನಾಂಶ ಕಡಿಮೆಯಾಗಿ ನಿಶ್ಯಕ್ತಿ ಬರುವ ಸಾಧ್ಯತೆ ಹೆಚ್ಚಿವೆ. ಆದ ಕಾರಣ ಬಿಸಿ ಮಾಡಿದ ಶುದ್ಧ ನೀರನ್ನು ಮನೆಯಿಂದಲೇ ತೆಗೆದುಕೊಂಡು ಹೋಗಲು ಸುಲಭವಾಗುವಂತಹ ಚಿಕ್ಕ ಬಾಟಲ್ ಗಳಲ್ಲಿ ತೆಗೆದುಕೊಂಡು ಹೋಗಿ ನಾವು ಕುಳಿತುಕೊಳ್ಳುವ ಸ್ಥಳದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಆರೋಗ್ಯದಾಯಕ ಒಣಹಣ್ಣುಗಳ ಸೇವನೆ
ಶುದ್ಧ ಹಣ್ಣುಗಳಾದ ಬಾಳೆಹಣ್ಣು, ಮೂಸಂಬಿ, ಸೇಬು ಇತ್ಯಾದಿ ಮತ್ತು ಒಣ ಹಣ್ಣುಗಳಾದ ಗೋಡಂಬಿ, ಖರ್ಜೂರ, ಬಾದಾಮಿ, ನೆಲಕಡಲೆ ಇತ್ಯಾದಿಗಳನ್ನು ಸಣ್ಣ ಡಬ್ಬ ಅಥವಾ ಚೀಲದಲ್ಲಿ ಮನೆಯಿಂದಲೇ ತೆಗೆದುಕೊಂಡು ಹೋಗುವುದರಿಂದ ಉಪ್ಪು ಮಿಶ್ರಿತ ಅಥವಾ ಕ್ಯಾಂಟಿನ್ ನಲ್ಲಿ ದೊರೆಯುವ ಎಣ್ಣೆ ತಿಂಡಿಗಳಿಂದ ಬಲು ಉತ್ತಮದಾಯಕ ಮತ್ತು ಜೀರ್ಣಕ್ರೀಯೆಗೂ ಒಳ್ಳೆಯದು.

ಹಣ್ಣುಗಳು ಮತ್ತು ಹಾಲು
ಹಣ್ಣುಗಳು ಮತ್ತು ಹಾಲು ಸೇವನೆಯಿಂದ ನಮ್ಮ ಶರೀರಕ್ಕೆ ಬೇಕಾದ ಜೀವಸತ್ವಗಳ ಕೊರತೆ ಉಂಟಾಗದೆ ಆರೋಗ್ಯವನ್ನು ಕಾಪಾಡಲು ಒಳ್ಳೆಯದು. ಅನವಶ್ಯಕ ಆಹಾರದಿಂದ ದೂರವುಳಿದು ಒಳ್ಳೆಯ ಹಣ್ಣು ಆಹಾರ ಸೇವನೆ ಬುದ್ಧಿವಂತರ ಆಯ್ಕೆ.

ಓಟ್ ಮೀಲ್
ಹಣ್ಣುಗಳ ಮಿಶ್ರಿತದೊಂದಿಗೆ ಓಟ್ಸ್ ಮತ್ತು ಬೀಜಗಳು ಉತ್ತಮ ಆಯ್ಕೆ. ಇದರ ಸೇವನೆಯಿಂದ ತೂಕ ಮತ್ತು ಕೊಲೆಸ್ಟ್ರಾಲ್ ಮತ್ತು ಶರೀರದ ತೂಕವನ್ನು ನಿಯಂತ್ರಿಸುತ್ತದೆ. ಕೆಲಸದ ಸಮಯದ ಮಧ್ಯದಲ್ಲಿ ನಮಗೆ ಕೂಡಲೆ ತಯಾರಿಸಿ ಸ್ವೀಕರಿಸಲು ಕಷ್ಟದಾಯಕವಲ್ಲ.

ಜಂಕ್ ಫುಡ್ಗೆ ಗುಡ್ ಬೈ
ಜಂಕ್ ಫುಡ್ ನನ್ನು ತಿನ್ನುವುದಕ್ಕಿಂತ ಮೊದಲು ಎರಡು ಸಲ ಯೋಚನೆ ಮಾಡಿ ಸೇವಿಸಿರಿ. ಇದರ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಅಷ್ಟಿಷ್ಟಲ್ಲ ಮೊದಲನೆಯದಾಗಿ,
ಬೊಜ್ಜು
ಹೃದಯ ಸಂಬಂಧಿ ಕಾಯಿಲೆಗಳು
ಹಲ್ಲಿನ ತೊಂದರೆಗಳು
ಮಾನಸಿಕ ಕಾಯಿಲೆಗಳು ಇತ್ಯಾದಿಗಳಿಗೆ ಗುರಿಯಾಗುತ್ತೇವೆ
ಈ ಜೀವನ ದೇವರ ಕಾಣಿಕೆ. ‘ಆರೋಗ್ಯವೇ ಭಾಗ್ಯ' ಎಂಬ ನಾಣ್ಣುಡಿಯಂತೆ ಶುದ್ಧ ಮನಸ್ಸು ಶುದ್ಧ ಆರೋಗ್ಯ ನಮ್ಮ ಜೀವನದ ಗುರಿಯಾಗಲು ಅನಾರೋಗ್ಯಕರ ಆಹಾರವನ್ನು ತ್ಯಜಿಸಿ, ಶುದ್ಧ ಆಹಾರ ಸೇವನೆಯತ್ತ ನಡೆಯೋಣ ಅಲ್ಲವೇ?



Click it and Unblock the Notifications











