Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಅರಿಶಿನದ ಜೊತೆ ಕರಿಮೆಣಸು ಬೆರೆತರೆ ಅದರ ಶಕ್ತಿಯೇ ಬೇರೆ...
ಅರಿಶಿನ ಮತ್ತು ಕರಿಮೆಣಸು (ಕಾಳು ಮೆಣಸು) ಎರಡು ಔಷಧೀಯ ಕ್ಷೇತ್ರದಲ್ಲಿ ತನ್ನದೇ ಆದ ಶ್ರೇಷ್ಠತೆಯನ್ನು ಪಡೆದುಕೊಂಡಿವೆ. ಇದರಲ್ಲಿರುವ ರೋಗ ನಿರೋಧಕ ಶಕ್ತಿಯಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು. ಇತ್ತೀಚೆಗೆ ಸಾಮಾನ್ಯ ಕಾಯಿಲೆಯಲ್ಲಿ ಒಂದಾದಂತಹ ಕ್ಯಾನ್ಸರ್ಗಳನ್ನು ಸಹ ಶಮನಗೊಳಿಸುವ ಶಕ್ತಿಯನ್ನು ಇವು ಪಡೆದುಕೊಂಡಿವೆ. ಅಲ್ಲದೆ ಚಿಕ್ಕಪುಟ್ಟ ನೆಗಡಿ, ಕೆಮ್ಮು, ಉರಿಯೂತ, ಗ್ಯಾಸ್ ಮತ್ತು ತ್ವಚೆಯ ಆರೈಕೆಗೆ ಗಮನಾರ್ಹ ಔಷಧೀಯ ವಸ್ತು.
ಅರಿಶಿನ ಮತ್ತು ಕಾಳು ಮೆಣಸು ಎರಡನ್ನು ಸೇರಿಸಿದ ಔಷಧವು ಹೆಚ್ಚು ಶಕ್ತಿಯುತವಾಗಿರುತ್ತದೆ. ಕಾಳು ಮೆಣಸಿನಲ್ಲಿರುವ ಪೈಪರಿನ್ ಅಥವಾ ಪೈಪರೈನ್ ಮತ್ತು ಅರಿಶಿನದ ಒಳಗಿರುವ ರಾಸಾಯನಿಕ ಸಂಯುಕ್ತ ಸೇರಿದಾಗ ಅದ್ಭುತವಾದ ಶಕ್ತಿ ಬಿಡುಗಡೆಯಾಗುತ್ತದೆ. ಇವುಗಳ ಸಂಯುಕ್ತದಿಂದ ಆಹಾರವೂ ಅದ್ಭುತ ರುಚಿಯಿಂದ ಕೂಡಿರುತ್ತವೆ, ಹಾಗೂ ಆರೋಗ್ಯವೂ ಸುಧಾರಣೆಯಾಗುತ್ತದೆ. ಹಾಗಾಗಿ ದಿನನಿತ್ಯದ ಅಡುಗೆಯಲ್ಲಿ ನಿಯಮಿತವಾಗಿ ಇವುಗಳನ್ನು ಬಳಸಿಕೊಂಡಾಗ ಸಾಹಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು....

ಜೈವಿಕ ಲಭ್ಯತೆ ಕಡಿಮೆ
ಅರಿಶಿನದಿಂದ ಆಹಾರವೂ ವೇಗವಾಗಿ ಚಯಾಪಚಯಗೊಳ್ಳುತ್ತದೆ. ಹಾಗೆಯೇ ದೇಹದಿಂದಲೂ ಹೊರಹಾಕಲು ಸಹಾಯ ಮಾಡುತ್ತದೆ. ದೇಹಕ್ಕೆ ಅನೇಕ ಆರೋಗ್ಯಕರ ಶಕ್ತಿಯನ್ನು ನೀಡುತ್ತದೆ. ಆದರೂ ಜೈವಿಕ ಲಭ್ಯತೆಯ ವಿಚಾರವಾಗಿ ತೆಗೆದುಕೊಂಡರೆ ಸ್ವಲ್ಪ ಕಡಿಮೆ ಎಂದು ಹೇಳಬಹುದು. ಆಹಾರದಲ್ಲಿ ಅರಿಶಿನದ ಪ್ರಮಾಣ ಹೆಚ್ಚಿದ್ದರೂ ಸಹ ದೇಹಕ್ಕೆ ಸಂಪೂರ್ಣ ಪ್ರಯೋಜನ ಸಿಗುವುದಿಲ್ಲ.

ಅರಿಶಿನದ ಸಹಾಯಕ್ಕೆ ಕಾಳುಮೆಣಸು
ಕಾಳುಮೆಣಸು ಮೆಟಬೊಲೈಸಿಂಗ್ ಕರ್ಕ್ಯುಮಿನ್ನಿಂದ ಯಕೃತ್ನ್ನು ನಿಧಾನಗೊಳಿಸುತ್ತದೆ. ಹೊಟ್ಟೆಯಲ್ಲಿ ಕರ್ಕ್ಯುಮಿನ್ ಉಳಿದುಕೊಳ್ಳುವ ಸಮಯವನ್ನು ಹೆಚ್ಚಿಸುವ ಮೂಲಕ ಚಯಾಪಚಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ತ್ವರಿತವಾಗಿ ಚಯಾಪಚಯಗೊಳ್ಳುವ ಕಿಣ್ವಗಳನ್ನು ತಡೆಯುತ್ತದೆ. ಅಲ್ಲದೆ ಆರೋಗ್ಯಕರ ಅಂಶವನ್ನು ದೇಹ ಸಂಪೂರ್ಣವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ.

ನರಗಳ ರಕ್ಷಣೆ ಮಾಡುವುದು
ಅರಿಶಿನವು ಒತ್ತಡವನ್ನು ಕಡಿಮೆ ಮಾಡುವ ಮೂಲಕ ನರಗಳ ಆರೋಗ್ಯವನ್ನು ಕಾಪಾಡುವುದು. ಅರಿಶಿನದಲ್ಲಿರುವ ಪಾಲಿಫೀನಾಲ್ ಕಕ್ರ್ಯುಮಿನ್ ಗುಣವೇ ಸಹಾಯ ಮಾಡುವುದು. ಆದರೆ ಇದರಲ್ಲಿರುವ ಕಳಪೆ ಮಟ್ಟದ ಜೈವಿಕ ಲಭ್ಯತೆಯಿಂದ ಅರಿಶಿನ ಸಂಪೂರ್ಣವಾಗಿ ಕಾರ್ಯನಿರ್ವಹಿಸದು. ಅರಿಶಿನದ ಜೊತೆಗೆ ಕರಿಮೆಣಸನ್ನು ಸೇರಿಸಿದಾಗ ನ್ಯೂರೊಟಾಕ್ಸಿನ್ ಮತ್ತು 3-ನೈಟ್ರೋಪ್ರೋಪಿಯಾನಿಕ್ ಆಮ್ಲ ಉತ್ಪತ್ತಿಯಾಗುವುದು. ಇವು ನರಗಳ ಮೇಲೆ ಉಂಟಾಗುವ ಹಾನಿಕಾರಕ ಜೀವಾಣುಗಳ ಪರಿಣಾಮವನ್ನು ತಡೆಯುತ್ತವೆ ಎಂದು ಹೇಳಲಾಗುತ್ತದೆ.

ಮೂಳೆಗಳ ಆರೋಗ್ಯ ಕಾಪಾಡುವುದು
ಕೆಲವೊಮ್ಮೆ ಮೂಳೆಯಲ್ಲಿರುವ ಅಂಗಾಂಶಗಳು ಒಡೆಯುತ್ತವೆ. ಅಲ್ಲದೆ ಅದರಲ್ಲಿರುವ ಖನಿಜ ಮತ್ತು ಕ್ಯಾಲ್ಸಿಯಂಗಳು ರಕ್ತಕ್ಕೆ ಸೇರಿಕೊಳ್ಳುತ್ತವೆ. ಇದರಿಂದ ಆಸ್ಟಿಯೊಪೊರೋಸಿಸ್ ನಂತಹ ಸಮಸ್ಯೆ ಉಂಟಾಗುವುದು. ಜರ್ನಲ್ ಆಫ್ ಎಂಡೋಡಾಂಟಿಕ್ಸ್ನಲ್ಲಿ ಪ್ರಕಟವಾದ ಅಧ್ಯಯನಗಳ ಪ್ರಕಾರ ಮೆಣಸಿನಕಾಳು ಮಿಶ್ರಿತ ಅರಿಶಿನ ಬಳಕೆಯಿಂದ ಮೂಳೆ ಸಂಬಂಧಿ ಕಾಯಿಲೆಗಳು ಗುಣಮುಖವಾಗುತ್ತದೆ ಎಂದು ತಿಳಿಸಿದೆ.



Click it and Unblock the Notifications