Just In
- 5 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 6 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
- 7 hrs ago ದಿನ ಭವಿಷ್ಯ: ಈ ದಿನ 12 ರಾಶಿಗಳಲ್ಲಿ ಈ ರಾಶಿಗಳಿಗೆ ಅದ್ಭುತ ದಿನ
- 8 hrs ago ಗುರು ಸಂಚಾರ 2024: ಮೇ ರಿಂದ 12 ತಿಂಗಳು ಧನು ರಾಶಿಯವರು ಖರ್ಚು ಬಗ್ಗೆ ಜಾಗ್ರತೆ, ಇನ್ನು ಹೇಗೆಲ್ಲಾ ಪ್ರಭಾವ ಬೀರಲಿದೆ?
Don't Miss
- Sports RR vs MI IPL 2024: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ; ರಾಜಸ್ಥಾನ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಮುಖಭಂಗ
- News Bengaluru Real Estate: ಬೆಂಗಳೂರಿನಲ್ಲಿ ಸೈಟು ಖರೀದಿಸುವ ಮುನ್ನ ಎಚ್ಚರ! 279 ಅಕ್ರಮ ಲೇಔಟ್ ಗುರುತಿಸಿದ ಬಿಡಿಎ
- Movies ತಾವೇ ತೋಡಿದ ಖೆಡ್ಡಾಗೆ ಬಿದ್ದ ರಾಖಿ ಸಾವಂತ್ ? ಕಂಬಿ ಹಿಂದೆ ಡ್ರಾಮಾ ಕ್ವೀನ್..?
- Finance ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖಾಲಿ ಹೊಟ್ಟೆಯಲ್ಲಿ ಎಳೆನೀರು ಕುಡಿದರೆ ಒಂದಲ್ಲಾ, ಎರಡಲ್ಲಾ 10 ಲಾಭಗಳಿವೆ!
ನಿಸರ್ಗ ನೀಡಿರುವ ಅತ್ಯುತ್ತಮ ದ್ರವಾಹಾರವೆಂದರೆ ಎಳನೀರು ಅಥವಾ ಎಳೆನೀರು. ಅತ್ಯುತ್ತಮ ಮೂತ್ರವರ್ಧಕವಾಗಿರುವ ಎಳೆನೀರಿನ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲಿಯೂ ತೆಂಗಿನಕಾಯಿಯ ವಿವಿಧ ಉತ್ಪನ್ನಗಳನ್ನು ಆಹಾರ, ಆರೋಗ್ಯ ಹಾಗೂ ಸೌಂದರ್ಯವರ್ಧಕವಾಗಿ ತಪ್ಪದೇ ಬಳಸುತ್ತಾರೆ. ಎಳೆನೀರನ್ನು ಕುಡಿಯುವ ಮೂಲಕ ಆರೋಗ್ಯವೃದ್ಧಿಯಾಗುವುದನ್ನು ಶತಮಾನಗಳ ಹಿಂದೆಯೇ ನಮ್ಮ ಪೂರ್ವಜರು ಕಂಡುಕೊಂಡಿದ್ದಾರೆ.
Most Read: ಮಳೆಗಾಲದಲ್ಲಿ ಕಾಡುವ ಕೆಮ್ಮಿಗೆ ಪವರ್ ಫುಲ್ ಮನೆಮದ್ದುಗಳು
ಈ ನೀರಿನಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿದ್ದು ಅತಿ ಹೆಚ್ಚಿನ ಪೋಷಕಾಂಶಗಳಿರುವ ಕಾರಣ ಇದೊಂದು ಅದ್ಭುತ ಜೀವಜಲವಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟುಗಳು, ಅಮೈನೋ ಆಮ್ಲ, ಕಿಣ್ವಗಳು, ಬಿ-ಕಾಂಪ್ಲೆಕ್ಸ್ ವಿಟಮಿನ್ನುಗಳು, ವಿಟಮಿನ್ ಸಿ ಹಾಗೂ ಖನಿಜಗಳಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೀಶಿಯಂ, ಮ್ಯಾಂಗನೀಸ್ ಮೊದಲಾದವುಗಳಿವೆ.
ಈ ಎಲ್ಲಾ ಪೋಷಕಾಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಷ್ಟೇ ಅಲ್ಲ, ಎಳೆನೀರಿನಲ್ಲಿ ಸಸ್ಯಮೂಲದ ರಸದೂತವೊಂದಿದೆ. ಸೈಟೋಕೈನಿನ್ (cytokinin) ಎಂಬ ಈ ರಸದೂತಕ್ಕೆ ವಯಸ್ಸಾಗುವುದನ್ನು ಮುಂದೂಡುವ ಗುಣವಿದೆ. ಅಲ್ಲದೇ ಈ ರಸದೂತಕ್ಕೆ ನರಗಳ ಒಳಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ (anti-thrombotic) ಹಾಗೂ ಕ್ಯಾನ್ಸರ್ಕ ಣಗಳನ್ನು ತಡೆಗಟ್ಟುವ ಗುಣಗಳಿವೆ.
Most Read: ನಿಮ್ಮ ಮೈ ಮೇಲೆ ಹಲ್ಲಿ ಬಿದ್ದರೆ ಅಪಶಕುನವೇ? ಅದೃಷ್ಟವೇ?
ಎಳೆನೀರಿನ ಗರಿಷ್ಠ ಪ್ರಯೋಜನವನ್ನು ಪಡೆಯಬೇಕಾದರೆ ಈ ನೀರು ಯಾವುದೇ ಕಲಬೆರಕೆಯಿಲ್ಲದೇ ನೈಸರ್ಗಿಕ ರೂಪದಲ್ಲಿರಬೇಕು. ಹಾಗಾಗಿ ತಾಜಾ ಎಳೆನೀರನ್ನು ಕತ್ತರಿಸಿ ನೀರು ಕುಡಿಯುವುದೇ ಅತ್ಯಂತ ಆರೋಗ್ಯಕರವಾಗಿದೆ. ಇಂದಿನ ಲೇಖನದಲ್ಲಿ ಎಳೆನೀರನ್ನು ಕುಡಿಯುವುದರ ಪ್ರಯೋಜನಗಳನ್ನು ವಿವರಿಸಲಾಗಿದೆ ಹಾಗೂ ಖಾಲಿಹೊಟ್ಟೆಯಲ್ಲಿ ಕುಡಿಯುವುದರ ಮಹತ್ವವನ್ನೂ ವಿವರಿಸಲಾಗಿದೆ....
ಬಾಯಾರಿಕೆ ತಣಿಸಿವುದರಲ್ಲಿ ಅಪ್ರತಿಮ
ಬಾಯಾರಿಕೆಯಾದಾಗ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಎಳನೀರಿಗಿಂತ ಬೇರಾವ ದ್ರವವೂ ಸರಿಸಾಟಿಯಾಗಲಾರದು. ಇದರಲ್ಲಿರುವ ಎಲೆಕ್ಟ್ರೋಲೈಟುಗಳು ದೇಹ ಕಳೆದುಕೊಂಡಿರುವ ನೀರು ಮತ್ತು ಶಕ್ತಿಯನ್ನು ಮರುತುಂಬಿಸಲು ನೆರವಾಗುತ್ತವೆ. ವಿಶೇಷವಾಗಿ ಆಮಶಂಕೆ, ವಾಂತಿ, ಅತಿ ಹೆಚ್ಚಿನ ಬೆವರುವಿಕೆ ಮೊದಲಾದ ಸಂದರ್ಭದಲ್ಲಿ ದೇಹ ಕಳೆದುಕೊಂಡಿದ್ದ ನೀರಿನ ಅಂಶವನ್ನು ಮರುಪಡೆಯಲು ಸಹಾ ಈ ನೀರೇ ಅತ್ಯುತ್ತಮವಾಗಿದೆ.
Most Read:ಸಂಧಿವಾತ ಗುಣಪಡಿಸಲು ಇಲ್ಲಿದೆ ನೋಡಿ ಪವರ್ಫುಲ್ ಮನೆಮದ್ದುಗಳು
ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತದೆ
ಎಳೆನೀರಿನಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅದರಲ್ಲೂ ಅಧಿಕ ಉಪ್ಪಿನ ಅಥವಾ ಸೋಡಿಯಂ ಪ್ರಭಾವದಿಂದ ದೇಹಕ್ಕೆ ಎದುರಾಗಿರುವ ತೊಂದರೆಯನ್ನು ಸಮತೋಲನಗೊಳಿಸಲು ನೆರವಾಗುವ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಇದು ಎಳನೀರಿನ ಅತ್ಯುತ್ತಮ ಗುಣವಾಗಿದೆ.
ಹೃದಯದ ಟಾನಿಕ್
ಎಳನೀರಿನಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ ಹಾಗೂ ಇದರ ನೀರಿನಲ್ಲಿ ಹೃದಯವನ್ನು ರಕ್ಷಿಸುವ ಗುಣಗಳಿವೆ. ಎಳನೀರನ್ನು ನಿಯಮಿತವಾಗಿ ಕುಡಿಯುವ ಮೂಲಕ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಬಹುದು ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ (high-density lipoprotein) ಹೆಚ್ಚಿಸಿ ಒಟ್ಟಾರೆ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುವ ಮೂಲಕ ಹೃದಯದ ಮೇಲಿನ ಭಾರವನ್ನು ಕಡಿಮೆ ಮಾಡಬಹುದು.
ಮದ್ಯದ ಅಮಲಿನಿಂದ ಹೊರತರುತ್ತದೆ
ಮದ್ಯವನ್ನು ಕುಡಿದ ಬಳಿಕ ದೇಹದಲ್ಲಿ ನೀರಿನ ಕೊರತೆಯುಂಟಾಗುತ್ತದೆ ಹಾಗೂ ಬೆಳಿಗ್ಗೆದ್ದಾಗ ತಲೆ ತಿರುಗುತ್ತಿರುವಂತೆ ಭಾಸವಾಗುತ್ತದೆ. ಈ ಸಮಯದಲ್ಲಿ ಎಳನೀರು ಕುಡಿಯುವ ಮೂಲಕ ಮೆದುಳಿಗೆ ಹೆಚ್ಚಿನ ರಕ್ತಸರಬರಾಜು ದೊರಕುತ್ತದೆ ಹಾಗೂ ಈ ತಲೆ ತಿರುಗುವಿಕೆ ನಿಲ್ಲುತ್ತದೆ.
Most Read:ಒಂದೇ ಒಂದು 'ಟೊಮೆಟೊ' ಕೂದಲಿನ ಅಂದ-ಚೆಂದ ಹೆಚ್ಚಿಸುತ್ತದೆ!
ತೂಕ ಇಳಿಸಲು ಸಹಕರಿಸುತ್ತದೆ
ಸಕ್ಕರೆ ತುಂಬಿರುವ ಪೇಯಗಳ ಬದಲಿಗೆ ಎಳನೀರನ್ನು ಕುಡಿಯುವ ಮೂಲಕ ತೂಕ ಇಳಿಸುವ ಪ್ರಕ್ರಿಯೆಗೆ ಹೆಚ್ಚಿನ ಬೆಂಬಲ ದೊರಕುತ್ತದೆ. ಇದರಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಲೂ ಯೋಗ್ಯವಾಗಿದೆ. ಅಲ್ಲದೇ ಈ ನೀರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ದ್ರವವಾಗಿದ್ದು ಇದರಲ್ಲಿರುವ ಕಿಣ್ವಗಳು ಕೊಬ್ಬನ್ನು ಹೆಚ್ಚು ಕರಗಿಸಲು ನೆರವಾಗುವ ಮೂಲಕ ಶೀಘ್ರವಾಗಿ ತೂಕ ಇಳಿಯಲು ನೆರವಾಗುತ್ತವೆ.
ತಲೆನೋವು ಕಡಿಮೆ ಮಾಡುತ್ತದೆ
ಸಾಮಾನ್ಯವಾಗಿ ದೇಹದಲ್ಲಿ ನೀರಿನ ಕೊರತೆಯಾಗುವುದರಿಂದಲೇ ತಲೆನೋವು ಉಂಟಾಗುತ್ತದೆ. ಇದಕ್ಕೆ ಮೈಗ್ರೇನ್ ಸಹಾ ಹೊರತಲ್ಲ. ಎಳೆನೀರಿನ ಸೇವನೆಯಿಂದ ದೇಹ ಕಳೆದುಕೊಂಡಿದ್ದ ಎಲೆಕ್ಟ್ರೋಲೈಟುಗಳನ್ನು ಮತ್ತೆ ಪೂರೈಸುವ ಮೂಲಕ ದೇಹಕ್ಕೆ ಆರ್ದ್ರತೆಯ ಕೊರತೆಯನ್ನು ನೀಗಿಸುತ್ತದೆ. ವಿಶೇಷವಾಗಿ ಇದರಲ್ಲಿರುವ ಮೆಗ್ನೀಶಿಯಂ ಮೈಗ್ರೇನ್ ತಲೆನೋವು ಬರದಂತೆ ಇರಲು ಹಾಗೂ ಕಡಿಮೆ ಮಾಡಲು ನೆರವಾಗುತ್ತದೆ. ಎಳೆನೀರನ್ನು ಪ್ರತಿದಿನ ಕುಡಿಯುವ ಪ್ರಯೋಜನಗಳಲ್ಲಿ ಇದು ಪ್ರಮುಖ ಪ್ರಯೋಜನವಾಗಿದೆ.
Most Read:ಅದೃಷ್ಟ ನಿಮ್ಮ ಕೈಹಿಡಿಯಬೇಕೇ? ಹಾಗಾದರೆ ಈ 5 ವಸ್ತುಗಳು ನಿಮ್ಮ ಬಳಿ ಇರಲಿ
ಕೆಟ್ಟಿದ್ದ ಹೊಟ್ಟೆಯನ್ನು ಸರಿಪಡಿಸುತ್ತದೆ
ಹೊಟ್ಟೆ ಕೆಡಲು ಅಜೀರ್ಣತೆ ಪ್ರಮುಖ ಕಾರಣವಾಗಿದೆ. ಅಜೀರ್ಣತೆಗೆ ಕೆಲವಾರು ಕಾರಣಗಳಿರಬಹುದು. ಆದರೆ ಎಳೆನೀರಿನ ಸೇವನೆಯಿಂದ ಯಾವುದೇ ಕಾರಣಕ್ಕೂ ಅಜೀರ್ಣತೆಯಾಗಿದ್ದರೆ ಇದನ್ನು ತಕ್ಷಣವೇ ಸರಿಪಡಿಸಿ ಆಹಾರ ಜೀರ್ಣಿಸಿಕೊಳ್ಳಲು ನೆರವಾಗುತ್ತದೆ ಹಾಗೂ ಈ ಮೂಲಕ ಎದುರಾಗಬಹುದಾಗಿದ್ದ ಇತರ ತೊಂದರೆಗಳಿಂದ ಕಾಪಾಡುತ್ತದೆ.
ವ್ಯಾಯಾಮದ ಬಳಿಕ ಸೇವನೆಗೆ ಅತ್ಯುತ್ತಮ
ಈ ನೀರಿನಲ್ಲಿ ಉತ್ತಮ ಪ್ರಮಾಣದ ಖನಿಜಗಳಿರುವ ಕಾರಣ ಹಾಗೂ ಇವುಗಳನ್ನು ದೇಹ ತಕ್ಷಣವೇ ಹೀರಿಕೊಳ್ಳಲು ಸಾಧ್ಯವಿರುವ ಕಾರಣ ವ್ಯಾಯಾಮದ ಬಳಿಕ ದೇಹ ಕಳೆದುಕೊಂಡಿದ್ದ ಎಲೆಕ್ಟ್ರೋಲೈಟುಗಳನ್ನು ಮರುತುಂಬಿಸಲು ನೆರವಾಗುತ್ತದೆ. ಇದರಿಂದ ಕಳೆದುಕೊಂಡಿದ್ದ ಶಕ್ತಿ ಮತ್ತೆ ಪಡೆಯಲು ಹಾಗೂ ಸ್ನಾಯುಗಳು ತುಂಡಾಗುವುದನ್ನು ತಪ್ಪಿಸಬಹುದು.
ಎಳೆನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದೇ?
ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು ಎಂದು ಎಲ್ಲಿಯಾದರೂ ಇದ್ದರೆ ಇದು ಅಪ್ಪಟ ಮಿಥ್ಯೆಯಾಗಿದೆ. ವಾಸ್ತವದಲ್ಲಿ ಖಾಲಿಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಅತ್ಯುತ್ತಮ ಆಯ್ಕೆಯಾಗಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಲು ಅತಿ ಹೆಚ್ಚಿನ ನೆರವು ನೀಡುತ್ತದೆ ಹಾಗೂ ದೇಹವನ್ನು ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಜೀವಿಗಳ ಧಾಳಿಯಿಂದ ರಕ್ಷಿಸುತ್ತದೆ. ಎಳೆನೀರು ಅತ್ಯುತ್ತಮ ಮೂತ್ರವರ್ಧಕವಾಗಿರುವ ಕಾರಣ ದಿನದ ಪ್ರಥಮ ಆಹಾರವಾಗಿ ಕುಡಿಯುವ ಮೂಲಕ ದೇಹದ ಕಲ್ಮಶಗಳನ್ನು ಪೂರ್ಣವಾಗಿ ಹೊರಹಾಕಲೂ ಸಾಧ್ಯವಾಗುತ್ತದೆ.
ಮೂತ್ರದ ಸಮಸ್ಯೆ
ಮೂತ್ರದ ಸಮಸ್ಯೆಗಳು ನಿಯಮಿತವಾಗಿ ಎಳನೀರನ್ನು ಸೇವಿಸುವುದು ಉರಿಮೂತ್ರದಂತಹ ಅಪಾಯಕಾರಿ ಅಂಶವನ್ನು ದೂರಮಾಡಿ ಸ್ವಾಸ್ಥ್ಯವನ್ನು ಒದಗಿಸುತ್ತದೆ.