Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಶೀತ, ಜ್ವರ ಹಾಗೂ ಗಂಟಲು ಕೆರೆತವೇ? ಇಲ್ಲಿದೆ ನೋಡಿ ಕಷಾಯ
ಮಳೆಗಾಲ ಆರಂಭವಾದರೆ ಸಾಕು ಒಂದು ರೀತಿಯ ತಂಪಾದ ವಾತಾವರಣ, ತಂಗಾಳಿ ಸೋನೆ ಮಳೆ ಎಲ್ಲವೂ ಒಮ್ಮಿಂದೊಮ್ಮೆಲೆ ಆರಂಭಗೊಂಡಿರುತ್ತವೆ. ಒಂದೇ ಸಮನೆ ಬದಲಾಗುವ ವಾತಾವರಣ ಹಾಗೂ ಹೆಚ್ಚುವ ತೇವಾಂಶದಿಂದ ದೇಹದ ಆರೋಗ್ಯದಲ್ಲೂ ಕೊಂಚ ಏರುಪೇರು ಉಂಟಾಗುವುದು ಸಹಜ. ಈ ವ್ಯತ್ಯಾಸಕ್ಕೆ ಭಯ ಪಡುವ ಅಗತ್ಯ ಇರುವುದಿಲ್ಲ. ಸ್ವಲ್ಪ ಬಿಸಿಯಾದ ಪಾನೀಯ ಮತ್ತು ಮಸಾಲೆ ಭರಿತ ಆಹಾರವನ್ನು ಸೇವಿಸುವುದರ ಮೂಲಕ ದೇಹವನ್ನು ಬಲಪಡಿಸಿಕೊಳ್ಳಬಹುದು.
ಬಿಸಿಯ ಬೇಗೆಯಿಂದ ಮಳೆಗಾಲದ ತಂಪು ಅನುಭವಿಸುತ್ತಿದ್ದಂತೆಯೇ ಕೆಲವು ರೋಗಗಳೂ ಹುಟ್ಟಿಕೊಳ್ಳುತ್ತವೆ. ಸೊಳ್ಳೆಗಳು, ಸೂಕ್ಷ್ಮಾಣುಗಳ ಸಂಖ್ಯೆಯೂ ಹೆಚ್ಚುತ್ತವೆ. ಇವುಗಳಿಂದ ಸಾಮಾನ್ಯವಾಗಿ ಜ್ವರ, ಶೀತ ಮತ್ತು ಗಂಟಲು ನೋವು ಪ್ರಾರಂಭವಾಗುವುದು. ಎಲ್ಲಾ ಕಾಲದಲ್ಲೂ ಸಾಮಾನ್ಯವಾಗಿ ಬರುವ ಈ ರೋಗಗಳು ಮಳೆಗಾಲದಲ್ಲಿ ಸ್ವಲ್ಪ ಜಾಸ್ತಿ ಎನ್ನಬಹುದು. ಈ ಕಾಯಿಲೆಗಳ ಸಲುವಾಗಿ ಆಸ್ಪತ್ರೆಗೆ ಅಲೆದಾಡುವ ಬದಲು ಮನೆ ಮದ್ದಿನಿಂದಲೇ ಆರೈಕೆ ಮಾಡಿಕೊಳ್ಳಬಹುದು.

ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಪ್ರಮಾಣದಲ್ಲಿರುವಾಗಲೇ ಅನೇಕ ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಯಾವಾಗ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತವೆಯೋ ಆಗ ಎಲ್ಲ ಬಗೆಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಹಾಗಾಗಿ ನಾವು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡಿಕೊಳ್ಳಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸಣ್ಣ ಪುಟ್ಟ ಶೀತ, ಗಂಟಲು ನೋವನ್ನು ಓಡಿಸುವ ಚಿಕಿತ್ಸೆ ಇಲ್ಲಿದೆ ನೋಡಿ...
ಮನೆ ಔಷಧಿ
* ಬ್ರೌನ್ ಶುಗರ್ -1 ಚಮಚ
* ಲವಂಗ 4-5
* ತುಳಸಿ 5-6
* ಅರಿಶಿನ 1 ಚಮಚ
ವಿಧಾನ
* ಒಂದು ಪಾತ್ರೆಯಲ್ಲಿ ನೀರು ಮತ್ತು ಮೇಲೆ ಹೇಳಿರುವ ಎಲ್ಲಾ ಸಾಮಾಗ್ರಿಯನ್ನು ಹಾಕಿ ಕುದಿಯಲು ಬಿಡಿ.
* ಪಾತ್ರೆಯಲ್ಲಿ ಇದ್ದ ನೀರಿನ ಪ್ರಮಾಣ ಕುದಿಯುತ್ತಲೇ ಕಡಿಮೆಯಾಗುತ್ತಾ ಬರುತ್ತದೆ, ಎಂದು ಅದು ಒಂದು ಕಪ್ ನಷ್ಟು ಉಳಿದಿರುತ್ತದೋ, ಆಗ ಉರಿಯನ್ನು ಆರಿಸಿ.
* ಒಂದು ಕಪ್ನಲ್ಲಿ ಸೋಸಿಕೊಳ್ಳಬೇಕು.
* ಸ್ವಲ್ಪ ಬಿಸಿ ಬಿಸಿ ಇರುವಾಗಲೇ ಇದನ್ನು ಕುಡಿಯಿರಿ.
* ಹೀಗೆ ದಿನಕ್ಕೊಮ್ಮೆ ಈ ಕಷಾಯವನ್ನು ಸೇವಿಸಿದರೆ ಕಾಯಿಲೆ ಕಡಿಮೆಯಾಗುವುದು.
ರೋಗದ ಲಕ್ಷಣ ಕಾಣಿಸಿಕೊಂಡಾಗ ಹಾಗೂ ರೋಗ ಗುಣಮುಖವಾಗುವವರೆಗೂ ಎಣ್ಣೆಯುಕ್ತ ಆಹಾರದಿಂದ ದೂರ ಇರಬೇಕು. ದೇಹವನ್ನು ಆದಷ್ಟು ಬೆಚ್ಚಗಿರುವಂತೆ ನೋಡಿಕೊಳ್ಳಬೇಕು.
ಹಾಗೊಮ್ಮೆ ಜ್ವರ, ಶೀತವು ಅತಿಯಾಗುತ್ತಿದ್ದರೆ ವೈದ್ಯರಲ್ಲಿ ಪರೀಕ್ಷಿಸಿ ಕೊಳ್ಳುವುದು ಸೂಕ್ತ. ವೈರಲ್ ಫ್ಲೂ ಆಗಿದ್ದರೆ ಸೂಕ್ತ ಚಿಕಿತ್ಸೆ ಪಡೆದು ಗುಣಮುಖ ಹೊಂದಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


