Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಗಾಯದ ಸಮಸ್ಯೆಯಿದ್ದರೆ, ಬೆಳ್ಳುಳ್ಳಿ ಪೇಸ್ಟ್ ಹಚ್ಚಿ, ಕೂಡಲೇ ಕಡಿಮೆಯಾಗುತ್ತದೆ!
ಅಡುಗೆ ಯಾವಾಗ ಪ್ರಾರಂಭವಾಯಿತೋ ಬಹುಶಃ ಅಂದಿನಿಂದಲೇ ಬೆಳ್ಳುಳ್ಳಿ ಒಂದು ಸಾಂಬಾರ ಪದಾರ್ಥವಾಗಿ ಬಳಕೆಯಾಗುತ್ತಾ ಬಂದಿರಬೇಕು. ಇದರ ಬ್ಯಾಕ್ಟೀರಿಯಾ ನಿವಾರಕ ಗುಣದ ಕಾರಣ ಇದೊಂದು ಸಾಂಬಾರ ಪದಾರ್ಥದ ಹೊರತಾಗಿ ಔಷಧಿಯ ರೂಪದಲ್ಲಿಯೇ ಹೆಚ್ಚು ಬಳಕೆಯಾಗುತ್ತಿದೆ.
ವಿಶೇಷವಾಗಿ ಇದರ ಪೋಷಕಾಂಶಗಳು ಗಾಯಗಳನ್ನು ಶೀಘ್ರವಾಗಿ ಮಾಗಿಸಲು ಸಮರ್ಥವಾಗಿದ್ದು ಸೋಂಕನ್ನು ತಡೆಯುವ ಮೂಲಕ ಗಾಯ ಒಣಗುವ ಗತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಈ ಮೂಲಕವೂ ಗಾಯ ಮಾಗಿಸುವ ಗತಿ ಹೆಚ್ಚುತ್ತದೆ. ಬನ್ನಿ, ಈ ಕ್ರಿಯೆಯನ್ನು ಚುರುಕುಗೊಳಿಸಲು ಬೆಳ್ಳುಳ್ಳಿಯನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ...

ಮೊದಲ ಹಂತ: ಗಾಯ ತೊಳೆಯಿರಿ
ಗಾಯ ಹಸಿಯಾಗಿದ್ದರೆ ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಜಜ್ಜಿ ನಯವಾದ ಲೇಪನವಾಗಿಸಿ. ಗಾಯವನ್ನು ಸ್ವಚ್ಛವಾದ ನೀರು ಹಾಗೂ ಡೆಟಾಲ್ ಬಳಸಿ ತೊಳೆದು ಒಣಗಿಸಿ. ಸಾಮಾನ್ಯ ಗಾತ್ರದ ಗಾಯಕ್ಕೆ ಸುಮಾರು ಹದಿನೈದು ಎಸಳು ಬೆಳ್ಳುಳ್ಳಿ ಸಾಕಾಗುತ್ತದೆ.

ಎರಡನೆಯ ಹಂತ:ಬೆಳ್ಳುಳ್ಳಿ ಲೇಪಿತ ಪಟ್ಟಿ ತಯಾರಿಸಿ
ಬ್ಯಾಂಡೇಜು ಕಟ್ಟುವ ಹತ್ತಿಯ ಬಟ್ಟೆಯನ್ನು ಕೆಲವು ಮಡಿಕೆಗಳಾಗಿಸಿ ಇದರ ಮೇಲೆ ಈ ಲೇಪನವನ್ನು ತೆಳುವಾಗಿ ಹರಡಿ. ಈ ಪಟ್ಟಿಯ ಮೇಲೆ ಲೇಪಿಸಿರುವ ಲೇಪನ ಗಾಯಕ್ಕೆ ತಗಲುವಂತೆ ಪಟ್ಟೆಯನ್ನು ಇರಿಸಿ.

ಮೂರನೆಯ ಹಂತ:ಪಟ್ಟಿ ಕಟ್ಟಿ
ಕೊಂಚ ಉದ್ದವಾದ ಬ್ಯಾಂಡೇಜನ್ನು ಈ ಪಟ್ಟಿಯನ್ನು ಆವರಿಸುವಂತೆ ಕಟ್ಟಿ ಸುಮಾರು ಎರಡು ದಿನ ಹಾಗೇ ಇರುವಂತೆ ಬಿಗಿಯಾಗಿಸಿ. ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಹೊಂದಿದ್ದು ಗಾಯವನ್ನು ಶೀಘ್ರವಾಗಿ ಮಾಗಿಸಲು ನೆರವಾಗುತ್ತದೆ. ಅಲ್ಲದೇ ಗಾಯಕ್ಕೆ ಕಾರಣವಾದ ಪೆಟ್ಟಿನಿಂದ ಆಗಿದ್ದ ನೋವು ಸಹಾ ಶೀಘ್ರವಾಗಿ ಕಡಿಮೆಯಾಗುತ್ತದೆ.

ನಾಲ್ಕನೆಯ ಹಂತ:ಪಟ್ಟಿಯನ್ನು ಬದಲಿಸಿ
ಎರಡು ದಿನಗಳ ಬಳಿಕ ಈ ಪಟ್ಟಿಯನ್ನು ನಿವಾರಿಸಿ ಮತ್ತೊಮ್ಮೆ ಗಾಯವನ್ನು ತಣ್ಣೀರು ಹಾಗೂ ಡೆಟಾಲ್ ಬಳಸಿ ತೊಳೆಯಿರಿ. ಗಾಯಕ್ಕೆ ಅಂಟಿಕೊಂಡಿದ್ದ ಹಳೆಯ ಬೆಳ್ಳುಳ್ಳಿಯ ಲೇಪನ ಪೂರ್ಣವಾಗಿ ನಿವಾರಣೆಯಾಗಬೇಕು. ಈಗ ಹೊಸ ಪಟ್ಟಿಯೊಂದನ್ನು ತಯಾರಿಸಿ ಮೊದಲಿನಂತೆಯೇ ಇನ್ನೊಂದು ಪಟ್ಟಿಯನ್ನು ಕಟ್ಟಿ. ಈ ಪಟ್ಟಿಯನ್ನು ಮುಂದಿನ ಎರಡು ದಿನಗಳವರೆಗೆ ಇರುವಂತೆ ಮಾಡಿ ಬಳಿಕ ನಿವಾರಿಸಿ. ನಾಲ್ಕೇ ದಿನಗಳಲ್ಲಿ ಗಾಯ ಮಾಗಿದ್ದು ಸೋಂಕು ಇಲ್ಲವಾಗಿರುತ್ತದೆ.

ಒಂದು ವೇಳೆ ಬೆಳ್ಳುಳ್ಳಿ ನಿಮಗೆ ಆಗದಿದ್ದರೆ?
ಕೆಲವು ವ್ಯಕ್ತಿಗಳಿಗೆ ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಅಲರ್ಜಿಕಾರಕವಾಗಿದ್ದು ಗಾಯದ ಮೇಲೆ ಹಚ್ಚಿನ ಕೊಂಚ ಹೊತ್ತಿನಲ್ಲಿಯೇ ಉರಿಯಲು ಪ್ರಾರಂಭಿಸುತ್ತದೆ. ಹೀಗಾಗರೆ ಬೆಳ್ಳುಳ್ಳಿಯ ಬದಲು ಅರಿಶಿನ ಪುಡಿಯ ಲೇಪನವನ್ನು ಹಚ್ಚಿ ಹಾಗೂ ದಿನಕ್ಕೊಂದು ಲೋಟ ಬಿಸಿ ಹಾಲಿನಲ್ಲಿ ಅರಿಶಿನ ಪುಡಿ ಬೆರೆಸಿ ಕುಡಿಯಿರಿ. ಈ ವಿಧಾನದಿಂದಲೂ ಗಾಯ ಶೀಘ್ರವಾಗಿ ಮಾಗುತ್ತದೆ.

ಒಂದು ವೇಳೆ ಅರಿಶಿನಕ್ಕೂ ಅಲರ್ಜಿಯಾಗಿದ್ದರೆ?
ಕೆಲವು ವ್ಯಕ್ತಿಗಳಿಗೆ ಬೆಳ್ಳುಳ್ಳಿ ಹಾಗೂ ಅರಿಶಿನ ಎರಡೂ ಅಲರ್ಜಿಕಾಕರವಾಗಿರುತ್ತದೆ. ಈ ವ್ಯಕ್ತಿಗಳು ಅಪ್ಪಟ ಜೇನನ್ನು ಗಾಯದ ಮೇಲೆ ಹಚ್ಚಿ ಒಂದು ಗಂಟೆಯ ಬಳಿಕ ನೀರಿನಿಂದ ತೊಳೆದುಕೊಳ್ಳಿ.

ಎಚ್ಚರಿಕೆ
ಒಂದು ವೇಳೆ ಇವುಗಳಲ್ಲಿ ಯಾವುದೇ ಸಾಮಾಗ್ರಿ ನಿಮಗೆ ಅಲರ್ಜಿಕಾರಕವಾಗಿದ್ದರೆ ಹಾಗೂ ಚರ್ಮದ ಮೇಲೆ ಚಿಕ್ಕ ಗುಳ್ಳೆಗಳು ಎದ್ದರೆ ತಕ್ಷಣವೇ ಇದನ್ನು ತೊಳೆಯಿರಿ ಹಾಗೂ ವೈದ್ಯರ ಸಲಹೆಯನ್ನು ಪಡೆಯಿರಿ.



Click it and Unblock the Notifications