Just In
- 56 min ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 1 hr ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 2 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 2 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಸಿ ನೀರು-ನಿಂಬೆ ರಸದ ಮಹಿಮೆ ತಿಳಿಯಬೇಕಾದರೆ ಈ ಲೇಖನ ಓದಿ
ನಮ್ಮ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ಕೇವಲ ಆಹಾರ ಮತ್ತು ವ್ಯಾಯಾಮ ಪ್ರಕ್ರಿಯೆ ಸರಿಯಾಗಿ ಇದ್ದರೆ ಸಾಲದು. ನಮ್ಮ ದೈನಂದಿನ ದಿನಚರಿಯೂ ಸೂಕ್ತ ರೀತಿಯಲ್ಲಿ ಇರಬೇಕು. ದಿನವಿಡೀ ನಿರಂತರವಾಗಿ ಕೆಲಸ ಮಾಡುವ ನಮ್ಮ ದೇಹದ ಒಳಾಂಗಗಳಿಗೆ ಅನುಕೂಲವಾಗುತ್ತದೆ. ಆಗ ಎಲ್ಲಾ ಅಂಗಾಂಗಗಳು ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸುತ್ತವೆ. ಜೊತೆಗೆ ಅನೇಕ ರೋಗಗಳು ಬರದಂತೆ ತಡೆಯುತ್ತವೆ. ಅಂತಹ ಉತ್ತಮ ದಿನಚರಿಯಲ್ಲಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಮತ್ತು ನಿಂಬೆ ರಸದ ಮಿಶ್ರಣವನ್ನು ಸೇವಿಸುವುದು.
ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!
ಇದು ಜೀರ್ಣಕ್ರಿಯೆಯ ಆರಂಭಕ್ಕೆ ಪೂರಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಖನಿಜಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಹೆಚ್ಚಿಸುವುದರೊಂದಿಗೆ ಅನೇಕ ಆರೋಗ್ಯಕರ ಬದಲಾವಣೆಗೆ ಅನುಕೂಲ ಕಲ್ಪಿಸಿಕೊಡುತ್ತದೆ. ವಿಟಮಿನ್ ಸಿ ಸಮೃದ್ಧವಾಗಿ ಹೊಂದಿರುವ ನಿಂಬೆ ರಸವನ್ನು ಬಿಸಿನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ದೇಹದಲ್ಲಿ ಡಿ-ಲಿಮೋನೆನ್ ಎನ್ನುವ ಉತ್ಕರ್ಷಣ ನಿರೋಧಕವನ್ನು ಹೆಚ್ಚಿಸುತ್ತದೆ. ಇದರೊಟ್ಟಿಗೆ ಪಿತ್ತಕೋಶದ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ.
ಲಿಂಬೆ+ಜೇನು
ಬೆರೆಸಿದ
ನೀರು
ಸೇವಿಸಿ-ತೂಕ
ಇಳಿಸಿಕೊಳ್ಳಿ!
ಯಕೃತ್ತಿನಲ್ಲಿರುವ ಹಾನಿಕಾರಕ ಸಂಯುಕ್ತಗಳನ್ನು ಹೊರ ಹಾಕಲು ಸಹಾಯ ಮಾಡುವ ಈ ಪಾನೀಯ ನಮ್ಮ ಆರೋಗ್ಯದಲ್ಲಾಗುವ ಕೆಲವು ತೊಂದರೆಗಳಿಗೂ ಉತ್ತಮ ಆರೈಕೆಯನ್ನು ನೀಡುತ್ತದೆ. ಅವು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ... ಮುಂದೆ ಓದಿ...
ಟಾಕ್ಸಿನ್ ಹೊರ ಹಾಕಲು ಸಹಾಯ
ಈ ಮಿಶ್ರಣದಲ್ಲಿ ಸಾಕಷ್ಟು ಆಮ್ಲೀಯ ಗುಣಗಳಿರುವುದರಿಂದ ಇದನ್ನು ಕ್ಷಾರೀಯ(ಆಲ್ಕೈನ್) ಪಾನೀಯದ ಉತ್ತಮ ಮೂಲ ಎಂದು ಹೇಳಬಹುದು. ಇದು ದೇಹದ ಪಿಎಚ್ಅನ್ನು ಸಮತೋಲನಗೊಳಿಸುತ್ತದೆ. ಯಕೃತ್ತಿನಲ್ಲಿರುವ ಟಾಕ್ಸಿನ್ಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ನಿತ್ಯವೂ ಬಿಸಿ ನೀರು ಮತ್ತು ನಿಂಬೆಯ ಮಿಶ್ರಣವನ್ನು ಸೇವಿಸುವುದು ಒಂದು ಉತ್ತಮ ಅಭ್ಯಾಸ ಎನ್ನಬಹುದು.
ಜೀರ್ಣಕ್ರಿಯೆಗೆ ಸಹಾಯ
ಈ ಶಕ್ತಿಯುತವಾದ ಪಾನೀಯವನ್ನು ಸೇವಿಸುವುದರಿಂದ ಜೀರ್ಣಾಂಗವ್ಯೂಹ ಉತ್ತೇಜನಗೊಳ್ಳುತ್ತದೆ. ದಿನವಿಡೀ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆಹಾರವೂ ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ. ಹಾಗಾಗಿ ನಿತ್ಯವೂ ಬಿಸಿ ನೀರನ್ನು ಸೇವಿಸುವುದು ಒಂದು ಬುದ್ಧಿವಂತಿಕೆಯೂ ಹೌದು.
ತೂಕ ಇಳಿಸಲು ಬೆಂಬಲಿಸುತ್ತದೆ
ನಿಂಬೆ ರಸವು ಪೆಕ್ಟಿನ್ಅನ್ನು ಒಳಗೊಂಡಿರುತ್ತದೆ. ದೈನಂದಿನ ಆಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚಾದ ಕ್ಯಾಲೋರಿಯನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಉತ್ತೇಜಿಸುತ್ತದೆ. ಉನ್ನತ ಆರೋಗ್ಯ ಪರಿಕಲ್ಪನೆಗೆ ಈ ಮಿಶ್ರಣ ದಿವ್ಯ ಔಷಧ ಎನ್ನಬಹುದು.
ಹೊಟ್ಟೆಯ ಆರೋಗ್ಯದ ಕಾಳಜಿ
ಹೊಟ್ಟೆಯುಬ್ಬರ, ಎದೆಯುರಿ, ಗ್ಯಾಸ್ನಂತಹ ಸಮಸ್ಯೆಗೆ ಬಿಸಿ ನೀರು ಮತ್ತು ಲಿಂಬೆಯ ಮಿಶ್ರಣವು ಉತ್ತಮ ಪರಿಹಾರವನ್ನು ನೀಡುತ್ತದೆ. ಈ ಬಿಸಿ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಿ, ಆಮ್ಲತೆಯನ್ನು ಕಡಿಮೆ ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚುವುದು
ನಿಂಬೆಯಲ್ಲಿ ಸಿ ಜೀವಸತ್ವ ಹೆಚ್ಚಿರುತ್ತದೆ. ಇದು ದೇಹಕ್ಕೆ ಉಂಟಾಗುವ ಶೀತ, ಉರಿಯೂತಗಳಂತಹ ಸಮಸ್ಯೆಯನ್ನು ಪರಿಹರಿಸುತ್ತದೆ. ಈ ಮಿಶ್ರಣವು ಪೊಟ್ಯಾಶಿಯಂನೊಂದಿಗೆ ಪುಷ್ಟೀಕರಿಸಿ ಮೆದುಳು ಮತ್ತು ನರ ವ್ಯವಸ್ಥೆಯ ಕಾರ್ಯ ಚಟುವಟಿಕೆಗೆ ಸಹಾಯ ಮಾಡುವುದು. ದೇಹಕ್ಕೆ ಅಂಟಿಕೊಳ್ಳುವ ಚಿಕ್ಕ ಪುಟ್ಟ ಸಮಸ್ಯೆಗಳು ಬರದಂತೆ ತಡೆಯುತ್ತದೆ.
ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ
ನಿತ್ಯವು ಬಿಸಿ ನೀರು ಮತ್ತು ನಿಂಬೆಯ ಮಿಶ್ರಣವನ್ನು ಸೇವಿಸುವುದರಿಂದ ದೇಹದಲ್ಲಿರುವ ಆಸಿಡಿಟಿ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೆ ಮೂಳೆಗಳ ಸಂಧಿಯಲ್ಲಿ ಸಂಗ್ರಹವಾಗುವ ಯೂರಿಕ್ ಆಸಿಡ್ಅನ್ನು ತೆಗೆಯಲು ಸಹಾಯ ಮಾಡುತ್ತದೆ.
ಮನಸ್ಸು ಹೆಚ್ಚು ಉತ್ಸಾಹದಲ್ಲಿರುತ್ತದೆ
ಈ ಮಿಶ್ರಣವು ದೇಹಕ್ಕೆ ಋಣಾತ್ಮಕ ಪರಿಣಾಮ ಬೀರುವುದರಿಂದ ಜೀರ್ಣಾಂಗ ವ್ಯವಸ್ಥೆ ಸೇರಿದಂತೆ ದೇಹದ ಅಂಗಾಂಗಗಳು ಹೆಚ್ಚು ಶಕ್ತಿಯುತವಾಗಿ ಕೆಲಸ ನಿರ್ವಹಿಸುತ್ತವೆ. ಇದರಿಂದ ಮನಸ್ಸು ಯಾವುದೇ ತೊಂದರೆಗೆ ಒಳಗಾಗದೆ ಹೆಚ್ಚು ಉತ್ಸಾಹದಲ್ಲಿರುತ್ತದೆ.
ಹಲ್ಲಿನ ಕುರಿತು ಸ್ವಲ್ಪ ಕಾಳಜಿ
ನಿಂಬೆಯಲ್ಲಿ ಸಿಟ್ರಿಕ್ ಆಸಿಡ್ ಹೆಚ್ಚಾಗಿ ಇರುವುದರಿಂದ ಇದು ಹಲ್ಲಿನ ದಂತ ಕವಚವನ್ನು ಹಾಳುಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಂಬೆ ನೀರನ್ನು ಕುಡಿದ ತಕ್ಷಣ ಹಲ್ಲುಜ್ಜಬಾರದು. ಹಲ್ಲುಜ್ಜಿದ ನಂತರ ಕುಡಿಯುವುದು ಅಥವಾ ಮಿಶ್ರಣವನ್ನು ಸೇವಿಸಿದ ನಂತರ ಸ್ವಲ್ಪ ಕಾಲದ ನಂತರ ಹಲ್ಲುಜ್ಜುವ ಪ್ರಕ್ರಿಯೆ ಹೊಂದಬೇಕಾಗುತ್ತದೆ.