Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ದೇಹದ ಕೊಬ್ಬು ಕರಗಿಸಿ, ಶಕ್ತಿ ಹೆಚ್ಚಿಸುವ ಜೇನುತುಪ್ಪ+ಲಿಂಬೆ ಸೀರಮ್!
ಮನೆಯಲ್ಲಿ ತಯಾರಿಸುವ ಜೇನುತುಪ್ಪ ಮತ್ತು ಲಿಂಬೆಯ ಸೀರಮ್ ಕೊಬ್ಬು ಕರಗಿಸುವುದಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು
ಪದೇ ಪದೇ ನೀವು ಜ್ವರ ಮತ್ತು ಶೀತದಿಂದ ತೊಂದರೆ ಅನುಭವಿಸಿ ವೈದ್ಯರಲ್ಲಿಗೆ ಚಿಕಿತ್ಸೆ ಹೋಗುತ್ತಾ ಇದ್ದರೆ ನೀವು ಲೇಖನ ಓದಲೇಬೇಕು.
ಇಂತಹ ಸಮಸ್ಯೆಯಿರುವವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿದೆ ಎಂದು ಹೇಳಲಾಗುತ್ತದೆ. ವೈದ್ಯರಲ್ಲಿ ಪದೇ ಪದೇ ಚಿಕಿತ್ಸೆಗೆ ಹೋಗುವ ಬದಲು ಮನೆಯಲ್ಲೇ ತಯಾರಿಸಿದ ಸೀರಮ್ ಬಳಸುವುದರಿಂದ ನಿಮ್ಮ ಸಮಸ್ಯೆ ಪರಿಹಾರವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಇಲ್ಲಿ ನೈಸರ್ಗಿಕವಾದ ಮನೆಮದ್ದಿಗೆ ಬಳಸುತ್ತಾ ಇರುವುದು ಲಿಂಬೆರಸ ಮತ್ತು ಜೇನುತುಪ್ಪ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಸೀರಮ್ ತೂಕ ಕಳೆದುಕೊಳ್ಳಲು ನಿಮಗೆ ನೆರವಾಗುವುದು.

ಲಿಂಬೆಯಲ್ಲಿ ವಿಟಮಿನ್ ಸಿಯಂತಹ ತುಂಬಾ ಬಲಶಾಲಿ ಆ್ಯಂಟಿಆಕ್ಸಿಡೆಂಟ್ ಇದೆ. ಇದು ದೇಹ ಶುದ್ದೀಕರಿಸುವುದು. ಜೇನುತುಪ್ಪದಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿಯಾಗಿಯೂ ಕೆಲಸ ಮಾಡುವುದು. ಈ ಸೀರಮ್ ಗೆ ಶುಂಠಿ ಬಳಸಿಕೊಂಡರೆ ಮತ್ತಷ್ಟು ಒಳ್ಳೆಯದು.
ಇದರಲ್ಲಿ ಹಲವಾರು ರೀತಿಯ ಚಿಕಿತ್ಸಕ ಗುಣಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಇದೆ. ಇದು ಉರಿಯೂತ ಉಂಟು ಮಾಡುವ ಅಂಶಗಳನ್ನು ನಿವಾರಣೆ ಮಾಡುವುದು. ಗಂಟಲು ನೋವಿಗೂ ಈ ಸೀರಮ್ ತುಂಬಾ ಒಳ್ಳೆಯದು. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಿ ತೂಕ ಕಳೆದುಕೊಳ್ಳಲು ನೆರವಾಗುವುದು.
ಬೇಕಾಗುವ ಸಾಮಗ್ರಿಗಳು
ಲಿಂಬೆ
ಹಸಿ ಜೇನುತುಪ್ಪ
ಸಿಪ್ಪೆ ತೆಗೆದು ಕತ್ತರಿಸಿದ ಶುಂಠಿ
ಒಂದು ಗಾಜಿನ ಶುದ್ಧ ಜಾರ್
ವಿಧಾನ
ಲಿಂಬೆ ಮತ್ತು ಶುಂಠಿ ಕತ್ತರಿಸಿಕೊಂಡು ಜಾರ್ ಗೆ ಹಾಕಿ. ಲಿಂಬೆ ಮತ್ತು ಶುಂಠಿಯನ್ನು ಕಳಸಿಕೊಂಡರೆ ರಸ ಬರುವುದು. ಈ ಜಾರ್ ಗೆ ¾ ಭಾಗದಷ್ಟು ಲಿಂಬೆರಸ ಹಾಕಿ. ಉಳಿದ ¼ ಭಾಗ ಜೇನುತುಪ್ಪ ತುಂಬಿಸಿ ಎಲ್ಲವನ್ನು ಸರಿಯಾಗಿ ಕಲಸಿಕೊಳ್ಳಿ. ಇದರ ಮುಚ್ಚಲ ಮುಚ್ಚಿಕೊಂಡು ಫ್ರಿಡ್ಜ್ನಲ್ಲಿ ಇಟ್ಟುಬಿಡಿ. ಇದು ತಯಾರಾಗುವ ತನಕ ಕಾಯಿರಿ. ತಯಾರಾದ ಬಳಿಕ ಇದರ ಒಂದು ಚಮಚ ತೆಗೆದು ಬಿಸಿ ನೀರಿಗೆ ಹಾಕಿಕೊಂಡು ದಿನವಿಡಿ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

