Just In
- 31 min ago ದಿನ ಭವಿಷ್ಯ ಮಾರ್ಚ್ 30: ಮಂಗಳವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 33 min ago 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- 2 hrs ago ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- 3 hrs ago ಕೇತು ಕನ್ಯಾ ರಾಶಿಯಲ್ಲಿರುವ ಇನ್ನು 285 ದಿನ 12 ರಾಶಿಗಳ ಮೇಲೆ ಅದರ ಪ್ರಭಾವ ಹೀಗಿರಲಿದೆ
Don't Miss
- Sports IPL 2024: ಚಿನ್ನಸ್ವಾಮಿ ಸಾಮ್ರಾಜ್ಯದಲ್ಲಿ ರಾಜ್ಯಭಾರ ಮಾಡಿದ ವಿರಾಟ್; KKRಗೆ ಸವಾಲಿನ ಗುರಿ ನೀಡಿದ RCB
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Movies "ನನ್ನೇನು ಅಭಿಮನ್ಯು ಅಂದುಕೊಂಡ್ಯ..; ಕೆಲವ್ರು ಕುಡಿದ ಮೇಲೆ ಗಂಡಸರಾಗ್ತಾರೆ.. 'ಯುವ' ಡೈಲಾಗ್ ಪಂಚ್
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೈವೀ ಸ್ವರೂಪದ ವಿಭೂತಿ, ನಿಮ್ಮ ಆರೋಗ್ಯದ ಸಂಗಾತಿ...
ಹಲವು ಭಾರತೀಯರಿಗೆ ತಮ್ಮ ಹಣೆಯ ನಡುವೆ ಬೂದಿಯ ಬೊಟ್ಟೊಂದನ್ನು ಇರಿಸುವ ಅಭ್ಯಾಸವಿರುತ್ತದೆ. ಈ ಪವಿತ್ರವಾದ ಬೂದಿಗೆ ಭಸ್ಮ ಅಥವಾ ವಿಭೂತಿ ಎಂದೂ ಕರೆಯುತ್ತಾರೆ. ಕೆಲವರು ಹಣೆಯ ಹೊರತಾಗಿ ತಮ್ಮ ಕೈಗಳ ಮೇಲೆ ಎದೆಯ ಮೇಲೂ ಹಚ್ಚಿಕೊಳ್ಳುತ್ತಾರೆ. ವಾಸ್ತವವಾಗಿ ವಿಭೂತಿ ಎಂದರೇನು?
ಯಾವುದೇ ಕಟ್ಟಿಗೆಯನ್ನು ಸುಟ್ಟ ಬಳಿಕ ಉಳಿದ ಬೂದಿಯೆಲ್ಲಾ ವಿಭೂತಿಯಾಗಲು ಸಾಧ್ಯವಿಲ್ಲ. ಬದಲಿಗೆ ಪವಿತ್ರ ಅಗ್ನಿಯಲ್ಲಿ ಮಂತ್ರಘೋಷದ ನಡುವೆ ಸುಟ್ಟ ಕಟ್ಟಿಗೆಯ ಬೂದಿಗೆ ಮಾತ್ರ ವಿಭೂತಿಯ ಪಟ್ಟ ಸಿಗಲು ಸಾಧ್ಯ. ಈ ಪವಿತ್ರ ಅಗ್ನಿಗೆ ಅರ್ಪಿಸಲು ಕೆಲವು ವಿಧದ ಧಾನ್ಯಗಳು, ಕೆಲವು ಮೂಲಿಕೆಗಳು, ತುಪ್ಪ ಹಾಗೂ ಕಾಷ್ಠವನ್ನು ಅರ್ಪಿಸಲಾಗುತ್ತದೆ. ಇವೆಲ್ಲವೂ ಸುಟ್ಟ ಬಳಿಕ ಉಳಿದ ಬೂದಿಯನ್ನೇ ವಿಭೂತಿ ಎನ್ನಲಾಗುತ್ತದೆ. ಈ ವಿಭೂತಿಗೆ ಕೆಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇವು ಯಾವುವು ಎಂಬುದನ್ನು ನೋಡೋಣ....
ವಿಭೂತಿಯ ಆರೋಗ್ಯಕಾರಿ ಅಂಶಗಳು
ನಾಟಿ ಹಸುವಿನ ಬೆರಣಿ ತಟ್ಟಿ ಸರಿಯಾದ ಕ್ರಮಬದ್ಧವಾದ ಹೋಮ ಮಾಡಿ ತಯಾರಿಸುವ ವಿಭೂತಿಯೂ ಕೇವಲ ಸ್ಪಿರುಚ್ಯುವಲ್ ಕಾರಣಕ್ಕೆ ಮಾತ್ರವಲ್ಲ. ಬದಲಾಗಿ ಇದ್ರಲ್ಲಿ ಹಲವು ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಅನ್ನೋದು ಬಹಿರಂಗಗೊಂಡಿರುವ ಸತ್ಯ. ಪ್ರಮುಖವಾಗಿ ಋಣಾತ್ಮಕ ಶಕ್ತಿಯನ್ನು ಕುಗ್ಗಿಸಿ ನಮ್ಮ ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ವಿಭೂತಿಗಿದೆ. ವಿಭೂತಿಯನ್ನು ಹಚ್ಚಿಕೊಂಡು ಶಿವ ಕಾಮವನ್ನು ತ್ಯಜಿಸಿ ನಶ್ವರತೆಯ ಕಡೆಗೆ ವಾಲಿದ ಅನ್ನೋದು ಕಥೆಪುರಾಣಗಳಿಂದ ತಿಳಿದಿರುವ ಸತ್ಯ. ಅಂತೆಯೇ ಯಾರು ವಿಭೂತಿ ಹಚ್ಚಿಕೊಳ್ತಾರೋ ಅವ್ರ ಕಾಮೋತ್ತೇಜಕ ಪ್ರವೃತ್ತಿ ನಿಯಂತ್ರಣದಲ್ಲಿ ಇರಲು ಸಾಧ್ಯ ಅನ್ನೋದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.
ತಲೆನೋವಿಗೆ
ಹಣೆಯ ಮೇಲೆ ಕೊಂಚ ವಿಭೂತಿಯನ್ನು ಹಚ್ಚಿಕೊಳ್ಳುವ ಮೂಲಕ ಹೆಚ್ಚು ಬಿಸಿಲಿನಲ್ಲಿ ತಿರುಗಿದ ಬಳಿಕ ಎದುರಾಗುವ ತಲೆನೋವನ್ನು ಕಡಿಮೆ ಮಾಡಬಹುದು.
ಮಾತ್ರೆಯ ಹಂಗಿಲ್ಲದೆ ಮೈಗ್ರೇನ್ ತಲೆನೋವು ನಿಯಂತ್ರಣಕ್ಕೆ!
ತಲೆನೋವಿಗೆ
ಹಲವು ಚಿಕಿತ್ಸೆಗಳಲ್ಲಿ ಹಣೆಯ ಮೇಲೆ, ಎರಡು ಕಣ್ಣುಗಳ ಹುಬ್ಬುಗಳ ನಡುವಣ ಸ್ಥಳಕ್ಕೆ ಹೆಚ್ಚಿನ ಮಹತ್ವವಿದೆ. ಈ ಭಾಗದಲ್ಲಿ ಕೊಂಚವೇ ಒತ್ತಡದಿಂದ ಮಸಾಜ್ ಮಾಡುವ ಮೂಲಕ ಕೆಲವು ತಲೆನೋವುಗಳನ್ನು ಕಡಿಮೆ ಮಾಡಬಹುದು.
ಆಯುರ್ವೇದದಲ್ಲಿ ಭಸ್ಮಕ್ಕೆ ಪ್ರಮುಖ ಸ್ಥಾನವಿದೆ...
ಆಯುರ್ವೇದದಲ್ಲಿ ಭಸ್ಮಕ್ಕೆ ಪ್ರಮುಖ ಪಾತ್ರವಿದೆ. ಕೆಲವಾರು ಔಷಧಿಗಳಲ್ಲಿ ಮೂಲವಸ್ತುವಾಗಿ (base element) ಭಸ್ಮವನ್ನು ಉಪಯೋಗಿಸಲಾಗುತ್ತದೆ. ಏಕೆಂದರೆ ಭಸ್ಮವನ್ನು ನಾವು ಜೀರ್ಣಿಸಿಕೊಳ್ಳಲಾರೆವು, ಹಾಗಾಗಿ ಔಷಧಿಯನ್ನು ಭಸ್ಮದೊಂದಿಗೆ ಸೇವಿಸಿದಾಗ ಜೀರ್ಣಾಂಗವ್ಯವಸ್ಥೆಯ ಕಡೆಯ ಹಂತದವರೆಗೂ ತಲುಪಲು ಸಾಧ್ಯವಾಗುತ್ತದೆ. ಭಸ್ಮವನ್ನು ತೇವಗೊಳಿಸಿ ಹಣೆಗೆ ಹಚ್ಚಿಕೊಳ್ಳುವುದರಿಂದ ಶೀತವಾಗದಂತೆ ರಕ್ಷಣೆ ಪಡೆಯಬಹುದು.
ಸೈನಸ್ ಸಮಸ್ಯೆಗಳಿದ್ದರೆ...
ಹುಬ್ಬುಗಳ ನಡುವಣ ಭಾಗವನ್ನು ಕೊಂಚವೇ ಮಸಾಜ್ಗೊಳಿಸುವ ಮೂಲಕ ಇನ್ನೊಂದು ಪ್ರಯೋಜನವಿದೆ. ಅದೆಂದರೆ ಇದರ ಅಡಿಯಲಿರುವ ಕುಹರ ಅಥವಾ ಸೈನಸ್ ಭಾಗವನ್ನು ತೆರವು ಮಾಡಲು ನೆರವಾಗುತ್ತದೆ. ಈ ಭಾಗದಲ್ಲಿ ನಿಯಮಿತವಾಗಿ ಕೊಂಚ ವಿಭೂತಿ ಹಚ್ಚಿಕೊಳ್ಳುವ ಮೂಲಕ ಕುಹರ ಪ್ರಚೋದನೆ ಪಡೆಯುತ್ತದೆ ಹಾಗೂ ಈ ಭಾಗದಲ್ಲಿ ಸೋಂಕು ಉಂಟಾಗದಂತೆ ತಡೆಯಬಹುದು.
ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!
ವೃದ್ಧಾಪ್ಯದ ನೆರಿಗೆಗಳು
ಹಣೆಗೆ ವಿಭೂತಿಯನ್ನು ಹಚ್ಚಿಕೊಳ್ಳುವ ಮೂಲಕ ನಯವಾಗಿ ಮಸಾಜ್ ಮಾಡಿದಂತೆಯೂ ಆಗುತ್ತದೆ. ಈ ಮೂಲಕ ಹಣೆಯ ಮೇಲೆ ಮೂಡುವ ವೃದ್ಧಾಪ್ಯದ ನೆರಿಗೆಗಳು ಹಾಗೂ ಸೂಕ್ಷ್ಮ ಗೆರೆಗಳು ಇಲ್ಲವಾಗುತ್ತವೆ.
ಧನಾತ್ಮಕ ಶಕ್ತಿ ಪಡೆಯಲು...
ಹಣೆಯ ಮೇಲೆ ವಿಭೂತಿಯನ್ನು ಹಚ್ಚಿಕೊಳ್ಳುವ ಮೂಲಕ ಧನಾತ್ಮಕ ಶಕ್ತಿ ಪಡೆಯಲು ಸಾಧ್ಯವಾಗುತ್ತದೆ. ಅಂದರೆ ಮನಸ್ಸಿನಲ್ಲಿ ಋಣಾತ್ಮಕ ಯೋಚನೆಗಳು ತಲೆಯೊಳಗೆ ಹೊಕ್ಕದಂತೆ ಒಂದು ರೀತಿಯ ದ್ವಾರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ....
ಹುಬ್ಬುಗಳ ನಡುವಣ ಭಾಗವನ್ನು ನಯವಾಗಿ ಮಸಾಜ್ ಮಾಡುವ ಮೂಲಕ ಮನಸ್ಸು ನಿರಾಳವಾಗುತ್ತದೆ ಹಾಗೂ ಶಾಂತವಾಗಿರುತ್ತದೆ. ಇದರಿಂದ ಮನಸ್ಸಿನ ಒತ್ತಡ ಕಡಿಮೆಯಾಗಿ ಸುಖವಾದ ನಿದ್ದೆ ಆವರಿಸಲು ನೆರವಾಗುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈ ಮಸಾಜ್ ಅತ್ಯಂತ ಹೆಚ್ಚಿನ ನೆರವು ನೀಡುತ್ತದೆ.