Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ದೈವೀ ಸ್ವರೂಪದ ವಿಭೂತಿ, ನಿಮ್ಮ ಆರೋಗ್ಯದ ಸಂಗಾತಿ...
ಹಲವು ಭಾರತೀಯರಿಗೆ ತಮ್ಮ ಹಣೆಯ ನಡುವೆ ಬೂದಿಯ ಬೊಟ್ಟೊಂದನ್ನು ಇರಿಸುವ ಅಭ್ಯಾಸವಿರುತ್ತದೆ. ಈ ಪವಿತ್ರವಾದ ಬೂದಿಗೆ ಭಸ್ಮ ಅಥವಾ ವಿಭೂತಿ ಎಂದೂ ಕರೆಯುತ್ತಾರೆ. ಕೆಲವರು ಹಣೆಯ ಹೊರತಾಗಿ ತಮ್ಮ ಕೈಗಳ ಮೇಲೆ ಎದೆಯ ಮೇಲೂ ಹಚ್ಚಿಕೊಳ್ಳುತ್ತಾರೆ. ವಾಸ್ತವವಾಗಿ ವಿಭೂತಿ ಎಂದರೇನು?
ಯಾವುದೇ ಕಟ್ಟಿಗೆಯನ್ನು ಸುಟ್ಟ ಬಳಿಕ ಉಳಿದ ಬೂದಿಯೆಲ್ಲಾ ವಿಭೂತಿಯಾಗಲು ಸಾಧ್ಯವಿಲ್ಲ. ಬದಲಿಗೆ ಪವಿತ್ರ ಅಗ್ನಿಯಲ್ಲಿ ಮಂತ್ರಘೋಷದ ನಡುವೆ ಸುಟ್ಟ ಕಟ್ಟಿಗೆಯ ಬೂದಿಗೆ ಮಾತ್ರ ವಿಭೂತಿಯ ಪಟ್ಟ ಸಿಗಲು ಸಾಧ್ಯ. ಈ ಪವಿತ್ರ ಅಗ್ನಿಗೆ ಅರ್ಪಿಸಲು ಕೆಲವು ವಿಧದ ಧಾನ್ಯಗಳು, ಕೆಲವು ಮೂಲಿಕೆಗಳು, ತುಪ್ಪ ಹಾಗೂ ಕಾಷ್ಠವನ್ನು ಅರ್ಪಿಸಲಾಗುತ್ತದೆ. ಇವೆಲ್ಲವೂ ಸುಟ್ಟ ಬಳಿಕ ಉಳಿದ ಬೂದಿಯನ್ನೇ ವಿಭೂತಿ ಎನ್ನಲಾಗುತ್ತದೆ. ಈ ವಿಭೂತಿಗೆ ಕೆಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇವು ಯಾವುವು ಎಂಬುದನ್ನು ನೋಡೋಣ....

ವಿಭೂತಿಯ ಆರೋಗ್ಯಕಾರಿ ಅಂಶಗಳು
ನಾಟಿ ಹಸುವಿನ ಬೆರಣಿ ತಟ್ಟಿ ಸರಿಯಾದ ಕ್ರಮಬದ್ಧವಾದ ಹೋಮ ಮಾಡಿ ತಯಾರಿಸುವ ವಿಭೂತಿಯೂ ಕೇವಲ ಸ್ಪಿರುಚ್ಯುವಲ್ ಕಾರಣಕ್ಕೆ ಮಾತ್ರವಲ್ಲ. ಬದಲಾಗಿ ಇದ್ರಲ್ಲಿ ಹಲವು ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಅನ್ನೋದು ಬಹಿರಂಗಗೊಂಡಿರುವ ಸತ್ಯ. ಪ್ರಮುಖವಾಗಿ ಋಣಾತ್ಮಕ ಶಕ್ತಿಯನ್ನು ಕುಗ್ಗಿಸಿ ನಮ್ಮ ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ವಿಭೂತಿಗಿದೆ. ವಿಭೂತಿಯನ್ನು ಹಚ್ಚಿಕೊಂಡು ಶಿವ ಕಾಮವನ್ನು ತ್ಯಜಿಸಿ ನಶ್ವರತೆಯ ಕಡೆಗೆ ವಾಲಿದ ಅನ್ನೋದು ಕಥೆಪುರಾಣಗಳಿಂದ ತಿಳಿದಿರುವ ಸತ್ಯ. ಅಂತೆಯೇ ಯಾರು ವಿಭೂತಿ ಹಚ್ಚಿಕೊಳ್ತಾರೋ ಅವ್ರ ಕಾಮೋತ್ತೇಜಕ ಪ್ರವೃತ್ತಿ ನಿಯಂತ್ರಣದಲ್ಲಿ ಇರಲು ಸಾಧ್ಯ ಅನ್ನೋದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.

ತಲೆನೋವಿಗೆ
ಹಣೆಯ ಮೇಲೆ ಕೊಂಚ ವಿಭೂತಿಯನ್ನು ಹಚ್ಚಿಕೊಳ್ಳುವ ಮೂಲಕ ಹೆಚ್ಚು ಬಿಸಿಲಿನಲ್ಲಿ ತಿರುಗಿದ ಬಳಿಕ ಎದುರಾಗುವ ತಲೆನೋವನ್ನು ಕಡಿಮೆ ಮಾಡಬಹುದು.

ತಲೆನೋವಿಗೆ
ಹಲವು ಚಿಕಿತ್ಸೆಗಳಲ್ಲಿ ಹಣೆಯ ಮೇಲೆ, ಎರಡು ಕಣ್ಣುಗಳ ಹುಬ್ಬುಗಳ ನಡುವಣ ಸ್ಥಳಕ್ಕೆ ಹೆಚ್ಚಿನ ಮಹತ್ವವಿದೆ. ಈ ಭಾಗದಲ್ಲಿ ಕೊಂಚವೇ ಒತ್ತಡದಿಂದ ಮಸಾಜ್ ಮಾಡುವ ಮೂಲಕ ಕೆಲವು ತಲೆನೋವುಗಳನ್ನು ಕಡಿಮೆ ಮಾಡಬಹುದು.

ಆಯುರ್ವೇದದಲ್ಲಿ ಭಸ್ಮಕ್ಕೆ ಪ್ರಮುಖ ಸ್ಥಾನವಿದೆ...
ಆಯುರ್ವೇದದಲ್ಲಿ ಭಸ್ಮಕ್ಕೆ ಪ್ರಮುಖ ಪಾತ್ರವಿದೆ. ಕೆಲವಾರು ಔಷಧಿಗಳಲ್ಲಿ ಮೂಲವಸ್ತುವಾಗಿ (base element) ಭಸ್ಮವನ್ನು ಉಪಯೋಗಿಸಲಾಗುತ್ತದೆ. ಏಕೆಂದರೆ ಭಸ್ಮವನ್ನು ನಾವು ಜೀರ್ಣಿಸಿಕೊಳ್ಳಲಾರೆವು, ಹಾಗಾಗಿ ಔಷಧಿಯನ್ನು ಭಸ್ಮದೊಂದಿಗೆ ಸೇವಿಸಿದಾಗ ಜೀರ್ಣಾಂಗವ್ಯವಸ್ಥೆಯ ಕಡೆಯ ಹಂತದವರೆಗೂ ತಲುಪಲು ಸಾಧ್ಯವಾಗುತ್ತದೆ. ಭಸ್ಮವನ್ನು ತೇವಗೊಳಿಸಿ ಹಣೆಗೆ ಹಚ್ಚಿಕೊಳ್ಳುವುದರಿಂದ ಶೀತವಾಗದಂತೆ ರಕ್ಷಣೆ ಪಡೆಯಬಹುದು.

ಸೈನಸ್ ಸಮಸ್ಯೆಗಳಿದ್ದರೆ...
ಹುಬ್ಬುಗಳ ನಡುವಣ ಭಾಗವನ್ನು ಕೊಂಚವೇ ಮಸಾಜ್ಗೊಳಿಸುವ ಮೂಲಕ ಇನ್ನೊಂದು ಪ್ರಯೋಜನವಿದೆ. ಅದೆಂದರೆ ಇದರ ಅಡಿಯಲಿರುವ ಕುಹರ ಅಥವಾ ಸೈನಸ್ ಭಾಗವನ್ನು ತೆರವು ಮಾಡಲು ನೆರವಾಗುತ್ತದೆ. ಈ ಭಾಗದಲ್ಲಿ ನಿಯಮಿತವಾಗಿ ಕೊಂಚ ವಿಭೂತಿ ಹಚ್ಚಿಕೊಳ್ಳುವ ಮೂಲಕ ಕುಹರ ಪ್ರಚೋದನೆ ಪಡೆಯುತ್ತದೆ ಹಾಗೂ ಈ ಭಾಗದಲ್ಲಿ ಸೋಂಕು ಉಂಟಾಗದಂತೆ ತಡೆಯಬಹುದು.

ವೃದ್ಧಾಪ್ಯದ ನೆರಿಗೆಗಳು
ಹಣೆಗೆ ವಿಭೂತಿಯನ್ನು ಹಚ್ಚಿಕೊಳ್ಳುವ ಮೂಲಕ ನಯವಾಗಿ ಮಸಾಜ್ ಮಾಡಿದಂತೆಯೂ ಆಗುತ್ತದೆ. ಈ ಮೂಲಕ ಹಣೆಯ ಮೇಲೆ ಮೂಡುವ ವೃದ್ಧಾಪ್ಯದ ನೆರಿಗೆಗಳು ಹಾಗೂ ಸೂಕ್ಷ್ಮ ಗೆರೆಗಳು ಇಲ್ಲವಾಗುತ್ತವೆ.

ಧನಾತ್ಮಕ ಶಕ್ತಿ ಪಡೆಯಲು...
ಹಣೆಯ ಮೇಲೆ ವಿಭೂತಿಯನ್ನು ಹಚ್ಚಿಕೊಳ್ಳುವ ಮೂಲಕ ಧನಾತ್ಮಕ ಶಕ್ತಿ ಪಡೆಯಲು ಸಾಧ್ಯವಾಗುತ್ತದೆ. ಅಂದರೆ ಮನಸ್ಸಿನಲ್ಲಿ ಋಣಾತ್ಮಕ ಯೋಚನೆಗಳು ತಲೆಯೊಳಗೆ ಹೊಕ್ಕದಂತೆ ಒಂದು ರೀತಿಯ ದ್ವಾರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ....
ಹುಬ್ಬುಗಳ ನಡುವಣ ಭಾಗವನ್ನು ನಯವಾಗಿ ಮಸಾಜ್ ಮಾಡುವ ಮೂಲಕ ಮನಸ್ಸು ನಿರಾಳವಾಗುತ್ತದೆ ಹಾಗೂ ಶಾಂತವಾಗಿರುತ್ತದೆ. ಇದರಿಂದ ಮನಸ್ಸಿನ ಒತ್ತಡ ಕಡಿಮೆಯಾಗಿ ಸುಖವಾದ ನಿದ್ದೆ ಆವರಿಸಲು ನೆರವಾಗುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈ ಮಸಾಜ್ ಅತ್ಯಂತ ಹೆಚ್ಚಿನ ನೆರವು ನೀಡುತ್ತದೆ.



Click it and Unblock the Notifications