Latest Updates
-
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ!
ಆಹಾರಕ್ರಮ ಹೀಗಿದ್ದರೆ, ದೇಹದ ಲಿವರ್ನ ಆರೋಗ್ಯಕ್ಕೆ ಬಹಳ ಒಳ್ಳೆಯದು..
ತಿನ್ನುವಂತಹ ಆಹಾರವು ಜಠರ ಸೇರಿಕೊಂಡು ಅಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆ ನಡೆಯುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ದೇಹದೊಳಗಿನ ಪ್ರತಿಯೊಂದು ಅಂಗಗಳು ಕೂಡ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಿ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳನ್ನು ಆಹಾರದಿಂದ ಹೀರಿಕೊಳ್ಳುವುದು. ನಾವು ತಿನ್ನುವಂತಹ ಆಹಾರವು ಯಕೃತ್ (ಲಿವರ್) ಮೂಲಕವಾಗಿ ಸಂಸ್ಕರಿಸಲ್ಪಡುವುದು. ಇದರಿಂದ ಯಕೃತ್ನ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ. ತಿನ್ನುವಂತಹ ಆಹಾರವು ಘಟಕಗಳಾಗಿ ದೇಹವನ್ನು ಶುದ್ಧೀಕರಿಸುವುದು.
ಯಕೃತ್ನ್ನು ದೇಹದ ತುಂಬಾ ಪರಿಣಾಮಕಾರಿ ಅಂಗವೆಂದು ಪರಿಗಣಿಸಲಾಗಿದೆ. ಯಕೃತ್ ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುವುದು. ಪ್ರೋಟೀನ್ , ಕೊಲೆಸ್ಟ್ರಾಲ್ ಮತ್ತು ಪಿತ್ತರಸ ಬಿಡುಗಡೆ, ವಿಟಮಿನ್, ಖನಿಜಾಂಶ ಮತ್ತು ಕಾರ್ಬೋಹೈಡ್ರೇಟ್ಸ್ ಗಳ ಶೇಖರಣೆ ಇದರ ಪ್ರಮುಖ ಕಾರ್ಯವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಯಕೃತ್ನ್ನು ಒಳ್ಳೆಯ ರೀತಿಯಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಕೆಲವು ವಿಷಕಾರಿಗಳನ್ನು ಯಕೃತ್ ವಿಘಟಿಸುವುದು. ಯಕೃತ್ನ ಆರೋಗ್ಯ ಕಾಪಾಡಲು ಮೊದಲು ಆದ್ಯತೆ ನೀಡಬೇಕಾಗಿದೆ. ಯಕೃತ್ನ ಆರೋಗ್ಯಕ್ಕೆ ಯಾವ ಆಹಾರ ಸೇವನೆ ಮಾಡಬೇಕು ಎಂಬ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ...

ಬೆಳ್ಳುಳ್ಳಿ ಮತ್ತು ಜೇನುತುಪ್ಪ
ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಎನ್ನುವ ಅಂಶವಿದ್ದು, ಯಕೃತ್ ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಆ್ಯಂಟಿಆಕ್ಸಿಡೆಂಟ್ ನ ಪ್ರಭಾವ ಹೆಚ್ಚಿಸಿ ದೇಹವನ್ನು ನಿರ್ವಿಷಗಳಿಸುವುದು. ಯಕೃತ್ಗೆ ಬೆಳ್ಳುಳ್ಳಿ ಅತ್ಯುತ್ತಮ ಆಹಾರ. ಇದರಲ್ಲಿ ಅರ್ಜಿನೈನ್ ಎನ್ನುವ ಅಮಿನೋ ಆಮ್ಲವಿದ್ದು, ಇದು ರಕ್ತನಾಳಗಳಿಗೆ ಆರಾಮ ನೀಡಿ ಯಕೃತ್ ನ ರಕ್ತದೊತ್ತಡ ಕಡಿಮೆ ಮಾಡುವುದು.

ಆಲಿವ್ ತೈಲ
ಎಕ್ಸ್ ಟ್ರಾ ವರ್ಜಿನ್ ಆಲಿವ್ ತೈಲವನ್ನು ಮಿತವಾಗಿ ಸೇವಿಸಿದಾಗ ಇದು ಯಕೃತ್ಗೆ ತುಂಬಾ ಒಳ್ಳೆಯದು. ದೇಹದಲ್ಲಿ ವಿಷ ಹೀರುವಂತಹ ಲಿಪಿಡ್ ಬೇಸ್ ನ್ನು ಇದು ನಿರ್ಮಿಸುವುದು. ಇದರಿಂದಾಗಿ ಇದು ಯಕೃತ್ನ ಕಾರ್ಯನಿರ್ವಹಣೆಗೆ ನೆರವಾಗುವುದು.

ಗಿಡಮೂಲಿಕೆ ಮತ್ತು ತರಕಾರಿಗಳು
ಹಸಿರೆಲೆ ತರಕಾರಿಗಳು ಯಕೃತ್ ಗೆ ತುಂಬಾ ಒಳ್ಳೆಯದು. ನಾವು ತಿನ್ನುವಂತಹ ಆಹಾರ ಮತ್ತು ವಾತಾವರಣದಿಂದ ದೇಹ ಸೇರುವ ಲೋಹ, ರಾಸಾಯನಿಕ ಮತ್ತು ಕೀಟನಾಶಗಳನ್ನು ಇದು ತಟಸ್ಥಗೊಳಿಸುವುದು. ಬಸಲೆ, ಬೀಟ್ ರೂಟ್, ಬ್ರಾಕೋಲಿ, ಹೂಕೋಸು ಮತ್ತು ಬ್ರಸಲ್ಸ್ ಮೊಗ್ಗುಗಳು ತುಂಬಾ ಒಳ್ಳೆಯದು.

ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಫ್ಲೆವನಾಯ್ಡ್ ಸಾವಯವ ಗುಂಪಿಗೆ ಸೇರಿದ ಕ್ಯಾಟ್ಚಿನ್ಸ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಇದೆ. ಇದು ದೇಹವನ್ನು ವಿವಿಧ ಬಗೆಯ ಕ್ಯಾನ್ಸರ್ ನಿಂದ ತಡೆಯುವುದು ಮತ್ತು ಯಕೃತ್ನ ಆರೋಗ್ಯ ಕಾಪಾಡುವುದು.

ಆಕ್ರೋಟ್
ಆಕ್ರೋಟ್ ನಲ್ಲಿ ಅಧಿಕ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ ಮತ್ತು ಆರೋಗ್ಯಕರ ಅಪರ್ಯಾಪ್ತ ಕೊಬ್ಬುಗಳು ಇವೆ. ಯಕೃತ್ನಲ್ಲಿ ಶೇಖರಣೆಯಾಗುವ ಕೊಬ್ಬು ತಡೆಯಲು ಇದು ನೆರವಾಗುವುದು. ಈ ಆರೋಗ್ಯಕರ ಕೊಬ್ಬುಗಳು ಯಕೃತ್ತಿನ ಕೋಶಗಳ ಸುತ್ತ ಬಲವಾದ ಜೀವಕೋಶದ ಪೊರಗಳ ನಿರ್ಮಾಣ ಮಾಡಲು ಅವಶ್ಯಕವಾಗಿದೆ.

ಸೇಬು
ಸೇಬಿನಲ್ಲಿ ಪೆಕ್ಟಿನ್ ಸಮೃದ್ಧವಾಗಿದ್ದು, ಇದು ದೇಹವನ್ನು ಶುದ್ಧೀಕರಿಸುವುದು ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿರುವ ವಿಷ ಹೊರಹಾಕುವುದು. ಇದರಿಂದ ಯಕೃತ್ ಮೇಲೆ ಉಂಟಾಗುವ ಭಾರ ಕಡಿಮೆ ಮಾಡಬಹುದು.

ಅರಿಶಿನ
ಅರಿಶಿನದಲ್ಲಿ ಕರ್ಕ್ಯುಮಿನ್ ಎನ್ನುವ ಅಂಶವಿದ್ದು, ಇದು ಪ್ರಮುಖ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣ ಹೊಂದಿದೆ. ಇದು ಪಿತ್ತರಸ ನಾಳವನ್ನು ರಕ್ಷಿಸಿ, ಪಿತ್ತರಸವು ಸರಾಗವಾಗಿ ಹರಿಯುವಂತೆ ಮಾಡಿ ಯಕೃತ್ನ್ನು ಶುದ್ಧೀಕರಿಸುವುದು. ಯಕೃತ್ನ ಆರೋಗ್ಯಕ್ಕೆ ಇದು ಅತ್ಯುತ್ತಮ ಆಹಾರವಾಗಿದೆ.



Click it and Unblock the Notifications