Just In
- 42 min ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 1 hr ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 2 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 4 hrs ago ವೃಷಭ ರಾಶಿಗೆ ಗುರು ಸಂಚಾರ: 10ನೇ ಮನೆಯಲ್ಲಿ ಗುರು ಸಿಂಹ ರಾಶಿಯವರು ಆಸ್ತಿ ಖರೀದಿಸಬಹುದು
Don't Miss
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Movies Srirasthu shubhamasthu: ನಿಧಿ ಹುಡುಕಲು ಹೋದ ಸೊಸೆ ಮಾವನಿಗೆ ಸಿಕ್ಕಿದ್ದು ಬರೀ ಬೂದಿನಾ?
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರೋಗ್ಯ ಟಿಪ್ಸ್: ಕುಂಬಳಕಾಯಿ ಬೀಜದಿಂದ ಪುರುಷರಿಗೆ ದುಪ್ಪಟ್ಟು ಲಾಭ!
ವಯಸ್ಸಾಗುತ್ತಾ ಇರುವಂತೆ ಪುರುಷರಲ್ಲಿ ಲೈಂಗಿಕ ಆಸಕ್ತಿಯ ಕೊರತೆ ಕಾಣಿಸಿಕೊಳ್ಳುವುದು ಮತ್ತು ಅವರಲ್ಲಿ ವೀರ್ಯ ಉತ್ಪಾದನೆಯು ಕಡಿಮೆಯಾಗುವುದು. ಇಂತಹ ಸಮಸ್ಯೆಗೆ ಕಾರಣಗಳು ಹಲವಾರು ಇದ್ದರೂ ಇದರಲ್ಲಿ ಪ್ರಮುಖವಾಗಿ ಪುರುಷ ಜನನೇಂದ್ರಿಯ ಗ್ರಂಥಿಯು ಪ್ರಮುಖವಾಗಿದೆ. ಪುರುಷ ಜನನೇಂದ್ರೀಯ ಗ್ರಂಥಿಯು ಪುರುಷರಲ್ಲಿ ವೀರ್ಯವನ್ನು ಉತ್ಪತ್ತಿ ಮಾಡುತ್ತದೆ.
ಹೃದಯಕ್ಕೆ ನವಚೈತನ್ಯ ತುಂಬುವ ಕುಂಬಳಕಾಯಿ ಬೀಜ
ಈ ಸಮಸ್ಯೆಯನ್ನು ಹೋಗಲಾಡಿಸಲು ಕುಂಬಳಕಾಯಿ ಬೀಜವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕುಂಬಳಕಾಯಿ ಬೀಜದಲ್ಲಿ ಇರುವಂತಹ ಸತು ಜನನೇಂದ್ರಿಯ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ಕುಂಬಳಕಾಯಿ ಬೀಜದ ಎಣ್ಣೆಯು ಒಳ್ಳೆಯ ರೀತಿ ಕೆಲಸ ಮಾಡಲಿದೆ. ಜನನೇಂದ್ರಿಯ ಗ್ರಂಥಿಯ ಉರಿಯೂತ, ಕೊಲೆಸ್ಟ್ರಾಲ್ ಹಾಗೂ ಇತರ ಕೆಲವೊಂದು ಸಮಸ್ಯೆಗಳಿಗೆ ಕುಂಬಳಕಾಯಿ ಬೀಜದಿಂದ ಆಗುವ ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ...
ಬೇಕಾಗುವ ಸಾಮಗ್ರಿಗಳು
*2 ಚಮಚ ಕುಂಬಳಕಾಯಿ ಬೀಜ
*ಒಂದು ಕಪ್ ನೀರು
ತಯಾರಿ
ನೀರು ಬಿಸಿ ಮಾಡಿ ಮತ್ತು ಅದಕ್ಕೆ ಜಜ್ಜಿದ ಕುಂಬಳಕಾಯಿ ಬೀಜಗಳನ್ನು ಹಾಕಿ. 10 ನಿಮಿಷ ಕಾಲ ಇದನ್ನು ಕುದಿಸಿದ ಬಳಿಕ ನೀರನ್ನು ತೆಗೆದು ಕುಡಿಯಿರಿ. ನಿಯಮಿತವಾಗಿ ಹೀಗೆ ಮಾಡಿ ಮತ್ತು ನಿಮ್ಮಲ್ಲಿ ಖಂಡಿತವಾಗಿಯೂ ಬದಲಾವಣೆ ಕಂಡುಬರುವುದು.
ಕುರ್ಕುಬಿಟಾಸಿನ್
ಕುಂಬಳಕಾಯಿ ಬೀಜಗಳಲ್ಲಿ ಕುರ್ಕುಬಿಟಾಸಿನ್ ಎನ್ನುವ ಅಂಶವಿದೆ. ಈ ಪೋಷಕಾಂಶವು ಪ್ರೊಸ್ಟೇಟ್ ಬೆಳವಣಿಗೆಯನ್ನು ತಡೆಯುತ್ತದೆ. ಒಂದು ಚಮಚ ಕುಂಬಳಕಾಯಿ ಬೀಜಗಳನ್ನು ಪ್ರತೀ ದಿನ ಸೇವಿಸಿದರೆ ಹಲವಾರು ಸಮಸ್ಯೆ ನಿವಾರಣೆ ಮಾಡಬಹುದು.
ಕುಂಬಳಕಾಯಿ ಬೀಜ
ಕುಂಬಳಕಾಯಿ ಬೀಜದ ತೈಲವು ಪ್ರೊಸ್ಟೇಟ್ ಹೈಪಪ್ಲಾಸಿಯಾದ ಲಕ್ಷಣವನ್ನು ತಡೆಯುತ್ತದೆ. ಕುಂಬಳಕಾಯಿ ತೈಲವು ಬಳಸಲು ತುಂಬಾ ಸುರಕ್ಷಿತ.
ಸತು
ಪ್ರೊಸ್ಟೇಟ್ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಖನಿಜಾಂಶವೆಂದರೆ ಸತು. ಜನನೇಂದ್ರಿಯ ಗ್ರಂಥಿಯು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ದೇಹದಲ್ಲಿ ಹೆಚ್ಚಿನ ಮಟ್ಟದ ಸತುವಿನ ಅಗತ್ಯವಿದೆ.
ಮೂತ್ರವರ್ಧಕ
ಕುಂಬಳಕಾಯಿ ಬೀಜಗಳು ಮೂತ್ರವರ್ಧಕವಾಗಿರುವ ಕಾರಣದಿಂದ ಇದು ದೇಹದಲ್ಲಿರುವ ಹಲವಾರು ರೀತಿಯ ವಿಷಕಾರಿ ಅಂಶಗಳನ್ನು ಹೊರಹಾಕುವುದು. ಇದರಿಂದ ಜನನೇಂದ್ರಿಯ ಗ್ರಂಥಿ ದೊಡ್ಡದಾಗುವ ಸಮಸ್ಯೆ ನಿವಾರಣೆಯಾಗುವುದು.
ವೈದ್ಯರೊಂದಿಗೆ ಮಾತನಾಡಿ
ದೈನಂದಿನ ಬಳಕೆಗೆ ದೇಹಕ್ಕೆ ಬೇಕಾಗುವ ಶೇ.50ರಷ್ಟು ಸತುವನ್ನು ಒಂದು ಕಪ್ ಕುಂಬಳಕಾಯಿ ಬೀಜವು ಒದಗಿಸುತ್ತದೆ. ಕುಂಬಳಕಾಯಿ ಬೀಜವನ್ನು ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.