Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಆಯುರ್ವೇದ ಪ್ರಕಾರ, ಆಹಾರದ ವಿಷಯದಲ್ಲಿ ಇಂತಹ ತಪ್ಪು ಮಾಡಬಾರದಂತೆ
ಭಾರತದಲ್ಲಿ ಆಯುರ್ವೇದ ಸಹಸ್ರಾರು ವರ್ಷಗಳಿಂದ ಸಮರ್ಥ ಚಿಕಿತ್ಸಾ ಪದ್ಧತಿಯಾಗಿ ಬಳಕೆಯಲ್ಲಿದೆ. ಇದರ ಫಲಿತಾಂಶವನ್ನು ಕಂಡುಕೊಂಡ ಬಳಿಕ ವಿಶ್ವದ ಇತರ ದೇಶಗಳೂ ಈ ಪದ್ಧತಿಯನ್ನು ಅನುಸರಿಸತೊಡಗಿವೆ. ಇಂದಿಗೂ ಭಾರತದಲ್ಲಿ ಆಯುರ್ವೇದ ಪ್ರಮುಖ ಚಿಕಿತ್ಸಾ ವಿಧಾನವಾಗಿದೆ. ಇದರ ಪರಿಣಾಮ ಕೊಂಚ ನಿಧಾನ ಎಂದು ಈ ವೈದ್ಯಪದ್ಧತಿಯನ್ನು ನಿರಾಕರಿಸುತ್ತಿದ್ದವರೂ ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವ ಕಾರಣ ಹೆಚ್ಚಿನವರು ಈಗ ಈ ಪದ್ಧತಿಯತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ.
ಆಯುರ್ವೇದದ ಪ್ರಕಾರ ನಿಮ್ಮ ಆರೋಗ್ಯ ನಿಮ್ಮ ಆಹಾರವನ್ನು ಆಧರಿಸಿದೆ. ಆದ್ದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ಉತ್ತಮ ಆಹಾರವನ್ನು ಸೂಕ್ತ ಕ್ರಮದಲ್ಲಿಯೇ ಸೇವಿಸಬೇಕು ಹಾಗೂ ನಮ್ಮ ದೇಹಪ್ರಕೃತಿಗೆ ಅನುಸಾರವಾಗಿಯೇ ಸೇವಿಸಬೇಕು. ಅಷ್ಟೇ ಅಲ್ಲ, ನಮ್ಮ ಆರೋಗ್ಯಕ್ಕೆ ಸಲ್ಲದ ಆಹಾರ ಅಥವಾ ತಪ್ಪಾದ ಹೊತ್ತಿನಲ್ಲಿ ಸೇವಿಸುವುದರಿಂದಲೂ ಆರೋಗ್ಯ ಕೆಡುತ್ತದೆ. ಬನ್ನಿ, ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ಎಂಬುದನ್ನು ನೋಡೋಣ....

ಜೇನನ್ನು ಅಡುಗೆಗೆ ಬಳಸುವುದು
ಜೇನು ಹಲವು ಪೋಷಕಾಂಶಗಳ ಗಣಿಯಾಗಿದ್ದು ಇದನ್ನು ಎಂದಿಗೂ ಬಿಸಿ ಮಾಡಬಾರದು. ಆಯುರ್ವೇದದ ಪ್ರಕಾರ ಜೇನನ್ನು ಬಿಸಿ ಮಾಡಿದರೆ ಇದರ ಪೋಷಕಾಂಶಗಳು ಪರಿವರ್ತನೆಗೊಂಡು ಆಮ ಅಥವಾ ವಿಷಕಾರಿ ಅಜೀರ್ಣವಾದ ಆಹಾರ ಉತ್ಪತ್ತಿಯಾಗಲು ಕಾರಣವಾಗುತ್ತವೆ. ಈ ಆಮ ಜೀರ್ಣಾಂಗ ವ್ಯವಸ್ಥೆಯನ್ನು ಕೆಡಿಸುತ್ತದೆ.

ರಾತ್ರಿ ಊಟದ ಬಳಿಕ ಕಲ್ಲಂಗಡಿ ತಿನ್ನಬಾರದು
ಕಲ್ಲಂಗಡಿಯಲ್ಲಿ ಬಹುತೇಕ ನೀರೇ ಇದೆ ಹಾಗೂ ಉಳಿದ ಪ್ರಮಾಣ ಸಕ್ಕರೆಯಾಗಿದೆ. ರಾತ್ರಿಯೂಟದ ಬಳಿಕ ಕಲ್ಲಂಗಡಿ ಹಣ್ಣನ್ನು ತಿಂದರೆ ಈ ಸಕ್ಕರೆ ಹೊಟ್ಟೆ ಕೆಡಿಸಲು ಕಾರಣವಾಗುತ್ತದೆ. ಪರಿಣಾಮವಾಗಿ ಅಜೀರ್ಣ, ಹೊಟ್ಟೆಯಲ್ಲಿ ಗುಡುಗುಡು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಊಟದ ನಡುವೆ ತಣ್ಣೀರು ಕುಡಿಯುವುದು
ಬೆಳಿಗ್ಗೆದ್ದ ತಕ್ಷಣ ತಣ್ಣೀರು ಕುಡಿಯುವುದು ಅತ್ಯಂತ ಉತ್ತಮ ಅಭ್ಯಾಸ. ಆದರೆ ಆಯುರ್ವೇದದ ಪ್ರಕಾರ ಊಟದ ನಡುವೆ ತಣ್ಣೀರು ಕುಡಿಯುವುದು ಹಾಗೂ ಊಟದ ಬಳಿಕವೂ ತಕ್ಷಣ ನೀರು ಕುಡಿಯುವುದು ಅನಾರೋಗ್ಯಕರವಾಗಿದೆ.

ಊಟದ ನಡುವೆ ತಣ್ಣೀರು ಕುಡಿಯುವುದು
ಇದರಿಂದ ಜೀರ್ಣಾಂಗ ವ್ಯವಸ್ಥೆಯೇ ಕೆಡಬಹುದು. ಆದರೆ ಊಟದ ನಡುವೆ ಕೊಂಚ ಪ್ರಮಾಣದ ಉಗುರುಬೆಚ್ಚನೆಯ ನೀರು ಕುಡಿಯುವುದು ಪ್ರಯೋಜನಕಾರಿಯಾಗಿದೆ.



Click it and Unblock the Notifications