Just In
- 47 min ago ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- 1 hr ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 3 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 4 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
Don't Miss
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಯುರ್ವೇದ ಪ್ರಕಾರ, ಆಹಾರದ ವಿಷಯದಲ್ಲಿ ಇಂತಹ ತಪ್ಪು ಮಾಡಬಾರದಂತೆ
ಭಾರತದಲ್ಲಿ ಆಯುರ್ವೇದ ಸಹಸ್ರಾರು ವರ್ಷಗಳಿಂದ ಸಮರ್ಥ ಚಿಕಿತ್ಸಾ ಪದ್ಧತಿಯಾಗಿ ಬಳಕೆಯಲ್ಲಿದೆ. ಇದರ ಫಲಿತಾಂಶವನ್ನು ಕಂಡುಕೊಂಡ ಬಳಿಕ ವಿಶ್ವದ ಇತರ ದೇಶಗಳೂ ಈ ಪದ್ಧತಿಯನ್ನು ಅನುಸರಿಸತೊಡಗಿವೆ. ಇಂದಿಗೂ ಭಾರತದಲ್ಲಿ ಆಯುರ್ವೇದ ಪ್ರಮುಖ ಚಿಕಿತ್ಸಾ ವಿಧಾನವಾಗಿದೆ. ಇದರ ಪರಿಣಾಮ ಕೊಂಚ ನಿಧಾನ ಎಂದು ಈ ವೈದ್ಯಪದ್ಧತಿಯನ್ನು ನಿರಾಕರಿಸುತ್ತಿದ್ದವರೂ ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವ ಕಾರಣ ಹೆಚ್ಚಿನವರು ಈಗ ಈ ಪದ್ಧತಿಯತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ.
ಆರೋಗ್ಯಕರ ಆಹಾರ ಸೇವನೆಗಾಗಿ ಆಯುರ್ವೇದ ಸಲಹೆಗಳು
ಆಯುರ್ವೇದದ ಪ್ರಕಾರ ನಿಮ್ಮ ಆರೋಗ್ಯ ನಿಮ್ಮ ಆಹಾರವನ್ನು ಆಧರಿಸಿದೆ. ಆದ್ದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ಉತ್ತಮ ಆಹಾರವನ್ನು ಸೂಕ್ತ ಕ್ರಮದಲ್ಲಿಯೇ ಸೇವಿಸಬೇಕು ಹಾಗೂ ನಮ್ಮ ದೇಹಪ್ರಕೃತಿಗೆ ಅನುಸಾರವಾಗಿಯೇ ಸೇವಿಸಬೇಕು. ಅಷ್ಟೇ ಅಲ್ಲ, ನಮ್ಮ ಆರೋಗ್ಯಕ್ಕೆ ಸಲ್ಲದ ಆಹಾರ ಅಥವಾ ತಪ್ಪಾದ ಹೊತ್ತಿನಲ್ಲಿ ಸೇವಿಸುವುದರಿಂದಲೂ ಆರೋಗ್ಯ ಕೆಡುತ್ತದೆ. ಬನ್ನಿ, ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ಎಂಬುದನ್ನು ನೋಡೋಣ....
ಜೇನನ್ನು ಅಡುಗೆಗೆ ಬಳಸುವುದು
ಜೇನು ಹಲವು ಪೋಷಕಾಂಶಗಳ ಗಣಿಯಾಗಿದ್ದು ಇದನ್ನು ಎಂದಿಗೂ ಬಿಸಿ ಮಾಡಬಾರದು. ಆಯುರ್ವೇದದ ಪ್ರಕಾರ ಜೇನನ್ನು ಬಿಸಿ ಮಾಡಿದರೆ ಇದರ ಪೋಷಕಾಂಶಗಳು ಪರಿವರ್ತನೆಗೊಂಡು ಆಮ ಅಥವಾ ವಿಷಕಾರಿ ಅಜೀರ್ಣವಾದ ಆಹಾರ ಉತ್ಪತ್ತಿಯಾಗಲು ಕಾರಣವಾಗುತ್ತವೆ. ಈ ಆಮ ಜೀರ್ಣಾಂಗ ವ್ಯವಸ್ಥೆಯನ್ನು ಕೆಡಿಸುತ್ತದೆ.
ನೆನಪಿಡಿ... ಅತಿಯಾದ ಜೇನುತುಪ್ಪದ ಸೇವನೆ ಆರೋಗ್ಯಕ್ಕೆ ಹಾನಿಕರ
ರಾತ್ರಿ ಊಟದ ಬಳಿಕ ಕಲ್ಲಂಗಡಿ ತಿನ್ನಬಾರದು
ಕಲ್ಲಂಗಡಿಯಲ್ಲಿ ಬಹುತೇಕ ನೀರೇ ಇದೆ ಹಾಗೂ ಉಳಿದ ಪ್ರಮಾಣ ಸಕ್ಕರೆಯಾಗಿದೆ. ರಾತ್ರಿಯೂಟದ ಬಳಿಕ ಕಲ್ಲಂಗಡಿ ಹಣ್ಣನ್ನು ತಿಂದರೆ ಈ ಸಕ್ಕರೆ ಹೊಟ್ಟೆ ಕೆಡಿಸಲು ಕಾರಣವಾಗುತ್ತದೆ. ಪರಿಣಾಮವಾಗಿ ಅಜೀರ್ಣ, ಹೊಟ್ಟೆಯಲ್ಲಿ ಗುಡುಗುಡು ಮೊದಲಾದ ತೊಂದರೆಗಳು ಎದುರಾಗುತ್ತವೆ.
ಊಟದ ನಡುವೆ ತಣ್ಣೀರು ಕುಡಿಯುವುದು
ಬೆಳಿಗ್ಗೆದ್ದ ತಕ್ಷಣ ತಣ್ಣೀರು ಕುಡಿಯುವುದು ಅತ್ಯಂತ ಉತ್ತಮ ಅಭ್ಯಾಸ. ಆದರೆ ಆಯುರ್ವೇದದ ಪ್ರಕಾರ ಊಟದ ನಡುವೆ ತಣ್ಣೀರು ಕುಡಿಯುವುದು ಹಾಗೂ ಊಟದ ಬಳಿಕವೂ ತಕ್ಷಣ ನೀರು ಕುಡಿಯುವುದು ಅನಾರೋಗ್ಯಕರವಾಗಿದೆ.
ಊಟದ ನಡುವೆ ತಣ್ಣೀರು ಕುಡಿಯುವುದು
ಇದರಿಂದ ಜೀರ್ಣಾಂಗ ವ್ಯವಸ್ಥೆಯೇ ಕೆಡಬಹುದು. ಆದರೆ ಊಟದ ನಡುವೆ ಕೊಂಚ ಪ್ರಮಾಣದ ಉಗುರುಬೆಚ್ಚನೆಯ ನೀರು ಕುಡಿಯುವುದು ಪ್ರಯೋಜನಕಾರಿಯಾಗಿದೆ.