Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಹೊಟ್ಟೆ ನೋವು, ವಾಕರಿಕೆ, ನಿಶ್ಯಕ್ತಿ ತರಿಸುವ ಆಹಾರಗಳಿವು!-ಎಂದೂ ತಿನ್ನಬೇಡಿ
ನಾವು ತಿನ್ನುವಂತಹ ಆಹಾರವನ್ನು ಅವಲಂಬಿಸಿಕೊಂಡು ನಮ್ಮ ಆರೋಗ್ಯವಿರುವುದು. ತಿನ್ನುವ ಆಹಾರವು ಆರೋಗ್ಯಕಾರಿಯಾಗಿದ್ದರೆ ದೇಹಕ್ಕೆ ಯಾವುದೇ ರೀತಿಯ ಅನಾರೋಗ್ಯವು ಕಾಡದು. ಆದರೆ ಆಹಾರದಲ್ಲಿ ವ್ಯತ್ಯಾಸವಾದರೆ ಅದು ನಮ್ಮ ಆರೋಗ್ಯ ಕೆಡಿಸಿ ಸಮಸ್ಯೆ ಉಂಟು ಮಾಡುವುದು. ಏನು ತಿನ್ನಬೇಕು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.
ಅವರವರ ಇಷ್ಟ ಪ್ರಕಾರ ಆಹಾರ ಸೇವನೆ ಮಾಡುವರು. ಆಯಾಯ ಪ್ರದೇಶಕ್ಕೆ ಹೊಂದಿಕೊಂಡು ಆಹಾರ ಕ್ರಮವಿರುವುದು. ಆದರೆ ಕೆಲವೊಂದು ಸಲ ತಿನ್ನುವ ಆಹಾರವು ತುಂಬಾ ಅಪಾಯಕಾರಿಯಾಗುವುದು. ಯಾಕೆಂದರೆ ನಾವು ಎರಡುಮೂರು ಆಹಾರ ಜತೆಯಾಗಿ ಸೇರಿಸಿ ತಿನ್ನುತ್ತೇವೆ. ಇದರಿಂದ ಆಹಾರದ ಅಲರ್ಜಿ ಕಾಣಿಸಿಕೊಳ್ಳಬಹುದು.
ಮಾಂಸದೊಂದಿಗೆ ಚೀಸ್, ಸಲಾಡ್ನಲ್ಲಿ ಹಣ್ಣುಗಳು, ಹಾಲಿನೊಂದಿಗೆ ಹಣ್ಣುಗಳು ಇತ್ಯಾದಿ. ಆಯುರ್ವೇದದ ಪ್ರಕಾರ ಈ ಆಹಾರದ ಸಂಯೋಜನೆಯು ವರ್ಜ್ಯ. ಈ ರೀತಿ ಆಹಾರ ಸೇವನೆ ಮಾಡಿದರೆ ಅದರಿಂದ ಹೊಟ್ಟೆ ಉಬ್ಬರ, ಹೊಟ್ಟೆ ಭಾರವಾಗುವುದು ಮತ್ತು ಜಡ ಉಂಟಾಗಬಹುದು. ಜೀರ್ಣಕ್ರಿಯೆಗೆ ಸಹಕರಿಸದ ಈ ಆಹಾರಗಳು ಹೊಟ್ಟೆ ನೋವು, ವಾಕರಿಕೆ, ನಿಶ್ಯಕ್ತಿ ಮತ್ತು ತ್ಯಾಜ್ಯ ಹೊರಹಾಕಲು ಸಮಸ್ಯೆ ಉಂಟು ಮಾಡಬಹುದು. ನೀವು ತಿನ್ನಲೇಬಾರದ ಕೆಲವು ಕೆಟ್ಟ ಆಹಾರ ಸಂಯೋಜನೆ ಬಗ್ಗೆ ಬೋಲ್ಡ್ ಸ್ಕೈ ತಿಳಿಸಲಿದೆ. ಮುಂದೆ ಓದುತ್ತಾ ಸಾಗಿ....

ಕೋಕಾ ಮತ್ತು ಹಾಲು
ಕೋಕಾದಲ್ಲಿ ಆಕ್ಸಾಲಿಕ್ ಎನ್ನುವ ಆಮ್ಲ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ ಹೀರುವಿಕೆಯ ತಡೆಯುವುದು. ಕ್ಯಾಲ್ಸಿಯಂ ಹೆಚ್ಚಿರುವ ಹಾಲಿನೊಂದಿದೆ ಕೋಕಾ ಸೇವಿಸಿದಾಗ ಅದರಿಂದ ಆಕ್ಸಲೇಟ್ ಹರಳುಗಳು ನಿರ್ಮಾಣವಾಗಿ ಕಿಡ್ನಿಗೆ ಸಮಸ್ಯೆಯಾಗಬಹುದು. ಇದು ತುಂಬಾ ಕೆಟ್ಟ ಆಹಾರ ಸಂಯೋಜನೆಯಾಗಿದೆ.

ಲಿಂಬೆರಸ ಅಥವಾ ವಿನೇಗರ್ ಜತೆ ಸಲಾಡ್
ಕ್ಯಾರೋಟಿನಾಯ್ಡ್ನಂತಹ ಕೆಲವೊಂದು ಪ್ರಮುಖ ಹಾಗೂ ಮಹತ್ವದ ಪೋಷಕಾಂಶಗಳು ತರಕಾರಿಗಳಲ್ಲಿ ಇರುವುದರಿಂದ ಇದರ ಹೀರುವಿಕೆಗೆ ಸರಿಯಾದ ಕೊಬ್ಬು ಬೇಕಾಗಿದೆ. ಇದರಿಂದಾಗಿ ನೀವು ಸಲಾಡ್ಗೆ ಹೆಚ್ಚಿನ ಕೊಬ್ಬು ಇರುವಂತಹ ಅವಕಾಡೋ, ಆಲಿವ್ ಅಥವಾ ಕೆಲವು ಬೀಜಗಳನ್ನು ಸೇರಿಸಬೇಕು. ಸಲಾಡ್ಗೆ ಲಿಂಬೆ ಅಥವಾ ವಿನೇಗರ್ನಿಂದ ಅಲಂಕಾರ ಮಾಡುವುದರಿಂದ ಆರೋಗ್ಯಕರ ಪೋಷಕಾಂಶಗಳು ಸಿಗದೇ ಇರಬಹುದು.

ಚೀಸ್ ಪಾಸ್ತಾದೊಂದಿಗೆ ಟೊಮೇಟೊ
ಪಿಷ್ಟದ ಕಾರ್ಬೋಹೈಡ್ರೇಟ್ಸ್ಗಳನ್ನು ಹೊಂದಿರುವ ಪಾಸ್ತಾವು ಜೀರ್ಣವಾಗಲು ಪಿಚ್ಚಲಿನ್ ಎಂಬ ವಿಶೇಷ ಅಂಶವು ಬೇಕಾಗುತ್ತದೆ. ಇದು ನಮ್ಮ ಲಾಲಾರಸದಲ್ಲಿರುವುದು. ಟೊಮೇಟೊದಲ್ಲಿ ಮಾಲಿಕ್, ಆಕ್ಸಲಿಕ್ ಮತ್ತು ಸಿಟ್ರಿಕ್ ಆಮ್ಲವು ಸಣ್ಣ ಪ್ರಮಾಣದಲ್ಲಿ ಇದೆ. ಇದು ಕಿಣ್ವವನ್ನು ವಿಘಟಿಸುವುದು. ಇದರಿಂದ ಪಿಷ್ಟ ಜೀರ್ಣವಾಗದೆ ಉಳಿಯುವುದು.

ಚೀಸ್ ಪಾಸ್ತಾದೊಂದಿಗೆ ಟೊಮೇಟೊ
ಬೆಳಗ್ಗಿನ ಉಪಾಹಾರಕ್ಕೆ ಸೀರಲ್ನೊಂದಿಗೆ ಕಿತ್ತಳೆ ಜ್ಯೂಸ್ ಸೇವಿಸುವುದು ನಿಮ್ಮ ಶಕ್ತಿಯ ಹೆಚ್ಚಿಸುವುದಿಲ್ಲ. ಇದರಿಂಧ ಹೊಟ್ಟೆ ಭಾರ ಮತ್ತು ತಳಮಳವಾಗಬಹುದು. ಕಿತ್ತಳೆಯಲ್ಲಿರುವ ಆಮ್ಲವು ಕಾರ್ಬೋಹೈಡ್ರೇಟ್ಸ್ಗಳ ವಿಭಜನೆಗೆ ಕಾರಣವಾಗುವ ಕಿಣ್ವಗಳ ಚಟುವಟಿಕೆ ಮೇಲೆ ಪ್ರಭಾವ ಬೀರಬಹುದು.

ಚೀಸ್ ಪಾಸ್ತಾದೊಂದಿಗೆ ಟೊಮೇಟೊ
ಪಿಷ್ಟ, ಪ್ರೋಟೀನ್ ಮತ್ತು ಕಾರ್ಬ್ಸ್ ಜತೆಯಾಗಿ ಸೇವಿಸಿದರೆ ಅದರಿಂದ ಜೀರ್ಣಕ್ರಿಯೆಗೆ ತುಂಬಾ ಶಕ್ತಿ ಬೇಕಾಗುವುದು. ಸೋಡಾದಲ್ಲಿರುವ ಸಕ್ಕರೆ ಕೂಡ ಹೊಟ್ಟೆಯ ಪ್ರಕ್ರಿಯೆ ನಿಧಾನಗೊಳಿಸುವುದು. ಹೊಟ್ಟೆಯುಬ್ಬರ ಮತ್ತು ಹೊಟ್ಟೆ ಭಾರವಾಗುವುದು.

ಗೋಧಿ ಬ್ರೆಡ್ ಮತ್ತು ಜಾಮ್
ಸಂಸ್ಕರಿಸಿದ ಗೋಧಿ ಹಿಟ್ಟಿನೊಂದಿಗೆ ಸಕ್ಕರೆಯಂಶವಿರುವ ಆಹಾರ ಸೇವಿಸಿದರೆ ಅದರಿಂದ ಕಾರ್ಬ್ಸ್ ದ್ವಿಗುಣಗೊಂಡು ತ್ವರಿಗತಿ ಉಲ್ಬಣಕ್ಕೆ ಕಾರಣವಾಗುವುದು. ಯೀಸ್ಟ್ ಇರುವ ಹಿಟ್ಟು ಮತ್ತು ಸಕ್ಕರೆ ಸೇರಿಕೊಂಡು ಹೊಟ್ಟೆಯಲ್ಲಿ ತಳಮಳ ಉಂಟು ಮಾಡುವುದು. ಇದು ಭಾರತೀಯರು ಸೇವಿಸುವ ತಪ್ಪು ಆಹಾರ ಸಂಯೋಜನೆ.



Click it and Unblock the Notifications