Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಹೊಟ್ಟೆ ನೋವು, ವಾಕರಿಕೆ, ನಿಶ್ಯಕ್ತಿ ತರಿಸುವ ಆಹಾರಗಳಿವು!-ಎಂದೂ ತಿನ್ನಬೇಡಿ
ನಾವು ತಿನ್ನುವಂತಹ ಆಹಾರವನ್ನು ಅವಲಂಬಿಸಿಕೊಂಡು ನಮ್ಮ ಆರೋಗ್ಯವಿರುವುದು. ತಿನ್ನುವ ಆಹಾರವು ಆರೋಗ್ಯಕಾರಿಯಾಗಿದ್ದರೆ ದೇಹಕ್ಕೆ ಯಾವುದೇ ರೀತಿಯ ಅನಾರೋಗ್ಯವು ಕಾಡದು. ಆದರೆ ಆಹಾರದಲ್ಲಿ ವ್ಯತ್ಯಾಸವಾದರೆ ಅದು ನಮ್ಮ ಆರೋಗ್ಯ ಕೆಡಿಸಿ ಸಮಸ್ಯೆ ಉಂಟು ಮಾಡುವುದು. ಏನು ತಿನ್ನಬೇಕು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.
ಅವರವರ ಇಷ್ಟ ಪ್ರಕಾರ ಆಹಾರ ಸೇವನೆ ಮಾಡುವರು. ಆಯಾಯ ಪ್ರದೇಶಕ್ಕೆ ಹೊಂದಿಕೊಂಡು ಆಹಾರ ಕ್ರಮವಿರುವುದು. ಆದರೆ ಕೆಲವೊಂದು ಸಲ ತಿನ್ನುವ ಆಹಾರವು ತುಂಬಾ ಅಪಾಯಕಾರಿಯಾಗುವುದು. ಯಾಕೆಂದರೆ ನಾವು ಎರಡುಮೂರು ಆಹಾರ ಜತೆಯಾಗಿ ಸೇರಿಸಿ ತಿನ್ನುತ್ತೇವೆ. ಇದರಿಂದ ಆಹಾರದ ಅಲರ್ಜಿ ಕಾಣಿಸಿಕೊಳ್ಳಬಹುದು.
ಮಾಂಸದೊಂದಿಗೆ ಚೀಸ್, ಸಲಾಡ್ನಲ್ಲಿ ಹಣ್ಣುಗಳು, ಹಾಲಿನೊಂದಿಗೆ ಹಣ್ಣುಗಳು ಇತ್ಯಾದಿ. ಆಯುರ್ವೇದದ ಪ್ರಕಾರ ಈ ಆಹಾರದ ಸಂಯೋಜನೆಯು ವರ್ಜ್ಯ. ಈ ರೀತಿ ಆಹಾರ ಸೇವನೆ ಮಾಡಿದರೆ ಅದರಿಂದ ಹೊಟ್ಟೆ ಉಬ್ಬರ, ಹೊಟ್ಟೆ ಭಾರವಾಗುವುದು ಮತ್ತು ಜಡ ಉಂಟಾಗಬಹುದು. ಜೀರ್ಣಕ್ರಿಯೆಗೆ ಸಹಕರಿಸದ ಈ ಆಹಾರಗಳು ಹೊಟ್ಟೆ ನೋವು, ವಾಕರಿಕೆ, ನಿಶ್ಯಕ್ತಿ ಮತ್ತು ತ್ಯಾಜ್ಯ ಹೊರಹಾಕಲು ಸಮಸ್ಯೆ ಉಂಟು ಮಾಡಬಹುದು. ನೀವು ತಿನ್ನಲೇಬಾರದ ಕೆಲವು ಕೆಟ್ಟ ಆಹಾರ ಸಂಯೋಜನೆ ಬಗ್ಗೆ ಬೋಲ್ಡ್ ಸ್ಕೈ ತಿಳಿಸಲಿದೆ. ಮುಂದೆ ಓದುತ್ತಾ ಸಾಗಿ....

ಕೋಕಾ ಮತ್ತು ಹಾಲು
ಕೋಕಾದಲ್ಲಿ ಆಕ್ಸಾಲಿಕ್ ಎನ್ನುವ ಆಮ್ಲ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ ಹೀರುವಿಕೆಯ ತಡೆಯುವುದು. ಕ್ಯಾಲ್ಸಿಯಂ ಹೆಚ್ಚಿರುವ ಹಾಲಿನೊಂದಿದೆ ಕೋಕಾ ಸೇವಿಸಿದಾಗ ಅದರಿಂದ ಆಕ್ಸಲೇಟ್ ಹರಳುಗಳು ನಿರ್ಮಾಣವಾಗಿ ಕಿಡ್ನಿಗೆ ಸಮಸ್ಯೆಯಾಗಬಹುದು. ಇದು ತುಂಬಾ ಕೆಟ್ಟ ಆಹಾರ ಸಂಯೋಜನೆಯಾಗಿದೆ.

ಲಿಂಬೆರಸ ಅಥವಾ ವಿನೇಗರ್ ಜತೆ ಸಲಾಡ್
ಕ್ಯಾರೋಟಿನಾಯ್ಡ್ನಂತಹ ಕೆಲವೊಂದು ಪ್ರಮುಖ ಹಾಗೂ ಮಹತ್ವದ ಪೋಷಕಾಂಶಗಳು ತರಕಾರಿಗಳಲ್ಲಿ ಇರುವುದರಿಂದ ಇದರ ಹೀರುವಿಕೆಗೆ ಸರಿಯಾದ ಕೊಬ್ಬು ಬೇಕಾಗಿದೆ. ಇದರಿಂದಾಗಿ ನೀವು ಸಲಾಡ್ಗೆ ಹೆಚ್ಚಿನ ಕೊಬ್ಬು ಇರುವಂತಹ ಅವಕಾಡೋ, ಆಲಿವ್ ಅಥವಾ ಕೆಲವು ಬೀಜಗಳನ್ನು ಸೇರಿಸಬೇಕು. ಸಲಾಡ್ಗೆ ಲಿಂಬೆ ಅಥವಾ ವಿನೇಗರ್ನಿಂದ ಅಲಂಕಾರ ಮಾಡುವುದರಿಂದ ಆರೋಗ್ಯಕರ ಪೋಷಕಾಂಶಗಳು ಸಿಗದೇ ಇರಬಹುದು.

ಚೀಸ್ ಪಾಸ್ತಾದೊಂದಿಗೆ ಟೊಮೇಟೊ
ಪಿಷ್ಟದ ಕಾರ್ಬೋಹೈಡ್ರೇಟ್ಸ್ಗಳನ್ನು ಹೊಂದಿರುವ ಪಾಸ್ತಾವು ಜೀರ್ಣವಾಗಲು ಪಿಚ್ಚಲಿನ್ ಎಂಬ ವಿಶೇಷ ಅಂಶವು ಬೇಕಾಗುತ್ತದೆ. ಇದು ನಮ್ಮ ಲಾಲಾರಸದಲ್ಲಿರುವುದು. ಟೊಮೇಟೊದಲ್ಲಿ ಮಾಲಿಕ್, ಆಕ್ಸಲಿಕ್ ಮತ್ತು ಸಿಟ್ರಿಕ್ ಆಮ್ಲವು ಸಣ್ಣ ಪ್ರಮಾಣದಲ್ಲಿ ಇದೆ. ಇದು ಕಿಣ್ವವನ್ನು ವಿಘಟಿಸುವುದು. ಇದರಿಂದ ಪಿಷ್ಟ ಜೀರ್ಣವಾಗದೆ ಉಳಿಯುವುದು.

ಚೀಸ್ ಪಾಸ್ತಾದೊಂದಿಗೆ ಟೊಮೇಟೊ
ಬೆಳಗ್ಗಿನ ಉಪಾಹಾರಕ್ಕೆ ಸೀರಲ್ನೊಂದಿಗೆ ಕಿತ್ತಳೆ ಜ್ಯೂಸ್ ಸೇವಿಸುವುದು ನಿಮ್ಮ ಶಕ್ತಿಯ ಹೆಚ್ಚಿಸುವುದಿಲ್ಲ. ಇದರಿಂಧ ಹೊಟ್ಟೆ ಭಾರ ಮತ್ತು ತಳಮಳವಾಗಬಹುದು. ಕಿತ್ತಳೆಯಲ್ಲಿರುವ ಆಮ್ಲವು ಕಾರ್ಬೋಹೈಡ್ರೇಟ್ಸ್ಗಳ ವಿಭಜನೆಗೆ ಕಾರಣವಾಗುವ ಕಿಣ್ವಗಳ ಚಟುವಟಿಕೆ ಮೇಲೆ ಪ್ರಭಾವ ಬೀರಬಹುದು.

ಚೀಸ್ ಪಾಸ್ತಾದೊಂದಿಗೆ ಟೊಮೇಟೊ
ಪಿಷ್ಟ, ಪ್ರೋಟೀನ್ ಮತ್ತು ಕಾರ್ಬ್ಸ್ ಜತೆಯಾಗಿ ಸೇವಿಸಿದರೆ ಅದರಿಂದ ಜೀರ್ಣಕ್ರಿಯೆಗೆ ತುಂಬಾ ಶಕ್ತಿ ಬೇಕಾಗುವುದು. ಸೋಡಾದಲ್ಲಿರುವ ಸಕ್ಕರೆ ಕೂಡ ಹೊಟ್ಟೆಯ ಪ್ರಕ್ರಿಯೆ ನಿಧಾನಗೊಳಿಸುವುದು. ಹೊಟ್ಟೆಯುಬ್ಬರ ಮತ್ತು ಹೊಟ್ಟೆ ಭಾರವಾಗುವುದು.

ಗೋಧಿ ಬ್ರೆಡ್ ಮತ್ತು ಜಾಮ್
ಸಂಸ್ಕರಿಸಿದ ಗೋಧಿ ಹಿಟ್ಟಿನೊಂದಿಗೆ ಸಕ್ಕರೆಯಂಶವಿರುವ ಆಹಾರ ಸೇವಿಸಿದರೆ ಅದರಿಂದ ಕಾರ್ಬ್ಸ್ ದ್ವಿಗುಣಗೊಂಡು ತ್ವರಿಗತಿ ಉಲ್ಬಣಕ್ಕೆ ಕಾರಣವಾಗುವುದು. ಯೀಸ್ಟ್ ಇರುವ ಹಿಟ್ಟು ಮತ್ತು ಸಕ್ಕರೆ ಸೇರಿಕೊಂಡು ಹೊಟ್ಟೆಯಲ್ಲಿ ತಳಮಳ ಉಂಟು ಮಾಡುವುದು. ಇದು ಭಾರತೀಯರು ಸೇವಿಸುವ ತಪ್ಪು ಆಹಾರ ಸಂಯೋಜನೆ.



Click it and Unblock the Notifications