Just In
Don't Miss
- News Gadag: ಕಾಂಗ್ರೆಸ್ ಸರ್ಕಾರದಲ್ಲಿ ಕೊಲೆಗಡುಕರಿಗೆ ರಾಜ ಮರ್ಯಾದೆ: ಮಾಜಿ ಸಿಎಂ
- Automobiles ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರಳ ಮನೆಮದ್ದು: 'ರಕ್ತ ಶುದ್ಧೀಕರಿಸುವ' ಅದ್ಭುತ ಜ್ಯೂಸ್
ರಕ್ತ ಅಶುದ್ಧವಾಗಿದ್ದರೆ ಇದರ ಪರಿಣಾಮವನ್ನು ಚರ್ಮದ ದದ್ದುಗಳು, ತುರಿಕೆ, ಬೆರಳುಗಳ ಸಂದುಗಳಲ್ಲಿ ನವೆ ಮೊದಲಾದ ಲಕ್ಷಣಗಳಿಂದ ತಿಳಿದುಕೊಳ್ಳಬಹುದು. ತಕ್ಷಣ ರಕ್ತ ಶುದ್ಧೀಕರಿಸುವ ಔಷಧಿಯನ್ನು ಅಥವಾ ಆಹಾರವನ್ನು ಸೇವಿಸುವುದೇ ಸೂಕ್ತ ಮಾರ್ಗವಾಗಿದೆ. ಈ ತೊಂದರೆಯ ನಿವಾರಣೆಗೆ ಲೋಳೆಸರ, (ಅಲೋವೆರಾ) ಬೆಳ್ಳುಳ್ಳಿ, ಶುಂಠಿ ಮೊದಲಾದವುಗಳನ್ನು ಆಹಾರ ರೂಪದಲ್ಲಿ ಶತಮಾನಗಳಿಂದ ಬಳಸಲ್ಪಡುತ್ತಾ ಬರಲಾಗಿದೆ.... ಅನಾನಸ್ ಹಣ್ಣು ನೆನೆಸಿದ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ
ನಮ್ಮಲ್ಲಿ
ಹೆಚ್ಚಿನವರು
ಲೋಳೆಸರವನ್ನು
ಚರ್ಮದ
ಹೊರಭಾಗಕ್ಕೆ
ಲೇಪಿಸುವ
ಔಷಧಿಯ
ರೂಪದಲ್ಲಿ
ಮಾತ್ರ
ಕಂಡಿದ್ದಾರೆ.
ಆದರೆ
ವಾಸ್ತವವಾಗಿ
ಲೋಳೆಸರದ
ರಸವನ್ನು
ಔಷಧಿಯ
ರೂಪದಲ್ಲಿ
ಸೇವಿಸಲೂಬಹುದು.
ರಕ್ತಶುದ್ಧೀಕರಣಕ್ಕೆ
ಲೋಳೆಸರ
ಮತ್ತು
ಅನಾನಸ್
ಹಣ್ಣಿನ
ಮಿಶ್ರಣವನ್ನು
ಕುಡಿಯಬಹುದು.
ಬರೆಯ
ರಕ್ತ
ಶುದ್ಧೀಕರಣ
ಮಾತ್ರವಲ್ಲ,
ರಕ್ತಪರಿಚಲನೆಯನ್ನೂ
ಉತ್ತಮಗೊಳಿಸುವ
ಸಾಮರ್ಥ್ಯವಿರುವ
ಈ
ಅದ್ಭುತ
ಪೇಯವನ್ನು
ಹೇಗೆ
ತಯಾರಿಸಬಹುದು
ಎಂಬುದನ್ನು
ಈಗ
ನೋಡೋಣ....
ನೈಸರ್ಗಿಕ
ರಕ್ತ
ಶುದ್ಧೀಕರಿಸುವ
ಆಹಾರಗಳು
ಅಗತ್ಯವಿರುವ ಸಾಮಾಗ್ರಿಗಳು
*ಒಂದು ಲೋಟ ತಾಜಾ ಅನಾನಸ್ ಹಣ್ಣಿನ ರಸ
*ಎರಡು ದೊಡ್ಡಚಮಚ ಲೋಳೆಸರದ ತಿರುಳು
*ಒಂದು ಲಿಂಬೆ ಹಣ್ಣು
*ಕೆಲವು ಪುದೀನಾ ಎಲೆಗಳು
*ಅರ್ಧ ಕಪ್ ನೀರು
ತಯಾರಿಸುವ ವಿಧಾನ
*ಮೊದಲು ಲೋಳೆಸರದ ತಿರುಳನ್ನು ನೀರಿನಲ್ಲಿ ಬೆರೆಸಿ ಮಿಕ್ಸಿಯ ಚಿಕ್ಕ ಜಾರ್ನಲ್ಲಿ ಗೊಟಾಯಿಸಿ.
*ಬಳಿಕ ಲಿಂಬೆಹಣ್ಣಿನ ರಸವನ್ನು ಬೆರೆಸಿ.
*ನಂತರ ಅನಾನಸ್ ರಸವನ್ನು ಬೆರೆಸಿ ಇನ್ನೂ ಕೊಂಚವೇ ಮಿಕ್ಸಿಯಲ್ಲಿ ಗೊಟಾಯಿಸಿ. (ಹೆಚ್ಚು ಗೊಟಾಯಿಸಬಾರದು, ಅನಾನಸ್ ಕಹಿಯಾಗುತ್ತದೆ)
*ಪೇಯ ಕುಡಿಯಲು ಸಿದ್ಧವಾಗಿದೆ.
ಈ ಪೇಯ ಹೇಗೆ ಕೆಲಸ ಮಾಡುತ್ತದೆ?
ಲೋಳೆಸರ ಕ್ಷಾರೀಯವಾಗಿದ್ದು ದೇಹದಲ್ಲಿರುವ ಆಮ್ಲೀಯ ಪದಾರ್ಥಗಳನ್ನು ನಿಷ್ಕ್ರಿಯಗೊಳಿಸಿ ದೇಹ ನವಚೈತನ್ಯವನ್ನು ಪಡೆಯಲು ನೆರವಾಗುತ್ತದೆ.
ಈ ಪೇಯ ಹೇಗೆ ಕೆಲಸ ಮಾಡುತ್ತದೆ?
ಅಲ್ಲದೇ ಜೀರ್ಣರಸ ಹೆಚ್ಚು ಆಮ್ಲೀಯವಾಗಿದ್ದು ಇದರ ಮೂಲಕ ಎದುರಾಗುವ ಹೊಟ್ಟೆಯುರಿ, ಹೊಟ್ಟೆಯ ಮತ್ತು ಕರುಳಿನ ಗಂಟುಗಳು, ಕರುಳಿನ ಒಳಭಾಗದ ಸೋಂಕು ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ರಕ್ತವನ್ನು ಶುದ್ಧೀಕರಿಸಿ ಆಮ್ಲೀಯ ಕಣಗಳ ಮೂಲಕ ಎದುರಾಗುವ ತುರಿಕೆ ನವೆ ಮೊದಲಾದವುಗಳನ್ನು ನಿವಾರಿಸುತ್ತದೆ.
ಇತರ ಪ್ರಯೋಜನಗಳು
ಈ ಪೇಯವನ್ನು ಕುಡಿಯುವ ಮೂಲಕ ಕೆಲವು ಬಗೆಯ ನೋವುಗಳೂ ಇಲ್ಲವಾಗುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.