Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಸರಳ ಮನೆಮದ್ದು: 'ರಕ್ತ ಶುದ್ಧೀಕರಿಸುವ' ಅದ್ಭುತ ಜ್ಯೂಸ್
ರಕ್ತ ಅಶುದ್ಧವಾಗಿದ್ದರೆ ಇದರ ಪರಿಣಾಮವನ್ನು ಚರ್ಮದ ದದ್ದುಗಳು, ತುರಿಕೆ, ಬೆರಳುಗಳ ಸಂದುಗಳಲ್ಲಿ ನವೆ ಮೊದಲಾದ ಲಕ್ಷಣಗಳಿಂದ ತಿಳಿದುಕೊಳ್ಳಬಹುದು. ತಕ್ಷಣ ರಕ್ತ ಶುದ್ಧೀಕರಿಸುವ ಔಷಧಿಯನ್ನು ಅಥವಾ ಆಹಾರವನ್ನು ಸೇವಿಸುವುದೇ ಸೂಕ್ತ ಮಾರ್ಗವಾಗಿದೆ. ಈ ತೊಂದರೆಯ ನಿವಾರಣೆಗೆ ಲೋಳೆಸರ, (ಅಲೋವೆರಾ) ಬೆಳ್ಳುಳ್ಳಿ, ಶುಂಠಿ ಮೊದಲಾದವುಗಳನ್ನು ಆಹಾರ ರೂಪದಲ್ಲಿ ಶತಮಾನಗಳಿಂದ ಬಳಸಲ್ಪಡುತ್ತಾ ಬರಲಾಗಿದೆ.... ಅನಾನಸ್ ಹಣ್ಣು ನೆನೆಸಿದ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ
ನಮ್ಮಲ್ಲಿ ಹೆಚ್ಚಿನವರು ಲೋಳೆಸರವನ್ನು ಚರ್ಮದ ಹೊರಭಾಗಕ್ಕೆ ಲೇಪಿಸುವ ಔಷಧಿಯ ರೂಪದಲ್ಲಿ ಮಾತ್ರ ಕಂಡಿದ್ದಾರೆ. ಆದರೆ ವಾಸ್ತವವಾಗಿ ಲೋಳೆಸರದ ರಸವನ್ನು ಔಷಧಿಯ ರೂಪದಲ್ಲಿ ಸೇವಿಸಲೂಬಹುದು. ರಕ್ತಶುದ್ಧೀಕರಣಕ್ಕೆ ಲೋಳೆಸರ ಮತ್ತು ಅನಾನಸ್ ಹಣ್ಣಿನ ಮಿಶ್ರಣವನ್ನು ಕುಡಿಯಬಹುದು. ಬರೆಯ ರಕ್ತ ಶುದ್ಧೀಕರಣ ಮಾತ್ರವಲ್ಲ, ರಕ್ತಪರಿಚಲನೆಯನ್ನೂ ಉತ್ತಮಗೊಳಿಸುವ ಸಾಮರ್ಥ್ಯವಿರುವ ಈ ಅದ್ಭುತ ಪೇಯವನ್ನು ಹೇಗೆ ತಯಾರಿಸಬಹುದು ಎಂಬುದನ್ನು ಈಗ ನೋಡೋಣ.... ನೈಸರ್ಗಿಕ ರಕ್ತ ಶುದ್ಧೀಕರಿಸುವ ಆಹಾರಗಳು

ಅಗತ್ಯವಿರುವ ಸಾಮಾಗ್ರಿಗಳು
*ಒಂದು ಲೋಟ ತಾಜಾ ಅನಾನಸ್ ಹಣ್ಣಿನ ರಸ
*ಎರಡು ದೊಡ್ಡಚಮಚ ಲೋಳೆಸರದ ತಿರುಳು
*ಒಂದು ಲಿಂಬೆ ಹಣ್ಣು
*ಕೆಲವು ಪುದೀನಾ ಎಲೆಗಳು
*ಅರ್ಧ ಕಪ್ ನೀರು

ತಯಾರಿಸುವ ವಿಧಾನ
*ಮೊದಲು ಲೋಳೆಸರದ ತಿರುಳನ್ನು ನೀರಿನಲ್ಲಿ ಬೆರೆಸಿ ಮಿಕ್ಸಿಯ ಚಿಕ್ಕ ಜಾರ್ನಲ್ಲಿ ಗೊಟಾಯಿಸಿ.
*ಬಳಿಕ ಲಿಂಬೆಹಣ್ಣಿನ ರಸವನ್ನು ಬೆರೆಸಿ.
*ನಂತರ ಅನಾನಸ್ ರಸವನ್ನು ಬೆರೆಸಿ ಇನ್ನೂ ಕೊಂಚವೇ ಮಿಕ್ಸಿಯಲ್ಲಿ ಗೊಟಾಯಿಸಿ. (ಹೆಚ್ಚು ಗೊಟಾಯಿಸಬಾರದು, ಅನಾನಸ್ ಕಹಿಯಾಗುತ್ತದೆ)
*ಪೇಯ ಕುಡಿಯಲು ಸಿದ್ಧವಾಗಿದೆ.

ಈ ಪೇಯ ಹೇಗೆ ಕೆಲಸ ಮಾಡುತ್ತದೆ?
ಲೋಳೆಸರ ಕ್ಷಾರೀಯವಾಗಿದ್ದು ದೇಹದಲ್ಲಿರುವ ಆಮ್ಲೀಯ ಪದಾರ್ಥಗಳನ್ನು ನಿಷ್ಕ್ರಿಯಗೊಳಿಸಿ ದೇಹ ನವಚೈತನ್ಯವನ್ನು ಪಡೆಯಲು ನೆರವಾಗುತ್ತದೆ.

ಈ ಪೇಯ ಹೇಗೆ ಕೆಲಸ ಮಾಡುತ್ತದೆ?
ಅಲ್ಲದೇ ಜೀರ್ಣರಸ ಹೆಚ್ಚು ಆಮ್ಲೀಯವಾಗಿದ್ದು ಇದರ ಮೂಲಕ ಎದುರಾಗುವ ಹೊಟ್ಟೆಯುರಿ, ಹೊಟ್ಟೆಯ ಮತ್ತು ಕರುಳಿನ ಗಂಟುಗಳು, ಕರುಳಿನ ಒಳಭಾಗದ ಸೋಂಕು ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ರಕ್ತವನ್ನು ಶುದ್ಧೀಕರಿಸಿ ಆಮ್ಲೀಯ ಕಣಗಳ ಮೂಲಕ ಎದುರಾಗುವ ತುರಿಕೆ ನವೆ ಮೊದಲಾದವುಗಳನ್ನು ನಿವಾರಿಸುತ್ತದೆ.

ಇತರ ಪ್ರಯೋಜನಗಳು
ಈ ಪೇಯವನ್ನು ಕುಡಿಯುವ ಮೂಲಕ ಕೆಲವು ಬಗೆಯ ನೋವುಗಳೂ ಇಲ್ಲವಾಗುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.



Click it and Unblock the Notifications