Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸರಳ ಮನೆಮದ್ದು: 'ರಕ್ತ ಶುದ್ಧೀಕರಿಸುವ' ಅದ್ಭುತ ಜ್ಯೂಸ್
ರಕ್ತ ಅಶುದ್ಧವಾಗಿದ್ದರೆ ಇದರ ಪರಿಣಾಮವನ್ನು ಚರ್ಮದ ದದ್ದುಗಳು, ತುರಿಕೆ, ಬೆರಳುಗಳ ಸಂದುಗಳಲ್ಲಿ ನವೆ ಮೊದಲಾದ ಲಕ್ಷಣಗಳಿಂದ ತಿಳಿದುಕೊಳ್ಳಬಹುದು. ತಕ್ಷಣ ರಕ್ತ ಶುದ್ಧೀಕರಿಸುವ ಔಷಧಿಯನ್ನು ಅಥವಾ ಆಹಾರವನ್ನು ಸೇವಿಸುವುದೇ ಸೂಕ್ತ ಮಾರ್ಗವಾಗಿದೆ. ಈ ತೊಂದರೆಯ ನಿವಾರಣೆಗೆ ಲೋಳೆಸರ, (ಅಲೋವೆರಾ) ಬೆಳ್ಳುಳ್ಳಿ, ಶುಂಠಿ ಮೊದಲಾದವುಗಳನ್ನು ಆಹಾರ ರೂಪದಲ್ಲಿ ಶತಮಾನಗಳಿಂದ ಬಳಸಲ್ಪಡುತ್ತಾ ಬರಲಾಗಿದೆ.... ಅನಾನಸ್ ಹಣ್ಣು ನೆನೆಸಿದ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ
ನಮ್ಮಲ್ಲಿ ಹೆಚ್ಚಿನವರು ಲೋಳೆಸರವನ್ನು ಚರ್ಮದ ಹೊರಭಾಗಕ್ಕೆ ಲೇಪಿಸುವ ಔಷಧಿಯ ರೂಪದಲ್ಲಿ ಮಾತ್ರ ಕಂಡಿದ್ದಾರೆ. ಆದರೆ ವಾಸ್ತವವಾಗಿ ಲೋಳೆಸರದ ರಸವನ್ನು ಔಷಧಿಯ ರೂಪದಲ್ಲಿ ಸೇವಿಸಲೂಬಹುದು. ರಕ್ತಶುದ್ಧೀಕರಣಕ್ಕೆ ಲೋಳೆಸರ ಮತ್ತು ಅನಾನಸ್ ಹಣ್ಣಿನ ಮಿಶ್ರಣವನ್ನು ಕುಡಿಯಬಹುದು. ಬರೆಯ ರಕ್ತ ಶುದ್ಧೀಕರಣ ಮಾತ್ರವಲ್ಲ, ರಕ್ತಪರಿಚಲನೆಯನ್ನೂ ಉತ್ತಮಗೊಳಿಸುವ ಸಾಮರ್ಥ್ಯವಿರುವ ಈ ಅದ್ಭುತ ಪೇಯವನ್ನು ಹೇಗೆ ತಯಾರಿಸಬಹುದು ಎಂಬುದನ್ನು ಈಗ ನೋಡೋಣ.... ನೈಸರ್ಗಿಕ ರಕ್ತ ಶುದ್ಧೀಕರಿಸುವ ಆಹಾರಗಳು

ಅಗತ್ಯವಿರುವ ಸಾಮಾಗ್ರಿಗಳು
*ಒಂದು ಲೋಟ ತಾಜಾ ಅನಾನಸ್ ಹಣ್ಣಿನ ರಸ
*ಎರಡು ದೊಡ್ಡಚಮಚ ಲೋಳೆಸರದ ತಿರುಳು
*ಒಂದು ಲಿಂಬೆ ಹಣ್ಣು
*ಕೆಲವು ಪುದೀನಾ ಎಲೆಗಳು
*ಅರ್ಧ ಕಪ್ ನೀರು

ತಯಾರಿಸುವ ವಿಧಾನ
*ಮೊದಲು ಲೋಳೆಸರದ ತಿರುಳನ್ನು ನೀರಿನಲ್ಲಿ ಬೆರೆಸಿ ಮಿಕ್ಸಿಯ ಚಿಕ್ಕ ಜಾರ್ನಲ್ಲಿ ಗೊಟಾಯಿಸಿ.
*ಬಳಿಕ ಲಿಂಬೆಹಣ್ಣಿನ ರಸವನ್ನು ಬೆರೆಸಿ.
*ನಂತರ ಅನಾನಸ್ ರಸವನ್ನು ಬೆರೆಸಿ ಇನ್ನೂ ಕೊಂಚವೇ ಮಿಕ್ಸಿಯಲ್ಲಿ ಗೊಟಾಯಿಸಿ. (ಹೆಚ್ಚು ಗೊಟಾಯಿಸಬಾರದು, ಅನಾನಸ್ ಕಹಿಯಾಗುತ್ತದೆ)
*ಪೇಯ ಕುಡಿಯಲು ಸಿದ್ಧವಾಗಿದೆ.

ಈ ಪೇಯ ಹೇಗೆ ಕೆಲಸ ಮಾಡುತ್ತದೆ?
ಲೋಳೆಸರ ಕ್ಷಾರೀಯವಾಗಿದ್ದು ದೇಹದಲ್ಲಿರುವ ಆಮ್ಲೀಯ ಪದಾರ್ಥಗಳನ್ನು ನಿಷ್ಕ್ರಿಯಗೊಳಿಸಿ ದೇಹ ನವಚೈತನ್ಯವನ್ನು ಪಡೆಯಲು ನೆರವಾಗುತ್ತದೆ.

ಈ ಪೇಯ ಹೇಗೆ ಕೆಲಸ ಮಾಡುತ್ತದೆ?
ಅಲ್ಲದೇ ಜೀರ್ಣರಸ ಹೆಚ್ಚು ಆಮ್ಲೀಯವಾಗಿದ್ದು ಇದರ ಮೂಲಕ ಎದುರಾಗುವ ಹೊಟ್ಟೆಯುರಿ, ಹೊಟ್ಟೆಯ ಮತ್ತು ಕರುಳಿನ ಗಂಟುಗಳು, ಕರುಳಿನ ಒಳಭಾಗದ ಸೋಂಕು ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ರಕ್ತವನ್ನು ಶುದ್ಧೀಕರಿಸಿ ಆಮ್ಲೀಯ ಕಣಗಳ ಮೂಲಕ ಎದುರಾಗುವ ತುರಿಕೆ ನವೆ ಮೊದಲಾದವುಗಳನ್ನು ನಿವಾರಿಸುತ್ತದೆ.

ಇತರ ಪ್ರಯೋಜನಗಳು
ಈ ಪೇಯವನ್ನು ಕುಡಿಯುವ ಮೂಲಕ ಕೆಲವು ಬಗೆಯ ನೋವುಗಳೂ ಇಲ್ಲವಾಗುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.



Click it and Unblock the Notifications











