Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ಖತರ್ನಾಕ್ ಮೈಗ್ರೇನ್ ತಲೆ ನೋವಿಗೆ -ಪವರ್ ಫುಲ್ ಮನೆಮದ್ದು
ಮೈಗ್ರೇನ್ ತಲೆನೋವು ಕಾಣಿಸಿಕೊಂಡರೆ ಉಪಶಮನ ಮಾಡೋದು ಅಷ್ಟು ಸುಲಭವಲ್ಲ. ಮಾತ್ರೆ ತೆಗೆದುಕೊಂಡರೂ ಮೈಗ್ರೇನ್ ಬೇಗ ಹೋಗೋದಿಲ್ಲ...ಆದರೆ ಇದನ್ನು ನಿಯಂತ್ರಿಸಬಹುದಾದ ಮನೆಮದ್ದಗಳಿವೆ...
ಮೈಗ್ರೇನ್ ಎಂಬುವುದು ತಲೆನೋವುಗಳಲ್ಲಿಯೇ ಅತ್ಯುಗ್ರ ರೂಪವಾಗಿದ್ದು ರೋಗಿಯನ್ನು ಇಡಿಯ ದಿನ, ಕೆಲವೊಮ್ಮೆ ವಾರಗಟ್ಟಲೇ ಹಿಂಡಿ ಹಿಪ್ಪೆ ಮಾಡಿ ಹಾಕುತ್ತದೆ. ಕೆಲವೊಮ್ಮೆ ಇದರ ಆಘಾತ ಹೆಚ್ಚಾದಾಗ ಆಸ್ಪತ್ರೆಗೂ ಸೇರಿಸಬೇಕಾಗಿ ಬರಬಹುದು. ಉಗ್ರರೂಪವಿದ್ದಾಗ ಯೋಚನಾ ಶಕ್ತಿಯೇ ಕುಂದುತ್ತದೆ, ಕಣ್ಣುಗಳ ಕೇಂದ್ರ ಭಾಗ ಅದೃಶ್ಯವಾಗುತ್ತದೆ.
ಇದಕ್ಕೆ ಕಾರಣವೇನು ಎಂಬುದನ್ನು ಇದುವರೆಗೆ ಸ್ಪಷ್ಟವಾಗಿ ವಿವರಿಸಲು ಇದುವರೆಗೆ ವೈದ್ಯವಿಜ್ಞಾನಕ್ಕೆ ಸಾಧ್ಯವಾಗಿಲ್ಲ. ಸ್ಥೂಲವಾಗಿ ಮಾನಸಿಕ ಒತ್ತಡ, ಹಾರ್ಮೋನುಗಳಲ್ಲಿ ಏರುಪೇರು, ಅಸಮರ್ಪಕ ಆಹಾರ ಕ್ರಮ, ಉದ್ವೇಗ, ರಜೋನಿವೃತ್ತಿ, ಕೆಲವು ಔಷಧಿಗಳ ಅಡ್ಡಪರಿಣಾಮಗಳು ಮೊದಲಾದವುಗಳ ಮೂಲಕ ಮೈಗ್ರೇನ್ ಎದುರಾಗಬಹುದು.
ಕೆಲವೊಮ್ಮೆ ಇದು ಅನುವಂಶೀಯವೂ ಆಗಿರುತ್ತದೆ. ಕಾರಣವೇನೇ ಇರಲಿ, ಇದರ ಶಮನಕ್ಕೆ ಈ ತಲೆನೋವು ಪ್ರಾರಂಭವಾದ ತಕ್ಷಣ ಮದ್ದು ತೆಗೆದುಕೊಳ್ಳುವುದೇ ಹೆಚ್ಚಿಸದಿರಲು ಜಾಣತನದ ಕ್ರಮವಾಗಿದೆ. ಒಮ್ಮೆ ಮೇಲೇರಿತೋ, ಬಳಿಕ ಇದರ ಪರಿಣಾಮವನ್ನು ಅನುಭವಿಸಿದ ಮೇಲೇ ಇದು ಕಡಿಮೆಯಾಗುತ್ತದೆ.
ಜಾಣರಿಗಾಗಿ ಕೆಲವು ಸಲಹೆಗಳನ್ನು ಕೆಳಗೆ ನೀಡಲಾಗಿದ್ದು ಇದರಲ್ಲಿ ಸೂಕ್ತವಾದುದನ್ನು ತಲೆನೋವು ಈಗತಾನೇ ಶುರುವಾಗುತ್ತಿದೆ ಎಂದ ತಕ್ಷಣ ಅನುಸರಿಸಿದರೆ ಉತ್ತಮ ಪರಿಹಾರವನ್ನು ಪಡೆಯಬಹುದು.

ಹಸಿಶುಂಠಿ
ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಜಗಿಯುವುದು ಅಥವಾ ಹಸಿಶುಂಠಿಯನ್ನು ಜಜ್ಜಿ ಬೆರೆಸಿದ ಟೀ ಕುಡಿಯುಮ ಮೂಲಕ ಉತ್ತಮ ಶಮನ ಪಡೆಯಬಹುದು.

ದ್ರಾಕ್ಷಿ ಹಣ್ಣಿನ ಜ್ಯೂಸ್
ವಿಶೇಷವಾಗಿ ಕಪ್ಪು ದ್ರಾಕ್ಷಿ ಹಣ್ಣಿನ ಜ್ಯೂಸ್ನಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು ಇದರೊಂದಿಗೆ ರೈಬೋಫ್ಲೇವಿನ್ ಎಂಬ ಪೋಷಕಾಂಶವೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ರಸವನ್ನು ತಲೆನೋವು ಪ್ರಾರಂಭವಾದ ತಕ್ಷಣ ಸೇವಿಸಿದರೆ ಉಲ್ಬಣಗೊಳ್ಳದಂತೆ ತಡೆಯಬಹುದು.

ಗಿಡಮೂಲಿಕೆಗಳ ಟೀ
ಪುದೀನಾ ಎಲೆಗಳನ್ನು ಕೊಂಚ ಜಜ್ಜಿ ಕುದಿಸಿದ ನೀರಿನಲ್ಲಿ ಟೀ ಮಾಡಿ ಕುಡಿಯುವ ಮೂಲಕ ಅನ್ನನಾಳದ ಸೋಂಕು, ವಾಕರಿಕೆ, ಕಫದ ಮೂಲಕ ಎದುರಾಗಿದ್ದ ತಲೆನೋವು ಇಲ್ಲವಾಗುತ್ತದೆ.

ಹಸಿರು ತರಕಾರಿಗಳು
ನಿಮ್ಮ ನಿತ್ಯದ ಆಹಾರದ ಜೊತೆಗೆ ಹೆಚ್ಚು ಹೆಚ್ಚಾಗಿ ಹಸಿರು ತರಕಾರಿ ಸೊಪ್ಪುಗಳನ್ನು ಸೇವಿಸುವ ಮೂಲಕ ಹೆಚ್ಚಿನ ವಿಟಮಿನ್ ಮತ್ತು ಆಂಟಿ ಆಕ್ಸಿಡೆಂಟುಗಳನ್ನು ಪಡೆಯಬಹುದು. ಇದರಿಂದ ಮೆದುಳಿಗೆ ರಕ್ತಸಂಚಾರ ಉತ್ತಮಗೊಂಡು ತಲೆನೋವನ್ನು ನಿಭಾಯಿಸಲು ಹೆಚ್ಚಿನ ಶಕ್ತಿ ಪಡೆಯುತ್ತದೆ.

ಆಲಿವ್ ಎಣ್ಣೆ
ಆಲಿವ್ ಎಣ್ಣೆಯಲ್ಲಿ ಹಾರ್ಮೋನುಗಳ ಏರುಪೇರನ್ನು ಸರಿಪಡಿಸುವ ಗುಣವಿದೆ. ಈ ಕಾರಣದಿಂದ ಎದುರಾದ ತಲೆನೋವಿನ ಶಮನಕ್ಕೆ ನಿಮ್ಮ ನಿತ್ಯದ ಆಹಾರವನ್ನು ಆಲಿವ್ ಎಣ್ಣೆಯಲ್ಲಿ ತಯಾರಿಸಿ ಅಥವಾ ಊಟದಲ್ಲಿ ಒಂದೆರಡು ಚಮಚ ಬೆರೆಸಿ ಸೇವಿಸುವ ಮೂಲಕ ಈ ನೋವು ಬರದಂತೆ ತಡೆಗಟ್ಟಬಹುದು.

ಕಾಫಿ
ಕಾಫಿಯಲ್ಲಿರುವ ಕೆಫೀನ್ ಮೆದುಳಿಗೆ ರಕ್ತಸಂಚಾರ ಹೆಚ್ಚಿಸಲು ನೆರವಾಗುತ್ತದೆ. ಆಗಾಗ ಚಿಕ್ಕ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ತಲೆನೋವು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ. ಸಂಶೋಧನೆಗಳ ಮೂಲಕ ಈ ವಿಷಯ ದೃಢಪಟ್ಟಿದೆ. ಆದರೆ ಈ ಪ್ರಮಾಣ ಅತಿ ಕಡಿಮೆ ಇರಬೇಕು ಎಂದೂ ಸೂಚಿಸಿವೆ. ಒಂದು ಅಂದಾಜಿನ ಪ್ರಕಾರ ತಲೆನೋವು ಪ್ರಾರಂಭವಾದ ತಕ್ಷಣ ಅರ್ಧ ಲೋಟ, ಬಳಿಕ ಪ್ರತಿ ಗಂಟೆಗೊಮ್ಮೆ ಕಾಲು ಲೋಟದ ಸೇವನೆ ಉತ್ತಮ ಪರಿಹಾರ ನೀಡುತ್ತದೆ.



Click it and Unblock the Notifications