Just In
- 1 hr ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 1 hr ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 3 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 7 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- News Voter Guide: ಮತದಾನ ಮಾಡುವ ಮುನ್ನ ಈ ಅಂಶಗಳ ಬಗ್ಗೆ ಗಮನವಿರಲಿ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಿತ್ತ ದೋಷ ಸಮಸ್ಯೆಗೆ, ಸಮರ್ಥ ಗಿಡಮೂಲಿಕೆಗಳು
ಆಯುರ್ವೇದದ ಪ್ರಕಾರ ನಮ್ಮ ದೇಹದ ಪಿತ್ತದೋಶ ಜೀವರಾಸಾಯನಿಕ ಕ್ರಿಯೆಗಳ ಪರಿಣಾಮವನ್ನು ನಿಯಂತ್ರಿಸುತ್ತದೆ. ಪಿತ್ತದೋಶದಲ್ಲಿ ನೀರು ಮತ್ತು ಅಗ್ನಿಯ ಪ್ರಭಾವ ಪ್ರಮುಖವಾಗಿದ್ದು ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ಅಲ್ಲದೇ ನಮ್ಮ ಪಂಚೇದ್ರಿಯಗಳ ಮೂಲಕ ವಿಶ್ವವನ್ನು ಗ್ರಹಿಸಲೂ ಸಾಧ್ಯವಾಗುತ್ತದೆ!
ಕೆಲವೊಮ್ಮೆ ಪಿತ್ತ ಕೆರಳಿದಾಗ ಕೆಲವು ತೊಂದರೆಗಳು ಎದುರಾಗಬಹುದು. ಚರ್ಮದಲ್ಲಿ ಉರಿ, ಎದೆಯುರಿ, ಅತಿಸಾರ, ಆಮ್ಲೀಯತೆ, ಅಕಾಲಿಕ ನೆರೆ, ಕೂದಲಿನ ಪ್ರಮಾಣದಲ್ಲಿ ಇಳಿಕೆ, ನಿದ್ರಾಹೀನತೆ ಸ್ಥಿತಿ, ಅಸಹನೆ, ಸಿಟ್ಟು, ಚರ್ಮ ಕೆಂಪಗಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ವಾತ ಪಿತ್ತ ಕಫಗಳಿಗಾಗಿ ಸೂಕ್ತ ಯೋಗಾಸನಗಳು
ಈ ಸಂದರ್ಭಗಳಲ್ಲಿ ಕೆಲವು ಗಿಡಮೂಲಿಕೆಗಳನ್ನು ಸೇವಿಸುವ ಮೂಲಕ ಈ ದೋಷವನ್ನು ಸರಿಪಡಿಸಿ ಆರೋಗ್ಯವನ್ನು ಮತ್ತೆ ಪಡೆಯಬಹುದು. ಈ ನಿಟ್ಟಿನಲ್ಲಿ ಸಮರ್ಥವಾದ ಕೆಲವು ಗಿಡಮೂಲಿಕೆಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡಲಾಗಿದೆ, ಮುಂದೆ ಓದಿ...
ಬ್ರಾಹ್ಮಿ
ನವತಾರುಣ್ಯವನ್ನು
ಪಡೆಯಲು
ಬ್ರಾಹ್ಮಿ
ಒಂದು
ಉತ್ತಮ
ಗಿಡಮೂಲಿಕೆಯಾಗಿದ್ದು
ವಿಶೇಷವಾಗಿ
ಒತ್ತಡಕ್ಕೆ
ಸಿಲುಕಿದ
ದೇಹ
ಮತ್ತು
ಮನಗಳು
ಮತ್ತೆ
ಚೇತನ
ಪಡೆಯಲು
ನೆರವಾಗುತ್ತದೆ.
ಒಂದು
ವೇಳೆ
ಪಿತ್ತದ
ಪ್ರಭಾವ
ಹೆಚ್ಚು
ಕಡಿಮೆಯಾಗಿದ್ದರೆ
ಇದನ್ನು
ಸರಿಪಡಿಸಲು
ಬ್ರಾಹ್ಮಿ
ಉತ್ತಮ
ಆಯ್ಕೆಯಾಗಿದ್ದು
ಬಿಸಿಯಾಗಿದ್ದ
ದೇಹವನ್ನು
ತಣಿಸುವ
ಮೂಲಕ
ಜೀವರಾಸಾಯನಿಕ
ಕ್ರಿಯೆಯನ್ನೂ
ಸುಲಲಿತಗೊಳಿಸುತ್ತದೆ.
ಅಲ್ಲದೇ
ವಿಶೇಷವಾಗಿ
ನಮ್ಮ
ನರಮಂಡಲ
ಮತ್ತು
ನರವ್ಯವಸ್ಥೆ
ಉತ್ತಮಗೊಳ್ಳಲು
ನೆರವಾಗುತ್ತದೆ.
ಇದರಿಂದ
ಕಲಿಕಾಸಾಮರ್ಥ್ಯ,
ಸ್ಮರಣಶಕ್ತಿ
ಮತ್ತ್ತುಏಕಾಗ್ರತೆ
ಹೆಚ್ಚುತ್ತದೆ.
ಏಲಕ್ಕಿ
ಪಿತ್ತದೋಶದಿಂದ
ಬಳಲುತ್ತಿರುವ
ವ್ಯಕ್ತಿಗಳ
ದೇಹಕ್ಕೆ
ತಂಪುನೀಡಲು
ಏಲಕ್ಕಿ
ಒಂದು
ಉತ್ತಮ
ಮೂಲಿಕೆಯಾಗಿದೆ.
ಏಲಕ್ಕಿಯಲ್ಲಿನ
ಪೋಷಕಾಂಶಗಳು
ಯಕೃತ್
ನ
ಕ್ಷಮತೆ
ಹೆಚ್ಚಿಸುವ
ಮೂಲಕ
ಪ್ರೋಟೀನುಗಳನ್ನು
ಸಮರ್ಥವಾಗಿ
ಸಂಸ್ಕರಿಸಲು
ನೆರವಾಗುತ್ತದೆ.
ತನ್ಮೂಲಕ
ಜೀವರಾಸಾಯನಿಕ
ಕ್ರಿಯೆ
ಉತ್ತಮಗೊಳ್ಳುತ್ತದೆ.
ಮಸಾಲೆ
ಪದಾರ್ಥಗಳ
ರಾಣಿ-
ಪುಟ್ಟ
ಏಲಕ್ಕಿ
ಶತಾವರಿ
(asparagus)
ತ್ರಿಫಲ
ತ್ರಿಫಲದಲ್ಲಿರುವ
ಪೋಷಕಾಂಶಗಳ
ವಿಶಿಷ್ಟ
ಸಂಯೋಜನೆಯ
ಕಾರಣದಿಂದಾಗಿ
ಎಲ್ಲ
ತರಹದ
ದೋಶಗಳಿಗೂ
ಉತ್ತಮ
ಪರಿಹಾರ
ದೊರಕುತ್ತದೆ.
ಇದರಲ್ಲಿರುವ
ತಂಪುಮಾಡುವ
ಗುಣ
ಮತ್ತು
ದೋಶಗಳಿಗೆ
ಕಾರಣವಾದ
ಅಸಮತೋಲನವನ್ನು
ಸರಿಪಡಿಸುವ
ಗುಣದಿಂದಾಗಿ
ಹಲವು
ತೊಂದರೆಗಳು
ಸುಲಭವಾಗಿ
ಇಲ್ಲವಾಗುತ್ತವೆ.
ನೆಲ್ಲಿಕಾಯಿಯಲ್ಲಿ
ನೈಸರ್ಗಿಕ
ಆಂಟಿ
ಆಕ್ಸಿಡೆಂಟುಗಳಿದ್ದು
ಇದು
ರೋಗ
ನಿರೋಧಕ
ಶಕ್ತಿಯನ್ನು
ಅಪಾರವಾಗಿ
ಹೆಚ್ಚಿಸುತ್ತದೆ.
ಗರ್ಭಾವಸ್ಥೆಯಲ್ಲಿ
ಪಿತ್ತ
ನಿವಾರಣೆ
ಹೇಗೆ?
ಹರಿತಾಕಿ ಎಂಬ ಮೂಲಿಕೆ ಸಂಕೋಚಕ ಮತ್ತು ವಿರೇಚಕ ಗುಣಗಳನ್ನು ಹೊಂದಿದ್ದು ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಬಿಭಿತಾಕಿ ಎಂಬ ಇನ್ನೊಂದು ಮೂಲಿಕೆಯೂ ಸಂಕೋಚಕ ಮತ್ತು ಪುನರ್ಯೌವನ ನೀಡುವ ಗುಣ ಹೊಂದಿದ್ದು ವಿಶೇಷವಾಗಿ ಉಸಿರಾಟ ಮತ್ತು ಶ್ವಾಸಸಂಬಂಧಿ ಕಾರ್ಯಗಳನ್ನು ಉತ್ತಮಗೊಳಿಸುತ್ತದೆ. ತ್ರಿಫಲಗಳ ಸರಿಯಾದ ಪ್ರಮಾಣದ ಮಿಶ್ರಣ ಪಿತ್ತದೋಶವನ್ನು ನಿವಾರಿಸಲು ಉತ್ತಮವಾಗಿದೆ.
ಕೇಸರಿ
ರಕ್ತಪರಿಚಲನೆ
ಹೆಚ್ಚಿಸಿದರೂ
ದೇಹವನ್ನು
ತಂಪಾಗಿಟ್ಟುವಲ್ಲಿ
ಕೇಸರಿಗಿಂತ
ಉತ್ತಮವಾದ
ಆಯ್ಕೆ
ಇನ್ನೊಂದಿಲ್ಲ.
ಏಕೆಂದರೆ
ರಕ್ತ
ಪರಿಚಲನೆ
ಹೆಚ್ಚಿಸುವ
ಇನ್ನಾವುದೇ
ಕ್ರಮದಿಂದ
ಶರೀರದ
ತಾಪಮಾನವೂ
ಹೆಚ್ಚುತ್ತದೆ.
ಪಿತ್ತದೋಶದ
ಈ
ಪರಿಣಾಮದಿಂದಾಗಿ
ಸಂಧಿವಾತ,
ಹೆಪಟೈಟಿಸ್
ಮತ್ತು
ಮೊಡವೆ
ಮೊದಲಾದ
ತೊಂದರೆಗಳಿಂದ
ಬಳಲುತ್ತಿರುವವರಿಗೆ
ಕೇಸರಿ
ನಿಶ್ಚಿತವಾಗಿಯೂ
ಉತ್ತಮ
ಪರಿಹಾರ
ನೀಡುತ್ತದೆ.
ಬಹುಪಯೋಗಿ
ಕೇಸರಿ,
ಗರ್ಭಿಣಿಯರ
ಪಾಲಿನ
ಸಂಜೀವಿನಿ
ಸಂಶೋಧನೆಗಳ ಮೂಲಕ ಈ ಮೂಲಿಕೆಯಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ದೇಹದೊಳಗೆ ಉಷ್ಣದಿಂದಾಗಿ ಎದುರಾಗಿದ್ದ ಉರಿ ಮತ್ತು ಕೆಲವು ವಿಧದ ಕ್ಯಾನ್ಸರ್ ಆವರಿಸುವುದರಿಂದಲೂ ಮುಕ್ತಿ ನೀಡುತ್ತದೆ.
ಈ ಮೂಲಿಕೆಗಳ ಹೊರತಾಗಿ ಪಿತ್ತದೋಶವನ್ನು ಕಡಿಮೆಗೊಳಿಸಲು ನಮ್ಮ ಅಭ್ಯಾಸಗಳಲ್ಲಿ ಕೊಂಚ ಬದಲಾವಣೆಯನ್ನು ತರುವುದೂ ಅವಶ್ಯವಾಗಿದೆ. ಇದರಲ್ಲಿ ಪ್ರಮುಖವಾದುದೆಂದರೆ ಅತಿ ಬಿಸಿಯಾದ ಆಹಾರಗಳನ್ನು ತಿನ್ನುವುದು. ಇದನ್ನು ಸರಿಪಡಿಸಲು ಆಹಾರಗಳನ್ನು ಸಾಮಾನ್ಯ ತಾಪಮಾನಕ್ಕೆ ತಣಿಸಿದ ಬಳಿಕವೇ ಸೇವಿಸುವುದು ಪರಿಹಾರವಾಗಿದೆ. ಸಿಹಿ, ಒಣದಾಗಿರುವ, ಸಂಕೋಚಕ ಗುಣ ಹೊಂದಿರುವ ಹಾಗೂ ಕಹಿಯಾದ ಆಹಾರಗಳ ಸೇವನೆ ಹಿತಕರ. ಆದರೆ ಅತಿ ಹೆಚ್ಚಿನ ಹುಳಿ, ಉಪ್ಪು, ಘಾಟು ಬರುವ ಮತ್ತು ಎಣ್ಣೆಯ ಆಹಾರಗಳನ್ನು ವರ್ಜಿಸಬೇಕು. ನಿಯಮಿತವಾಗಿ ಅಭ್ಯಂಗ ಅಥವಾ ಕೊಬ್ಬರಿ ಎಣ್ಣೆಯ ಮಸಾಜ್ ಮಾಡಿಸಿಕೊಳ್ಳುವ ಮೂಲಕ ದೇಹಕ್ಕೆ ಹೆಚ್ಚಿನ ತಂಪು ದೊರಕುತ್ತದೆ.