Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ನೆನಪಿಡಿ- ವಾಂತಿಯಾದ ಬಳಿಕ ಈ ಆಹಾರಗಳಿಂದ ದೂರವಿರಿ
ಅತ್ಯಂತ ಅಹಿತಕರ ಅನುಭವ ಎಂದರೆ ವಾಕರಿಕೆ ಮತ್ತು ವಾಂತಿಯ ಬಳಿಕ ಆಗುವ ಅನುಭವ. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಆಮ್ಲೀಯತೆಯುಂಟಾದರೆ ಎದುರಾಗುವ ಎದೆಯುರಿ ತೀಕ್ಷ್ಣವಾದ ಉರಿಯನ್ನು ಉಂಟುಮಾಡುತ್ತದೆ.
ವಾಕರಿಕೆಯಾಗಲು ಪರಸ್ಪರ ಹೊಂದಿಕೊಳ್ಳದ ಆಹಾರಗಳನ್ನು ಸೇವಿಸುವುದು ಪ್ರಮುಖ ಕಾರಣವಾಗಿದೆ. ಏಕೆಂದರೆ ಕೆಲವು ಆಹಾರಗಳ ಸಂಯೋಜನೆ ಹೊಟ್ಟೆಯಲ್ಲಿ ಆಮ್ಲೀಯತೆ ಅಥವಾ ಕ್ಷಾರೀಯತೆ ಹೆಚ್ಚಿಸುತ್ತದೆ.
ಇವುಗಳು ಹೊಟ್ಟೆಯಲ್ಲಿಯೇ ಕೆಲವಾರು ಅನಿಲಗಳನ್ನು ನೊರೆಯಂತೆ ಉತ್ಪತ್ತಿ ಮಾಡುತ್ತದೆ. ಈ ನೊರೆ ಹೊಟ್ಟೆಯಿಂದ ಹೊರಹೋಗುವ ಪ್ರಯತ್ನದಲ್ಲಿ ಅನ್ನನಾಳಕ್ಕೆ ಪ್ರಚೋದನೆ ನೀಡುತ್ತದೆ. ಇದೇ ವಾಕರಿಕೆ.
ಇದು ಹೆಚ್ಚುತ್ತಿದ್ದಂತೆಯೇ ಅನ್ನನಾಳದ ಒತ್ತಡ ಮೀರಿ ಪಿಚಕಾರಿಯಂತೆ ಬಾಯಿಯ ಮೂಲಕ ಹೊರಬರುತ್ತದೆ. ಇದೇ ವಾಂತಿ. ಆಹಾರ ತಜ್ಞರು ಈ ಸ್ಥಿತಿಗೆ ಕೆಲವಾರು ಆಹಾರಗಳ ಸಂಯೋಜನೆಯನ್ನು ಕಂಡುಕೊಂಡಿದ್ದು ಇವುಗಳನ್ನು ಅನುಸರಿಸದಿರಲು ಸಲಹೆ ನೀಡುತ್ತಾರೆ. ಬನ್ನಿ, ಈ ವಿಧಾನಗಳನ್ನು ಮುಂದೆ ಓದಿ.....

ಅಧಿಕ ಪ್ರಮಾಣದ ನೀರು
ವಾಂತಿಯಾದ ಬಳಿಕ ನೀರು ಕುಡಿಯುವಂತೆ ಹೆಚ್ಚಿನವರು ಸಲಹೆ ನೀಡುತ್ತಾರೆ. ಆದರೆ ವಾಂತಿಯ ಬಳಿಕ ಕೊಂಚವೇ ನೀರು ಕುಡಿದರೆ ಸಾಕು. ಹೆಚ್ಚಿನ ನೀರು ಕುಡಿದರೆ ಹೊಟ್ಟೆಯಲ್ಲಿ ಉಳಿದಿದ್ದ ಅಜೀರ್ಣವಾದ ಆಹಾರ ಮತ್ತೊಮ್ಮೆ ಹೊಟ್ಟೆ ತುಂಬಿ ವಾಂತಿಯಾಗುವ ಸಂಭವವಿರುತ್ತದೆ.

ಅಧಿಕ ಪ್ರಮಾಣದ ನೀರು
ಆದ್ದರಿಂದ ಅರ್ಧ ಲೋಟಕ್ಕೂ ಕಡಿಮೆ ನೀರು ಅಥವಾ ಸಾಧ್ಯವಾದರೆ ಚಿಕ್ಕ ಐಸ್ ತುಂಡೊಂದನ್ನು ಬಾಯಿಯಲ್ಲಿಟ್ಟು ಕರಗಿದ ನೀರನ್ನು ಕುಡಿಯುವುದೇ ಉತ್ತಮ.

ಹಸಿ ತರಕಾರಿ ಅಥವಾ ಸ್ಮೂಥಿಗಳು
ವಾಂತಿಯ ಬಳಿಕ ನಾರಿನ ಪ್ರಮಾಣ ಹೆಚ್ಚಿರುವ ತರಕಾರಿಗಳು ಅಥವಾ ಇವುಗಳಿಂದ ತಯಾರಿಸಿದ ಸ್ಮೂಥಿ ದ್ರವಗಳನ್ನು ಕುಡಿಯುವ ಮೂಲಕ ಇದು ಮತ್ತೊಮ್ಮೆ ಹೊಟ್ಟೆಯನ್ನು ಪ್ರಚೋದಿಸಿ ವಾಂತಿಗೆ ಕಾರಣವಾಗಬಹುದು.

ಟೀ ಅಥವಾ ಕಾಫಿ
ವಾಂತಿಯಾದ ಬಳಿಕ ಟೀ ಕಾಫಿಗಳನ್ನು ಸರ್ವಥಾ ಸೇವಿಸಬಾರದು. ಅಷ್ಟೇ ಅಲ್ಲ, ವಾಂತಿಯಾದ ದಿನವಿಡೀ ಕಾಫಿ ಟೀಗಳನ್ನು ಸೇವಿಸದೇ ಇರುವುದೇ ಉತ್ತಮ. ಏಕೆಂದರೆ ಕಾಫಿ ಮತ್ತು ಟೀಯಲ್ಲಿರುವ ಕೆಫೀನ್ ಮತ್ತೊಮ್ಮೆ ಹೊಟ್ಟೆಯಲ್ಲಿ ಪ್ರಚೋದನೆ ನೀಡುವ ಸಾಧ್ಯತೆಯಿದೆ. ಇದು ಇನ್ನೊಮ್ಮೆ ವಾಂತಿಯಾಗಲು ಕಾರಣವಾಗುತ್ತದೆ.

ಖಾರವಾದ ಆಹಾರಗಳು
ಮಸಾಲೆ ವಸ್ತುಗಳಿರುವ ಯಾವುದೇ ಆಹಾರವನ್ನು ವಾಂತಿಯಾದ ಬಳಿಕ ಸೇವಿಸಬಾರದು. ಕೆಲವು ಘಂಟೆಗಳ ಬಳಿಕವೂ! ಏಕೆಂದರೆ ಮಸಾಲೆ ವಸ್ತುಗಳು ಸುಲಭವಾಗಿ ಜೀರ್ಣವಾಗುವುದಿಲ್ಲ ಮತ್ತು ಹೊಟ್ಟೆಯಲ್ಲಿ ಮತ್ತೊಮ್ಮೆ ಆಮ್ಲೀಯತೆಯುಂಟುಮಾಡುತ್ತದೆ. ಇದರಿಂದ ಮತ್ತೊಮ್ಮೆ ವಾಂತಿಯಾಗುವ ಸಾಧ್ಯತೆಯಿದೆ.

ಉಪ್ಪಿನ ಮತ್ತು ಎಣ್ಣೆಯ ಜ್ಜಿಡ್ಡಿನ ಆಹಾರಗಳು
ಸಾಮಾನ್ಯವಾಗಿ ವಾಂತಿಯಾದ ಕೆಲವು ಘಂಟೆಗಳ ಬಳಿಕ ಹಸಿವಾಗಲು ಪ್ರಾರಂಭವಾಗುತ್ತದೆ. ಈ ಹಸಿವು ಸಾಮಾನ್ಯವಾಗಿ ಉಪ್ಪಿನ ಅಥವಾ ಖಾರದ ವಸ್ತುಗಳನ್ನೇ ಬಯಸುತ್ತದೆ. ಆದರೆ ಈ ಆಹಾರಗಳು ಹೊಟ್ಟೆಯಲ್ಲಿ ಮತ್ತೊಮ್ಮೆ ಪ್ರಚೋದನೆ ನೀಡುತ್ತದೆ. ಇದು ವಾಕರಿಕೆಗೆ ಕಾರಣವಾಗುತ್ತದೆ. ವಾಕರಿಕೆ ಹೆಚ್ಚಾದರೆ ಮತ್ತೊಮ್ಮೆ ವಾಂತಿಯಾಗುವ ಸಂಭವವಿದೆ. ಆದ್ದರಿಂದ ಎಣ್ಣೆಯಲ್ಲಿ ಕರಿದ, ಹುರಿದ, ಉಪ್ಪಿನ ಅಂಶವಿರುವ ಯಾವುದೇ ಆಹಾರವನ್ನು ಆ ದಿನ ಸೇವಿಸದಿರುವುದೇ ಹಿತಕರ.

ಬುರುಗು ಬರುವ ಲಘು ಪಾನೀಯಗಳು
ವಾಂತಿಯಾದ ಅಳಿಕ ಬುರುಗು ಬರುವ ಯಾವುದೇ ಲಘು ಪಾನೀಯ ಕುಡಿದರೆ ಇದು ತಕ್ಷಣವೇ ಹೊಟ್ಟೆಯಲ್ಲಿ ಭಾರೀ ಪ್ರಮಾಣದ ಬುರುಗು ಮೂಡಿಸಲು ಕಾರಣವಾಗುತ್ತದೆ.

ಬುರುಗು ಬರುವ ಲಘು ಪಾನೀಯಗಳು
ಏಕೆಂದರೆ ಬುರುಗು ಮೂಡಿಸಲು ಬಳಸಲಾಗಿರುವ ಕೆಫೀನ್ ಹೊಟ್ಟೆಯ ಒಳಭಾಗವನ್ನು ಪ್ರಚೋದಿಸಿ ಇನ್ನಷ್ಟು ವಾಕರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಎಷ್ಟೇ ಆಕರ್ಷಣೆ ಒಡ್ಡಿದರೂ ಲಘು ಪಾನೀಯ ವಾಂತಿಯಾದ ದಿನ ಬೇಡವೇ ಬೇಡ.



Click it and Unblock the Notifications