Just In
- 8 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 8 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 9 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 10 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬದನೆಕಾಯಿ ಇಷ್ಟಪಡದೇ ಇದ್ದವರು ಒಮ್ಮೆ ಈ ಲೇಖನ ತಪ್ಪದೇ ಓದಿ...
ಬದನೆಯೆಂದರೆ ನಂಜು ಮತ್ತು ಅದರ ಸೇವನೆಯೆಂದರೆ ಮೂಗು ಮುರಿಯುವವರೇ ಹೆಚ್ಚು. ಅದಾಗ್ಯೂ ಪೃಕೃತಿಯ ಅದ್ಭುತ ಕೊಡುಗೆಗಳಲ್ಲಿ ಬದನೆ ಮಾತ್ರ ನಮ್ಮ ಆರೋಗ್ಯಕ್ಕೆ ಸಂಜೀವಿನಿಯಿದ್ದಂತೆ. ಬನ್ನಿ ಅದು ಹೇಗೆ ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳೋಣ...
ನಮ್ಮ ದೇಹ ಒಂದು ಆಲಯವಿದ್ದಂತೆ. ಆಲಯವನ್ನು ನಿತ್ಯವೂ ಶುಚಿಯಾಗಿರಿಸಿಕೊಂಡಲ್ಲಿ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಯಾವುದೇ ತೊಡಕುಗಳು ಉಂಟಾಗುವುದಿಲ್ಲ. ಇಲ್ಲಿ ಶುಚಿ ಎಂದರೆ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದಾಗಿದೆ. ಬೇಕಾಬಿಟ್ಟಿಯಾಗಿ ಆಹಾರವನ್ನು ಸೇವಿಸದೇ ನಮಗೆ ಏನು ಅವಶ್ಯಕವೋ ಅದನ್ನು ಮಾತ್ರವೇ ಸೇವಿಸಿ ದೇಹದ ಸೌಂದರ್ಯದ ಜೊತೆಗೆ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.
ನಮ್ಮ ಹಿರಿಯರು ಪರಿಸರದಿಂದ ದೊರೆತ ಉತ್ಪನ್ನಗಳಿಂದಲೇ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಅವರ ಆರೋಗ್ಯದ ಗುಟ್ಟು ಸಸ್ಯಜನ್ಯ ವಸ್ತುಗಳಾಗಿವೆ ಎಂದರೆ ಖಂಡಿತ ನೀವು ನಂಬಲಾರಿರಿ. ಮನೆಯ ಹಿತ್ತಲಿನಲ್ಲಿಯೇ ಬೆಳೆದ ತರಕಾರಿಗಳ ಸೇವನೆ, ಹೊಲದಲ್ಲಿ ಬೆಳೆದ ಅಕ್ಕಿಯಿಂದ ಊಟ, ಹೀಗೆ ಅವರುಗಳು ಹೊರಗಿನ ವಸ್ತುಗಳನ್ನು ಸೇವಿಸುತ್ತಿದ್ದುದೇ ಅತಿ ಕಡಿಮೆ ಎಂದೆನ್ನಬಹುದು.
ಆದರೆ ಇಂದಿನ ಆರೋಗ್ಯ ಮತ್ತು ಆಹಾರ ವ್ಯವಸ್ಥೆ ಹದಗೆಡುತ್ತಿದ್ದರೂ ಬಹುತೇಕ ಜನರು ಇಂದು ತಮ್ಮ ದೇಹದ ರೋಗ ರುಜಿನಗಳಿಗೆ ಭಯಗೊಂಡು ಸಸ್ಯಗಳು ಮತ್ತು ತರಕಾರಿಗಳ ಸೇವನೆಯನ್ನೇ ಮಾಡುತ್ತಿದ್ದಾರೆ. ಇಂದಿನ ಲೇಖನದಲ್ಲಿ ಕೂಡ ನಿಮ್ಮ ಉತ್ತಮ ಡಯೆಟ್ಗೆ ಸಹಕಾರಿ ಎಂದೆನಿಸಿರುವ ಅದ್ಭುತ ತರಕಾರಿಯ ಪ್ರಯೋಜನಗಳನ್ನು ತಿಳಿಸಿಕೊಡುತ್ತಿದ್ದು ನೀವು ಇದನ್ನು ಇಷ್ಟಪಡದೇ ಇದ್ದರೂ ಈ ಲೇಖನವನ್ನು ಓದಿದ ಬಳಿಕ ಅದನ್ನು ಕಷ್ಟಪಟ್ಟಾದರೂ ತಿನ್ನುತ್ತೀರಿ ಎಂಬುದಂತೂ ನಿಜ. ಆ ತರಕಾರಿ ಬೇರಾವುದಾಗಿರದೇ ಬದನೆಯಾಗಿದೆ.
ಬದನೆಯೆಂದರೆ ನಂಜು ಮತ್ತು ಅದರ ಸೇವನೆಯೆಂದರೆ ಮೂಗು ಮುರಿಯುವವರೇ ಹೆಚ್ಚು. ಅದಾಗ್ಯೂ ಪೃಕೃತಿಯ ಅದ್ಭುತ ಕೊಡುಗೆಗಳಲ್ಲಿ ಬದನೆ ಮಾತ್ರ ನಮ್ಮ ಆರೋಗ್ಯಕ್ಕೆ ಸಂಜೀವಿನಿಯಿದ್ದಂತೆ. ಬನ್ನಿ ಅದು ಹೇಗೆ ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳೋಣ...
ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ
ಹೌದು ಬದನೆಕಾಯಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್ ಕೆ ಮತ್ತು ಜೈವಿಕ ಫ್ಲೇವನಾಯ್ಡ್ ಅಂಶಗಳಿದ್ದು ಇದು ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
ಕೊಲೆಸ್ಟ್ರಾಲ್ ಪ್ರಮಾಣವನ್ನು ಇಳಿಸುತ್ತದೆ
ಬದನೆಯನ್ನು ಚೆನ್ನಾಗಿ ಬೇಯಿಸಿದ್ದರೆ, ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ. ಇದನ್ನು ಹುರಿದು ಬಳಸುವುದಕ್ಕಿಂತ ಬೇಯಿಸಿ ಸೇವಿಸುವುದೇ ಉತ್ತಮವಾಗಿದೆ.
ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸಂರಕ್ಷಿಸುತ್ತದೆ
ಉತ್ತಮ ಪ್ರಮಾಣದ ಫೈಬರ್ ಅನ್ನು ಬದನೆಯು ಒಳಗೊಂಡಿದ್ದು, ಜೀರ್ಣಕ್ರಿಯೆ ವ್ಯವಸ್ಥೆಯನ್ನು ಇದು ರಕ್ಷಿಸುತ್ತದೆ. ಬದನೆಯ ಅತ್ಯುತ್ತಮ ಆರೋಗ್ಯಕಾರಿ ಗುಣಗಳಲ್ಲಿ ಇದೂ ಒಂದಾಗಿದೆ.
ರಕ್ತ ಸಂಚಾರವನ್ನು ವೃದ್ಧಿಸುತ್ತದೆ
ಬದನೆಯ ಇನ್ನೊಂದು ಪರಿಣಾಮಕಾರಿ ಅಂಶವೆಂದರೆ ಇದು ರಕ್ತಸಂಚಾರವನ್ನು ವೃದ್ಧಿಸುತ್ತದೆ ಎನ್ನುವುದಾಗಿದೆ. ದಿನವೂ ಬದನೆಕಾಯಿಯನ್ನು ಸೇವಿಸುವುದು ಮೆದುಳನ್ನು ಸಮೃದ್ಧಗೊಳಿಸುತ್ತದೆ ಏಕೆಂದರೆ ಇದರಲ್ಲಿ ಫೈಟೋನ್ಯೂಟ್ರಿಯೆಂಟ್ಸ್ ಇದೆ.
ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬದನೆ ಸಹಕಾರಿಯಾಗಿದೆ. ಇದು ಮಧುಮೇಹವನ್ನು ನಿಯಂತ್ರಿಸುತ್ತದೆ, ಇದರಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ಗಳಿದ್ದು, ಕರಗುವ ನಾರಿನಂಶ ಇದೆ.
ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ
ಹೆಚ್ಚಿನ ಫ್ಲೇವನಾಯ್ಡ್ ಅಂಶವನ್ನು ಇದು ಒಳಗೊಂಡಿದ್ದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ನ್ಯೂಟ್ರಿಶಿಯನ್ ಇದೆ
ಬದನೆಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣದ ಸತ್ವವಿದ್ದು, ಇತರ ಆರೋಗ್ಯಕಾರಿ ಮಿನರಲ್ಗಳನ್ನು ಈ ತರಕಾರಿ ಪಡೆದುಕೊಂಡಿದೆ ಇದು ನಮ್ಮ ದೇಹಕ್ಕೆ ಅಗತ್ಯವಾದುದಾಗಿದೆ.
ತೂಕ ಇಳಿಸುತ್ತದೆ
ಬದನೆಯಲ್ಲಿ ಕ್ಯಾಲೋರಿ ಇಲ್ಲವೇ ಇಲ್ಲ. ಇದು ಕೊಬ್ಬು ರಹಿತವಾಗಿದ್ದು ಫೈಬರ್ ಪ್ರಮಾಣ ಅಧಿಕವಾಗಿದೆ. ಬದನೆಯ ಪ್ರಯೋಜನಕಾರಿ ಅಂಶಗಳಲ್ಲಿ ಇದೂ ಕೂಡ ಒಂದಾಗಿದೆ.