Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಹೊಟ್ಟೆ ಉಬ್ಬರ-ಚಿಟಿಕೆ ಹೊಡೆದಷ್ಟು ಸುಲಭವಾಗಿ ಪರಿಹಾರ!
ಕೆಲವೊಮ್ಮೆ ಉಬ್ಬರಿಸಿಕೊಳ್ಳುವ ಹೊಟ್ಟೆಯು ನಮ್ಮ ದಿನಚರಿಯನ್ನೆ ಹಾಳುಗೆಡವಬಲ್ಲುದು. ನಮ್ಮ ಅಂದಿನ ವೇಳಾಪಟ್ಟಿಯಲ್ಲಿ ಮಾಡಬೇಕಾದ ಅದೆಷ್ಟೋ ಕೆಲಸಗಳನ್ನು ಮುಂದೂಡಬೇಕಾದ ಅನಿವಾರ್ಯತೆ ಬರುವುದು ಇಂತಹ ವೇಳೆಯಲ್ಲೆ. ಅಷ್ಟೊಂದು ಜಡತ್ವ , ಮಂಕುತನ ಈ ಹೊಟ್ಟೆ ಉಬ್ಬರಿಕೆಯಿಂದ.

ಹೊಟ್ಟೆ ಉಬ್ಬರಿಸುವುದಕ್ಕೆ ಅನೇಕ ಕಾರಣಗಳಿರಬಹುದು. ಇದರ ಸರಿಯಾದ ಜಾಡು ಸ್ಪಷ್ಟವಾಗಿ ತಿಳಿಯುವುದು ಕುಟುಂಬ ವೈದ್ಯರಿಗೆ ಮಾತ್ರ. ಆದರೂ, ಹೊಟ್ಟೆ ಉಬ್ಬರಿಕೆ ಸರ್ವೇ ಸಾಮಾನ್ಯ. ವಾಯುವಿನಿಂದ ಕೂಡಿದ ಆಹಾರವನ್ನು ಸೇವಿಸಿದ ಕೂಡಲೇ ಹೊಟ್ಟೆ ಉಬ್ಬೇರಿ ಕೊಳ್ಳುತ್ತದೆ. ದೀರ್ಘವಾದ ತೇಗು ಬಂದರೆ ಹೊಟ್ಟೆ ಸ್ವಲ್ಪ ಹಗುರಾಗುತ್ತದೆ. ಹೊಟ್ಟೆ ಉಬ್ಬರಕ್ಕೆ ತಕ್ಷಣದ ಪರಿಹಾರ
ಅವಸರದಲ್ಲಿ ಊಟ ಮಾಡಿದಾಗಲೂ ಹೀಗೆ ಆಗುವ ಸಾಧ್ಯತೆ ಇದೆ. ಮಹಿಳೆಯರ ಋತುಚಕ್ರಕ್ಕೆ ಮೊದಲ ಕೆಲವು ದಿನಗಳಲ್ಲೂ ಹೀಗಾಗುವುದಿದೆ. ಶರೀರದಲ್ಲಿ ನೀರಿನ ಅಂಶ ಕಡಿಮೆ ಆದಾಗಲೂ ಈ ಸಮಸ್ಯೆ ತಲೆದೋರುವುದು.
ಚಿಕ್ಕ ಮಕ್ಕಳಿಗೆ ಹೊಟ್ಟೆ ಉಬ್ಬರಿಸಿದಾಗ, ಓಮದ ಕಷಾಯ ಮಾಡಿ ಸೋಸಿ, ಒಂದು ಚಮಚ ಕುಡಿಸಿದರೆ, ಕೂಡಲೇ ಮಕ್ಕಳು ನಿರಾಳವಾಗುವುದನ್ನು ನೋಡುತ್ತೇವೆ. ಸ್ವಲ್ಪ ದೊಡ್ಡವರಾದರೆ, ಒಂದು ವೀಳ್ಯದ ಎಲೆಯಲ್ಲಿ ಅರ್ಧ ಚಮಚ ಓಮ ಹಾಕಿ ಮಡಸಿ, ತಿನ್ನಲು ಕೊಡಬಹುದು.
ಶುಂಠಿಯನ್ನು ನೇರವಾಗಿ ಜಗಿದು ತಿನ್ನ ಬಹುದು... ಚಹ ತಯಾರಿಸುವಾಗ ಒಂದು ಹೆಬ್ಬೆರಳಿನಷ್ಟು ದೊಡ್ಡ ಶುಂಠಿ ಯನ್ನು ಜಜ್ಜಿ ಹಾಕಿ, ಚಹ ತಯಾರಿಸಿ ಕುಡಿಯಬಹುದು.ಚಹ ಆಹ್ಲಾದಕರವಾಗಿರುತ್ತದೆ. ಅಡುಗೆಯಲ್ಲಿ ಶುಂಠಿ ಬಳಸಿಕೊಳ್ಳಲೂ ಬಹುದಾಗಿದೆ. ಶುಂಠಿ ಜೀರ್ಣಕಾರಿ ಮತ್ತು ಉಬ್ಬರಿಕೆಗೆ ರಾಮಬಾಣ!
ಹೋಟೇಲುಗಳಲ್ಲಿ ಊಟದ ಅನಂತರ ಬಿಲ್ಲಿನೊಂದಿಗೆ ನೀಡುವ ಸೋಂಪು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹೊಟ್ಟೆ ಉಬ್ಬರಿಸದಂತೆ ತಡೆಯುತ್ತದೆ.(ಇದ್ದರೆ ನಿವಾರಿಸುತ್ತದೆ.) ಕೆಲವರು ಊಟದ ನಂತರ ಬಾಳೆಯ ಹಣ್ಣನ್ನು ತಿನ್ನದೇ ಇರುವುದೇ ಇಲ್ಲ! ಇದು ಒಳ್ಳೆಯ ಅಭ್ಯಾಸ. ಬಾಳೆಯ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಹೊಟ್ಟೆ ಉಬ್ಬರಿಸಲು ಕಾರಣವಾಗುವ ಸೋಡಿಯಂ ಅನ್ನು ನಿಗ್ರಹಿಸುತ್ತದೆ.
ಊಟದ ಕೊನೆಗೆ ಮೊಸರನ್ನ ಸೇವನೆ ನಮ್ಮಲ್ಲಿ ವಾಡಿಕೆ. ಮೊಸರು ಜೀರ್ಣಕಾರಿ ಮತ್ತು ಹೊಟ್ಟಿ ಉಬ್ಬರಿಕೆಗೆ ವಿರೋಧಿ! ನಮ್ಮ ಮಸಾಲೆ ಅಡುಗೆಯಲ್ಲಿ ಬಳಕೆಯಾಗುವ ಕೊತ್ತಂಬರಿ, ಜೀರಿಗೆ, ಒಣ ಮೆಣಸು ಇತ್ಯಾದಿಗಳು ಸಹ ಜೀರ್ಣಕ್ರಿಯೆಗೆ ಅವಶ್ಯವಿರುವ ಕಿಣ್ವಗಳನ್ನು ಹೆಚ್ಚಿಸುವ ಮೂಲಕ ಕರುಳಿನ ಸ್ನೇಹಿತರೆನಿಸಿವೆ. ಇವು ಹೊಟ್ಟೆ ಉಬ್ಬರಿಕೆಯನ್ನು ತಡೆಗಟ್ಟುತ್ತವೆ.
ಗಮನಿಸಿ, ನಮ್ಮ ಪೂರ್ವಜರ ಸಾಂಪ್ರದಾಯಿಕ ಅಡುಗೆಗಳಲ್ಲಿ ಮೇಲೆ ತಿಳಿಸಿದ ಹೆಚ್ಚಿನೆಲ್ಲ ವಸ್ತುಗಳೂ ಬಳಕೆಯಾಗುತ್ತಿದ್ದವು. (ಈಗಿನ ಫಾಸ್ಟ್ ಫುಡ್ಡಿನಂತಲ್ಲ!) ಊಟದ ಅನಂತರ ಮೆಲ್ಲುತ್ತಿದ್ದ ತಾಂಬೂಲವೂ ಜೀರ್ಣಕ್ಕೆ ಸಹಕಾರಿ ಮತ್ತು ಅದು ಉಬ್ಬರಿಕೆಯನ್ನು ನಿಗ್ರಹಿಸುವ ಒಂದು ಪ್ರಬಲ ಅಸ್ತ್ರವಾಗಿರುತ್ತಿತ್ತು!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


