Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಕೂದಲುದುರುವುದನ್ನು ತಡೆಯಲು ಯೋಗಾಸನ
ಯೋಗ ಮತ್ತು ಧ್ಯಾನ ಮಾಡುವುದರಿಂದ ಆರೋಗ್ಯಕರ ಕೂದಲು ಮಾತ್ರವಲ್ಲ,ಮಾನಸಿಕ ಮತ್ತು ದೈಹಿಕವಾಗಿ ಕೂಡ ಆರೋಗ್ಯವಾಗಿರಬಹುದು.ಯೋಗ ಮಾಡುವುದರಿಂದ ನೆತ್ತಿಯಲ್ಲಿ ರಕ್ತಸಂಚಲನ ಸುಗಮವಾಗುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ,ಒತ್ತಡವನ್ನು ಕಡಿಮೆ ಮಾಡುತ್ತದೆ,ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಮುಂದೆ ಬಾಗಿ ಮಾಡುವ ಎಲ್ಲಾ ಆಸನಗಳು ನೆತ್ತಿಯ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ.ಇದು ಕೂದಲಿಗೆ ಪೌಷ್ಟಿಕತೆಯನ್ನು ನೀಡುತ್ತದೆ,ಜೊತೆಗೆ ಯೋಗ ಮಾಡುವುದರಿಂದ ನಿಧಾನವಾಗಿ ಕೂದಲು ಸದೃಢವಾಗುವುದನ್ನು ನೀವು ಗಮನಿಸಬಹುದು.ಈ ಕೆಳಗೆ ಕೆಲವು ಆಸನಗಳನ್ನು ನೀಡಲಾಗಿದೆ.ಓದಿ ನೋಡಿ.

ಅಧೋಮುಖ ಶವಾಸನ
ನಾಯಿಯ ಭಂಗಿಯಲ್ಲಿ ಕೆಳಮುಖವಾಗಿ ಮಾಡುವ ಈ ಆಸನ ತಲೆಗೆ ಹೆಚ್ಚಿನ ರಕ್ತಸಂಚಾರ ನೀಡುತ್ತದೆ,ಇದು ಸೈನಸ್ ಮತ್ತು ಸಾಮಾನ್ಯ ನೆಗಡಿ ಹೋಗಲಾಡಿಸಲು ಸಹಾಯಕ.ಮಾನಸಿಕವಾಗಿ ಬಳಲಿದವರಿಗೆ,ನಿದ್ರಾಹೀನತೆ,ಖಿನ್ನತೆ ಹೋಗಲಾಡಿಸಲು ಕೂಡ ಸಹಾಯಕವಾಗುತ್ತದೆ.

ಉತ್ತಾನಾಸನ
ಕೂದಲು ಉದುರುವುದನ್ನು ತಡೆಯುವುದರ ಜೊತೆಗೆ ಈ ಮುಂದೆ ಬಾಗುವ ಭಂಗಿಯಿಂದಾಗಿ ಆಯಾಸ ಮತ್ತು ಸುಸ್ತು ಕೂಡ ಕಡಿಮೆಯಾಗುತ್ತದೆ.ಈ ಆಸನ ಮೆನೋಪಾಸ್ ಸಮಸ್ಯೆ ಹೋಗಲಾಡಿಸಲು ಮತ್ತು ಜೀರ್ಣ ಕ್ರಿಯೆ ಸುಗಮವಾಗಿ ಆಗಲು ಕೂಡ ಸಹಾಯಕ.

ವಜ್ರಾಸನ
ಇದನ್ನು ಡೈಮಂಡ್ ಆಸನ ಎಂದು ಕರೆಯಲಾಗುತ್ತದೆ.ಈ ಆಸನವನ್ನು ಊಟ ಆದ ತಕ್ಷಣ ಮಾಡಬಹುದು.ಮುಂದೆ ಬಾಗಿ ಮಾಡುವ ಈ ಆಸನ ನೆತ್ತಿಯಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ.ಇದು ಮೂತ್ರಕೋಶದ ತೊಂದರೆ,ಚಯಾಪಚಯ ಕ್ರಿಯೆ,ತೂಕ ಕಡಿಮೆ ಮಾಡಿಕೊಳ್ಳಲು,ಹೊಟ್ಟೆಯಲ್ಲಿ ಗ್ಯಾಸ್ ತುಂಬಿದ್ದರೆ ಹೊರಹಾಕಲು ಕೂಡ ಸಹಾಯಕವಾಗುತ್ತದೆ.ಸರಿಯಾದ ಜೀರ್ಣಕ್ರಿಯೆ,ದೇಹದ ಅರೋಗ್ಯ ಕಾಪಾಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಕೂಡ ಸಹಾಯಕ.

ಕಪಲ್ಭತಿ ಪ್ರಾಣಾಯಾಮ
ಈ ಪ್ರಾಣಾಯಾಮ ಮೆದುಳಿನ ಜೀವಕೋಶಗಳಿಗೆ ಆಮ್ಲಜನಕವನ್ನು ಒದಗಿಸಿ,ನರಮಂಡಲವನ್ನು ಸರಿಯಾಗಿರಿಸುತ್ತದೆ.ಇದು ದೇಹದಿಂದ ಟಾಕ್ಸಿನ್ ಅನ್ನು ತೆಗೆದು ಹಾಕಿ ಮಧುಮೇಹ ಮತ್ತು ಒಬೆಸಿಟಿ ವಿರುದ್ಧ ಹೋರಾಡುತ್ತದೆ.ದೇಹದ ಸಮತೋಲನ ಹೆಚ್ಚಿಸಿ ಕೂದಲು ಉದುರುವುದನ್ನು ತಡೆಯುತ್ತದೆ.

ಪಾವನ್ಮುಖ್ತಾಸನ
ಇದು ದೇಹದಲ್ಲಿ ಗ್ಯಾಸ್ ಕಡಿಮೆ ಮಾಡಿ ಜೀರ್ಣಕ್ರಿಯೆ ಹೆಚ್ಚಿಸುತ್ತದೆ.ಬೆನ್ನಿನ ಸ್ನಾಯುಗಳಿಗೆ ಬಲ ನೀಡುತ್ತದೆ.ಇದು ಸೊಂಟ ಮತ್ತು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ.ಜೀರ್ಣಕ್ರಿಯೆ ಸಮತೋಲನ ಹೆಚ್ಚಿಸಿ ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಸರ್ವಾಂಗಾಸನ
ಈ ಆಸನ ಥೈರಾಯಿಡ್ ಗ್ರಂಥಿ ಪೋಷಿಸಲು ಸಹಾಯಕ,ಅಂದರೆ ಆರೋಗ್ಯಕರ ಉಸಿರಾಟ,ನರಮಂಡಲ ಮತ್ತು ಜನನಾಂಗಗಳ ಪೋಷಕಾಂಶ ಹೆಚ್ಚಿಸುತ್ತದೆ.ತಲೆಕೆಳಗಾಗಿ ಮಾಡುವ ಈ ಆಸನ ನೆತ್ತಿಯಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸಿ ಕೂದಲು ಉದುರುವುದನ್ನು ತಡೆಯುತ್ತದೆ.



Click it and Unblock the Notifications