Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಕೂದಲುದುರುವುದನ್ನು ತಡೆಯಲು ಯೋಗಾಸನ
ಯೋಗ ಮತ್ತು ಧ್ಯಾನ ಮಾಡುವುದರಿಂದ ಆರೋಗ್ಯಕರ ಕೂದಲು ಮಾತ್ರವಲ್ಲ,ಮಾನಸಿಕ ಮತ್ತು ದೈಹಿಕವಾಗಿ ಕೂಡ ಆರೋಗ್ಯವಾಗಿರಬಹುದು.ಯೋಗ ಮಾಡುವುದರಿಂದ ನೆತ್ತಿಯಲ್ಲಿ ರಕ್ತಸಂಚಲನ ಸುಗಮವಾಗುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ,ಒತ್ತಡವನ್ನು ಕಡಿಮೆ ಮಾಡುತ್ತದೆ,ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಮುಂದೆ ಬಾಗಿ ಮಾಡುವ ಎಲ್ಲಾ ಆಸನಗಳು ನೆತ್ತಿಯ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ.ಇದು ಕೂದಲಿಗೆ ಪೌಷ್ಟಿಕತೆಯನ್ನು ನೀಡುತ್ತದೆ,ಜೊತೆಗೆ ಯೋಗ ಮಾಡುವುದರಿಂದ ನಿಧಾನವಾಗಿ ಕೂದಲು ಸದೃಢವಾಗುವುದನ್ನು ನೀವು ಗಮನಿಸಬಹುದು.ಈ ಕೆಳಗೆ ಕೆಲವು ಆಸನಗಳನ್ನು ನೀಡಲಾಗಿದೆ.ಓದಿ ನೋಡಿ.

ಅಧೋಮುಖ ಶವಾಸನ
ನಾಯಿಯ ಭಂಗಿಯಲ್ಲಿ ಕೆಳಮುಖವಾಗಿ ಮಾಡುವ ಈ ಆಸನ ತಲೆಗೆ ಹೆಚ್ಚಿನ ರಕ್ತಸಂಚಾರ ನೀಡುತ್ತದೆ,ಇದು ಸೈನಸ್ ಮತ್ತು ಸಾಮಾನ್ಯ ನೆಗಡಿ ಹೋಗಲಾಡಿಸಲು ಸಹಾಯಕ.ಮಾನಸಿಕವಾಗಿ ಬಳಲಿದವರಿಗೆ,ನಿದ್ರಾಹೀನತೆ,ಖಿನ್ನತೆ ಹೋಗಲಾಡಿಸಲು ಕೂಡ ಸಹಾಯಕವಾಗುತ್ತದೆ.

ಉತ್ತಾನಾಸನ
ಕೂದಲು ಉದುರುವುದನ್ನು ತಡೆಯುವುದರ ಜೊತೆಗೆ ಈ ಮುಂದೆ ಬಾಗುವ ಭಂಗಿಯಿಂದಾಗಿ ಆಯಾಸ ಮತ್ತು ಸುಸ್ತು ಕೂಡ ಕಡಿಮೆಯಾಗುತ್ತದೆ.ಈ ಆಸನ ಮೆನೋಪಾಸ್ ಸಮಸ್ಯೆ ಹೋಗಲಾಡಿಸಲು ಮತ್ತು ಜೀರ್ಣ ಕ್ರಿಯೆ ಸುಗಮವಾಗಿ ಆಗಲು ಕೂಡ ಸಹಾಯಕ.

ವಜ್ರಾಸನ
ಇದನ್ನು ಡೈಮಂಡ್ ಆಸನ ಎಂದು ಕರೆಯಲಾಗುತ್ತದೆ.ಈ ಆಸನವನ್ನು ಊಟ ಆದ ತಕ್ಷಣ ಮಾಡಬಹುದು.ಮುಂದೆ ಬಾಗಿ ಮಾಡುವ ಈ ಆಸನ ನೆತ್ತಿಯಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ.ಇದು ಮೂತ್ರಕೋಶದ ತೊಂದರೆ,ಚಯಾಪಚಯ ಕ್ರಿಯೆ,ತೂಕ ಕಡಿಮೆ ಮಾಡಿಕೊಳ್ಳಲು,ಹೊಟ್ಟೆಯಲ್ಲಿ ಗ್ಯಾಸ್ ತುಂಬಿದ್ದರೆ ಹೊರಹಾಕಲು ಕೂಡ ಸಹಾಯಕವಾಗುತ್ತದೆ.ಸರಿಯಾದ ಜೀರ್ಣಕ್ರಿಯೆ,ದೇಹದ ಅರೋಗ್ಯ ಕಾಪಾಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಕೂಡ ಸಹಾಯಕ.

ಕಪಲ್ಭತಿ ಪ್ರಾಣಾಯಾಮ
ಈ ಪ್ರಾಣಾಯಾಮ ಮೆದುಳಿನ ಜೀವಕೋಶಗಳಿಗೆ ಆಮ್ಲಜನಕವನ್ನು ಒದಗಿಸಿ,ನರಮಂಡಲವನ್ನು ಸರಿಯಾಗಿರಿಸುತ್ತದೆ.ಇದು ದೇಹದಿಂದ ಟಾಕ್ಸಿನ್ ಅನ್ನು ತೆಗೆದು ಹಾಕಿ ಮಧುಮೇಹ ಮತ್ತು ಒಬೆಸಿಟಿ ವಿರುದ್ಧ ಹೋರಾಡುತ್ತದೆ.ದೇಹದ ಸಮತೋಲನ ಹೆಚ್ಚಿಸಿ ಕೂದಲು ಉದುರುವುದನ್ನು ತಡೆಯುತ್ತದೆ.

ಪಾವನ್ಮುಖ್ತಾಸನ
ಇದು ದೇಹದಲ್ಲಿ ಗ್ಯಾಸ್ ಕಡಿಮೆ ಮಾಡಿ ಜೀರ್ಣಕ್ರಿಯೆ ಹೆಚ್ಚಿಸುತ್ತದೆ.ಬೆನ್ನಿನ ಸ್ನಾಯುಗಳಿಗೆ ಬಲ ನೀಡುತ್ತದೆ.ಇದು ಸೊಂಟ ಮತ್ತು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ.ಜೀರ್ಣಕ್ರಿಯೆ ಸಮತೋಲನ ಹೆಚ್ಚಿಸಿ ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಸರ್ವಾಂಗಾಸನ
ಈ ಆಸನ ಥೈರಾಯಿಡ್ ಗ್ರಂಥಿ ಪೋಷಿಸಲು ಸಹಾಯಕ,ಅಂದರೆ ಆರೋಗ್ಯಕರ ಉಸಿರಾಟ,ನರಮಂಡಲ ಮತ್ತು ಜನನಾಂಗಗಳ ಪೋಷಕಾಂಶ ಹೆಚ್ಚಿಸುತ್ತದೆ.ತಲೆಕೆಳಗಾಗಿ ಮಾಡುವ ಈ ಆಸನ ನೆತ್ತಿಯಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸಿ ಕೂದಲು ಉದುರುವುದನ್ನು ತಡೆಯುತ್ತದೆ.



Click it and Unblock the Notifications