Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಮಳೆಗಾಲದಲ್ಲಿ ಕಾಯಿಲೆ ಬೀಳದಿರಲು ಇವುಗಳನ್ನು ಪಾಲಿಸಿ
ಮಾನ್ಸೂನ್ ತಿಂಗಳಿನಲ್ಲಿ ಶೀತ, ನೆಗಡಿಯಂತಹ ಕಾಯಿಲೆಗಳು ಸರ್ವೇ ಸಾಮಾನ್ಯ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗೆ ನಮ್ಮ ದೇಹ ಹೊಂದಿಕೊಂಡಿರುವುದಿಲ್ಲ ಆದ್ದರಿಂದ ಕಾಯಿಲೆ ಬೀಳುತ್ತೇವೆ.
ತೇವವಾದ ವಾತಾವರಣ ಸೂಕ್ಷ್ಮಾಣು ಜೀವಿಗಳನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಸ್ವಲ್ಪ ಮುಂಜಾಗ್ರತೆಯಿಂದ ಇರುವುದು ಒಳ್ಳೆಯದು. ಇಲ್ಲಿ ನಾವು ಕೆಲ ಟಿಪ್ಸ್ ನೀಡಿದ್ದೇವೆ. ಇವುಗಳನ್ನು ಪಾಲಿಸಿದರೆ ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಶೀತ, ಕೆಮ್ಮು, ಜ್ವರ ಈ ರೀತಿಯ ಸಾಮಾನ್ಯ ಕಾಯಿಲೆಗಳನ್ನು ದೂರವಿಡಬಹುದು:

ಮಳೆಯಲ್ಲಿ ಒದ್ದೆಯಾಗಬೇಡಿ
ಮೂವಿಯಲ್ಲಿ ಮಳೆಯಲ್ಲಿ ಒದ್ದೆಯಾಗುವುದನ್ನು ನೋಡಿ ಅದರಂತ ನೀವೂ ಮಾಡಬೇಡಿ. ಮಳೆ ನೆನೆಯುವುದು ಖುಷಿಕೊಟ್ಟರೂ ಕೆಲವರಿಗೆ ಮಳೆ ನೆನೆದರೆ ಒಂದು ವಾರ ಕಾಯಿಲೆ ಬೀಳುವವರು. ಆದ್ದರಿಂದ ಮಳೆ ನೆನಯುವ ಆಸೆ ಇದ್ದರೆ ನಿಮ್ಮ ದೇಹ ಸ್ಥಿತಿಯ ಬಗ್ಗೆ ಯೋಚಿಸಿ, ನಂತರ ನಿರ್ಧಾರ ಕೈಗೊಳ್ಳಿ.

ಕುದಿಸಿದ ನೀರು ಕುಡಿಯಿರಿ
ಮಳೆಗಾಲದಲ್ಲಿ ಸಾಕಷ್ಟು ಕಾಯಿಲೆಗಳು ನೀರಿನ ಮುಖಾಂತರ ಬರುತ್ತದೆ. ಆದ್ದರಿಂದ ಕುದಿಸಿದ ನೀರನ್ನು ಮಾತ್ರ ಕುಡಿಯಿರಿ.

ಶುದ್ಧತೆ ಬಗ್ಗೆ ಗಮನವಿರಲಿ
ಪ್ರತೀಬಾರಿ ಮಳೆಯಲ್ಲಿ ಹೊರಗಡೆ ಹೋಗಿ ಬಂದ ಮುಖ, ಕೈ, ಕಾಲು ತೊಳೆಯಲು ಮರೆಯಬೇಡಿ. ಈ ರೀತಿ ಮಾಡುವುದರಿಂದ ರೋಗಾಣುಗಳು ನಿಮ್ಮ ಮೇಲೆ ದಾಳಿ ಮಾಡುವುದನ್ನು ತಡೆಯಬಹುದು. ಅದರಲ್ಲೂ ಬಿಸಿ ನೀರು ಮಳೆ ಕೈ, ಕಾಲು ತೊಳೆಯುವುದು ಒಳ್ಳೆಯದು.

ಸೂಪ್, ಕಷಾಯ
ಈ ಸಮಯದಲ್ಲಿ ಸೂಪ್, ಕಷಾಯ ಇವುಗಳನ್ನು ಮಾಡಿ ಕುಡಿಯುವುದು ಒಳ್ಳೆಯದು. ಇವುಗಳು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಇವುಗಳು ರೋಗಾಣುಗಳ ವಿರುದ್ಧ ಹೋರಾಡಿ, ಕಾಯಿಲೆ ಬೀಳುವುದನ್ನು ತಡೆಗಟ್ಟುತ್ತದೆ.

ಮಳೆಯಲ್ಲಿ ನೆನೆದರೆ ಸ್ನಾನ ಮಾಡಿ
ಮಳೆಯಲ್ಲಿ ನೆನೆದರೆ ಮನೆಗೆ ಬಂದ ತಕ್ಷಣ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ಕಾಯಿಲೆ ಬೀಳುವುದನ್ನು ತಡೆಯಬಹುದು. ಇದರಿಂದ ದೇಹದ ಉಷ್ಣತೆ ಸಮಸ್ಥಿತಿಗೆ ಬಂದು ಶೀತ ಉಂಟಾಗುವುದನ್ನು ತಡೆಯಬಹುದು.

ಸರಿಯಾದ ಸಮಯಕ್ಕೆ ನಿದ್ದೆ ಮಾಡಿ
ಮಳೆಗಾಲದಲ್ಲಿ ನಿದ್ದೆ ಬೇಗನೆ ಬಳಿ ಸುಳಿಯುವುದು, ಟಿವಿ ನೋಡುತ್ತಾ, ಟ್ಯಾಪ್ ಟಾಪ್ ಮುಂದೆ ಕೂರುತ್ತಾ ಸುಂದರ ನಿದ್ದೆ ಹಾಳು ಮಾಡಿ, ಆರೊಗ್ಯ ಹಾಳು ಮಾಡ್ಕೋಬೇಡಿ.

ವ್ಯಾಯಾಮ
ಮಳೆಗಾಲ ಅಂತ ವ್ಯಾಯಾಮಕ್ಕೆ ಬ್ರೇಕ್ ಹಾಕಬೇಡಿ, ಮನೆಯಲ್ಲಿ ವ್ಯಾಯಾಮ ಮಾಡಿ, ಸಮತೂಕವನ್ನು ಕಾಪಾಡಿಕೊಳ್ಳಿ.

ಆಹಾರಗಳು
ಪೋಷಕಾಂಶವಿರುವ ಆಹಾರಗಳನ್ನು ತಿನ್ನಿ. ಅದರಲ್ಲೂ ದೇಹ ಉಷ್ಣತೆ ಹೆಚ್ಚಿಸುವ ಆಹಾರ ತಿನ್ನಿ. ಶುಂಠಿ, ಕರಿ ಮೆಣಸಿನ ಪುಡಿ ಇವೆಲ್ಲಾ ನಿಮ್ಮ ಆಹಾರದಲ್ಲಿ ಇರಲಿ.



Click it and Unblock the Notifications