Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಳೆಗಾಲದಲ್ಲಿ ಕಾಯಿಲೆ ಬೀಳದಿರಲು ಇವುಗಳನ್ನು ಪಾಲಿಸಿ
ಮಾನ್ಸೂನ್ ತಿಂಗಳಿನಲ್ಲಿ ಶೀತ, ನೆಗಡಿಯಂತಹ ಕಾಯಿಲೆಗಳು ಸರ್ವೇ ಸಾಮಾನ್ಯ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗೆ ನಮ್ಮ ದೇಹ ಹೊಂದಿಕೊಂಡಿರುವುದಿಲ್ಲ ಆದ್ದರಿಂದ ಕಾಯಿಲೆ ಬೀಳುತ್ತೇವೆ.
ತೇವವಾದ ವಾತಾವರಣ ಸೂಕ್ಷ್ಮಾಣು ಜೀವಿಗಳನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಸ್ವಲ್ಪ ಮುಂಜಾಗ್ರತೆಯಿಂದ ಇರುವುದು ಒಳ್ಳೆಯದು. ಇಲ್ಲಿ ನಾವು ಕೆಲ ಟಿಪ್ಸ್ ನೀಡಿದ್ದೇವೆ. ಇವುಗಳನ್ನು ಪಾಲಿಸಿದರೆ ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಶೀತ, ಕೆಮ್ಮು, ಜ್ವರ ಈ ರೀತಿಯ ಸಾಮಾನ್ಯ ಕಾಯಿಲೆಗಳನ್ನು ದೂರವಿಡಬಹುದು:

ಮಳೆಯಲ್ಲಿ ಒದ್ದೆಯಾಗಬೇಡಿ
ಮೂವಿಯಲ್ಲಿ ಮಳೆಯಲ್ಲಿ ಒದ್ದೆಯಾಗುವುದನ್ನು ನೋಡಿ ಅದರಂತ ನೀವೂ ಮಾಡಬೇಡಿ. ಮಳೆ ನೆನೆಯುವುದು ಖುಷಿಕೊಟ್ಟರೂ ಕೆಲವರಿಗೆ ಮಳೆ ನೆನೆದರೆ ಒಂದು ವಾರ ಕಾಯಿಲೆ ಬೀಳುವವರು. ಆದ್ದರಿಂದ ಮಳೆ ನೆನಯುವ ಆಸೆ ಇದ್ದರೆ ನಿಮ್ಮ ದೇಹ ಸ್ಥಿತಿಯ ಬಗ್ಗೆ ಯೋಚಿಸಿ, ನಂತರ ನಿರ್ಧಾರ ಕೈಗೊಳ್ಳಿ.

ಕುದಿಸಿದ ನೀರು ಕುಡಿಯಿರಿ
ಮಳೆಗಾಲದಲ್ಲಿ ಸಾಕಷ್ಟು ಕಾಯಿಲೆಗಳು ನೀರಿನ ಮುಖಾಂತರ ಬರುತ್ತದೆ. ಆದ್ದರಿಂದ ಕುದಿಸಿದ ನೀರನ್ನು ಮಾತ್ರ ಕುಡಿಯಿರಿ.

ಶುದ್ಧತೆ ಬಗ್ಗೆ ಗಮನವಿರಲಿ
ಪ್ರತೀಬಾರಿ ಮಳೆಯಲ್ಲಿ ಹೊರಗಡೆ ಹೋಗಿ ಬಂದ ಮುಖ, ಕೈ, ಕಾಲು ತೊಳೆಯಲು ಮರೆಯಬೇಡಿ. ಈ ರೀತಿ ಮಾಡುವುದರಿಂದ ರೋಗಾಣುಗಳು ನಿಮ್ಮ ಮೇಲೆ ದಾಳಿ ಮಾಡುವುದನ್ನು ತಡೆಯಬಹುದು. ಅದರಲ್ಲೂ ಬಿಸಿ ನೀರು ಮಳೆ ಕೈ, ಕಾಲು ತೊಳೆಯುವುದು ಒಳ್ಳೆಯದು.

ಸೂಪ್, ಕಷಾಯ
ಈ ಸಮಯದಲ್ಲಿ ಸೂಪ್, ಕಷಾಯ ಇವುಗಳನ್ನು ಮಾಡಿ ಕುಡಿಯುವುದು ಒಳ್ಳೆಯದು. ಇವುಗಳು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಇವುಗಳು ರೋಗಾಣುಗಳ ವಿರುದ್ಧ ಹೋರಾಡಿ, ಕಾಯಿಲೆ ಬೀಳುವುದನ್ನು ತಡೆಗಟ್ಟುತ್ತದೆ.

ಮಳೆಯಲ್ಲಿ ನೆನೆದರೆ ಸ್ನಾನ ಮಾಡಿ
ಮಳೆಯಲ್ಲಿ ನೆನೆದರೆ ಮನೆಗೆ ಬಂದ ತಕ್ಷಣ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ಕಾಯಿಲೆ ಬೀಳುವುದನ್ನು ತಡೆಯಬಹುದು. ಇದರಿಂದ ದೇಹದ ಉಷ್ಣತೆ ಸಮಸ್ಥಿತಿಗೆ ಬಂದು ಶೀತ ಉಂಟಾಗುವುದನ್ನು ತಡೆಯಬಹುದು.

ಸರಿಯಾದ ಸಮಯಕ್ಕೆ ನಿದ್ದೆ ಮಾಡಿ
ಮಳೆಗಾಲದಲ್ಲಿ ನಿದ್ದೆ ಬೇಗನೆ ಬಳಿ ಸುಳಿಯುವುದು, ಟಿವಿ ನೋಡುತ್ತಾ, ಟ್ಯಾಪ್ ಟಾಪ್ ಮುಂದೆ ಕೂರುತ್ತಾ ಸುಂದರ ನಿದ್ದೆ ಹಾಳು ಮಾಡಿ, ಆರೊಗ್ಯ ಹಾಳು ಮಾಡ್ಕೋಬೇಡಿ.

ವ್ಯಾಯಾಮ
ಮಳೆಗಾಲ ಅಂತ ವ್ಯಾಯಾಮಕ್ಕೆ ಬ್ರೇಕ್ ಹಾಕಬೇಡಿ, ಮನೆಯಲ್ಲಿ ವ್ಯಾಯಾಮ ಮಾಡಿ, ಸಮತೂಕವನ್ನು ಕಾಪಾಡಿಕೊಳ್ಳಿ.

ಆಹಾರಗಳು
ಪೋಷಕಾಂಶವಿರುವ ಆಹಾರಗಳನ್ನು ತಿನ್ನಿ. ಅದರಲ್ಲೂ ದೇಹ ಉಷ್ಣತೆ ಹೆಚ್ಚಿಸುವ ಆಹಾರ ತಿನ್ನಿ. ಶುಂಠಿ, ಕರಿ ಮೆಣಸಿನ ಪುಡಿ ಇವೆಲ್ಲಾ ನಿಮ್ಮ ಆಹಾರದಲ್ಲಿ ಇರಲಿ.



Click it and Unblock the Notifications











