Latest Updates
-
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು!
ಬೇಸಿಗೆಯಲ್ಲಿ ಈ ಆಹಾರಗಳನ್ನು ದೂರ ಮಾಡಬೇಡಿ!
ಬೇಸಿಗೆಯಲ್ಲಿ ನೀರಿನಂಶ ಅಧಿಕವಿರುವ ಹಣ್ಣು, ತರಕಾರಿಗಳನ್ನು ತಿನ್ನಬೇಕು. ಇದರಿಂದ ದೇಹದಲ್ಲಿ ಉಷ್ಣತೆಯನ್ನು ಸಮತೋಲನದಲ್ಲಿಡಬಹುದು. ಅದರಲ್ಲೂ ಸೀಸನ್ ಫುಡ್ಸ್ (ಆಯಾ ಆಯಾ ಕಾಲಕ್ಕೆ ಬೆಳೆಯುವ ಆಹಾರಗಳು) ಅಧಿಕ ತಿನ್ನಬೇಕು. ಶೀತಲೀಕರಣ ಮಾಡಿದ ಆಹಾರಗಳನ್ನು ದೂರವಿಡಿ.
ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಅಜೀರ್ಣ, ಮಲಬದ್ಧತೆ, ಪೈಲ್ಸ್, ಕಿಡ್ನಿಯಲ್ಲಿ ಕಲ್ಲು ಈ ರೀತಿಯ ಸಮಸ್ಯೆಗಳು ಕಂಡು ಬರಬಹುದು. ಅದಲ್ಲದೆ ಬೇಸಿಗೆಯಲ್ಲಿ ಮೈ ಬೆವರುವುದರಿಂದ ದೇಹಕ್ಕೆ ಅಧಿಕ ನೀರಿನಂಶ ಅವಶ್ಯಕ. ಆದ್ದರಿಂದ ಅಧಿಕ ನೀರಿನಂಶವಿರುವ ಆಹಾರಗಳನ್ನು ತಿನ್ನಲು ಮರೆಯಬೇಡಿ.
ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಈ ಕೆಳಗಿನ ಆಹಾರಗಳನ್ನು ತಿನ್ನುವುದು ಒಳ್ಳೆಯದು:

ಟೊಮೆಟೊ
ಟೊಮೆಟೊದಲ್ಲಿ ಪೊಟಾಷ್ಯಿಯಂ, ಲೈಕೊಪೆನೆ, ವಿಟಮಿನ್ ಸಿ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಟೊಮೆಟೊ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಇರುತ್ತದೆ. ಇದನ್ನು ಆಹಾರಕ್ರಮದಲ್ಲಿ ಸೇರಿಸಲು ಮರೆಯಬೇಡಿ.

ಕ್ಯಾರೆಟ್
ಬೆಳಗ್ಗೆ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿದರೆ ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುವುದರಿಂದ ತ್ವಚೆಯೂ ಆಕರ್ಷಕವಾಗಿರುತ್ತದೆ, ನಿರ್ಜಲೀಕರಣ ಕೂಡ ಉಂಟಾಗುತ್ತದೆ.

ನೂಕೋಲು ಮತ್ತು ಮೂಲಂಗಿ
ನೂಕೋಲು ಹಾಗೂ ಮೂಲಂಗಿಯನ್ನು ತಿಂದರೆ ಇದು ರಕ್ತವನ್ನು ಶುದ್ಧ ಮಾಡುತ್ತದೆ, ಅಲ್ಲದೆ ಮಲಬದ್ಧತೆ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ.

ಸೌತೆಕಾಯಿ
ಸೌತೆಕಾಯಿಯನ್ನು ತಿಂದರೆ ಬಾಯಾರಿಕೆಯನ್ನು ನೀಗಿಸುವುದು ಮಾತ್ರವಲ್ಲ, ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುತ್ತದೆ.

ಕಿತ್ತಳೆ
ಪ್ರತೀದಿನ ಒಂದು ಕಿತ್ತಳೆ ತಿಂದರೆ ಇದರಲ್ಲಿ ನೀರಿನಂಶ ಹಾಗೂ ನಾರಿನಂಶ, ವಿಟಮಿನ್ ಸಿ ಇರುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು.

ಪೈನಾಪಲ್
ಪೈನಾಪಲ್ ಕೂಡ ಬೇಸಿಗೆಯಲ್ಲಿ ತಿನ್ನಲು ಸೂಕ್ತವಾದ ಹಣ್ಣಾಗಿದೆ. ಆದರೆ ಗರ್ಭಿಣಿಯರು ಮಾತ್ರ ಈ ಹಣ್ಣನ್ನು ಮುಟ್ಟಲೇಬಾರದು.

ಕಲ್ಲಂಗಡಿ
ಇದು ಅತ್ಯಧಿಕ ನೀರಿನಂಶ ಇರುವ ಹಣ್ಣಾಗಿದೆ. ಬೇಸಿಗೆಯಲ್ಲಿ ತಮ್ಮ ದಿನ ನಿತ್ಯದ ಆಹಾರಕ್ರಮದಲ್ಲಿ ಈ ಹಣ್ಣು ಕೂಡ ಇರುವುದು ಒಳ್ಳೆಯದು. ಮಧುಮೇಹ ಇರುವವರು ಈ ಹಣ್ಣನ್ನು ತಿನ್ನಬಾರದು.

ಸ್ಟ್ರಾಬೆರಿ
ಸ್ಟ್ರಾಬೆರಿಯಲ್ಲಿ ವಿಟಮಿನ್, ಪ್ರೊಟೀನ್, ಅಯೋಡಿನ್,ಪೋಷಕಾಂಶಗಳು ಅಧಿಕವಾಗಿದೆ.

ದ್ರಾಕ್ಚಿ
ದ್ರಾಕ್ಷಿ ತಿಂದರೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ನಿರ್ಜಲೀಕರಣ ಹಾಗೂ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ದ್ರಾಕ್ಷಿಯನ್ನು ಮಧುಮೇಹ ಇರುವವರು ಮಿತಿಯಲ್ಲಿ ತಿನ್ನಬಹುದು.



Click it and Unblock the Notifications











