Latest Updates
-
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್! -
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ?
ಹೊಸವರ್ಷಕ್ಕೆ 24 ಕ್ಯಾರೆಟ್ ರೆಸಲ್ಯೂಷನ್ನುಗಳು
ಜನವರಿ ಬಂತಂದ್ರೆ ಸಾಕಪ್ಪಾ. ನಮ್ಮ ಫ್ರೆಂಡ್ಸ್ ಹೊಸ ಹೊಸ ಸಂಕಲ್ಪಗಳನ್ನು ಕೈಗೊಳ್ಳುತ್ತಲೇ ಇರ್ತಾರೆ. ಕೆಲವು ವರ್ಕ್ ಔಟ್ ಆಗತ್ತೆ, ಇನ್ನು ಕೆಲವು ಶಟ್ ಅಪ್ ಆಗತ್ತೆ.
ನಮ್ಮ ದೇಶದಲ್ಲಿ ಸಂಕಲ್ಪಗಳಿಗೆ ಬರಗಾಲವಿಲ್ಲ. ಪ್ರತೀ ವರ್ಷ ಈ ರಿಚ್ಯುವಲ್ ಇದ್ದದ್ದೇ. ಹಳೇ ಚಾಳಿಗೆ ಗುಡ್ ಬೈ ಹೇಳುವುದು, ಹೊಸ ಜೀವನಶೈಲಿಗೆ ಹೊಂದಿಕೊಳ್ಳುವ ಆಕಾಂಕ್ಷೆಗಳನ್ನು ವ್ಯಕ್ತಪಡಿಸುವುದು ತುಂಬಾ ಕಾಮನ್.
ಕೆಲವರು ನಿಜಕ್ಕೂ ಸೀರಿಯಸ್. ಹಲವರು ತುಂಬಾ ಕ್ಯಾಷುವಲ್. ಹೊಸ ವರ್ಷದ ಹಬೆಯಲ್ಲಿ ಕೆಲವು ಸಂಕಲ್ಪಗಳು ಬೇಯುವುದಿಲ್ಲ. ಅವುಗಳ ಆಯಸ್ಸು ಕಡಿಮೆ. ಬೀರಿನ ನೊರೆಯಂತೆ ಹಾಗೆ ಕರಗಿ ಹೋಗತ್ವೆ. ತಾವೇ ಕೈಗೊಂಡ ತೀರ್ಮಾನಗಳಿಗೆ ತಾವೇ ಎಳ್ಳುನೀರು ಬಿಡುವ ರೆಸಲ್ಯೂಷನ್ ಶೂರರ ಬಗ್ಗೆ ನಾವು ಹೆಚ್ಚಿಗೆ ಹೇಳುವುದೇನಿಲ್ಲ.
ಆದರೆ, ತಮ್ಮ ಹೊಸ ವರ್ಷದ ಠರಾವುಗಳಿಗೆ ತಾವೇ ಬದ್ಧರಾಗುತ್ತಾ ಹೊಸ ಜೀವನ ಶೈಲಿಗೆ ಮೈಮನಗಳನ್ನು ಒಗ್ಗಿಸಿಕೊಳ್ಳಲು ಇದೇ ಈಗಷ್ಟೆ ಆರಂಭಿಸಿರುವ ಗಟ್ಟಿ ಮನಸ್ಸುಗಳಿಗೆ ಸ್ಪೆಷಲ್ ಹ್ಯಾಪಿ ನ್ಯೂ ಇಯರ್ ಹೇಳುತ್ತಿದ್ದೇವೆ. ಜತೆಗೆ, ಆರೋಗ್ಯದ ಕಡೆ ನಿಗಾ ಇಡುವ ನಮ್ಮ ವಾಹಿನಿಯ ಓದುಗ ಸಮುದಾಯಕ್ಕೆ ಕೆಲವು ಹೆಲ್ತಿ ಹೆಲ್ತಿ ಕಿವಿಮಾತುಗಳನ್ನು ಹೇಳಲಾಗಿದೆ.
ಓದಿ : ಆರೋಗ್ಯವೂ ನಿಮ್ಮದೇ, ಭಾಗ್ಯವೂ ನಿಮ್ಮದೇ. ಗುಡ್ ಲಕ್ ಟು ಯು ಅಂಡ್ ಟು ಯುವರ್ ಬಿಲವೆಡ್ಸ್.

1. ಸಮತೂಕದ ದೇಹ
ದಪ್ಪಗಿದ್ದವರು ದೇಹದ ತೂಕವನ್ನು ಇಳಿಸಿಕೊಳ್ಳಬೇಕು, ತೆಳ್ಳಗಿದ್ದವರು ಸ್ವಲ್ಪ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕು. ಒಟ್ಟಿನಲ್ಲಿ ಸಮತೂಕದ ಮೈಕಟ್ಟು ಹೊಂದುವ ನಿರ್ಧಾರ ಮಾಡಬೇಕು. ಸಮತೂಕದ ಮೈಕಟ್ಟಿನಿಂದ ಒಬೆಸಿಟಿ, ಮಂಡಿ ನೋವು ಮುಂತಾದ ಅನೇಕ ಸಮಸ್ಯೆಗಳನ್ನು ದೂರ ಇಡಬಹುದು.

2. ವ್ಯಾಯಾಮ
ದಿನದಲ್ಲಿ ಅರ್ಧ ಗಂಟೆ ವ್ಯಾಯಮಕ್ಕಾಗಿ ಮೀಸಲಿಡುವೆ ಎಂಬ ಪ್ರತಿಜ್ಞೆ ಮಾಡಿ. ದಿನದಲ್ಲಿ ಅರ್ಧ ಗಮಟೆ ವ್ಯಾಯಾಮ ಮಾಡಿದರೆ ನೀವು ದಿನಾ ಪೂರ್ತಿ ಚಟುವಟಿಕೆಯಿಂದ ಇರುವಿರಿ ಹಾಗೂ ದೇಹದ ಆರೋಗ್ಯ ಕೂಡ ಹೆಚ್ಚಾಗುತ್ತದೆ.

3. ಎಲ್ಲರ ಜೊತೆ ಉತ್ತಮ ಸಂಬಂಧದಿಂದ ಇರಿ
ಕುಟುಂಬದಲ್ಲಿ ಎಲ್ಲರ ಜೊತೆ ಉತ್ತಮವಾಗಿ ವರ್ತಿಸುವುದು, ಆದಷ್ಟೂ ಯಾರಿಗೂ ನೋವು ಮಾಡದಿರುವುದು, ಹಳೆಯ ಸ್ನೇಹಿತರ ಜೊತೆ ಟಚ್ ನಲ್ಲಿರುವುದು, ಸಾಮಾಜಿಕ ಬಂಧವನ್ನು ಸರಿಯಾಗಿ ಇಟ್ಟುಕೊಳ್ಳುವುದು ಮಾಡಿದರೆ ನಿಮ್ಮ ಮನಸ್ಸಿಗೆ ಆನಂದ ಸಿಗುತ್ತದೆ ಹಾಗೂ ನೀವೂ ಬೆಳೆಯುವಿರಿ.

4. ಕೆಟ್ಟ ಚಟಗಳು
ಸ್ನೇಹಿತರ ಜೊತೆ ಸೇರಿ ಮೋಜು ಮಾಡುವಾಗ ಖುಷಿಯಾದರೂ ನಂತರ ಇದರಿಂದ ಉಂಟಾಗುವ ತೊಂದರೆಗಳನ್ನು ನೀವು ಒಬ್ಬರೇ ಅನುಭವಿಸಬೇಕೆಂಬುದನ್ನು ಮರೆಯಬೇಡಿ.

5. ಹಣವನ್ನು ಉಳಿಸಿಕೊಳ್ಳಿ
ಹಣ ಇಲ್ಲದಿದ್ದರೆ ಚಿಂತೆ -ಪ್ರಾರಂಭವಾಗುತ್ತದೆ ಆದ್ದರಿಂದ ಬಂದ ಸಂಬಳನ್ನು ಸಂಪೂರ್ಣವಾಗಿ ಖರ್ಚು ಮಾಡದೆ ಸ್ವಲ್ಪ ಉಳಿಸಲು ನೋಡಿ. ನಾನಂತೂ ಈ ವಿಷಯದ ಬಗ್ಗೆ ತುಂಬಾ ಸೀರಿಯಸ್ ಆಗಿ ನಿರ್ಧಾರ ಕೈಗೊಂಡಿದ್ದೇನೆ.

6. ಒತ್ತಡ
ಮಾನಸಿಕ ಒತ್ತಡ ಎಲ್ಲರಿಗೆ ಬಂದೇ ಬರುತ್ತದೆ. ಇದರಿಂದ ಹೊರಬರಲು ಪ್ರಯತ್ನಿಸಬೇಕು. ಧ್ಯಾನ, ಸಂಗೀತವನ್ನು ಕೇಳುವುದು, ಬುಕ್ ಓದುವುದು ಹೀಗೆ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

7. ನಿದ್ದೆ
ಈ ವರ್ಷ ನಿದ್ದೆಗೆ ಮೋಸ ಮಾಡಬೇಡಿ. ದಿನದಲ್ಲಿ 7-8 ಗಂಟೆ ನಿದ್ದೆ ಮಾಡಿ, ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

8. ಪ್ರಯಾಣ
ಕೆಲಸದ ನಡುವೆ ಸ್ವಲ್ಪ ಬ್ರೇಕ್ ತೆಗೆದುಕೊಂಡು ಪ್ರಯಾಣ ಮಾಡುವುದು, ಸಾಹಸಿ ಕ್ರೀಡೆಗಳನ್ನು ಆಡುವುದು ಮಾಡಿ. ಇದರಿಂದ ನಿಮ್ಮ ಚಿಂತೆಗಳನ್ನು ಬದಿಗಿಟ್ಟು ಸಂತೋಷವನ್ನು ಅನುಭವಿಸಬಹುದು. ಒಟ್ಟಿನಲ್ಲಿ ಧನಾತ್ಮಕವಾಗಿ ಯೋಚಿಸಿ, ಕನಸ್ಸು ಕಾಣಿರಿ ಹಾಗೂ ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಿ.



Click it and Unblock the Notifications