Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಮೂರ್ಛೆರೋಗಕ್ಕೆ ಇಲ್ಲಿದೆ ಮನೆ ಮದ್ದು
ಮೂರ್ಛೆರೋಗ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಮೆದುಳಿನ ನರಗಳು ತಪ್ಪಾದ ಸಂದೇಶವನ್ನು ಕಳುಹಿಸಿ ಅದು ದೇಹದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಮೂಡ್ ಬದಲಾಗುತ್ತದೆ, ಪ್ರಜ್ಞೆ ತಪ್ಪುವುದು, ದೇಹದ ಕಾರ್ಯಗಳು ನಿಧಾನವಾಗುವುದು.
ಮೂರ್ಛೆರೋಗ ಚಿಕ್ಕ ಮಕ್ಕಳಲ್ಲಿ ಕಂಡು ಬರಬಹುದು, ದೊಡ್ಡವರಲ್ಲಿಯೂ ಕಂಡು ಬರಬಹುದು. ದೇಹದ ನರಗಳ ಕಾರ್ಯವನ್ನು ನಿರ್ವಹಿಸಲು ಮೆದುಳು ಸಂದೇಶವನ್ನು ಕಳುಹಿಸುತ್ತದೆ. ಮೆದುಳು ಸಂದೇಶ ಕಳುಹಿಸದಿದ್ದಾಗ ಈ ರಿತಿಯ ಮೂರ್ಛೆರೋಗ ಕಂಡು ಬರುವುದು.
ಮೂರ್ಛೆರೋಗ ಉಂಟಾದಾಗ ಕೆಲವರು ಮೂತ್ರವಿಸರ್ಜನೆ ಮಾಡಿ ಬಿಡುತ್ತಾರೆ. ಬಾಯಿಯಲ್ಲಿ ಜೊಲ್ಲು ಬರಲಾರಂಭಿಸುತ್ತದೆ. ಈ ಸಮಯದಲ್ಲಿ ಕೀ ಅವರ ಕೈಗೆ ಕೊಟ್ಟರೆ ಚೇತರಿಸಿಕೊಳ್ಳುತ್ತಾರೆ. ವ್ಯಕ್ತಿ ಮೂರ್ಛೆ ತಪ್ಪಿ ಬಿದ್ದಾಗ ಜನರು ಸುತ್ತುವರೆದು ಅವರಿಗೆ ಗಾಳಿ ಸಿಗದಂತೆ ಮಾಡಬಾರದು, ಗುಂಪು ಸೇರಿದ ಜನರನ್ನು ದೂರ ಮಾಡಿ ಗಾಳಿಯಾಡಲು ಅವಕಾಶ ಮಾಡಿಕೊಡಬೇಕು, ಅವರು ಬಿಗಿಯಾದ ಡ್ರೆಸ್ ಧರಿಸಿದ್ದರೆ ಅದನ್ನು ಸ್ವಲ್ಪ ಸಡಿಲ ಮಾಡಿ, ಅವರ ಪಾದಗಳನ್ನು ಉಜ್ಜಿದರೆ ಬೇಗನೆ ಚೇತರಿಸಿಕೊಳ್ಳುತ್ತಾರೆ.
ಮೂರ್ಛೆರೋಗ ಇರುವವರು ಆರ್ಯುವೇದದ ಔಷಧಿ ಬಳಸಿದರೆ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಮೂರ್ಛೆರೋಗಕ್ಕೆ ಇಲ್ಲಿ ಕೆಲವು ಮನೆ ಮದ್ದು ನೀಡಿದ್ದೇವೆ ನೋಡಿ:

ಎಪ್ಸೋಮ್ ಸಾಲ್ಟ್(Epsom salt)
ದೇಹದಲ್ಲಿ ಮ್ಯಾಗ್ನಿಷಿಯಂ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಎಪ್ಟೋಮ್ ಉಪ್ಪಿನಲ್ಲಿ ಮ್ಯಾಗ್ನಿಷಿಯಂ ಇದ್ದು ಇದು ಮೆದುಳು ನರಗಳಿಗೆ ಎಲೆಕ್ಟ್ರಿಕಲ್ ಸಂದೇಶ ಕಳುಹಿಸುವಂತೆ ಮಾಡಿ, ನರಗಳು ತನ್ನ ಕಾರ್ಯಗಳನ್ನು ಸರಿಯಾದ ನಿರ್ವಹಿಸಲು ಸಹಾಯ ಮಾಡುವುದು.

ಎಳನೀರು
ಎಳನೀರು ಕೂಡ ಮೂರ್ಛೆರೋಗಕ್ಕೆ ಉತ್ತಮವಾದ ಮನೆ ಮದ್ದಾಗಿದೆ. ದೇಹದಲ್ಲಿ ನೀರಿನಂಶ ಇರುವವರು ತಪ್ಪದೆ ಎಳನೀರು ಕುಡಿಯುವುದು ಒಳ್ಳೆಯದು.

ನೀರು ಮತ್ತು ಜ್ಯೂಸ್
ಸಾಕಷ್ಟು ನೀರು ಮತ್ತು ಜ್ಯೂಸ್ ಕುಡಿಯಬೇಕು. ಅದರಲ್ಲೂ ಬೂದು ಕುಂಬಳಕಾಯಿ ಜ್ಯೂಸ್ ಮೂರ್ಛೆರೋಗ ತಡೆಯಲು ಸೂಕ್ತವಾದ ಮನೆಮದ್ದು.

ಬೂದು ಕುಂಬಳಕಾಯಿಯ ರಸ
ಬೂದು ಕುಂಬಳ ಕಾಯಿಯ ರಸವನ್ನು ಹಿಂಡಿ, ಆ ರಸಕ್ಕೆ liquorice powder(ಜ್ಯೇಷ್ಠ ಮಧುವಿನ ಬೇರಿನ ರಸದಿಂದ ತಯಾರಿಸಿದ ಕಪ್ಪು ಪದಾರ್ಥ) ಸೇರಿಸಿ ಪ್ರತೀದಿನ ಕುಡಿಯಬೇಕು. ಈ ರೀತಿ ಮಾಡಿದರೆ ಮೂರ್ಛೆರೋಗ ಗುಣಮುಖವಾಗುವುದು.

ಹಾಲು
ಪ್ರತೀದಿನ ಹಾಲು ಕುಡಿಯಿರಿ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕೂಡ ಮೂರ್ಛೆರೋಗ ತರಬಹುದು.

ಬೆಳ್ಳುಳ್ಳಿ
ಬೆಳ್ಳುಳ್ಳಿ ಮೂರ್ಛೆರೋಗವನ್ನು ಒಳಗೊಂಡು ಇತರ ಅನೇಕ ಕಾಯಿಲೆಗಳನ್ನು ಗುಣ ಪಡಿಸುವಲ್ಲಿ ತುಂಬಾ ಪರಿಣಾಮಕಾರಿ. ಹಾಲನ್ನು ಕುದಿಸಿ, ಅದರಲ್ಲಿ ಜಜ್ಜಿದ ಬೆಳ್ಳುಳ್ಳಿ ಹಾಕಿ ಕುಡಿದರೆ ಆಗಾಗ ಮೂರ್ಛೆತಪ್ಪಿ ಬೀಳುವುದಿಲ್ಲ.

ತೆಂಗಿನೆಣ್ಣೆ
ತೆಂಗಿನೆಣ್ಣೆಯನ್ನು ಆಹಾರದ ಜೊತೆ ಹಾಕಿ ತಿನ್ನುವುದು ಕೂಡ ಮೂರ್ಛೆರೋಗ ಬರದಂತೆ ತಡೆಯುವಲ್ಲಿ ಸಹಕಾರಿ.

ತ್ರಿಫಲಾ ಚೂರ್ಣ
ಮೂರ್ಛೆರೋಗ ತಡೆಯಲು ಸರಿಯಾದ ಜೀರ್ಣಕ್ರಿಯೆ ಕೂಡ ಸಹಕಾರಿ. ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಅರ್ಧ ಚಮಚ ತ್ರಿಫಲಾ ಚೂರ್ಣವನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯುವುದು ಒಳ್ಳೆಯದು.

ಬ್ರಾಹ್ಮೀ ಎಲೆ
ಒಂದು ಗ್ಲಾಸ್ ಹಾಲು ಕುಡಿದ ಬಳಿಕ ಬ್ರಾಹ್ಮೀ ಎಲೆಯನ್ನು ತಿನ್ನುವುದು ಕೂಡ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications











