Latest Updates
-
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ!
ಸೂರ್ಯಾಘಾತಕ್ಕೆ (ಸನ್ ಸ್ಟ್ರೋಕ್) ಮನೆಮದ್ದು
ಸೂರ್ಯಾಘಾತ ಎಂದು ಕೇಳಿದ್ದೀರಾ? ಬಿಸಿಲಿನ ತಾಪ ಹೆಚ್ಚಾಗಿ ಜನರು ಮೃತ ಪಟ್ಟ ಸುದ್ಧಿಯನ್ನು ನೀವು ಕೇಳಿರಬಹುದು. ಇದು ಸೂರ್ಯಾಘಾತದಿಂದ ಉಂಟಾಗುವುದು. ವಾತಾವರಣ ತುಂಬಾ ಬಿಸಿಯಿದ್ದಾಗ ಸನ್ ಸ್ಟ್ರೋಕ್ ಅಥವಾ ಸೂರ್ಯಾಘಾತವಾಗುವುದು, ಅಂದರೆ ದೇಹದ ಉಷ್ಣತೆ ಹೆಚ್ಚಿ ವ್ಯಕ್ತಿ ಕೋಮಾಕ್ಕೆ ಹೋಗಬಹುದು. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾವು ಕೂಡ ಬರಬಹುದು.
ತುಂಬಾ ಬಿಸಿಲಿನಲ್ಲಿ ಓಡಾಡಿದರೆ ದೇಹದ ಉಷ್ಣತೆ 40 ಡಿಗ್ರಿ ಸೆ. ಗಿಂತ ಅಧಿಕವಾದರೆ ಸುಸ್ತು, ತಲೆಸುತ್ತು, ವಾಂತಿ ಮುಂತಾದ ಸಮಸ್ಯೆಗಳು ಕಂಡು ಬರುವುದು. ಇದು ಸೂರ್ಯಾಘಾತದ ಲಕ್ಷಣಗಳಾಗಿವೆ. ಮದ್ಯಪಾನ, ಸಾಕಷ್ಟು ನೀರು ಕುಡಿಯದಿರುವುದು, ಜ್ವರ ಇದ್ದಾಗ ಕೆಲಸ ಮಾಡುವುದು ಮಾಡಿದರೆ ಹೃದಯಾಘಾತ, ಸೂರ್ಯಾಘಾತ ಮುಂತಾದ ಸಮಸ್ಯೆ ಉಂಟಾಗುವುದು.
ಇಲ್ಲಿ ನಾವು ಸೂರ್ಯಾಘಾತದಿಂದ ಪಾರಾಗಲು ಕೆಲ ಮನೆಮದ್ದು ನೀಡಿದ್ದೇವೆ ನೋಡಿ:

ಈರುಳ್ಳಿ
ಉಷ್ಣವನ್ನು ಹೀರಿಕೊಳ್ಳುವಲ್ಲಿ ಈರುಳ್ಳಿ ತುಂಬಾ ಸಹಾಯಕಾರಿ. ಬಿಳಿ ಈರುಳ್ಳಿಯನ್ನು ಜೇಬಿನಲ್ಲಿಟ್ಟರೆ ಇದು ದೇಹದ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಸನ್ ಸ್ಟ್ರೋಕ್ ಉಂಟಾದರೆ ಈರುಳ್ಳಿಯನ್ನು ಪೇಸ್ಟ್ ಮಾಡಿ ಹಚ್ಚಿದರೆ ಬೇಗನೆ ಗುಣಮುಖವಾಗುವುದು.

ಮೆಂತೆ ಎಲೆ
ಮೆಂತೆ ಎಲೆ ಸನ್ ಸ್ಟ್ರೋಕ್ ಗೆ ಸೂಪರ್ ಮನೆಮದ್ದಾಗಿದೆ. ದೇಹದ ಉಷ್ಣತೆ ಹೆಚ್ಛಾದರೆ ಮೆಂತೆ ಎಲೆಯನ್ನು ಒಣಗಿಸಿ ಅದನ್ನು ಮಾಡಿ, ತಣ್ಣೀರಿನಲ್ಲಿ ಹಾಕಿಟ್ಟು, ನಂತರ ಕೈಯಿಂದ ಹಿಸುಕಿ ಜೇನು ಸೇರಿಸಿ ರೋಗಿಗೆ ಕೊಡಬೇಕು. ಈ ರೀತಿ ಪ್ರತೀ 2 ಗಂಟೆಗೊಮ್ಮೆ ಕೊಟ್ಟರೆ ಅಪಾಯದಿಂದ ಪಾರಾಗಬಹುದು.

ಮಜ್ಜಿಗೆ
ದೇಹದ ಉಷ್ಣತೆಯನ್ನು ಕಮ್ಮಿ ಮಾಡಲು ದಿನದಲ್ಲಿ 3-4 ಲೋಟ ಮಜ್ಜಿಗೆ ಕುಡಿಯುವುದು ಒಳ್ಳೆಯದು.

ಹಣ್ಣುಗಳು
ದೇಹವನ್ನು ತಂಪಾಗಿಡುವ ಹಣ್ಣುಗಳನ್ನು, ನೀರಿನಂಶ ಅಧಿಕವಿರುವ ತರಕಾರಿಗಳನ್ನು ತಿನ್ನುವುದು ಒಳ್ಳೆಯದು.

ಕಾಯಿ ಮಾವಿನಕಾಯಿ
ಕಾಯಿ ಮಾವಿನಕಾಯಿಗೆ ರೋಸ್ಟ್ ಮಾಡಿದ ಜೀರಿಗೆ, ಬ್ಲ್ಯಾಕ್ ಸಾಲ್ಟ್, ಸ್ವಲ್ಪ ಕರಿ ಮೆಣಸಿನ ಪುಡಿ, ಸಕ್ಕರೆ ಹಾಕಿ ಬೇಯಿಸಿ, ಆ ನೀರು ಕುಡಿಯುವುದು ಒಳ್ಳೆಯದು. ಇದನ್ನು ಸನ್ ಸ್ಟ್ರೋಕ್ ಬಂದಾಗ ಮಾತ್ರವಲ್ಲ, ಸನ್ ಸ್ಟ್ರೋಕ್ ಬರದಂತೆ ತಡೆಯಲು ಕುಡಿಯುವುದು ಒಳ್ಳೆಯದು.

ಹುಣಸೆ ಬೀಜ
ಹುಣಸೆ ಬೀಜ ಸೂರ್ಯಾಘಾತ ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ. ಹುಣಸೆ ಹಣ್ಣಿನ ಬೀಜವನ್ನು ಸ್ವಲ್ಪ ಸಕ್ಕರೆ ಮತ್ತು ನೀರು ಹಾಕಿ ಗ್ರೈಂಡ್ ಮಾಡಿ ಕುಡಿಯುವುದು ಒಳ್ಳೆಯದು.

ನೀರು
ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯದಿದ್ದರೆ ಅನೇಕ ಅನಾರೋಗ್ಯಕರ ಸಂಬಂಧಗಳು ಎದುರಾಗುವುದು. ಆದ್ದರಿಂದ ನೀರು, ಜ್ಯೂಸ್ ಇವುಗಳನ್ನು ಕುಡಿಯಲು ಮರೆಯಬೇಡಿ.



Click it and Unblock the Notifications