Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಸೂರ್ಯಾಘಾತಕ್ಕೆ (ಸನ್ ಸ್ಟ್ರೋಕ್) ಮನೆಮದ್ದು
ಸೂರ್ಯಾಘಾತ ಎಂದು ಕೇಳಿದ್ದೀರಾ? ಬಿಸಿಲಿನ ತಾಪ ಹೆಚ್ಚಾಗಿ ಜನರು ಮೃತ ಪಟ್ಟ ಸುದ್ಧಿಯನ್ನು ನೀವು ಕೇಳಿರಬಹುದು. ಇದು ಸೂರ್ಯಾಘಾತದಿಂದ ಉಂಟಾಗುವುದು. ವಾತಾವರಣ ತುಂಬಾ ಬಿಸಿಯಿದ್ದಾಗ ಸನ್ ಸ್ಟ್ರೋಕ್ ಅಥವಾ ಸೂರ್ಯಾಘಾತವಾಗುವುದು, ಅಂದರೆ ದೇಹದ ಉಷ್ಣತೆ ಹೆಚ್ಚಿ ವ್ಯಕ್ತಿ ಕೋಮಾಕ್ಕೆ ಹೋಗಬಹುದು. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾವು ಕೂಡ ಬರಬಹುದು.
ತುಂಬಾ ಬಿಸಿಲಿನಲ್ಲಿ ಓಡಾಡಿದರೆ ದೇಹದ ಉಷ್ಣತೆ 40 ಡಿಗ್ರಿ ಸೆ. ಗಿಂತ ಅಧಿಕವಾದರೆ ಸುಸ್ತು, ತಲೆಸುತ್ತು, ವಾಂತಿ ಮುಂತಾದ ಸಮಸ್ಯೆಗಳು ಕಂಡು ಬರುವುದು. ಇದು ಸೂರ್ಯಾಘಾತದ ಲಕ್ಷಣಗಳಾಗಿವೆ. ಮದ್ಯಪಾನ, ಸಾಕಷ್ಟು ನೀರು ಕುಡಿಯದಿರುವುದು, ಜ್ವರ ಇದ್ದಾಗ ಕೆಲಸ ಮಾಡುವುದು ಮಾಡಿದರೆ ಹೃದಯಾಘಾತ, ಸೂರ್ಯಾಘಾತ ಮುಂತಾದ ಸಮಸ್ಯೆ ಉಂಟಾಗುವುದು.
ಇಲ್ಲಿ ನಾವು ಸೂರ್ಯಾಘಾತದಿಂದ ಪಾರಾಗಲು ಕೆಲ ಮನೆಮದ್ದು ನೀಡಿದ್ದೇವೆ ನೋಡಿ:

ಈರುಳ್ಳಿ
ಉಷ್ಣವನ್ನು ಹೀರಿಕೊಳ್ಳುವಲ್ಲಿ ಈರುಳ್ಳಿ ತುಂಬಾ ಸಹಾಯಕಾರಿ. ಬಿಳಿ ಈರುಳ್ಳಿಯನ್ನು ಜೇಬಿನಲ್ಲಿಟ್ಟರೆ ಇದು ದೇಹದ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಸನ್ ಸ್ಟ್ರೋಕ್ ಉಂಟಾದರೆ ಈರುಳ್ಳಿಯನ್ನು ಪೇಸ್ಟ್ ಮಾಡಿ ಹಚ್ಚಿದರೆ ಬೇಗನೆ ಗುಣಮುಖವಾಗುವುದು.

ಮೆಂತೆ ಎಲೆ
ಮೆಂತೆ ಎಲೆ ಸನ್ ಸ್ಟ್ರೋಕ್ ಗೆ ಸೂಪರ್ ಮನೆಮದ್ದಾಗಿದೆ. ದೇಹದ ಉಷ್ಣತೆ ಹೆಚ್ಛಾದರೆ ಮೆಂತೆ ಎಲೆಯನ್ನು ಒಣಗಿಸಿ ಅದನ್ನು ಮಾಡಿ, ತಣ್ಣೀರಿನಲ್ಲಿ ಹಾಕಿಟ್ಟು, ನಂತರ ಕೈಯಿಂದ ಹಿಸುಕಿ ಜೇನು ಸೇರಿಸಿ ರೋಗಿಗೆ ಕೊಡಬೇಕು. ಈ ರೀತಿ ಪ್ರತೀ 2 ಗಂಟೆಗೊಮ್ಮೆ ಕೊಟ್ಟರೆ ಅಪಾಯದಿಂದ ಪಾರಾಗಬಹುದು.

ಮಜ್ಜಿಗೆ
ದೇಹದ ಉಷ್ಣತೆಯನ್ನು ಕಮ್ಮಿ ಮಾಡಲು ದಿನದಲ್ಲಿ 3-4 ಲೋಟ ಮಜ್ಜಿಗೆ ಕುಡಿಯುವುದು ಒಳ್ಳೆಯದು.

ಹಣ್ಣುಗಳು
ದೇಹವನ್ನು ತಂಪಾಗಿಡುವ ಹಣ್ಣುಗಳನ್ನು, ನೀರಿನಂಶ ಅಧಿಕವಿರುವ ತರಕಾರಿಗಳನ್ನು ತಿನ್ನುವುದು ಒಳ್ಳೆಯದು.

ಕಾಯಿ ಮಾವಿನಕಾಯಿ
ಕಾಯಿ ಮಾವಿನಕಾಯಿಗೆ ರೋಸ್ಟ್ ಮಾಡಿದ ಜೀರಿಗೆ, ಬ್ಲ್ಯಾಕ್ ಸಾಲ್ಟ್, ಸ್ವಲ್ಪ ಕರಿ ಮೆಣಸಿನ ಪುಡಿ, ಸಕ್ಕರೆ ಹಾಕಿ ಬೇಯಿಸಿ, ಆ ನೀರು ಕುಡಿಯುವುದು ಒಳ್ಳೆಯದು. ಇದನ್ನು ಸನ್ ಸ್ಟ್ರೋಕ್ ಬಂದಾಗ ಮಾತ್ರವಲ್ಲ, ಸನ್ ಸ್ಟ್ರೋಕ್ ಬರದಂತೆ ತಡೆಯಲು ಕುಡಿಯುವುದು ಒಳ್ಳೆಯದು.

ಹುಣಸೆ ಬೀಜ
ಹುಣಸೆ ಬೀಜ ಸೂರ್ಯಾಘಾತ ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ. ಹುಣಸೆ ಹಣ್ಣಿನ ಬೀಜವನ್ನು ಸ್ವಲ್ಪ ಸಕ್ಕರೆ ಮತ್ತು ನೀರು ಹಾಕಿ ಗ್ರೈಂಡ್ ಮಾಡಿ ಕುಡಿಯುವುದು ಒಳ್ಳೆಯದು.

ನೀರು
ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯದಿದ್ದರೆ ಅನೇಕ ಅನಾರೋಗ್ಯಕರ ಸಂಬಂಧಗಳು ಎದುರಾಗುವುದು. ಆದ್ದರಿಂದ ನೀರು, ಜ್ಯೂಸ್ ಇವುಗಳನ್ನು ಕುಡಿಯಲು ಮರೆಯಬೇಡಿ.



Click it and Unblock the Notifications