Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್!
ಸೂರ್ಯಾಘಾತಕ್ಕೆ (ಸನ್ ಸ್ಟ್ರೋಕ್) ಮನೆಮದ್ದು
ಸೂರ್ಯಾಘಾತ ಎಂದು ಕೇಳಿದ್ದೀರಾ? ಬಿಸಿಲಿನ ತಾಪ ಹೆಚ್ಚಾಗಿ ಜನರು ಮೃತ ಪಟ್ಟ ಸುದ್ಧಿಯನ್ನು ನೀವು ಕೇಳಿರಬಹುದು. ಇದು ಸೂರ್ಯಾಘಾತದಿಂದ ಉಂಟಾಗುವುದು. ವಾತಾವರಣ ತುಂಬಾ ಬಿಸಿಯಿದ್ದಾಗ ಸನ್ ಸ್ಟ್ರೋಕ್ ಅಥವಾ ಸೂರ್ಯಾಘಾತವಾಗುವುದು, ಅಂದರೆ ದೇಹದ ಉಷ್ಣತೆ ಹೆಚ್ಚಿ ವ್ಯಕ್ತಿ ಕೋಮಾಕ್ಕೆ ಹೋಗಬಹುದು. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾವು ಕೂಡ ಬರಬಹುದು.
ತುಂಬಾ ಬಿಸಿಲಿನಲ್ಲಿ ಓಡಾಡಿದರೆ ದೇಹದ ಉಷ್ಣತೆ 40 ಡಿಗ್ರಿ ಸೆ. ಗಿಂತ ಅಧಿಕವಾದರೆ ಸುಸ್ತು, ತಲೆಸುತ್ತು, ವಾಂತಿ ಮುಂತಾದ ಸಮಸ್ಯೆಗಳು ಕಂಡು ಬರುವುದು. ಇದು ಸೂರ್ಯಾಘಾತದ ಲಕ್ಷಣಗಳಾಗಿವೆ. ಮದ್ಯಪಾನ, ಸಾಕಷ್ಟು ನೀರು ಕುಡಿಯದಿರುವುದು, ಜ್ವರ ಇದ್ದಾಗ ಕೆಲಸ ಮಾಡುವುದು ಮಾಡಿದರೆ ಹೃದಯಾಘಾತ, ಸೂರ್ಯಾಘಾತ ಮುಂತಾದ ಸಮಸ್ಯೆ ಉಂಟಾಗುವುದು.
ಇಲ್ಲಿ ನಾವು ಸೂರ್ಯಾಘಾತದಿಂದ ಪಾರಾಗಲು ಕೆಲ ಮನೆಮದ್ದು ನೀಡಿದ್ದೇವೆ ನೋಡಿ:

ಈರುಳ್ಳಿ
ಉಷ್ಣವನ್ನು ಹೀರಿಕೊಳ್ಳುವಲ್ಲಿ ಈರುಳ್ಳಿ ತುಂಬಾ ಸಹಾಯಕಾರಿ. ಬಿಳಿ ಈರುಳ್ಳಿಯನ್ನು ಜೇಬಿನಲ್ಲಿಟ್ಟರೆ ಇದು ದೇಹದ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಸನ್ ಸ್ಟ್ರೋಕ್ ಉಂಟಾದರೆ ಈರುಳ್ಳಿಯನ್ನು ಪೇಸ್ಟ್ ಮಾಡಿ ಹಚ್ಚಿದರೆ ಬೇಗನೆ ಗುಣಮುಖವಾಗುವುದು.

ಮೆಂತೆ ಎಲೆ
ಮೆಂತೆ ಎಲೆ ಸನ್ ಸ್ಟ್ರೋಕ್ ಗೆ ಸೂಪರ್ ಮನೆಮದ್ದಾಗಿದೆ. ದೇಹದ ಉಷ್ಣತೆ ಹೆಚ್ಛಾದರೆ ಮೆಂತೆ ಎಲೆಯನ್ನು ಒಣಗಿಸಿ ಅದನ್ನು ಮಾಡಿ, ತಣ್ಣೀರಿನಲ್ಲಿ ಹಾಕಿಟ್ಟು, ನಂತರ ಕೈಯಿಂದ ಹಿಸುಕಿ ಜೇನು ಸೇರಿಸಿ ರೋಗಿಗೆ ಕೊಡಬೇಕು. ಈ ರೀತಿ ಪ್ರತೀ 2 ಗಂಟೆಗೊಮ್ಮೆ ಕೊಟ್ಟರೆ ಅಪಾಯದಿಂದ ಪಾರಾಗಬಹುದು.

ಮಜ್ಜಿಗೆ
ದೇಹದ ಉಷ್ಣತೆಯನ್ನು ಕಮ್ಮಿ ಮಾಡಲು ದಿನದಲ್ಲಿ 3-4 ಲೋಟ ಮಜ್ಜಿಗೆ ಕುಡಿಯುವುದು ಒಳ್ಳೆಯದು.

ಹಣ್ಣುಗಳು
ದೇಹವನ್ನು ತಂಪಾಗಿಡುವ ಹಣ್ಣುಗಳನ್ನು, ನೀರಿನಂಶ ಅಧಿಕವಿರುವ ತರಕಾರಿಗಳನ್ನು ತಿನ್ನುವುದು ಒಳ್ಳೆಯದು.

ಕಾಯಿ ಮಾವಿನಕಾಯಿ
ಕಾಯಿ ಮಾವಿನಕಾಯಿಗೆ ರೋಸ್ಟ್ ಮಾಡಿದ ಜೀರಿಗೆ, ಬ್ಲ್ಯಾಕ್ ಸಾಲ್ಟ್, ಸ್ವಲ್ಪ ಕರಿ ಮೆಣಸಿನ ಪುಡಿ, ಸಕ್ಕರೆ ಹಾಕಿ ಬೇಯಿಸಿ, ಆ ನೀರು ಕುಡಿಯುವುದು ಒಳ್ಳೆಯದು. ಇದನ್ನು ಸನ್ ಸ್ಟ್ರೋಕ್ ಬಂದಾಗ ಮಾತ್ರವಲ್ಲ, ಸನ್ ಸ್ಟ್ರೋಕ್ ಬರದಂತೆ ತಡೆಯಲು ಕುಡಿಯುವುದು ಒಳ್ಳೆಯದು.

ಹುಣಸೆ ಬೀಜ
ಹುಣಸೆ ಬೀಜ ಸೂರ್ಯಾಘಾತ ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ. ಹುಣಸೆ ಹಣ್ಣಿನ ಬೀಜವನ್ನು ಸ್ವಲ್ಪ ಸಕ್ಕರೆ ಮತ್ತು ನೀರು ಹಾಕಿ ಗ್ರೈಂಡ್ ಮಾಡಿ ಕುಡಿಯುವುದು ಒಳ್ಳೆಯದು.

ನೀರು
ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯದಿದ್ದರೆ ಅನೇಕ ಅನಾರೋಗ್ಯಕರ ಸಂಬಂಧಗಳು ಎದುರಾಗುವುದು. ಆದ್ದರಿಂದ ನೀರು, ಜ್ಯೂಸ್ ಇವುಗಳನ್ನು ಕುಡಿಯಲು ಮರೆಯಬೇಡಿ.



Click it and Unblock the Notifications