Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಸೂರ್ಯಾಘಾತಕ್ಕೆ (ಸನ್ ಸ್ಟ್ರೋಕ್) ಮನೆಮದ್ದು
ಸೂರ್ಯಾಘಾತ ಎಂದು ಕೇಳಿದ್ದೀರಾ? ಬಿಸಿಲಿನ ತಾಪ ಹೆಚ್ಚಾಗಿ ಜನರು ಮೃತ ಪಟ್ಟ ಸುದ್ಧಿಯನ್ನು ನೀವು ಕೇಳಿರಬಹುದು. ಇದು ಸೂರ್ಯಾಘಾತದಿಂದ ಉಂಟಾಗುವುದು. ವಾತಾವರಣ ತುಂಬಾ ಬಿಸಿಯಿದ್ದಾಗ ಸನ್ ಸ್ಟ್ರೋಕ್ ಅಥವಾ ಸೂರ್ಯಾಘಾತವಾಗುವುದು, ಅಂದರೆ ದೇಹದ ಉಷ್ಣತೆ ಹೆಚ್ಚಿ ವ್ಯಕ್ತಿ ಕೋಮಾಕ್ಕೆ ಹೋಗಬಹುದು. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾವು ಕೂಡ ಬರಬಹುದು.
ತುಂಬಾ ಬಿಸಿಲಿನಲ್ಲಿ ಓಡಾಡಿದರೆ ದೇಹದ ಉಷ್ಣತೆ 40 ಡಿಗ್ರಿ ಸೆ. ಗಿಂತ ಅಧಿಕವಾದರೆ ಸುಸ್ತು, ತಲೆಸುತ್ತು, ವಾಂತಿ ಮುಂತಾದ ಸಮಸ್ಯೆಗಳು ಕಂಡು ಬರುವುದು. ಇದು ಸೂರ್ಯಾಘಾತದ ಲಕ್ಷಣಗಳಾಗಿವೆ. ಮದ್ಯಪಾನ, ಸಾಕಷ್ಟು ನೀರು ಕುಡಿಯದಿರುವುದು, ಜ್ವರ ಇದ್ದಾಗ ಕೆಲಸ ಮಾಡುವುದು ಮಾಡಿದರೆ ಹೃದಯಾಘಾತ, ಸೂರ್ಯಾಘಾತ ಮುಂತಾದ ಸಮಸ್ಯೆ ಉಂಟಾಗುವುದು.
ಇಲ್ಲಿ ನಾವು ಸೂರ್ಯಾಘಾತದಿಂದ ಪಾರಾಗಲು ಕೆಲ ಮನೆಮದ್ದು ನೀಡಿದ್ದೇವೆ ನೋಡಿ:

ಈರುಳ್ಳಿ
ಉಷ್ಣವನ್ನು ಹೀರಿಕೊಳ್ಳುವಲ್ಲಿ ಈರುಳ್ಳಿ ತುಂಬಾ ಸಹಾಯಕಾರಿ. ಬಿಳಿ ಈರುಳ್ಳಿಯನ್ನು ಜೇಬಿನಲ್ಲಿಟ್ಟರೆ ಇದು ದೇಹದ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಸನ್ ಸ್ಟ್ರೋಕ್ ಉಂಟಾದರೆ ಈರುಳ್ಳಿಯನ್ನು ಪೇಸ್ಟ್ ಮಾಡಿ ಹಚ್ಚಿದರೆ ಬೇಗನೆ ಗುಣಮುಖವಾಗುವುದು.

ಮೆಂತೆ ಎಲೆ
ಮೆಂತೆ ಎಲೆ ಸನ್ ಸ್ಟ್ರೋಕ್ ಗೆ ಸೂಪರ್ ಮನೆಮದ್ದಾಗಿದೆ. ದೇಹದ ಉಷ್ಣತೆ ಹೆಚ್ಛಾದರೆ ಮೆಂತೆ ಎಲೆಯನ್ನು ಒಣಗಿಸಿ ಅದನ್ನು ಮಾಡಿ, ತಣ್ಣೀರಿನಲ್ಲಿ ಹಾಕಿಟ್ಟು, ನಂತರ ಕೈಯಿಂದ ಹಿಸುಕಿ ಜೇನು ಸೇರಿಸಿ ರೋಗಿಗೆ ಕೊಡಬೇಕು. ಈ ರೀತಿ ಪ್ರತೀ 2 ಗಂಟೆಗೊಮ್ಮೆ ಕೊಟ್ಟರೆ ಅಪಾಯದಿಂದ ಪಾರಾಗಬಹುದು.

ಮಜ್ಜಿಗೆ
ದೇಹದ ಉಷ್ಣತೆಯನ್ನು ಕಮ್ಮಿ ಮಾಡಲು ದಿನದಲ್ಲಿ 3-4 ಲೋಟ ಮಜ್ಜಿಗೆ ಕುಡಿಯುವುದು ಒಳ್ಳೆಯದು.

ಹಣ್ಣುಗಳು
ದೇಹವನ್ನು ತಂಪಾಗಿಡುವ ಹಣ್ಣುಗಳನ್ನು, ನೀರಿನಂಶ ಅಧಿಕವಿರುವ ತರಕಾರಿಗಳನ್ನು ತಿನ್ನುವುದು ಒಳ್ಳೆಯದು.

ಕಾಯಿ ಮಾವಿನಕಾಯಿ
ಕಾಯಿ ಮಾವಿನಕಾಯಿಗೆ ರೋಸ್ಟ್ ಮಾಡಿದ ಜೀರಿಗೆ, ಬ್ಲ್ಯಾಕ್ ಸಾಲ್ಟ್, ಸ್ವಲ್ಪ ಕರಿ ಮೆಣಸಿನ ಪುಡಿ, ಸಕ್ಕರೆ ಹಾಕಿ ಬೇಯಿಸಿ, ಆ ನೀರು ಕುಡಿಯುವುದು ಒಳ್ಳೆಯದು. ಇದನ್ನು ಸನ್ ಸ್ಟ್ರೋಕ್ ಬಂದಾಗ ಮಾತ್ರವಲ್ಲ, ಸನ್ ಸ್ಟ್ರೋಕ್ ಬರದಂತೆ ತಡೆಯಲು ಕುಡಿಯುವುದು ಒಳ್ಳೆಯದು.

ಹುಣಸೆ ಬೀಜ
ಹುಣಸೆ ಬೀಜ ಸೂರ್ಯಾಘಾತ ತಡೆಯುವಲ್ಲಿ ತುಂಬಾ ಸಹಕಾರಿಯಾಗಿದೆ. ಹುಣಸೆ ಹಣ್ಣಿನ ಬೀಜವನ್ನು ಸ್ವಲ್ಪ ಸಕ್ಕರೆ ಮತ್ತು ನೀರು ಹಾಕಿ ಗ್ರೈಂಡ್ ಮಾಡಿ ಕುಡಿಯುವುದು ಒಳ್ಳೆಯದು.

ನೀರು
ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯದಿದ್ದರೆ ಅನೇಕ ಅನಾರೋಗ್ಯಕರ ಸಂಬಂಧಗಳು ಎದುರಾಗುವುದು. ಆದ್ದರಿಂದ ನೀರು, ಜ್ಯೂಸ್ ಇವುಗಳನ್ನು ಕುಡಿಯಲು ಮರೆಯಬೇಡಿ.



Click it and Unblock the Notifications











