Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಅತ್ಯಂತ ಆರೋಗ್ಯಕರ ಅಕ್ಕಿ-ಭಾರತದ ಸ್ವರ್ಣ ಅಕ್ಕಿ!

ಈ ಸ್ವರ್ಣ ಅಕ್ಕಿಯಲ್ಲಿ ಕಡಿಮೆ ಗ್ಲೈಸಿಮಿಕ್ ಇಂಡೆಕ್ಸ್ ಅಥವಾ ಜಿಐ (glycemic index ) ಇರುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಅಕ್ಕಿಯಿಂದ ತಯಾರಿಸಿದ ಪದಾರ್ಥಗಳ ಸೇವನೆ ತುಂಬಾ ಒಳ್ಳೆಯದು. ಬಾಸುಮತಿ ಅಕ್ಕಿಯಲ್ಲಿ ಜಿಐ ಪ್ರಮಾಣ ಸ್ವರ್ಣ ಅಕ್ಕಿಯಲ್ಲಿರುವುದಕ್ಕಿಂತ ಅಧಿಕವಿದೆ. ಜಿಐ ಡಯಾಬಿಟಿಸ್ ಹೆಚ್ಚಾಗಲು ಒಂದು ಮಖ್ಯ ಕಾರಣ. ಆದ್ದರಿಂದ ಜಿಐ ಕಡಿಮೆ ಇರುವ ಆಹಾರವನ್ನು ತಿಂದರೆ ಮಧುಮೇಹ ಬರದಂತೆ ತಡೆಯಬಹುದು. ಆದ್ದರಿಂದ ಈ ಅಕ್ಕಿ ಆರೋಗ್ಯದ ರಕ್ಷಣೆಗೆ ತುಂಬಾ ಸಹಕಾರಿಯಾಗಿದೆ.
ಈ ಜಿಐ ಎಂದರೇನು?
ನಾವು ಸೇವಿಸುವ ಆಹಾರದಲ್ಲಿನ ಕಾರ್ಬೋಹೈಡ್ರೇಟ್ಸ್ ಪ್ರಮಾಣವನ್ನು ಅಳೆಯುವ ಮಾಪಕವನ್ನು ಜಿಐ ಎನ್ನಲಾಗುವುದು. ಅಧಿಕ ಜಿಐ ಇರುವ ಆಹಾರ ಮಧುಮೇಹಿಗಳಿಗೆ ಹಾಗೂ ಬೊಜ್ಜನ್ನು ಹೊಂದಿರುವವರಿಗೆ ಒಳ್ಳೆಯದಲ್ಲ. ಅಧಿಕ ಜಿಐ ಇರುವ ಆಹಾರ ಪದಾರ್ಥಗಳು ಉದಾಹರಣೆಗೆ ಆಲೂಗೆಡ್ಡೆ ಸೇವಿಸಿದರೆ ರಕ್ತದ ಗ್ಲೂಕೋಸ್ ಪ್ರಮಾಣ ವೇಗವಾಗಿ ಏರುವುದು. ಆದರೆ ಕಡಿಮೆ ಜಿಐ ಇರುವ ಆಹಾರಗಳನ್ನು ಸೇವಿಸಿದರೆ ರಕ್ತದ ಗ್ಲುಕೋಸ್ ಮಟ್ಟವನ್ನು ನಿಧಾನವಾಗಿ ಏರಿಸುತ್ತವೆ, ಇದರಿಂದ ಮಧುಮೇಹಿಗಳಿಗೆ ಯಾವುದೇ ಅಪಾಯವಿಲ್ಲ.
ಇತರ ಅಕ್ಕಿಗಳಲ್ಲಿ ಜಿಐ ಪ್ರಮಾಣ ಅಧಿಕವಿರುವುದರಿಂದ ಅವುಗಳಿಂದ ತಯಾರಿಸಿದ ಅನ್ನವನ್ನು ಮಧುಮೇಹಿಗಳು ತಿನ್ನಬಾರದು. ಈ ಸ್ವರ್ಣ ಅಕ್ಕಿಯ ಅನ್ನವನ್ನು ತಿಂದರೆ ಇದರಲ್ಲಿ ತುಂಬಾ ಕಡಿಮೆ ಜಿಐ ಇದ್ದು, ತುಂಬಾ ನಿಧಾನಕ್ಕೆ ಜೀರ್ಣವಾಗುವುದರಿಂದ , ದೇಹಕ್ಕೆ ಗ್ಲೂಕೋಸ್ ಅಂಶ ನಿಧಾನಕ್ಕೆ ಸೇರುತ್ತದೆ, ಆದ್ದರಿಂದ ಮಧುಮೇಹ ಕಾಯಿಲೆ ಹತ್ತಿರ ಸುಳಿಯಲೂ ಬಿಡುವುದಿಲ್ಲ. ಈ ಅಕ್ಕಿ ಮಧುಮೇಹಿಗಳಿಗೆ ಮಾತ್ರವಲ್ಲ ಇತರರು ಸೇವಿಸಿದರೆ ಮಧುಮೇಹ ಕಾಯಿಲೆಯ ಭಯವಿಲ್ಲದೆ ಆರಾಮವಾಗಿ ಜೀವಿಸಬಹುದು.
ಮಧುಮೇಹ ಕಾಯಿಲೆ ಇರುವವರೆಗೆ ಅನ್ನ ತಿನ್ನದಂತೆ ವೈದ್ಯರು ಹೇಳುತ್ತಾರೆ. ಆದರೆ ಇನ್ನು ಮುಂದೆ ಮಧುಮೇಹಿಗಳಿಗೆ ಅನ್ನ ತಿನ್ನಬೇಕೆಂದು ಅನಿಸಿದಾಗ ಸ್ವರ್ಣ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ತಿನ್ನಬಹುದು. ಇತರರೂ ಅಷ್ಟೇ ಪಿಜ್ಜಾ, ಬರ್ಗರ್ , ನೂಡಲ್ಸ್ ಅಂತ ತಿನ್ನುವ ಬದಲು ಸ್ವರ್ಣ ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಸೇವಿಸಿ ಆರೋಗ್ಯವಾಗಿರಿ!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications