Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಅತ್ಯಂತ ಆರೋಗ್ಯಕರ ಅಕ್ಕಿ-ಭಾರತದ ಸ್ವರ್ಣ ಅಕ್ಕಿ!

ಈ ಸ್ವರ್ಣ ಅಕ್ಕಿಯಲ್ಲಿ ಕಡಿಮೆ ಗ್ಲೈಸಿಮಿಕ್ ಇಂಡೆಕ್ಸ್ ಅಥವಾ ಜಿಐ (glycemic index ) ಇರುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಅಕ್ಕಿಯಿಂದ ತಯಾರಿಸಿದ ಪದಾರ್ಥಗಳ ಸೇವನೆ ತುಂಬಾ ಒಳ್ಳೆಯದು. ಬಾಸುಮತಿ ಅಕ್ಕಿಯಲ್ಲಿ ಜಿಐ ಪ್ರಮಾಣ ಸ್ವರ್ಣ ಅಕ್ಕಿಯಲ್ಲಿರುವುದಕ್ಕಿಂತ ಅಧಿಕವಿದೆ. ಜಿಐ ಡಯಾಬಿಟಿಸ್ ಹೆಚ್ಚಾಗಲು ಒಂದು ಮಖ್ಯ ಕಾರಣ. ಆದ್ದರಿಂದ ಜಿಐ ಕಡಿಮೆ ಇರುವ ಆಹಾರವನ್ನು ತಿಂದರೆ ಮಧುಮೇಹ ಬರದಂತೆ ತಡೆಯಬಹುದು. ಆದ್ದರಿಂದ ಈ ಅಕ್ಕಿ ಆರೋಗ್ಯದ ರಕ್ಷಣೆಗೆ ತುಂಬಾ ಸಹಕಾರಿಯಾಗಿದೆ.
ಈ ಜಿಐ ಎಂದರೇನು?
ನಾವು ಸೇವಿಸುವ ಆಹಾರದಲ್ಲಿನ ಕಾರ್ಬೋಹೈಡ್ರೇಟ್ಸ್ ಪ್ರಮಾಣವನ್ನು ಅಳೆಯುವ ಮಾಪಕವನ್ನು ಜಿಐ ಎನ್ನಲಾಗುವುದು. ಅಧಿಕ ಜಿಐ ಇರುವ ಆಹಾರ ಮಧುಮೇಹಿಗಳಿಗೆ ಹಾಗೂ ಬೊಜ್ಜನ್ನು ಹೊಂದಿರುವವರಿಗೆ ಒಳ್ಳೆಯದಲ್ಲ. ಅಧಿಕ ಜಿಐ ಇರುವ ಆಹಾರ ಪದಾರ್ಥಗಳು ಉದಾಹರಣೆಗೆ ಆಲೂಗೆಡ್ಡೆ ಸೇವಿಸಿದರೆ ರಕ್ತದ ಗ್ಲೂಕೋಸ್ ಪ್ರಮಾಣ ವೇಗವಾಗಿ ಏರುವುದು. ಆದರೆ ಕಡಿಮೆ ಜಿಐ ಇರುವ ಆಹಾರಗಳನ್ನು ಸೇವಿಸಿದರೆ ರಕ್ತದ ಗ್ಲುಕೋಸ್ ಮಟ್ಟವನ್ನು ನಿಧಾನವಾಗಿ ಏರಿಸುತ್ತವೆ, ಇದರಿಂದ ಮಧುಮೇಹಿಗಳಿಗೆ ಯಾವುದೇ ಅಪಾಯವಿಲ್ಲ.
ಇತರ ಅಕ್ಕಿಗಳಲ್ಲಿ ಜಿಐ ಪ್ರಮಾಣ ಅಧಿಕವಿರುವುದರಿಂದ ಅವುಗಳಿಂದ ತಯಾರಿಸಿದ ಅನ್ನವನ್ನು ಮಧುಮೇಹಿಗಳು ತಿನ್ನಬಾರದು. ಈ ಸ್ವರ್ಣ ಅಕ್ಕಿಯ ಅನ್ನವನ್ನು ತಿಂದರೆ ಇದರಲ್ಲಿ ತುಂಬಾ ಕಡಿಮೆ ಜಿಐ ಇದ್ದು, ತುಂಬಾ ನಿಧಾನಕ್ಕೆ ಜೀರ್ಣವಾಗುವುದರಿಂದ , ದೇಹಕ್ಕೆ ಗ್ಲೂಕೋಸ್ ಅಂಶ ನಿಧಾನಕ್ಕೆ ಸೇರುತ್ತದೆ, ಆದ್ದರಿಂದ ಮಧುಮೇಹ ಕಾಯಿಲೆ ಹತ್ತಿರ ಸುಳಿಯಲೂ ಬಿಡುವುದಿಲ್ಲ. ಈ ಅಕ್ಕಿ ಮಧುಮೇಹಿಗಳಿಗೆ ಮಾತ್ರವಲ್ಲ ಇತರರು ಸೇವಿಸಿದರೆ ಮಧುಮೇಹ ಕಾಯಿಲೆಯ ಭಯವಿಲ್ಲದೆ ಆರಾಮವಾಗಿ ಜೀವಿಸಬಹುದು.
ಮಧುಮೇಹ ಕಾಯಿಲೆ ಇರುವವರೆಗೆ ಅನ್ನ ತಿನ್ನದಂತೆ ವೈದ್ಯರು ಹೇಳುತ್ತಾರೆ. ಆದರೆ ಇನ್ನು ಮುಂದೆ ಮಧುಮೇಹಿಗಳಿಗೆ ಅನ್ನ ತಿನ್ನಬೇಕೆಂದು ಅನಿಸಿದಾಗ ಸ್ವರ್ಣ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ತಿನ್ನಬಹುದು. ಇತರರೂ ಅಷ್ಟೇ ಪಿಜ್ಜಾ, ಬರ್ಗರ್ , ನೂಡಲ್ಸ್ ಅಂತ ತಿನ್ನುವ ಬದಲು ಸ್ವರ್ಣ ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಸೇವಿಸಿ ಆರೋಗ್ಯವಾಗಿರಿ!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
