Latest Updates
-
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ!
ಮಳೆಗಾಲದ ಆರೋಗ್ಯಕ್ಕೆ ಇರಲಿ ಪಂಚಸೂತ್ರ

ಮಳೆಯಿಂದ ಬರುವ ರೋಗಗಳನ್ನು ಸುಲಭವಾಗಿ ತಡೆಯುವಂತ ಐದು ಟಿಪ್ಸ್ ಗಳು ಇಲ್ಲಿವೆ. ಇದನ್ನು ಅನುಸರಿಸಿ ರೋಗ ತಗುಲುವುದನ್ನು ತಡೆಯಿರಿ:
1. ಹರ್ಬಲ್ ಟೀ ಕುಡಿಯಿರಿ: ಹರ್ಬಲ್ ಟೀ ನಲ್ಲಿ ಮಿಶ್ರಿತವಾಗಿರುವ ಮೆಣಸು, ಲವಂಗ, ಶುಂಠಿ, ಚಹಾ ಎಲೆ, ಪುದೀನ, ತುಳಸಿ ಮತ್ತು ಅಶ್ವಗಂಧ ಮುಂತಾದವು ಚಳಿ ಮತ್ತು ಮಳೆಗಾಲಕ್ಕೆ ಹೆಚ್ಚು ಉಪಯೋಗಕ್ಕೆ ಬರುವಂತಹವು. ಇದು ಕೆಮ್ಮು ಮತ್ತು ನೆಗಡಿಗೆ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ. ಬೆಳಗಿನ ಜಾವ ಒಂದು ಕಪ್ ಟೀ ಕುಡಿದರೆ ಕೆಮ್ಮು ನೆಗಡಿಯಿಂದ ಗಂಟಲಿಗೆ ಆಗುವ ತೊಂದರೆಯನ್ನು ತಪ್ಪಿಸುತ್ತದೆ ಅಷ್ಟೇ ಅಲ್ಲ ಅದು ಹತ್ತಿರ ಸುಳಿಯದಂತೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
2. ನೀಲಗಿರಿ ಎಣ್ಣೆ ಬಳಸಿ: ನಿಮಗೆ ನೆಗಡಿಯಾಗಿ ಮೂಗು ಕಟ್ಟಿದಂತಾಗಿದ್ದರೆ ನೀಲಗಿರಿ ಎಣ್ಣೆಯನ್ನು ನಿಮ್ಮ ಕರ್ಚೀಫ್ ನಲ್ಲಿ ನಾಲ್ಕು ತೊಟ್ಟು ಹಾಕಿ ಮೂಸುತ್ತಿದ್ದರೆ ನೆಗಡಿ ಕಡಿಮೆಯಾಗುತ್ತದೆ. ಈ ಔಷಧೀಯ ಸಸ್ಯದ ವಿಶೇಷ ಸುವಾಸನೆ ನೆಗಡಿಯನ್ನು ಶಮನಗೊಳಿಸಿ ಉಸಿರಾಟ ಸುಲಭವಾಗುಂತೆ ಮಾಡುತ್ತದೆ. ಕೇವಲ ನೆಗಡಿಯಿದ್ದವರು ಮಾತ್ರವಲ್ಲ, ಎಲ್ಲರೂ ಇದನ್ನು ಬಳಸಬಹುದು.
3. ಬೇವಿನ ಎಲೆ ಉಪಯೋಗಿಸಿ: ಔಷಧೀಯ ಗುಣಗಳ ಸಂಪನ್ನ ಬೇವನ್ನು ಅಲರ್ಜಿ ವಿರುದ್ಧ ಹೋರಾಡಲು ಬಳಸಬಹುದು. ಬಿಸಿ ನೀರಿಗೆ ಬೇವಿನ ಎಲೆಗಳನ್ನು ಸೇರಿಸಿ ಸ್ನಾನ ಮಾಡಬಹುದು. ಇಲ್ಲವೆಂದರೆ ಬೇವಿನ ಮಿಶ್ರಿತ ಸೋಪುಗಳೂ ಈಗ ಲಭ್ಯವಿದೆ. ಇದರಿಂದ ಅನೇಕ ಚರ್ಮ ಸಂಬಂಧಿ ರೋಗಗಳು ದೂರವಿರುತ್ತವೆ.
4. ಪಾದದ ಬಗ್ಗೆ ನಿಗಾವಹಿಸಿ: ಮಳೆಯಲ್ಲಿ ನೆಂದಿರುವ ಪಾದಗಳು ಹಲವು ಕಾಯಿಲೆಗಳನ್ನು ತಂದೊಡ್ಡಬಹುದು. ಆದ್ದರಿಂದ ಕಾಲಿನ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆದ್ದರಿಂದ ಹೆಚ್ಚು ಶೂಗಳನ್ನು ಧರಿಸಿ, ಅದು ಸಾಧ್ಯವಾಗದಿದ್ದರೆ ದಿನವೂ ಕಾಲುಗಳನ್ನು ತುಂಬಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಬೆಚ್ಚಗಿನ ನೀರಿನಲ್ಲಿ 5 ನಿಮಿಷ ಕಾಲುಗಳನ್ನು ಅದ್ದಿಕೊಂಡು ಆಂಟಿಸೆಪ್ಟಿಕ್ ಸೋಪ್ ನಿಂದ ಶುದ್ಧ ಮಾಡಿಕೊಂಡರೆ ಉತ್ತಮ.
5. ಬಿಸಿ ನೀರಿನ ಸೇವನೆಯಿರಲಿ: ಈ ಮಳೆಗಾಲದಲ್ಲಿ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ತಗುಲುವುದು ಹೆಚ್ಚು. ಆದ್ದರಿಂದ 10 ನಿಮಿಷ ನೀರನ್ನು ಕಾಯಿಸಿ ಅದಕ್ಕೆ ತುಳಸಿ ದಳಗಳನ್ನು ಹಾಕಿ ಕುಡಿದರೆ ಹೊಟ್ಟೆ ಶುಭ್ರವಾಗಿರುತ್ತದೆ.
ರೋಗ ಬರುವ ಮುನ್ನವೇ ಅದನ್ನು ತಡೆದರೆ ಉತ್ತಮವಲ್ಲವೇ? ಮಳೆಗಾಲದಲ್ಲಿ ಈ ಸಲಹೆಗಳನ್ನು ಪಾಲಿಸಿದರೆ ಅನೇಕ ಕಾಯಿಲೆಗಳಿಂದ ದೂರ ಉಳಿಯಬಹುದು ಅಥವಾ ಬಂದಿರುವ ಕಾಯಿಲೆಯನ್ನೂ ದೂರ ತಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











