Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಮಕ್ಕಳಲ್ಲಿ ಹೆಚ್ಚುತ್ತಿದೆ ವಿಶ್ಯೂಯಲ್ ಆಟಿಸಂ: ಇದಕ್ಕೆ ಪೋಷಕರೇ ಕಾರಣವಾಗುತ್ತಿರುವುದೇ ದುರಂತ!
ಪೋಷಕರೇ ನೀವು ನಿಮ್ಮ ಮಕ್ಕಳಲ್ಲಿ ವಿಶ್ಯೂಯಲ್ ಆಟಿಸಂ ಕಾರಣವಾಗುತ್ತಿದ್ದೀರಾ ಎಂಬುವುದು ಗೊತ್ತಿದೆಯೇ? ಹೌದು ಬಹುತೇಕ ಪೋಷಕರು ಇಂದು ಇಂಥದ್ದೊಂದು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಆಟಿಸಂ ಬಗ್ಗೆ ನೀವು ಕೇಳುರುತ್ತೀರಿ, ಆಟಿಸಂ ಇರುವ ಮಕ್ಕಳು ಹೇಗಿರುತ್ತಾರೆ ಎಂಬುವುದು ಗೊತ್ತಿರುತ್ತದೆ, ಆದರೆ ವಿಶ್ಯೂಯಲ್ ಆಟಿಸಂ ಬಗ್ಗೆ ಕೇಳಿದ್ದೀರಾ? ಪ್ರತಿಯೊಬ್ಬ ಪೋಷಕರು ಈ ಬಗ್ಗೆ ತಿಳಿದಿರಬೇಕು, ಆವಾಗ ಮಾತ್ರ ನಮ್ಮ ಮಕ್ಕಳನ್ನು ವಿಶ್ಯೂಯಲ್ ಆಟಿಸಂನಿಂದ ರಕ್ಷಣೆ ಮಾಡಲು ಸಾಧ್ಯ. ಈ ವಿಶ್ಯೂಯಲ್ ಆಟಿಸಂ ಎಂದರೇನು? ಈ ಸಮಸ್ಯೆಗೆ ಪೋಷಕರು ಹೇಗೆ ಕಾರಣವಾಗುತ್ತಿದ್ದಾರೆ ಎಂದು ನೋಡೋಣ ಬನ್ನಿ....

ಮಕ್ಕಳ ಕಂಟ್ರೋಲ್ ಮಾಡಲು ಮೊಬೈಲ್ ಅಸ್ತ್ರ
ಈಗೀನ ಬಹುತೇಕ ಪೋಷಕರು ಮಕ್ಕಳ ಗಲಾಟೆ ತಡೆಗಟ್ಟ, ಅವರು ಆಹಾರ ಸೇವಿಸಲು ಮೊಬೈಲ್ ಕೊಡುವ ಅಭ್ಯಾಸ ಮಾಡುತ್ತಿದ್ದಾರೆ. ಮೊಬೈಲ್ ಕೈಗೆ ಕೊಟ್ಟರೆ ಮಕ್ಕಳು ಸುಮ್ಮನೆ ಒಂದು ಕಡೆ ಕೂತಿರುತ್ತಾರೆ ಪೋಷಕರು ಆರಾಮವಾಗಿ ತಮ್ಮ ಕೆಲಸ-ಕಾರ್ಯಗಳನ್ನು ಮುಗಿಸಬಹುದು, ಇಲ್ಲದಿದ್ದರೆ ಅವರು ಗಲಾಟೆ ಮಾಡುವುದರಿಂದ ಮ್ಯಾನೇಜ್ ಮಾಡುವುದು ಕಷ್ಟ. ಇನ್ನು ಮಕ್ಕಳಿಗೆ ತಿನ್ನಿಸುವುದಂತೂ ತುಂಬಾನೇ ಕಷ್ಟ, ಅವರು ತಿನ್ನಬೇಕೆಂದರೆ ಮೊಬೈಲ್ ಕೈಗೆ ಕೊಟ್ಟರೆ ಆಯ್ತು, ಅವರಿಗೆ ತಾವು ಏನು ತಿನ್ನುತ್ತಿದ್ದೇವೆ ಎಂಬುವುದು ಕೂಡ ಗೊತ್ತಿರುವುದಿಲ್ಲ ತಮ್ಮ ಪಾಡಿಗೆ ತಾವು ಆಹಾರ ತಿನ್ನುತ್ತವೆ. ಒಟ್ಟಿನಲ್ಲಿ ಮಕ್ಕಳ ಗಲಾಟೆ ತಡೆಯಲು ಪೋಷಕರು ಕಂಡುಕೊಂಡಿರುವ ಮಾರ್ಗ ಮಕ್ಕಳಿಗೆ ಮೊಬೈಲ್ ಕೊಡುವುದು.
ಶಾಪಿಂಗ್ ಹೋಗಲಿ, ಹೋಟೆಲ್ಗೆ ಹೋಗಲಿ, ಮನೆಯಲ್ಲಿರಲಿ ಈಗೀನ ಬಹುತೇಕ ಮಕ್ಕಳು ಮೊಬೈಲ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಗಂಟೆಗಟ್ಟಲೆ ಸಮಯವನ್ನು ಮೊಬೈಲ್ನಲ್ಲಿ ಕಳೆಯುತ್ತಿದ್ದಾರೆ. ಇದರಿಂದ ನಿಮ್ಮ ಮಕ್ಕಳನ್ನು ಎಂಥ ಭಯಾನಕ ಅಪಾಯಕ್ಕೆ ದೂಡುತ್ತಿದ್ದೀರಿ ಎಂಬ ಯೋಜನೆಯೂ ಪೋಷಕರಿಗೆ ಇಲ್ಲ. ನಿಮ್ಮ ಮಕ್ಕಳಿಗಾಗಿ ನೀವು ಕಷ್ಟಪಟ್ಟು ದುಡಿಯುತ್ತಿರಬಹುದು, ಅವರಿಗಾಗಿಯೇ ನೀವು ಜೀವಿಸುತ್ತಿರಬಹುದು, ಆದರೆ ಅವರ ಕೈಯಲ್ಲಿ ಮೊಬೈಲ್ ಕೊಟ್ಟರೆ ಅವರ ಭವಿಷ್ಯಕ್ಕೆ ನೀವೇ ಕೊಳ್ಳಿ ಇಟ್ಟಂತೆ ಪೋಷಕರೇ... ಹೌದು ಕೇಳಲು ಕಠೋರ ಅನಿಸಿದರೂ ಇದು ವಾಸ್ತವ ಸತ್ಯ.
ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ವಿಶ್ಯೂಯಲ್ ಆಟಿಸಂ
ಇತ್ತೀಚೆಗೆ ಮಕ್ಕಳಲ್ಲಿ ವಿಶ್ಯೂಯಲ್ ಆಟಿಸಂ ಎಂಬ ಸಮಸ್ಯೆ ಹೆಚ್ಚಾಗುತ್ತಿದೆ ಅಂದರೆ ಮಕ್ಕಳಲ್ಲಿ ನೆನಪಿನ ಶಕ್ತಿ, ಆಲೋಚನಾ ಶಕ್ತಿ ಕಡಿಮೆಯಾಗುವುದು. ನರ್ಸರಿ, ಜೂನಿಯರ್, ಸೀನಿಯರ್ ಕೆಜಿ ಟೀಚರ್ಸ್ ಬಳಿ ಕೇಳಿ ನೋಡಿ, ಮಕ್ಕಳಲ್ಲಿ ಕಂಡು ಬರುತ್ತಿರುವ ಬದಲಾವಣೆ ಅವರ ಅರಿವಿಗೆ ಬಂದಿರುತ್ತದೆ. 10 ವರ್ಷದ ಹಿಂದೆ ಕಾಣದಿರುವ ಸಮಸ್ಯೆ ಈಗ ಕಂಡು ಬರುತ್ತಿದೆ. ಮಕ್ಕಳಲ್ಲಿ ನೆನಪಿನ ಶಕ್ತಿ ಕುಗ್ಗುತ್ತಿದೆ. ಅಲ್ಲದೆ ಏನಾದರೂ ಕಲಿಸಬೇಕೆಂದರೆ ಸ್ಕ್ರೀನ್ ತೋರಿಸಿ ಕಲಿಸಬೇಕು, ಹಾಗೇ ಹೇಳಿಕೊಟ್ಟರೆ ಕಲಿಯುತ್ತಿಲ್ಲ. ಅಲ್ಲದೆ ಮಕ್ಕಳಿಗೆ ಒಂದು ವಿಷಯದತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇವೆಲ್ಲಾ ಸಮಸ್ಯೆ ಮೊಬೈಲ್ ಹೆಚ್ಚಾಗಿ ನೀಡುವುದರಿಂದ ಉಂಟಾಗುತ್ತಿದೆ.
ಪೋಷಕರೇ ಮಕ್ಕಳ ಕೈಗೆ ಮೊಬೈಲ್ ಕೊಡುವಾಗ ಅವರ ಭವಿಷ್ಯದ ಬಗ್ಗೆ ಯೋಚಿಸಿ....
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











