Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Deepika Kakar: ನಟಿ ದೀಪಿಕಾಗೆ ಲಿವರ್ ಕ್ಯಾನ್ಸರ್! ಹೃದಯಸ್ಪರ್ಶಿ ಪೋಸ್ಟ್.. ಇವು 5 ನಿರ್ಣಾಯಕ ಲಕ್ಷಣಗಳು
ಖ್ಯಾತ ಕಿರುತೆರೆ ನಟಿ ದೀಪಿಕಾಗೆ ಕ್ಯಾನ್ಸರ್! ಟೆನ್ನಿಸ್ ಬಾಲ್ ಗಾತ್ರದ ಗಡ್ಡೆ ಪತ್ತೆ.. ಇದನ್ನು ಎದುರಿಸಲು ನಾನು ಸಿದ್ಧ ಎಂದ ದೀಪಿಕಾ. ಹೌದು, ಕಿರುತರೆ ನಟಿ ದೀಪಿಕಾ ಕಕ್ಕರ್ (Deepika Kakar) ತಮ್ಮ ಅಭಿಮಾನಿಗಳೊಂದಿಗೆ ಆಘಾತಕಾರಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಈ ಸುದ್ದಿಯನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ತನಗೆ ಎರಡನೇ ಹಂತದ ಯಕೃತ್ ಕ್ಯಾನ್ಸರ್ (Liver Cancer) ಇರುವುದು ದೃಢವಾಗಿದೆ. ನನ್ನ ಯಕೃತ್ತಿನಲ್ಲಿ ಟೆನಿಸ್ ಬಾಲ್ ಗಾತ್ರದ ದೊಡ್ಡ ಗೆಡ್ಡೆ ಇರುವುದು ಪತ್ತೆಯಾಗಿದೆ. ಈಗ ಪರೀಕ್ಷೆಯ ನಂತರ ಈ ಗೆಡ್ಡೆ ಮಾರಕ ಕ್ಯಾನ್ಸರ್ನ 2ನೇ ಹಂತಕ್ಕೆ ತಲುಪಿದೆ ಎಂದು ಹೇಳಿದ್ದಾರೆ.
ನಾನು ಇನ್ನೂ ಸಕಾರಾತ್ಮಕವಾಗಿದ್ದೇನೆ. ಮತ್ತು ಇದನ್ನು ಪೂರ್ಣ ಧೈರ್ಯದಿಂದ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ. ಕಳೆದ ಕೆಲ ವಾರಗಳು ತುಂಬಾನೇ ಕಷ್ಟಕರವಾಗಿದ್ದವು ಎಂದು ದೀಪಿಕಾ ಹೇಳಿಕೊಂಡಿದ್ದಾರೆ. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಳಿಕ, ಅವರ ಯಕೃತ್ತಿನಲ್ಲಿ ಸರಿಸುಮಾರು ಟೆನ್ನಿಸ್ ಬಾಲ್ ಗಾತ್ರದ ಗಡ್ಡೆ ಇರುವುದು ಪತ್ತೆಯಾಯಿತು. ವೈದ್ಯಕೀಯ ಪರೀಕ್ಷೆಗಳು ಈ ಗಡ್ಡೆ ಮಾರಕ ಕ್ಯಾನ್ಸರ್ (Cancer) ಎಂದು ದೃಢಪಡಿಸಿದವು ಎಂದು ತಿಳಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಹೃದಯಸ್ಪರ್ಶಿ ಪೋಸ್ಟ್
ನಿಮಗೆಲ್ಲರಿಗೂ ತಿಳಿದಿರುವಂತೆ, ಕಳೆದ ಕೆಲ ವಾರಗಳು ನನಗೆ ತುಂಬಾ ಕಷ್ಟಕರವಾಗಿತ್ತು. ನನ್ನ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡು, ಆಸ್ಪತ್ರೆಗೆ ದಾಖಲಾಗುವಂತಾಯಿತು. ಬಳಿಕ, ಯಕೃತ್ತಿನಲ್ಲಿ ಟೆನ್ನಿಸ್ ಬಾಲ್ ಗಾತ್ರದ ಗಡ್ಡೆ ಪತ್ತೆಯಾಯಿತು. ನಂತರ, ಎರಡನೇ ಹಂತದ ಕ್ಯಾನ್ಸರ್ ಎಂಬುದನ್ನು ವೈದ್ಯರು ದೃಢಪಡಿಸಿದರು ಎಂದು ನಟಿ ದೀಪಿಕಾ ಕಕ್ಕರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ಶಾ ಅಲ್ಲಾಹ್.. ನಿಮ್ಮ ಪ್ರಾರ್ಥನೆ ಇರಲಿ!
ಮುಂದುವರಿದು ಈ ಪೋಸ್ಟ್ನಲ್ಲಿ, 'ನಾನು ಪಾಸಿಟಿವ್ ಆಗಿದ್ದೇನೆ. ಇದನ್ನು ಎದುರಿಸಲು ಮತ್ತು ಬಲಶಾಲಿಯಾಗಿ ಹೊರಬರಲು ದೃಢ ನಿರ್ಧಾರ ಮಾಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ. 'ಇನ್ಶಾ ಅಲ್ಲಾಹ್. ನನ್ನ ಇಡೀ ಕುಟುಂಬ ನನ್ನ ಜೊತೆಗಿದ್ದಾರೆ. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗಳೊಂದಿಗೆ ನಾನು ಈ ಹೋರಾಟದಲ್ಲಿ ಜಯಿಸುತ್ತೇನೆ. ಇನ್ಶಾ ಅಲ್ಲಾಹ್.. ನಿಮ್ಮ ಪ್ರಾರ್ಥನೆ ಇರಲಿ. ಬಹಳಷ್ಟು ಪ್ರೀತಿ, ದೀಪಿಕಾ' ಎಂದು ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ನಟ ಶೋಯೆಬ್ ಇಬ್ರಾಹಿಂ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ಸ್ ನೀಡುತ್ತಿದ್ದಾರೆ.
ಯಕೃತ್ತಿನ ಎಡಬದಿ ಗಡ್ಡೆ ಇರುವುದು ಪತ್ತೆಯಾಯ್ತು
ನಟ ಶೋಯೆಬ್ ಇಬ್ರಾಹಿಂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲಿಗೆ ದೀಪಿಕಾಳ ನೋವು ಆ್ಯಸಿಡಿಟಿಯಂತೆ ಕಂಡಿತು. ಆದರೆ, ನಂತರದ ದಿನಗಳಲ್ಲಿ ನೋವು ಗಂಭೀರವಾಯಿತು. ವೈದ್ಯರು ಸಿ.ಟಿ. ಸ್ಕ್ಯಾನ್ ಮಾಡಿಸುವಂತೆ ಸೂಚಿಸಿದರು. ಆಗ ಯಕೃತ್ತಿನ ಎಡಬದಿ ಗಡ್ಡೆ ಇರುವುದು ಪತ್ತೆಯಾಯಿತು. ಇದೀಗ ವೈದ್ಯರು ಕ್ಯಾನ್ಸರ್ ಎಂದು ಮಾಹಿತಿ ನೀಡಿದ್ದಾರೆ. ದೀಪಿಕಾ ಸರ್ಜರಿಗೆ ಸಜ್ಜಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇತ್ತ ಈ ದುಃಖದ ಸುದ್ದಿ ತಿಳಿದ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.
ನಟ ಶೋಯೆಬ್ ಇಬ್ರಾಹಿಂ ಅವರು ಕೆಲವು ದಿನಗಳ ಹಿಂದೆ ತಮ್ಮ ವ್ಲಾಗ್ನಲ್ಲಿ ದೀಪಿಕಾ ಕಕ್ಕರ್ ಅವರ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದರು. ಬಳಿಕ ಪರೀಕ್ಷೆಯಲ್ಲಿ ಅವರ ಯಕೃತ್ತಿನಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದೆ. ದೀಪಿಕಾಗೆ ಈ ಹಿಂದೆ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಜ್ವರ ಇದ್ದ ಕಾರಣ ಅದನ್ನು ಮುಂದೂಡಲಾಯಿತು. ಇದೀಗ ಆ ಗೆಡ್ಡೆ ಕ್ಯಾನ್ಸರ್ ಎಂಬ ಸುದ್ದಿ ಹೊರಬಿದ್ದಿದೆ. ಇದರಿಂದ ದೀಪಿಕಾ ಅವರ ಕುಟುಂಬ ಆಘಾತಕ್ಕೀಡಾಗಿದೆ.
ಯಕೃತ್ತಿನ ಕ್ಯಾನ್ಸರ್ನ ಐದು ನಿರ್ಣಾಯಕ ಲಕ್ಷಣಗಳು
1. ಹಠಾತ್ ತೂಕ ನಷ್ಟವು ಯಕೃತ್ತಿನ ಕ್ಯಾನ್ಸರ್ನ ಸಾಮಾನ್ಯ ಲಕ್ಷಣವಾಗಿದೆ. ಆದರೆ, ಇದನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಯಕೃತ್ತಿನ ಕ್ಯಾನ್ಸರ್ ಇರುವ ರೋಗಿಗಳು ತಮ್ಮ ಹಸಿವನ್ನು ಕಳೆದುಕೊಳ್ಳುತ್ತಾರೆ.
2. ಹೊಟ್ಟೆ ನೋವು ಅಥವಾ ಅಸ್ವಸ್ಥತೆ ಯಕೃತ್ತಿನ ಕ್ಯಾನ್ಸರ್ ಇರುವ ಜನರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
3. ಯಕೃತ್ತಿನ ಕ್ಯಾನ್ಸರ್ನ ಮತ್ತೊಂದು ನಿರ್ಣಾಯಕ ಲಕ್ಷಣವೆಂದರೆ, ಇದನ್ನು ಹೆಚ್ಚಾಗಿ ಪತ್ತೆಹಚ್ಚಲಾಗುವುದಿಲ್ಲ. ಇದುವೇ ಹಸಿವಿನಲ್ಲಿ ಬದಲಾವಣೆಗಳು. ವಿಶೇಷವಾಗಿ ಹೊಟ್ಟೆ ಉಬ್ಬರದೊಂದಿಗೆ ಇದ್ದರೆ, ಇದು ಯಕೃತ್ತಿನ ಕ್ಯಾನ್ಸರ್ ಆಗಿರುತ್ತದೆ.
4. ಚರ್ಮ ಅಥವಾ ಕಣ್ಣುಗಳ ಹಳದಿ ಬಣ್ಣವನ್ನು ಕಾಮಾಲೆ ಎಂದು ಕರೆಯಲಾಗುತ್ತದೆ. ಇದು ಯಕೃತ್ತಿನ ಕ್ಯಾನ್ಸರ್ನ ಲಕ್ಷಣವಾಗಿದೆ. ಹೊಟ್ಟೆಯಲ್ಲಿ ಊತ ಅಥವಾ ದ್ರವದ ಶೇಖರಣೆ.
5. ಯಕೃತ್ತಿನ ಕಾರ್ಯವು ದುರ್ಬಲಗೊಂಡಾಗ ಹೊಟ್ಟೆಯ ಊತ (ಅಸ್ಸೈಟ್ಸ್) ಸಂಭವಿಸಬಹುದು. ಇದು ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗಲು ಕಾರಣವಾಗುತ್ತದೆ.



Click it and Unblock the Notifications