Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಈ ಹುರಿಗಡಲೆ ಸವಿಯೋದು ಇಂದೇ ನಿಲ್ಲಿಸಿಬಿಡಿ; ಇದರಲ್ಲಿದೆ ಕ್ಯಾನ್ಸರ್ ಕಾರಕ ಔರಾಮೈನ್!!
ನಾವು ನಿತ್ಯ ಸವಿಯುವಂತಹ ರುಚಿ ರುಚಿಯ ತಿಂಡಿ ತನಿಸುಗಳು ಈಗ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನೋಡಬಹುದು. ಇತ್ತೀಚಿಗೆ ಪ್ರತಿಯೊಂದು ಖಾದ್ಯಗಳನ್ನು ಸಹ ಪರಿಶೀಲನೆಗೆ ಒಳಪಡಿಸಿ ಸವಿಯಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬಂದಿದ್ದೇವೆ. ಮಕ್ಕಳ ತಿಂಡಿಯಿಂದ ಹಿಡಿದು ಸಿಹಿ ತಿಂಡಿಗಳು ಸಹ ಆರೋಗ್ಯಯುತ ವಸ್ತುಗಳಾಗಿ ಉಳಿದಿಲ್ಲ.
ಸದ್ಯ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ವಿಚಾರ ಅಂದರೆ ಅದು ಹುರಿದ ಕಡಲೆಯಲ್ಲಿನ ಅಂಶವು ನಮ್ಮಲ್ಲಿ ಕ್ಯಾನ್ಸರ್ನಂತಹ ಅಪಾಯಕಾರಿ ಕಾಯಿಲೆಯನ್ನು ಉಂಟು ಮಾಡಲು ಕಾರಣವಾಗುತ್ತಿದೆ ಎಂದು ಹೇಳಲಾಗಿದೆ. ಈ ಕುರಿತಾಗಿ ರಾಜ್ಯಸಭೆಯಲ್ಲಿ ಸಂಸದೆ ಪ್ರಿಯಾಂಕಾ ಚತುರ್ವೇದಿ ಧ್ವನಿ ಎತ್ತಿದ್ದಾರೆ.

ಅಂಗಡಿ, ಬೇಕರಿಗಳಲ್ಲಿ ಸಿಗುವಂತಹ ರೋಸ್ಟೆಟ್ ಕಡಲೆಗಳು ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಹಾನಿ ಮಾಡುತ್ತಿದೆ ಎಂದು ಅವರು ವಿವರಿಸಿದ್ದಾರೆ. ಹುರಿದ ಕಡಲಗಳು, ಹಾಗೆ ಇತರೆ ಆಹಾರ ಉತ್ಪನ್ನಗಳು ಕೆಡದಂತೆ ಹಾಗೆ ಅವುಗಳ ಬಣ್ಣವು ಹೆಚ್ಚಾಗುವಂತೆ ಮಾಡಲು ಕೈಗಾರಿಕಾ ಬಣ್ಣ ಎಂದು ಪರಿಗಣಿಸಲಾದ ಔರಾಮೈನ್ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಔರಾಮೈನ್ ಕ್ಯಾನ್ಸರ್ಗೆ ಕಾರಣವಾಗುವ ಪ್ರಮುಖ ಅಂಶವಾಗಿದೆ. ಈ ಸಂಬಂಧ ಸಂಸದೆ ಎಕ್ಸ್ ಖಾತೆಯಲ್ಲಿ ಈ ಕುರಿತ ಮಾಹಿತಿ ಹಂಚಿಕೊಂಡಿದ್ದು, ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ಆಹಾರ ಪದಾರ್ಥಗಳ ಬಣ್ಣವನ್ನು ಹೆಚ್ಚಿಸಲು ಔರಾಮೈನ್ ಅನ್ನು ಸೇರಿಸಲಾಗುತ್ತಿದೆ ಎಂದು ಅವರು ಗಮನಸೆಳೆದರು, ಇದು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ರ ಸ್ಪಷ್ಟ ಉಲ್ಲಂಘನೆಯಾಗಿದೆ.
ಇದು ಲಕ್ಷಾಂತರ ಭಾರತೀಯ ನಾಗರಿಕರ ಆರೋಗ್ಯ, ಸುರಕ್ಷತೆ ಮತ್ತು ನಂಬಿಕೆಗೆ ಬೆದರಿಕೆಯಾಗಿದೆ ಮತ್ತು FSSAI ಯ ನಿಯಂತ್ರಕ ಮೇಲ್ವಿಚಾರಣೆಯ ವೈಫಲ್ಯವಾಗಿದೆ ಎಂದು ಸಂಸದೆ ಹೇಳಿದ್ದಾರೆ. ಅದ್ರಲ್ಲೂ ಈ ಬಣ್ಣವು ಕೈಗಾರಿಕಾ ಬಳಕೆಯಲ್ಲಿ ಹೆಚ್ಚಾಗಿದೆ. ಆದ್ರೆ ಇದನ್ನೇ ಆಹಾರ ಖಾದ್ಯಗಳ ಬಣ್ಣ ಹೆಚ್ಚಿಸಲು ಬಳಸುವುದು ಕಂಡುಬಂದಿದೆ. ಇದು ಕ್ಯಾನ್ಸರ್ ತರುವ ಅಪಾಯವನ್ನು ಹೆಚ್ಚಿಸುತ್ತದೆ.
ತನ್ನ ಪತ್ರದಲ್ಲಿ ಚತುರ್ವೇದಿ ಔರಾಮೈನ್ನ ಅಪಾಯಗಳನ್ನು ವಿವರಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ರ ಅಡಿಯಲ್ಲಿ ಔರಾಮೈನ್ ಅನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನು ಕ್ಯಾನ್ಸರ್ ಸಂಶೋಧನೆಗಾಗಿ ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆ (WHO) ಸಂಭಾವ್ಯ ಕ್ಯಾನ್ಸರ್ ಕಾರಕವೆಂದು ಗುರುತಿಸಿದೆ, ಇದು ಯಕೃತ್ತು, ಮೂತ್ರಪಿಂಡ ಮತ್ತು ಮೂತ್ರಕೋಶದ ಕ್ಯಾನ್ಸರ್ಗಳಿಗೆ ಮತ್ತು ನರವೈಜ್ಞಾನಿಕ ಹಾನಿಗೆ ಸಂಬಂಧಿಸಿದೆ ಎಂದು ವರ್ಗೀಕರಿಸಲಾಗಿದೆ.
ನೀವು ಈ ಹುರಿದ ಕಡಲೆಗಳು, ಹಸಿರು ಕಡಲೆಗಳು, ಹಳದಿ ಬಣ್ಣದಿಂದ ಕೂಡಿದ ಕಡಲೆಗಳು, ಹಾಗೆ ಹಲವು ಕರಿದ ತಿಂಡಿಗಳ ಸವಿಯಲು ಮುಂದಾಗುವ ಮಂದಿಯಾಗಿದ್ದರೆ ಈ ಅಂಶಗಳು ನಿಮಗೆ ಹಾನಿ ಮಾಡುವುದು ಖಚಿತ. ಅದ್ರಲ್ಲೂ ಔರಮೈನ್ ಅಂಶದಿಂದ ಕ್ಯಾನ್ಸರ್ ಉಂಟು ಮಾಡುವ ಕೋಶಗಳ ವೃದ್ಧಿಗೆ ಕಾರಣವಾಗಲಿದೆ.
ಹುರಿದ ಕಡಲೆ ಮತ್ತು ಸಂಬಂಧಿತ ಆಹಾರಗಳ ವ್ಯಾಪಕ ಪರೀಕ್ಷೆಯನ್ನು ನಡೆಸಲು ಮತ್ತು ತಪಾಸಣೆ, ಪ್ರಯೋಗಾಲಯ ಪರೀಕ್ಷೆಗಳು, ದಂಡಗಳು, ಪರವಾನಗಿ ರದ್ದತಿ ಮತ್ತು ಜೈಲು ಶಿಕ್ಷೆ ಸೇರಿದಂತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಸದೆ ತಮ್ಮ ಪತ್ರದಲ್ಲಿ ಶಿಫಾರಸು ಮಾಡಿದ್ದಾರೆ.
ಹಲವು ಆಹಾರ ಉತ್ಪಾದನಾ ಕಂಪನಿಗಳಿಂದ ಹಿಡಿದು ಸಣ್ಣ ಪುಟ್ಟ ವರ್ತಕರು ಕೂಡ ಈ ನಿಯಮಗಳನೆಲ್ಲಾ ಗಾಳಿಗೆ ತೂರಿ ತಮಗಿಷ್ಟ ಬಂದಂತೆ ಹಾಗೆ ನಿಷೇಧಿತ ರಾಸಾಯನಿಕಗಳನ್ನು ಕೂಡ ತಮ್ಮ ಆಹಾರ ಪದಾರ್ಥಗಳಲ್ಲಿ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈಗ ಈ ವಿಚಾರವು ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ.



Click it and Unblock the Notifications