Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಕೊರೊನಾ ಲಸಿಕೆ: ಕೆಲವರಿಗೆ ಅಡ್ಡಪರಿಣಾಮವಾಗಿದೆ ಎಂದು ಮೊದಲ ಬಾರಿಗೆ ಒಪ್ಪಿಕೊಂಡ ಕೋವಿಶೀಲ್ಡ್ ತಯಾರಿಸಿದ ಕಂಪನಿ
ಕೊರೊನಾ ಅಟ್ಟಹಾಸ ಹಾಕುತ್ತಿದ್ದಾಗ ಅದನ್ನು ನಿಯಂತ್ರಿಸಲು ಬಂದಿದ್ದೇ ಕೊರೊನಾ ಲಸಿಕೆ, ಕೊರೊನಾ ಲಸಿಕೆ ಪಡೆದ ಮೇಲೆ ಕೊರೊನಾವನ್ನು ನಿಯಂತ್ರಿಸಲು ಸಾಧ್ಯವಾಯ್ತು, ಆದರೆ ಕೊರೊನಾ ಲಸಿಕೆಯಿಂದ ಏನಾದರೂ ಅಡ್ಡಪರಿಣಾಮವಿದೆಯೇ ಎಂಬ ಸಂಶಯ ಜನಸಾಮಾನ್ಯರಲ್ಲಿ ಇತ್ತು.

ಆದರೆ ಅದನ್ನು ತಯಾರಿಸಿದ ಔಷಧ ಕಂಪನಿಗಳು ದೊಡ್ಡ ಅಡ್ಡ ಸಮಸ್ಯೆಯಿಲ್ಲ ಇಲ್ಲ ಎಂದೇ ವಾದಿಸಿತು, ಆದರೆ ಇದೆ ಮೊದಲ ಬಾರಿಗೆ ಆಸ್ಟ್ರಾಜೆನಿಕಾ (AstraZeneca) ಕೊರೊನಾದಿಂದ ಅಡ್ಡಪರಿಣಾಮವಿದೆ ಎಂಬುವುದನ್ನು ಒಪ್ಪಿಕೊಂಡಿದೆ.
ದಿ ಆಕ್ಸ್ಫರ್ಡ್ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಕೋವಿಶೀಲ್ಡ್, ವ್ಯಾಕ್ಸ್ಜೆವೆರಿಯಾ ಮುಂತಾದ ಬ್ರ್ಯಾಂಡ್ನ ಅಡಿಯಲ್ಲಿ ಲಸಿಕೆಯನ್ನು ನೀಡಿದೆ. ಈ ಕಂಪನಿ ವಿರುದ್ಧ ಕೋರ್ಟ್ನಲ್ಲಿ ಕೇಸ್ ಹಾಕಲಾಗಿತ್ತು. ಲಸಿಕೆ ಪಡೆದ ಬಳಿಕ ಗಂಭೀರ ಅಡ್ಡಪರಿಣಾಮ ಹಾಗೂ ಸಾವು ಸಂಭವಿಸಿರುವುದರಿಂದ ಕಂಪನಿ ವಿರುದ್ಧ ಕೋರ್ಟ್ನಲ್ಲಿ ಕೇಸ್ ಹಾಕಲಾಗಿತ್ತು.ಹಲವಾರು ಜನರು ಈ ಲಸಿಕೆ ವಿರುದ್ಧ ಕೇಸ್ ಹಾಕಿದ್ದರು.
ಮೊದಲಿಗೆ ಜಮೈ ಸ್ಕಾಟ್ ಎಂಬವವರು ಕೇಸ್ ಹಾಕಿದ್ದರು. 2021ರಲ್ಲಿ ಲಸಿಕೆ ಪಡೆದ ಬಳಿಕ ಅವರ ಮೆದುಳಿಗೆ ಹಾನಿಯಾಗಿತ್ತು, ಇನ್ನು ಅನೇಕರು ತಮಗಾದ ಸಮಸ್ಯೆ ಬಗ್ಗೆ ಹೇಳಿ ಕೇಸ್ ದಾಖಲಿಸಿದ್ದರು. ಇದರ ಬಗ್ಗೆ ದಾಖಲೆ ಸಂಗ್ರಹಿಸಿ ಯುಕೆ ಕೋರ್ಟ್ಗೆ ನೀಡಲಾಯ್ತು.
ಈ ಕೇಸ್ನ ವಿಚಾರಣೆಯಲ್ಲಿ ಕಂಪನಿಯು ಕೊರೊನಾ ಲಸಿಕೆ ಅಡ್ಡಪರಿಣಾಮ ಬೀರುವುದು ಎಂಬುವುದಾಗಿ ಒಪ್ಪಿಕೊಂಡಿದೆ.
ಕೊರೊನಾ ಲಸಿಕೆಯಿಂದ TTS ಉಂಟಾಗುತ್ತಿದೆ
TTS (TTS - Thrombosis with Thrombocytopenia Syndrome) ಎಂದರೆ ಕೊರೊನಾ ಲಸಿಕೆ ಪಡೆದಾಗ ಬರುವ ಅಪರೂಪದ ಸಮಸ್ಯೆಯಾಗಿದೆ. ಇದೊಂದು ಗಂಭೀರ ಸಮಸ್ಯೆಯಾಗಿದೆ. ಇದರಿಂದ ರಕ್ತಹೆಪ್ಪುಗಟ್ಟುವುದು, ಪ್ಲೇಟ್ಲೆಟ್ಗಳ ಸಂಖ್ಯೆ ಕಡಿಮೆಯಾಗುವುದು.
ರಕ್ತ ಹೆಪ್ಪುಗಟ್ಟಿದಾಗ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ತೊಂದರೆಯಾಗುವುದು, ಇನ್ನು ಪ್ಲೇಟ್ಲೆಟ್ ಕಡಿಮೆಯಾದರೆ ಅತ್ಯಧಿಕ ರಕ್ತಸ್ರಾವ ಉಂಟಾಗುವುದು, ಇದೆರಡೂ ತುಂಬಾನೇ ಅಪಾಯಕಾರಿಯಾಗಿದೆ.
ಸಾಮಾನ್ಯವಾಗಿ ಈ ರೀತಿ ಮೆದುಳಿನಲ್ಲಿ ಉಂಟಾಗುವುದು ಅಥವಾ ಕಿಬ್ಬೊಟ್ಟೆಯಲ್ಲಿ ಸಂಭವಿಸುವುದು.
ಬಲು ಅಪರೂಪದ ಕಾಯಿಲೆ
ಲಸಿಕೆ ಪಡೆದ ಎಲ್ಲರಿಗೂ ಈ ರೀತಿ ಸಂಭವಿಸುವುದಿಲ್ಲ, ಕೋಟಿಯಲ್ಲಿ ಒಬ್ಬರಿಗೆ ಈ ರೀತಿಯಾಗಬಹುದು, ಆದರೆ ಇದು ತುಂಬಾನೇ ಅಪಾಯಕಾರಿಯಾದ ಸಮಸ್ಯೆಯಾಗಿದೆ.
ಇದರ ಲಕ್ಷಣಗಳನ್ನು ಗುರುತಿಸಬಹುದೇ?
ಟಿಟಿಎಸ್ ಆದಾಗ ಇದರ ಲಕ್ಷಣಗಳನ್ನು ಕೂಡಲೇ ಕಂಡು ಹಿಡಿಯಬಹುದು, ಇಂಜೆಕ್ಷನ್ ಪಡೆದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿದಂತಾಗುವುದು.
TTS ಆದಾಗ ಆ ವ್ಯಕ್ತಿಯ ಮೇಲೆ ತುಂಬಾನೇ ಪರಿಣಾಮ ಬೀರುವುದು, ಆದ್ದರಿಂದ ಆರ್ಥಿಕವಾಗಿ ಮನೆಯವರಿಗೂ ತೊದರೆಯಾಗುವುದು, ವ್ಯಕ್ತಿಗೆ ಕೆಲಸ ಮಾಡಲು ಕಷ್ಟವಾಗುವುದು, ಇದೀಗಾ ಆಸ್ಟ್ರಾ ಜೆನಿಕಾ ಈ ರೀತಿಯೂ ಆಗಬಹುದು ಎಂಬುವುದನ್ನು ಯುಕೆ ಕೋರ್ಟ್ನಲ್ಲಿ ಒಪ್ಪಿಕೊಂಡಿದೆ.
ಆರ್ಟಿಐಗೆ ಉತ್ತರ ಇದರ ಸಿಕ್ಕಿತ್ತು
ಭಾರತದಲ್ಲಿ ಕೋಟ್ಯಾಂತ ಜನ ಕೊರೊನಾ ಲಸಿಕೆ ಪಡೆದಿದ್ದಾರೆ, ಈ ಕೊರನಾ ಲಸಿಕೆಯಿಂದ ಅಡ್ಡ ಪರಿಣಾಮವಿದೆಯೇ ಎಂದು ಆರ್ ಟಿಐ ಅರ್ಜಿ ಹಾಕಲಾಯ್ತು, ಅದಕ್ಕೆ ಉತ್ತರಿಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಸಂಸ್ಥೆ ಕೂಡ ಕೊರೊನಾ ಲಸಿಕೆಯಿಂದ ಕೆಲವರಿಗೆ ಅಡ್ಡಪರಿಣಾಮವಾಗಬಹುದು ಎಂದು ಹೇಳಿದೆ.
ಕೊರೊನಾ ಲಸಿಕೆಯಿಂದ ಉಂಟಾಗುವ ಅಡ್ಡಪರಿಣಾಮಗಳು
ಇದು ಎಲ್ಲಿರಿಗೂ ಸಂಭವಿಸಲ್ಲ, ಬಲು ಅಪರೂಪಕ್ಕೆ ವಿಪರೀತ ವಾಂತಿ, ತಲೆನೋವು, ಉಸಿರಾಟದ ತೊಂದರೆ, ನರಗಳಲ್ಲಿ ಊತ, ಕಣ್ಣುಗಳಲ್ಲಿ ನೋವು, ದೃಷ್ಟಿ ಮಂದಾಗುವುದು, ನಿಶ್ಯಕ್ತಿ, ಪಾರ್ಶ್ವವಾಯು ಈ ಬಗೆಯ ಸಮಸ್ಯೆ ಕಂಡು ಬರಬಹುದು.
ಕೆಲವರಿಗೆ ನಿಶ್ಯಕ್ತಿ, ನಿರಂತರ ತುರಿಕೆ,ಜ್ವರ, ಕಣ್ಣುಗಳು ಮಂಜಾಗುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications