Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಆರೋಗ್ಯವಂತ ಯುವ ಸಮುದಾಯ ಹಠಾತ್ ನಿಧನಕ್ಕೆ ಕಾರಣವೇನು? ಹೊಸ ಅಧ್ಯಯನದ ಶಾಕಿಂಗ್ ವರದಿ
ಇತ್ತೀಚಿನ ದಿನಗಳಲ್ಲಿ ಆರೋಗ್ಯವಂತರು ದಿಢೀರ್ ಕುಸಿದು ಬೀಳುವುದು, ಹಠಾತ್ ನಿಧನಕ್ಕೆ ತುತ್ತಾಗುವುದು, ಹೃದಯಾಘಾತಕ್ಕೆ ಒಳಗಾಗುವುದು ಇಂತಹ ಸುದ್ದಿಗಳನ್ನು ನೀವು ಸಹ ಕೇಳಿರುತ್ತೀರಿ. ಅದ್ರಲ್ಲೂ ಕಳೆದ ಕೆಲ ವರ್ಷಗಳಿಂದ ಈ ಸಮಸ್ಯೆ ಯುವ ಸಮುದಾಯದಲ್ಲಿ ಆತಂಕ ಹುಟ್ಟಿಸಿರುವುದು ಸುಳ್ಳಲ್ಲ. ಇಡೀ ದೇಶದಲ್ಲಿ ಇಂತಹ ಸಾವಿರಾರು ಪ್ರಕರಣಗಳು ವರದಿಯಾಗುತ್ತಲೇ ಇದೆ.
ಇನ್ನು ರಾಜ್ಯದಲ್ಲಿ ಇತ್ತೀಚಿಗೆ ಹಾಸನ ಭಾಗದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುವ ಸುದ್ದಿ ಎಲ್ಲೆಡೆ ಭೀತಿ ಹುಟ್ಟಿಸಿತ್ತು. ಹಾಗೆ ಈ ಹಿಂದೆ ಹಲವು ಊಹಾಪೂಹಗಳು ಸಹ ಕೇಳಿಬಂದಿದ್ದವು. ಆದ್ರೆ ಈಗ ಈ ಹಠಾತ್ ಸಾವುಗಳಿಗೆ ಅದ್ರಲ್ಲೂ ಯುವ ಸಮುದಾಯವು ಏಕಾಏಕಿ ಸಾವಿನ ಮನೆ ಬಾಗಿಲು ತಟ್ಟುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಅಧ್ಯಯನದ ಮೂಲಕ ಪತ್ತೆ ಮಾಡಲಾಗಿದೆ.

ಯುವ ಸಮುದಾಯಕ್ಕೆ ಕಾಡುತ್ತಿರುವ ಈ ದಿಢೀರ್ ಸಾವಿನ ಪ್ರಕರಣಗಳು ಆತಂಕಕಾರಿಯಾಗಿ ಬೆಳವಣಿಗೆಯಾಗಿತ್ತು. ಅದ್ರಲ್ಲೂ ಯಾವುದೇ ಅನಾರೋಗ್ಯ ಇಲ್ಲದೆ. ಲಕ್ಷಣಗಳು ಕಾಣದೆ, ಅಪಾಯದ ಮುನ್ಸೂಚನೆ ಸಿಗದೆಯೇ ಪ್ರಾಣಕ್ಕೆ ಸಂಚಕಾರ ಬರುತ್ತಿತ್ತು. ಇದಕ್ಕೆಲ್ಲಾ ಫಿಟ್ನೆಸ್, ವೈದ್ಯಕೀಯ ಕಾರಣಗಳು, ಕುಟುಂಬ ಕಾರಣಗಳನ್ನು ಪಟ್ಟಿ ಮಾಡಲಾಗಿತ್ತು.
ಕಳೆದ ಎರಡು ವರ್ಷಗಳಲ್ಲಿ ವಿಶೇಷವಾಗಿ ಕೋವಿಡ್ -19 ರೋಗವು ನಿಯಂತ್ರಣಕ್ಕೆ ಬಂದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ವೈರಲ್ ವೀಡಿಯೊಗಳಲ್ಲಿ ನೀವು ಸಹ ನೋಡಿರಬಹುದು. ಹಠಾತ್ ಆಗಿ ಕುಸಿದು ಬಿದ್ದು ನಿಧನರಾಗುವುದು ಎಲ್ಲರಿಗೂ ಆಘಾತ ತಂದಿತ್ತು. ವೈದ್ಯಕೀಯ ಭಾಷೆಯಲ್ಲಿ ಹಠಾತ್ ಸಾವು ಒಂದು ನಿಖರವಾದ ವ್ಯಾಖ್ಯಾನವನ್ನು ಹೊಂದಿದೆ. ರೋಗಲಕ್ಷಣಗಳು ಪ್ರಾರಂಭವಾದ ಒಂದು ಗಂಟೆಯೊಳಗೆ ಅಥವಾ ಸಾಕ್ಷಿಯಾಗದ ಪ್ರಕರಣಗಳಲ್ಲಿ ವ್ಯಕ್ತಿ ಕೊನೆಯದಾಗಿ ಜೀವಂತವಾಗಿ ಕಾಣಿಸಿಕೊಂಡ 24 ಗಂಟೆಗಳ ಒಳಗೆ ಸಂಭವಿಸುವ ಸಾವನ್ನು ಇದು ಸೂಚಿಸುತ್ತದೆ.
ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಈ ತಿಂಗಳು ಪ್ರಕಟವಾದ ನವದೆಹಲಿಯ AIIMS ನ ಹೊಸ ಅಧ್ಯಯನವು ನಿಖರವಾಗಿ ಈ ವಿದ್ಯಮಾನವನ್ನು ಪರಿಶೀಲಿಸಲು ಹೊರಟಿದೆ. ಈ ರೀತಿಯ ಹಠಾತ್ ಸಾವುಗಳು ಏಕೆ ಸಂಭವಿಸುತ್ತಿವೆ ಎಂಬುದನ್ನು ತಿಳಿಯಲು ಮುಂದಾಗಿದೆ. ಪರೀಕ್ಷಿಸಿದ ಎಲ್ಲಾ ಶವಪರೀಕ್ಷೆಗಳಲ್ಲಿ, 180 ಸಾವುಗಳು (8.1%) ಹಠಾತ್ ಸಾವಿಗೆ ಕಟ್ಟುನಿಟ್ಟಾದ ಮಾನದಂಡಗಳನ್ನು ಸೂಚಿಸಿವೆ. ಅದರಲ್ಲಿ ಕೆಲವೊಂದು ಅಂಶಗಳು ಬೆಚ್ಚಿ ಬೀಳಿಸುವಂತಿದೆ.
ಒಟ್ಟು 103 ಸಾವು ಪ್ರಕರಣದಲ್ಲಿ 57.2ರಷ್ಟು ಮಂದಿ 18ರಿಮದ 45 ವರ್ಷದೊಳಗಿನವರು, ಅವರಲ್ಲಿ ಬಹುತೇಕರು ಆರೋಗ್ಯವಂತರು. ಅವರು ಮನೆಯಲ್ಲಿ, ಪ್ರಯಾಣ ಮಾಡುವಾಗ ಕುಸಿದು ಬೀಳುವುದು ಅಥವಾ ನಿದ್ರೆಯಲ್ಲಿ ನಿಧನರಾಗಿರುವುದು ವರದಿಯಾಗಿದೆ. ಹಾಗೆ ಈ ಸಾವುಗಳಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಾಗಿದೆ. ಹಾಗೆ ಎಲ್ಲಾ ವಯಸ್ಸಿನ ಗುಂಪುಗಳಲ್ಲೂ ಇದು ಕಂಡು ಬಂದಿದೆ.
ಭಾರತವು ವಿಶೇಷವಾಗಿ ಕಿರಿಯ ವಯಸ್ಕರಲ್ಲಿ ಹಠಾತ್ ಸಾವುಗಳನ್ನು ಪತ್ತೆಹಚ್ಚುವ ರಾಷ್ಟ್ರೀಯ ನೋಂದಾವಣೆಯನ್ನು ಹೊಂದಿಲ್ಲ. ಅಂತಹ ಸಾವುಗಳು ಸಂಭವಿಸಿದಾಗ ಒತ್ತಡ, ಜೀವನಶೈಲಿ, ಜಿಮ್ ವ್ಯಾಯಾಮಗಳು, ಕೋವಿಡ್ ಸೋಂಕು ಅಥವಾ ಲಸಿಕೆ ಬಗ್ಗೆ ಕಳವಳಗಳ ಹೊರಹಾಕಲಾಗುತ್ತದೆ. ಸದ್ಯ ಈಗ ಈ ಪರೀಕ್ಷೆಗಾಗಿ 2,214 ಶವ ಪರೀಕ್ಷೆಯನ್ನು ಪರಿಶೀಲಿಸಲಾಗಿದೆ.
ಯುವ ವಯಸ್ಕರಲ್ಲಿ ಹಠಾತ್ ಸಾವುಗಳಲ್ಲಿ 42.6% ಹೃದಯರಕ್ತನಾಳದ ಕಾರಣಗಳಿಂದಾಗಿ ಸಂಭವಿಸಿದೆ. ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಗಳ ತೀವ್ರ ಕಿರಿದಾಗುವಿಕೆ ಮೂಲ ಕಾರಣ ಎಂಬುದನ್ನು ಪತ್ತೆ ಮಾಡಲಾಗಿದೆ. ವಿಧಿ ವಿಜ್ಞಾನ ಪರಿಭಾಷೆಯಲ್ಲಿ ಶೇ. 70ಕ್ಕಿಂತ ಹೆಚ್ಚಿನ ಅಡ್ಡಿಗಳು ನಿರ್ಣಾಯಕ ಎಂದು ಪರಿಗಣಿಸಲಾಗುತ್ತದೆ.
ಹಾಗೆ ಯುವ ವಯಸ್ಕರಲ್ಲಿ ಸಂಭವಿಸಿದ ಹಠಾತ್ ಸಾವುಗಳಲ್ಲಿ 21.3%ರಷ್ಟು ಸಾವುಗಳಿಗೆ ನಿಖರವಾಗಿ ಕಾರಣ ಯಾವುದು ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಸಾವುಗಳಲ್ಲಿ ಶವಪರೀಕ್ಷೆಯ ಬಳಿಕವೂ ಸೂಕ್ತ ಕಾರಣ ಪತ್ತೆ ಮಾಡಲಾಗಿಲ್ಲ. ಇಂತಹ ಪ್ರಕರಣವನ್ನು ವಿವರಿಸಲಾಗದ ಸಾವು ಎಂದು ವರ್ಗೀಕರಿಸಲಾಗಿದೆ.
ಹೃದಯ ಕಾಯಿಲೆಗಳು ಪ್ರಾಬಲ್ಯ ಹೊಂದಿದ್ದರೂ, ಯುವ ವಯಸ್ಕರಲ್ಲಿ 21.3% ರಷ್ಟು ಉಸಿರಾಟದ ಕಾರಣಗಳು ಹಠಾತ್ ಸಾವುಗಳಿಗೆ ಕಾರಣವಾಗಿವೆ. ಇವುಗಳಲ್ಲಿ ನ್ಯುಮೋನಿಯಾ ಮತ್ತು ಕ್ಷಯರೋಗ, ಶ್ವಾಸಕೋಶದ ಮತ್ತು ಹರಡುವ ಎರಡೂ ರೂಪಗಳು ಸೇರಿವೆ. ಇವಿಷ್ಟೇ ಅಲ್ಲ ಆಲ್ಕೋಹಾಲ್, ಧೂಮಪಾನ ಸೇರಿ ಹಲವು ಅಭ್ಯಾಸಗಳು ಸಹ ಇಂತಹ ಪ್ರಕರಣಗಳಲ್ಲಿ ಸೂಕ್ಷ್ಮ ಕಾರಣಗಳಾಗಿ ಹೊರಹೊಮ್ಮಿವೆ.



Click it and Unblock the Notifications











