ಮುಲ್ತಾನಿ ಮಣ್ಣಿನೊಂದಿಗೆ ಕೃತಿ ಕರಬಂಧ ಅರಿಶಿನ ಶಾಸ್ತ್ರ..! ಏಕೆ..? ಏನಿದು ಮುಲ್ತಾನಿ ಮಿಟ್ಟಿ.?

ಸ್ಯಾಂಡಲ್‌ವುಡ್‌ನಲ್ಲಿ ನಟ ಯಶ್‌ ಜೊತೆ ಗೂಗ್ಲಿ, ಹಾಗೂ ತಿರುಪತಿ ಎಕ್ಸ್‌ಪ್ರೆಸ್‌, ಸೂಪರ್‌ ರಂಗ, ಬೆಳ್ಳಿ, ಮಾಸ್ತಿ ಗುಡಿ, ದಳಪತಿ ಮುಂತಾದ ಸಿನಿಮಾಗಳಲ್ಲಿ ನಾಯಕಿಯಾಗಿದ್ದ ನಟಿ ಕೃತಿ ಕರಬಂಧ ಇತ್ತೀಚೆಗೆ ಪುಲ್ಕಿತ್‌ ಸಮರ್ಥ್‌ ಜತೆ ವಿವಾಹವಾಗಿದ್ದರು. ಆಕೆ ಕನ್ನಡದ ಈ ಸಿನಿಮಾಗಳ ಬಳಿಕ ತೆಲುಗು, ತಮಿಳು ಬಹುಭಾಷಾ ನಟಿಯಾಗಿಯೂ ಕಾಣಿಸಿಕೊಂಡರು. ಇದೀರ ಅವರು ತಮ್ಮ ಅರಿಶಿನ ಶಾಸ್ತ್ರದ ಕೆಲವು ಫೋಟೋಗಳ ಹಂಚಿಕೊಂಡಿದ್ದು, ಕೆಲವೊಂದು ಗಮನ ಸೆಳೆದಿದೆ.

ಆಕೆಯ ಅರಿಶಿನ ಶಾಸ್ತ್ರ ಎಲ್ಲ ಮದುವೆಗಳಲ್ಲಿನ ಶಾಸ್ತ್ರಕ್ಕಿಂತ ಸ್ವಲ್ಪ ಭಿನ್ನವಾಗಿತ್ತು. ಏಕೆಂದರೆ ಅವರು ಮುಲ್ತಾನಿ ಮಣ್ಣಿನಲ್ಲಿ ಅರಶಿನ ಶಾಸ್ತ್ರ ನೆರವೇರಿದೆ. ಇಲ್ಲಿ ಮಣ್ಣಿಗೆ ಸ್ವಲ್ಪ ಅರಶಿನ ಹಾಕಿ ಅದನ್ನು ಮೈಗೆ ಹಚ್ಚಿಕೊಳ್ಳಲಾಗುತ್ತದೆ. ಹಾಗಾದ್ರೆ ಇದೇನು ಮುಲ್ತಾನಿ ಮಣ್ಣು, ಇದರ ಆರೋಗ್ಯಕ್ಕೆ ಏನಿದೆ ಲಾಭ ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.

Kriti Kharbanda Applied Multani Mitti For Haldi Ceremony

ಮುಲ್ತಾನಿ ಮಣ್ಣನ್ನು ಶತಮಾನಗಳಿಂದಲೂ ಚರ್ಮದ ಆರೈಕೆಗಾಗಿ ಬಳಸಲಾಗುತ್ತದೆ. ಇದನ್ನು ವಿಶೇಷವಾಗಿ ಬೇಸಿಗೆಯಲ್ಲಿ ಚರ್ಮದ ಆರೈಕೆಗಾಗಿ ಬಳಸಲಾಗುತ್ತದೆ. ಹಿಂದಿನ ಕಾಲದಿಂದಲೂ ಈ ಪೇಸ್ಟ್ ಅನ್ನು ಮುಖದ ಕಾಂತಿ ಹೆಚ್ಚಿಸಲು ಬಳಸಲಾಗುತ್ತಿದೆ. ಮುಲ್ತಾನಿ ಮಿಟ್ಟಿ ಪೇಸ್ಟ್ ಬೇಸಿಗೆಯಲ್ಲಿ ನಿಮ್ಮ ಮುಖದ ಕಾಂತಿ ಹೆಚ್ಚಿಸುತ್ತದೆ.

ಬೇಸಿಗೆಯಲ್ಲಿ ಚರ್ಮದ ಪಿಗ್ಮೆಂಟೇಶನ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಬಿಸಿಲಿನಿಂದ ಸುಟ್ಟ ತ್ವಚೆಯಿಂದ ಉಪಶಮನ ಪಡೆಯಲು ಮೊಸರಿನಲ್ಲಿ ನೆನೆಸಿದ ಮುಲ್ತಾನಿ ಮಿಟ್ಟಿಯನ್ನು ಹಚ್ಚುವುದರಿಂದ ಮುಖದಲ್ಲಿರುವ ನಸುಕಂದು ಮಚ್ಚೆಗಳು ನಿವಾರಣೆಯಾಗುತ್ತವೆ. ಜೊತೆಗೆ ಮುಲ್ತಾನಿ ಮಣ್ಣು ತಂಪಾಗಿಸುವ ಗುಣಗಳನ್ನು ಹೊಂದಿದೆ. ಬೇಸಿಗೆಯಲ್ಲಿ ಇದು ಚರ್ಮವನ್ನು ತಂಪಾಗಿಸುತ್ತದೆ ಮತ್ತು ಕಿರಿಕಿರಿಯನ್ನು ಶಮನಗೊಳಿಸುತ್ತದೆ. ಮುಲ್ತಾನಿ ಮಿಟ್ಟಿ ಪ್ಯಾಕ್ ಬಿಸಿಲಿನ ಪರಿಣಾಮಗಳನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ.

ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ

ಮುಲ್ತಾನಿ ಮಣ್ಣು ಮತ್ತು ಹಾಲನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ತ್ವಚೆಯಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಿ ಮುಖ ಕಾಂತಿಯುತವಾಗಿ ಕಾಣುತ್ತದೆ. ಅಲ್ಲದೆ ಬೇಸಿಗೆಯಲ್ಲಿ ಮುಖವು ಎಣ್ಣೆಯುಕ್ತ ಮತ್ತು ಜಿಗುಟಾದಂತಾಗುತ್ತದೆ. ಎಣ್ಣೆಯುಕ್ತ ಚರ್ಮದಿಂದಾಗಿ ಮುಖದ ಮೇಲೆ ಮೊಡವೆಗಳು ಉಂಟಾಗುತ್ತವೆ. ಮುಲ್ತಾನಿ ಮಿಟ್ಟಿ ಪೇಸ್ಟ್ ಮುಖದ ಮೇಲೆ ಸಂಗ್ರಹವಾದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದು ಮುಖದಲ್ಲಿರುವ ಎಲ್ಲಾ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ಮೈಬಣ್ಣವನ್ನು ಸುಧಾರಿಸುತ್ತದೆ. ಹೀಗಾಗಿ ಮೊಡವೆಗಳಿಂದ ಮುಕ್ತಿ ಪಡೆಯಬಹುದು.

ಮುಲ್ತಾನಿ ಮಿಟ್ಟಿ ತಿಳಿ ಕಂದು ಬಣ್ಣವನ್ನು ಹೊಂದಿರುತ್ತದೆ ಮತ್ತು ಖನಿಜಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬೇಸಿಗೆಯಲ್ಲಿ ಜನರು ಹೆಚ್ಚು ಬೆವರುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ ಮುಲ್ತಾನಿ ಮಿಟ್ಟಿಯನ್ನು ಬಳಸಿದರೆ ಬೆವರುವಿಕೆಯನ್ನು ನಿಯಂತ್ರಿಸಬಹುದು ಮತ್ತು ಚರ್ಮವನ್ನು ಆರೋಗ್ಯವಾಗಿಡಬಹುದು.

ಮುಲ್ತಾನಿ ಮಣ್ಣು ಬಳಸುವುದು ಹೇಗೆ

ತ್ವಚೆಯ ಮೇಲಿರುವ ಎಣ್ಣೆಯನ್ನು ನಿಯಂತ್ರಿಸಲು ನೀವು ಮುಲ್ತಾನಿ ಮಣ್ಣನ್ನು ಬಳಸುತ್ತಿದ್ದರೆ, ಮುಲ್ತಾನಿ ಮಣ್ಣನ್ನು ಪುಡಿ ಮಾಡಿ ಮತ್ತು ಅದಕ್ಕೆ ರೋಸ್ ವಾಟರ್ ಸೇರಿಸಿ ಮತ್ತು ಆ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಈ ಪೇಸ್ಟ್ ಅನ್ನು ಕಣ್ಣು ಮತ್ತು ತುಟಿಗಳಿಗೆ ಹಚ್ಚಬೇಡಿ, ಇಡೀ ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಹಚ್ಚುವುದರಿಂದ ತ್ವಚೆ ಆರೋಗ್ಯಕರವಾಗಿರುತ್ತದೆ.

ಚರ್ಮ ಒಣಗಿದ್ದರೆ ಮುಲ್ತಾನಿ ಮಿಟ್ಟಿಯನ್ನು ಹಾಲಿನೊಂದಿಗೆ ಬಳಸಿ. ಎರಡು ಚಮಚ ಮುಲ್ತಾನಿ ಮಣ್ಣನ್ನು ತೆಗೆದುಕೊಂಡು ಅದರಲ್ಲಿ ಎರಡು ಚಮಚ ಹಾಲು ಸೇರಿಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖಕ್ಕೆ 20 ನಿಮಿಷಗಳ ಕಾಲ ಹಚ್ಚಿ ಮತ್ತು 20 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಈ ಪೇಸ್ಟ್ ಅನ್ನು ಹಚ್ಚುವುದರಿಂದ ತ್ವಚೆಯ ಶುಷ್ಕತೆ ನಿವಾರಣೆಯಾಗುತ್ತದೆ ಮತ್ತು ಚರ್ಮವು ಆರೋಗ್ಯಕರವಾಗಿರುತ್ತದೆ.

ಇದೇ ಮಾರ್ಚ್‌ 15ರಂದು ಕೃತಿ ಕರಬಂಧ ಮತ್ತು ನಟ ಪುಲ್ಕಿತ್‌ ಸಮರ್ಥ್‌ ವಿವಾಹ ಸಮಾರಂಭ ನಡೆದಿತ್ತು. ಮಾರ್ಚ್‌ 16ರಂದು ಇವರು ತಮ್ಮ ವಿವಾಹದ ಕುರಿತು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದರು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Kriti Kharbanda Applied Multani Mitti For Haldi Ceremony

Kriti Kharbanda Applied Multani Mitti For Haldi Ceremony, So see Multani soil. Benefits Of Multani Mitti.
Story first published: Monday, March 25, 2024, 17:00 [IST]
X
Desktop Bottom Promotion