Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಕಿಡ್ನಿ ಸ್ಟೋನ್ ಚಿಕಿತ್ಸೆಗೆಂದು ಹೋದವಳಿಗೆ ಕೈ ಕಾಲು ಕತ್ತರಿಸಲಾಯ್ತು..!! ಯಾಕೆ.?
ಕಿಡ್ನಿ ಸ್ಟೋನ್ ಎಂಬುದು ಇತ್ತೀಚಿನ ದಿನದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಜನರ ಜೀವನ ಶೈಲಿ ಬದಲಾದಂತೆ ಈ ರೀತಿಯ ಕಾಯಿಲೆಗಳ ಪ್ರಮಾಣವೂ ಹೆಚ್ಚಾಗುತ್ತಿದೆ. ಕಿಡ್ನಿಯಲ್ಲಿ ಕಲ್ಲಾಗುವ ಸಮಸ್ಯೆ ಆರಂಭದಲ್ಲೇ ನಿಮ್ಮ ಅರಿವಿಗೆ ಬಂದರೆ ಉತ್ತಮ ಇಲ್ಲದಿದ್ದರೆ ಎಂತಹ ಸಮಸ್ಯೆ ಎದುರಾಗುತ್ತೆ ಅಂದ್ರೆ ನೀವು ಊಹಿಸಲು ಸಾಧ್ಯವಿಲ್ಲ.
ಯಾಕಂದ್ರೆ ಇಲ್ಲೊಬ್ಬ ಮಹಿಳೆ ಕಿಡ್ನಿ ಸ್ಟೋನ್ಗಾಗಿ ಚಿಕಿತ್ಸೆ ಪಡೆಯಲು ಹೋದಾಗ ಆಕೆ ತನ್ನೆರಡು ಕೈಗಳು ಹಾಗೂ ಎರಡು ಕಾಲುಗಳನ್ನು ಕಳೆದುಕೊಳ್ಳಬೇಕಾಯಿತು. ಹೌದು ಕಿಡ್ನಿ ಸ್ಟೋನ್ ಎಂಬ ಮಹಾ ಮಾರಿ ಆಕೆಯ ಜೀವನವನ್ನು ಶಾಶ್ವತವಾಗಿ ಅಂಗವೈಕಲ್ಯಕ್ಕೆ ದೂಡಿದೆ. ಹಾಗಾದ್ರೆ ಆಕೆಗೆ ಆಗಿದ್ದೇನು? ಏನಿದು ದುರಂತ ಅಂತ ಮುಂದೆ ಓದಿ.

ಅಮೆರಿಕದ 41 ವರ್ಷದ ಲುಸಿಂಡಾ ಮುಲ್ಲಿನ್ಸ್ ಸಾಮಾನ್ಯ ಮೂತ್ರಪಿಂಡದ ಕಲ್ಲಿನ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದರು. ಆದರೆ ಈ ಚಿಕಿತ್ಸೆ ಭಯಾನಕ ತಿರುವು ಪಡೆದ ನಂತರ ತನ್ನ ಎರಡೂ ಕಾಲುಗಳು ಮತ್ತು ಕೈಗಳನ್ನು ಕಳೆದುಕೊಂಡರು. ಆಕೆಯನ್ನು ಮೊದಲು ಸ್ಟ್ಯಾನ್ಫೋರ್ಡ್ನ ಫೋರ್ಟ್ ಲೋಗನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಆಂಬ್ಯುಲೆನ್ಸ್ನಲ್ಲಿ ಕೆಂಟುಕಿ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೂತ್ರಪಿಂಡದ ಕಲ್ಲು ಸೋಂಕಿಗೆ ಒಳಗಾಗಿದೆ ಮತ್ತು ಲುಸಿಂಡಾ ಸೆಪ್ಸಿಸ್ನಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದರು. ಹೀಗಾಗಿ ವೈದ್ಯರು ಆಕೆಯ ಎರಡೂ ಕಾಲುಗಳನ್ನು ಕತ್ತರಿಸಲೇಬೇಕಾದ ಅನಿವಾರ್ಯತೆ ಇದೆ ಎಂದು ಕುಟುಂಸ್ಥರಿಗೆ ತಿಳಿಸಿದರು. ಈ ದುರಂತದ ಮುನ್ಸೂಚನೆಯ ಹೊರತಾಗಿಯೂ ಲುಸಿಂಡಾ ಅವರ ಸಹೋದರಿ ಲೂಸಿ ಸ್ಮಿತ್ ಆಸ್ಪತ್ರೆಯಲ್ಲಿ ಕೈ ಕಾಲುಗಳಲ್ಲಿದ ಸಹೋದರಿಯ ಜೊತೆ ಫೋಟೋ ತೆಗೆಸಿಕೊಂಡು ಹಂಚಿಕೊಂಡಿದ್ದರು.
ಹಾಗಾದ್ರೆ ಸೆಪ್ಸಿಸ್ ಎಂದರೇನು?
ಸೆಪ್ಸಿಸ್ ಒಂದು ಸಾಮಾನ್ಯ ಮತ್ತು ಸಂಭಾವ್ಯ ಮಾರಣಾಂತಿಕ ಸ್ಥಿತಿಯಾಗಿದ್ದು ಅದು ಸೋಂಕಿನಿಂದ ಪ್ರಚೋದಿಸಲ್ಪಡುತ್ತದೆ. ಸೋಂಕು ಪೀಡಿತರ ದೇಹದಲ್ಲಿ ಎಲ್ಲಿಯಾದರೂ ಪ್ರಾರಂಭವಾಗಿರಬಹುದು ಮತ್ತು ದೇಹದ ಒಂದು ಭಾಗದಲ್ಲಿ ಮಾತ್ರ ಇರಬಹುದು ಅಥವಾ ಅದು ವ್ಯಾಪಕವಾಗಿರಬಹುದು.
ಎದೆ ಅಥವಾ ನೀರಿನ ಸೋಂಕುಗಳು, ಒಡೆದ ಹುಣ್ಣುಗಳಂತಹ ಹೊಟ್ಟೆಯ ಸಮಸ್ಯೆಗಳು ಅಥವಾ ಸರಳ ಚರ್ಮದ ಗಾಯಗಳ ನಂತರ ಸೆಪ್ಸಿಸ್ ಸಂಭವಿಸಬಹುದು. ತ್ವರಿತವಾಗಿ ಚಿಕಿತ್ಸೆ ನೀಡದಿದ್ದರೆ, ಸೆಪ್ಸಿಸ್ ಅಂತಿಮವಾಗಿ ಬಹು ಅಂಗಗಳ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.
ಪ್ರತಿ ವರ್ಷ, ಯುಕೆಯಲ್ಲಿ ಕನಿಷ್ಠ 250,000 ಜನರು ಸೆಪ್ಸಿಸ್ನಿಂದ ಬಳಲುತ್ತಾರೆ. ಇದರಲ್ಲಿ ಕನಿಷ್ಠ 44,000 ಮಂದಿ ನಿಧನರಾಗುತ್ತಾರೆ. 60,000 ಮಂದಿ ಶಾಶ್ವತವಾದ ಅಂಗವೈಕಲ್ಯಕ್ಕೆ ಒಳಗಾಗುತ್ತಾರೆ. ಮೊದಲೇ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಪಡೆಯುವುದರಿಂದ ಪ್ರತಿ ವರ್ಷ ಕನಿಷ್ಠ 14,000 ಸಾವುಗಳನ್ನು ತಡೆಯಬಹುದು.
ಸೆಪ್ಸಿಸ್ ದೇಹಕ್ಕೆ ಏನು ಮಾಡುತ್ತದೆ?
ಸೆಪ್ಸಿಸ್ ನಮ್ಮ ದೇಹದ ಮೇಲೆ ದಾಳಿ ಮಾಡುತ್ತದೆ. ರಕ್ತದೊತ್ತಡ ಗಮನಾರ್ಹ ಕುಸಿತಕ್ಕೆ ಕಾರಣವಾಗಬಹುದು, ತಲೆತಿರುಗುವಿಕೆ ಮತ್ತು ಮೂರ್ಛೆ ಉಂಟಾಗುತ್ತದೆ. ಸೆಪ್ಸಿಸ್ನಲ್ಲಿ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಓವರ್ಡ್ರೈವ್ಗೆ ಹೋಗುತ್ತದೆ ಎಂದು NHS ಹೇಳುತ್ತದೆ, ವ್ಯಾಪಕವಾದ ಉರಿಯೂತ, ಊತ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಪ್ರತಿಕ್ರಿಯೆಗಳ ಸರಣಿಯನ್ನು ಹೊಂದಿಸುತ್ತದೆ.
ಗಡಿಬಿಡಿಯ ಜೀವನ, ಒತ್ತಡದ ಬದುಕು, ಅಸಮರ್ಪಕ ಆಹಾರ ಕ್ರಮಗಳಿಂದ ಇಂದು ಅನೇಕರು ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಬಲಿಯಾಗಿರುತ್ತಾರೆ. ಒಮ್ಮೆ ಕಾಣಿಸಿಕೊಂಡ ಮೂತ್ರ ಪಿಂಡದ ಕಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆದು ಕಲ್ಲನ್ನು ನಿವಾರಿಸಿದ್ದರೂ ಸಹ ಪುನಃ ಪುನಃ ಮರುಕಳಿಸುವ ಸಾಧ್ಯತೆಗಳಿರುತ್ತವೆ. ಟೊಮೆಟೊ, ಬಸಳೆಗಳಂತಹ ತರಕಾರಿಗಳನ್ನು ಅಧಿಕವಾಗಿ ಬಳಸುವುದರಿಂದಲೂ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











