Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮಾನ್ಸೂನ್ ಸಮಯದಲ್ಲಿ ಜೀರ್ಣಕ್ರಿಯೆ ಸುಧಾರಿಸಲು ಇಂಥ ಆಹಾರಗಳಿಂದ ದೂರವಿರಿ
ಮಾನ್ಸೂನ್ ಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಮಯ, ಈ ಸಮಯದಲ್ಲಿ ನಮ್ಮ ದೇಹವು ಬಹಳ ಸೂಕ್ಷ್ಮವಾಗಿರುತ್ತದೆ. ಆಹಾರ ಮತ್ತು ನೀರಿನ ಮೇಲೆ ಸಹ ಬ್ಯಾಕ್ಟೀರಿಯಾ ಬಹಳ ಬೇಗ ಬೆಳೆಯುತ್ತದೆ, ಇದು ಸಹ ಆರೋಗ್ಯ ಹದಗೆಡಲು ಬಹುಮುಖ್ಯ ಕಾರಣವಾಗುತ್ತದೆ.
ಅದರಲ್ಲೂ ಮಳೆಗಾಲದಲ್ಲಿ ಆಹಾರದ ಬಗ್ಗೆ ಸಾಕಷ್ಟು ಜಾಗ್ರತೆವಹಿಸಲೇಬೇಕು, ಇಲ್ಲವಾದಲ್ಲಿ ಜೀರ್ಣಕ್ರಿಯೆ ಹಾಗೂ ಕರುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇದರಿಂದ ಗ್ಯಾಸ್ಟ್ರಿಕ್, ಹೊಟ್ಟೆನೋವು, ಅಸ್ವಸ್ಥತೆ, ಸೆಳೆತ, ಮಲಬದ್ಧತೆ, ಜಠರದುರಿತ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಎದುರಿಸಬಹುದು. ಆದ್ದರಿಂದ ಮಳೆಗಾಲದಲ್ಲಿ ನಾವು ಎಂಥಾ ಆಹಾರಗಳನ್ನು ಸೇವಿಸಬಾರದು, ಇದರಿಂದ ಆಗುವ ಸಮಸ್ಯೆಗಳೇನು ಮುಂದೆ ನೋಡೋಣ:

ಲಘು ಆಹಾರ ಸೇವಿಸಿ
ಮಳೆಗಾಲದಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾಗಿ ಕರಿದ ಆಹಾರವನ್ನು ತಿನ್ನುವ ಬಯಕೆ ಉಂಟಾಗುತ್ತದೆ. ಆದರೂ, ಭಾರೀ ಆಹಾರಗಳು ತಪ್ಪಿಸುವುದು ಬಹಳ ಮುಖ್ಯ. ಮಳೆಗಾಲವು ಅತ್ಯಂತ ಆರ್ದ್ರವಾಗಿರುವುದರಿಂದ ಇದು ಒಟ್ಟಾರೆ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ನೀವು ಭಾರವಾದ ಆಹಾರವನ್ನು ಸೇವಿಸಿದರೆ ಗ್ಯಾಸ್, ಆಮ್ಲೀಯತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಲಘುವಾಗಿ ತಿನ್ನಿರಿ ಮತ್ತು ಹಗುರವಾಗಿರಿ.

ಅತಿ ಹೆಚ್ಚು ನೀರು ಸೇವಿಸಿ
ದೇಹದಿಂದ ವಿಷವನ್ನು ಹೊರಹಾಕಲು ಮತ್ತು ಕರುಳನ್ನು ಆರೋಗ್ಯಕರವಾಗಿಡಲು ನೀರು ತುಂಬಾ ಸಹಾಯಕವಾಗಿದೆ. ಕೇವಲ ನೀರು ಮಾತ್ರವಲ್ಲ, ಕ್ಯಾಮೊಮೈಲ್ ಟೀ, ಗ್ರೀನ್ ಟೀ ಅಥವಾ ಶುಂಠಿ ನಿಂಬೆ ಚಹಾದಂತಹ ಗಿಡಮೂಲಿಕೆ ಚಹಾಗಳನ್ನು ಸಹ ನೀವು ಕುಡಿಯಬಹುದು. ಇದರಿಂದ ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಜೀರ್ಣಕಾರಿ ಕ್ರಿಯೆ ಎರಡರ ಮೇಲೂ ಪರಿಣಾಮಕಾರಿ ಪ್ರಭಾವ ಬೀರುತ್ತದೆ.

ಆಹಾರದಲ್ಲಿ ಪ್ರೋಬಯಾಟಿಕ್ಗಳನ್ನು ಸೇರಿಸಿ
ಮೊಸರು, ಮಜ್ಜಿಗೆ ಮತ್ತು ಚೀಸ್ನಿಂದ ಹುದುಗಿಸಿದ ಸೋಯಾಬೀನ್ವರೆಗೆ, ಪ್ರೋಬಯಾಟಿಕ್ಗಳು ಉತ್ತಮ ಬ್ಯಾಕ್ಟೀರಿಯಾದಿಂದ ತುಂಬಿರುತ್ತವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಪೋಷಣೆಯನ್ನು ಬೆಂಬಲಿಸುವ ಮೂಲಕ ಅದರ ಆರೋಗ್ಯವನ್ನು ಹೆಚ್ಚಿಸುತ್ತಾರೆ.

ಕಲುಷಿತ ನೀರು ಮತ್ತು ಆಹಾರವನ್ನು ತಪ್ಪಿಸಿ
ಮಾನ್ಸೂನ್ ಕಾಲದಲ್ಲಿ ಆಹಾರಗಳು ಬೇಗ ಕಲುಷಿತಗೊಳ್ಳುತ್ತದೆ. ಆಹಾರಗಳ ಮೇಲೆ ಬ್ಯಾಕ್ಟೀರಿಯಾ ದಾಳಿ ಮಾಡುತ್ತದೆ. ಆದ್ದರಿಂದ, ಹೊರಗಿನ ಅಥವಾ ಯಾವುದೇ ಮೂಲದಿಂದ ನೀರನ್ನು ಕುಡಿಯುವುದನ್ನು ತಪ್ಪಿಸಿ ಮತ್ತು ಮುಚ್ಚಿದ ಬಾಟಲಿಗಳಿಗೆ ಮಾತ್ರ ಆದ್ಯತೆ ನೀಡಿ. ಗೋಲ್ಗಪ್ಪಾ, ಪಾನಿಪುರಿ, ಜ್ಯೂಸ್, ತಣ್ಣಗಿನ ಆಹಾರಗಳನ್ನು ತಪ್ಪಿಸಿ.

ಸಮುದ್ರಾಹಾರ, ಡೈರಿ ಮತ್ತು ಸಕ್ಕರೆ ತಪ್ಪಿಸಿ
ಮಳೆಗಾಲದಲ್ಲಿ ನೀರು ಕಲುಷಿತವಾಗುವ ಸಂಭವ ಹೆಚ್ಚು. ಆದ್ದರಿಂದ ನೀವು ತಿನ್ನುವ ಮೀನುಗಳು ಬಹುಶಃ ಕಾಲರಾ ಅಥವಾ ಅತಿಸಾರಕ್ಕೆ ಆತಿಥ್ಯ ವಹಿಸಬಹುದಾದ್ದರಿಂದ ಹೆಚ್ಚಿನ ಸಮುದ್ರಾಹಾರವನ್ನು ಸೇವಿಸುವುದು ಸಮಂಜಸವಲ್ಲ. ಡೈರಿ ಉತ್ಪನ್ನಗಳು ಹೊಟ್ಟೆಯ ಮೇಲೆ ಭಾರವಾಗಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುವುದರಿಂದ ಡೈರಿ ಆಹಾರಗಳನ್ನು ಸಹ ತಪ್ಪಿಸಬೇಕು. ಸಂಸ್ಕರಿಸಿದ ಸಕ್ಕರೆಯನ್ನು ಕಡಿಮೆ ಮಾಡಿ ಏಕೆಂದರೆ ಇದು ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾವನ್ನು ಉತ್ತೇಜಿಸಲು ಕಾರಣವಾಗುತ್ತದೆ.



Click it and Unblock the Notifications