Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾನ್ಸೂನ್ ಸಮಯದಲ್ಲಿ ಜೀರ್ಣಕ್ರಿಯೆ ಸುಧಾರಿಸಲು ಇಂಥ ಆಹಾರಗಳಿಂದ ದೂರವಿರಿ
ಮಾನ್ಸೂನ್ ಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಮಯ, ಈ ಸಮಯದಲ್ಲಿ ನಮ್ಮ ದೇಹವು ಬಹಳ ಸೂಕ್ಷ್ಮವಾಗಿರುತ್ತದೆ. ಆಹಾರ ಮತ್ತು ನೀರಿನ ಮೇಲೆ ಸಹ ಬ್ಯಾಕ್ಟೀರಿಯಾ ಬಹಳ ಬೇಗ ಬೆಳೆಯುತ್ತದೆ, ಇದು ಸಹ ಆರೋಗ್ಯ ಹದಗೆಡಲು ಬಹುಮುಖ್ಯ ಕಾರಣವಾಗುತ್ತದೆ.
ಅದರಲ್ಲೂ ಮಳೆಗಾಲದಲ್ಲಿ ಆಹಾರದ ಬಗ್ಗೆ ಸಾಕಷ್ಟು ಜಾಗ್ರತೆವಹಿಸಲೇಬೇಕು, ಇಲ್ಲವಾದಲ್ಲಿ ಜೀರ್ಣಕ್ರಿಯೆ ಹಾಗೂ ಕರುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇದರಿಂದ ಗ್ಯಾಸ್ಟ್ರಿಕ್, ಹೊಟ್ಟೆನೋವು, ಅಸ್ವಸ್ಥತೆ, ಸೆಳೆತ, ಮಲಬದ್ಧತೆ, ಜಠರದುರಿತ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಎದುರಿಸಬಹುದು. ಆದ್ದರಿಂದ ಮಳೆಗಾಲದಲ್ಲಿ ನಾವು ಎಂಥಾ ಆಹಾರಗಳನ್ನು ಸೇವಿಸಬಾರದು, ಇದರಿಂದ ಆಗುವ ಸಮಸ್ಯೆಗಳೇನು ಮುಂದೆ ನೋಡೋಣ:

ಲಘು ಆಹಾರ ಸೇವಿಸಿ
ಮಳೆಗಾಲದಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾಗಿ ಕರಿದ ಆಹಾರವನ್ನು ತಿನ್ನುವ ಬಯಕೆ ಉಂಟಾಗುತ್ತದೆ. ಆದರೂ, ಭಾರೀ ಆಹಾರಗಳು ತಪ್ಪಿಸುವುದು ಬಹಳ ಮುಖ್ಯ. ಮಳೆಗಾಲವು ಅತ್ಯಂತ ಆರ್ದ್ರವಾಗಿರುವುದರಿಂದ ಇದು ಒಟ್ಟಾರೆ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ನೀವು ಭಾರವಾದ ಆಹಾರವನ್ನು ಸೇವಿಸಿದರೆ ಗ್ಯಾಸ್, ಆಮ್ಲೀಯತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಲಘುವಾಗಿ ತಿನ್ನಿರಿ ಮತ್ತು ಹಗುರವಾಗಿರಿ.

ಅತಿ ಹೆಚ್ಚು ನೀರು ಸೇವಿಸಿ
ದೇಹದಿಂದ ವಿಷವನ್ನು ಹೊರಹಾಕಲು ಮತ್ತು ಕರುಳನ್ನು ಆರೋಗ್ಯಕರವಾಗಿಡಲು ನೀರು ತುಂಬಾ ಸಹಾಯಕವಾಗಿದೆ. ಕೇವಲ ನೀರು ಮಾತ್ರವಲ್ಲ, ಕ್ಯಾಮೊಮೈಲ್ ಟೀ, ಗ್ರೀನ್ ಟೀ ಅಥವಾ ಶುಂಠಿ ನಿಂಬೆ ಚಹಾದಂತಹ ಗಿಡಮೂಲಿಕೆ ಚಹಾಗಳನ್ನು ಸಹ ನೀವು ಕುಡಿಯಬಹುದು. ಇದರಿಂದ ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಜೀರ್ಣಕಾರಿ ಕ್ರಿಯೆ ಎರಡರ ಮೇಲೂ ಪರಿಣಾಮಕಾರಿ ಪ್ರಭಾವ ಬೀರುತ್ತದೆ.

ಆಹಾರದಲ್ಲಿ ಪ್ರೋಬಯಾಟಿಕ್ಗಳನ್ನು ಸೇರಿಸಿ
ಮೊಸರು, ಮಜ್ಜಿಗೆ ಮತ್ತು ಚೀಸ್ನಿಂದ ಹುದುಗಿಸಿದ ಸೋಯಾಬೀನ್ವರೆಗೆ, ಪ್ರೋಬಯಾಟಿಕ್ಗಳು ಉತ್ತಮ ಬ್ಯಾಕ್ಟೀರಿಯಾದಿಂದ ತುಂಬಿರುತ್ತವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಪೋಷಣೆಯನ್ನು ಬೆಂಬಲಿಸುವ ಮೂಲಕ ಅದರ ಆರೋಗ್ಯವನ್ನು ಹೆಚ್ಚಿಸುತ್ತಾರೆ.

ಕಲುಷಿತ ನೀರು ಮತ್ತು ಆಹಾರವನ್ನು ತಪ್ಪಿಸಿ
ಮಾನ್ಸೂನ್ ಕಾಲದಲ್ಲಿ ಆಹಾರಗಳು ಬೇಗ ಕಲುಷಿತಗೊಳ್ಳುತ್ತದೆ. ಆಹಾರಗಳ ಮೇಲೆ ಬ್ಯಾಕ್ಟೀರಿಯಾ ದಾಳಿ ಮಾಡುತ್ತದೆ. ಆದ್ದರಿಂದ, ಹೊರಗಿನ ಅಥವಾ ಯಾವುದೇ ಮೂಲದಿಂದ ನೀರನ್ನು ಕುಡಿಯುವುದನ್ನು ತಪ್ಪಿಸಿ ಮತ್ತು ಮುಚ್ಚಿದ ಬಾಟಲಿಗಳಿಗೆ ಮಾತ್ರ ಆದ್ಯತೆ ನೀಡಿ. ಗೋಲ್ಗಪ್ಪಾ, ಪಾನಿಪುರಿ, ಜ್ಯೂಸ್, ತಣ್ಣಗಿನ ಆಹಾರಗಳನ್ನು ತಪ್ಪಿಸಿ.

ಸಮುದ್ರಾಹಾರ, ಡೈರಿ ಮತ್ತು ಸಕ್ಕರೆ ತಪ್ಪಿಸಿ
ಮಳೆಗಾಲದಲ್ಲಿ ನೀರು ಕಲುಷಿತವಾಗುವ ಸಂಭವ ಹೆಚ್ಚು. ಆದ್ದರಿಂದ ನೀವು ತಿನ್ನುವ ಮೀನುಗಳು ಬಹುಶಃ ಕಾಲರಾ ಅಥವಾ ಅತಿಸಾರಕ್ಕೆ ಆತಿಥ್ಯ ವಹಿಸಬಹುದಾದ್ದರಿಂದ ಹೆಚ್ಚಿನ ಸಮುದ್ರಾಹಾರವನ್ನು ಸೇವಿಸುವುದು ಸಮಂಜಸವಲ್ಲ. ಡೈರಿ ಉತ್ಪನ್ನಗಳು ಹೊಟ್ಟೆಯ ಮೇಲೆ ಭಾರವಾಗಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುವುದರಿಂದ ಡೈರಿ ಆಹಾರಗಳನ್ನು ಸಹ ತಪ್ಪಿಸಬೇಕು. ಸಂಸ್ಕರಿಸಿದ ಸಕ್ಕರೆಯನ್ನು ಕಡಿಮೆ ಮಾಡಿ ಏಕೆಂದರೆ ಇದು ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾವನ್ನು ಉತ್ತೇಜಿಸಲು ಕಾರಣವಾಗುತ್ತದೆ.



Click it and Unblock the Notifications