Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು!
ರಂಜಾನ್ ಉಪವಾಸ ಮಾಡುವಾಗ ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆ, ಬಾಯಾರಿಕೆ ಉಂಟಾಗದಿರಲು ಹೀಗೆ ಮಾಡಿ
ಇದೀಗ ಮುಸ್ಲಿಂರಿಗೆ ರಂಜಾನ್ ತಿಂಗಳು. ಈ ತಿಂಗಳಿನಲ್ಲಿ ರೋಜಾ ಅಂದರೆ ಉಪವಾಸ ಮಾಡುವುದು ನಿಯಮ. ಸೂರ್ಯೋದಯಕ್ಕೆ ಮುನ್ನವೇ ಆಹಾರ ಸೇವಿಸಿ, ದಿನವಿಡೀ ಒಂದು ಹನಿ ನೀರನ್ನೂ ಬಾಯಿಗೆ ಹಾಕದೆ ಉಪವಾಸ ಮಾಡುತ್ತಾರೆ. ಸಂಜೆ ಸೂರ್ಯಾಸ್ತದ ಬಳಿಕವಷ್ಟೇ ಮತ್ತೆ ಆಹಾರ ಸೇವಿಸುವುದು.
ಆದ್ದರಿಂದ ರಂಜಾನ್ ಸಮಯದಲ್ಲಿ ಅವರು ಸೇವಿಸುವ ಆಹಾರದಲ್ಲೂ ಇತರ ಸಮಯಕ್ಕಿಂತ ತಂಬಾನೇ ವ್ಯತ್ಯಾಸವಿರುತ್ತೆ. ಡ್ರೈ ಫ್ರೂಟ್ಸ್, ಹಣ್ಣುಗಳು, ಆರೋಗ್ಯಕರ ಕೊಬ್ಬಿನಂಶವಿರುವ ಆಹಾರಗಳು, ಆರೋಗ್ಯಕರ ಪಾನೀಯಗಳನ್ನು ಸೇವಿಸುತ್ತಾರೆ.
ಉಪವಾಸ ಮಾಡುವಾಗ ಕೆಲವರಿಗೆ ಹೊಟ್ಟೆ ಉಬ್ಬುವುದು, ಹಗಲಿನಲ್ಲಿ ತುಂಬಾ ಬಾಯಾರಿಕೆ ಅನಿಸುವುದು. ಪ್ರಸಿದ್ಧ ಸೆಲೆಬ್ರಿಟಿ ಡಯಟಿಷಿಯನ್ ಆಗಿರುವ ರುಜುತಾ ದ್ವಿವೇಕರ್ ಉಪವಾಸದ ಸಮಯದಲ್ಲಿ ಈ ಸಮಸ್ಯೆ ತಡೆಗಟ್ಟಲು 3 ಅದ್ಭುತ ಟಿಪ್ಸ್ ನೀಡಿದ್ದಾರೆ ನೋಡಿ:
ರಂಜಾನ್ಗೆ 3 ಆಹಾರ ಟಿಪ್ಸ್....

1. ಬೆಳಗ್ಗೆ ಮಿಲ್ಕ್ ಶೇಕ್ ತೆಗೆದುಕೊಳ್ಳಿ
ಸೂರ್ಯೋದಯಕ್ಕೆ ಮುನ್ನ ಆಹಾರ ಸೇವಿಸುವಾಗ ಹಣ್ಣುಗಳಿದ ತಯಾರಿಸಿದ ಮಿಲ್ಕ್ ಶೇಕ್ ಕುಡಿಯಿರಿ. ಇದರಿಂದ ದಿನವಿಡೀ ದೇಹದಲ್ಲಿ ನೀರಿನಂಶ ಕಾಪಾಡಬಹುದು ಜೊತೆಗೆ ಬಾಯಾರಿಕೆ ಕೂಡ ಉಂಟಾಗುವುದಿಲ್ಲ, ಹೊಟ್ಟೆಯೂ ತುಂಬಿರುತ್ತದೆ. ಜೊತೆಗೆ ಹೊಟ್ಟೆ ಹುಬ್ಬುವುದು ಹಾಗೂ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ.

2. ಮೊಸರು ಹಾಗೂ ಖರ್ಜೂರ ಜೊತೆಗೆ ಉಪವಾಸ ಮುರಿಯಿರಿ
ಇದು ಉಪವಾಸ ಮುರಿಯವ ಸಂಪ್ರದಾಯವೂ ಹೌದು. ಇವೆರಡರ ಕಾಂಬಿನೇಷನ್ ದೇಹವನ್ನು ತಂಪಾಗಿ ಇಡುವುದು ಜೊತೆಗೆ ರಾತ್ರಿ ತುಂಬಾ ತಿನ್ನುವುದನ್ನೂ ತೆಗಟ್ಟಬಹುದು. ಮೊದಲಿಗೆ ಖರ್ಜೂರ ತಿಂದು ನಂತರ ಬೇಕಾದರೆ ಮೊಸರು ಸೇವಿಸಬಹುದು. ಇಲ್ಲಾ ಎರಡನ್ನೂ ಒಟ್ಟಿಗೆ ಸೇವಿಸಬಹುದು.

3. ಉಪವಾಸ ಪ್ರಾರಂಭಿಸಿ ಎರಡು ವಾರದ ಬಳಿಕ ಸುಸ್ತು ಹೆಚ್ಚಿದರೆ
ಉಪವಾಸ ಪ್ರಾರಂಭಿಸಿದಾಗ ಅಷ್ಟೇನು ಸುಸ್ತೇನು ಅನಿಸುವುದಿಲ್ಲ, ಆದರೆ ಒಂದೆರಡು ವಾರಗಳು ಕಳೆಯುತ್ತಿದ್ದಂತೆ ಕೆಲವರಿಗೆ ನಿಶ್ಯಕ್ತಿ ಅನಿಸುವುದು ಅಥವಾ ಮಲಬದ್ಧತೆ ಸಮಸ್ಯೆ ಉಂಟಾಗುವುದು, ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುವುದು. ಈ ರೀತಿ ಅನಿಸುತ್ತಿದ್ದರೆ ರಾತ್ರಿ ಆಹಾರ ಸೇವಿಸಿದ ಬಳಿಕ ಆಲೀವ್ ಲಡ್ಡು ಅಥವಾ ಬೆಲ್ಲಮತ್ತು ತುಪ್ಪ ಅಥವಾ ಬಾಳೆಹಣ್ಣು ಸೇವಿಸಿ.



Click it and Unblock the Notifications