Latest Updates
-
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್
ರಂಜಾನ್ ಉಪವಾಸ ಮಾಡುವಾಗ ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆ, ಬಾಯಾರಿಕೆ ಉಂಟಾಗದಿರಲು ಹೀಗೆ ಮಾಡಿ
ಇದೀಗ ಮುಸ್ಲಿಂರಿಗೆ ರಂಜಾನ್ ತಿಂಗಳು. ಈ ತಿಂಗಳಿನಲ್ಲಿ ರೋಜಾ ಅಂದರೆ ಉಪವಾಸ ಮಾಡುವುದು ನಿಯಮ. ಸೂರ್ಯೋದಯಕ್ಕೆ ಮುನ್ನವೇ ಆಹಾರ ಸೇವಿಸಿ, ದಿನವಿಡೀ ಒಂದು ಹನಿ ನೀರನ್ನೂ ಬಾಯಿಗೆ ಹಾಕದೆ ಉಪವಾಸ ಮಾಡುತ್ತಾರೆ. ಸಂಜೆ ಸೂರ್ಯಾಸ್ತದ ಬಳಿಕವಷ್ಟೇ ಮತ್ತೆ ಆಹಾರ ಸೇವಿಸುವುದು.
ಆದ್ದರಿಂದ ರಂಜಾನ್ ಸಮಯದಲ್ಲಿ ಅವರು ಸೇವಿಸುವ ಆಹಾರದಲ್ಲೂ ಇತರ ಸಮಯಕ್ಕಿಂತ ತಂಬಾನೇ ವ್ಯತ್ಯಾಸವಿರುತ್ತೆ. ಡ್ರೈ ಫ್ರೂಟ್ಸ್, ಹಣ್ಣುಗಳು, ಆರೋಗ್ಯಕರ ಕೊಬ್ಬಿನಂಶವಿರುವ ಆಹಾರಗಳು, ಆರೋಗ್ಯಕರ ಪಾನೀಯಗಳನ್ನು ಸೇವಿಸುತ್ತಾರೆ.
ಉಪವಾಸ ಮಾಡುವಾಗ ಕೆಲವರಿಗೆ ಹೊಟ್ಟೆ ಉಬ್ಬುವುದು, ಹಗಲಿನಲ್ಲಿ ತುಂಬಾ ಬಾಯಾರಿಕೆ ಅನಿಸುವುದು. ಪ್ರಸಿದ್ಧ ಸೆಲೆಬ್ರಿಟಿ ಡಯಟಿಷಿಯನ್ ಆಗಿರುವ ರುಜುತಾ ದ್ವಿವೇಕರ್ ಉಪವಾಸದ ಸಮಯದಲ್ಲಿ ಈ ಸಮಸ್ಯೆ ತಡೆಗಟ್ಟಲು 3 ಅದ್ಭುತ ಟಿಪ್ಸ್ ನೀಡಿದ್ದಾರೆ ನೋಡಿ:
ರಂಜಾನ್ಗೆ 3 ಆಹಾರ ಟಿಪ್ಸ್....

1. ಬೆಳಗ್ಗೆ ಮಿಲ್ಕ್ ಶೇಕ್ ತೆಗೆದುಕೊಳ್ಳಿ
ಸೂರ್ಯೋದಯಕ್ಕೆ ಮುನ್ನ ಆಹಾರ ಸೇವಿಸುವಾಗ ಹಣ್ಣುಗಳಿದ ತಯಾರಿಸಿದ ಮಿಲ್ಕ್ ಶೇಕ್ ಕುಡಿಯಿರಿ. ಇದರಿಂದ ದಿನವಿಡೀ ದೇಹದಲ್ಲಿ ನೀರಿನಂಶ ಕಾಪಾಡಬಹುದು ಜೊತೆಗೆ ಬಾಯಾರಿಕೆ ಕೂಡ ಉಂಟಾಗುವುದಿಲ್ಲ, ಹೊಟ್ಟೆಯೂ ತುಂಬಿರುತ್ತದೆ. ಜೊತೆಗೆ ಹೊಟ್ಟೆ ಹುಬ್ಬುವುದು ಹಾಗೂ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ.

2. ಮೊಸರು ಹಾಗೂ ಖರ್ಜೂರ ಜೊತೆಗೆ ಉಪವಾಸ ಮುರಿಯಿರಿ
ಇದು ಉಪವಾಸ ಮುರಿಯವ ಸಂಪ್ರದಾಯವೂ ಹೌದು. ಇವೆರಡರ ಕಾಂಬಿನೇಷನ್ ದೇಹವನ್ನು ತಂಪಾಗಿ ಇಡುವುದು ಜೊತೆಗೆ ರಾತ್ರಿ ತುಂಬಾ ತಿನ್ನುವುದನ್ನೂ ತೆಗಟ್ಟಬಹುದು. ಮೊದಲಿಗೆ ಖರ್ಜೂರ ತಿಂದು ನಂತರ ಬೇಕಾದರೆ ಮೊಸರು ಸೇವಿಸಬಹುದು. ಇಲ್ಲಾ ಎರಡನ್ನೂ ಒಟ್ಟಿಗೆ ಸೇವಿಸಬಹುದು.

3. ಉಪವಾಸ ಪ್ರಾರಂಭಿಸಿ ಎರಡು ವಾರದ ಬಳಿಕ ಸುಸ್ತು ಹೆಚ್ಚಿದರೆ
ಉಪವಾಸ ಪ್ರಾರಂಭಿಸಿದಾಗ ಅಷ್ಟೇನು ಸುಸ್ತೇನು ಅನಿಸುವುದಿಲ್ಲ, ಆದರೆ ಒಂದೆರಡು ವಾರಗಳು ಕಳೆಯುತ್ತಿದ್ದಂತೆ ಕೆಲವರಿಗೆ ನಿಶ್ಯಕ್ತಿ ಅನಿಸುವುದು ಅಥವಾ ಮಲಬದ್ಧತೆ ಸಮಸ್ಯೆ ಉಂಟಾಗುವುದು, ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುವುದು. ಈ ರೀತಿ ಅನಿಸುತ್ತಿದ್ದರೆ ರಾತ್ರಿ ಆಹಾರ ಸೇವಿಸಿದ ಬಳಿಕ ಆಲೀವ್ ಲಡ್ಡು ಅಥವಾ ಬೆಲ್ಲಮತ್ತು ತುಪ್ಪ ಅಥವಾ ಬಾಳೆಹಣ್ಣು ಸೇವಿಸಿ.



Click it and Unblock the Notifications











