Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಈ ಫುಡ್ ಸೇವಿಸಿದ್ರೆ ಡಿಹೈಡ್ರೇಷನ್ಗೆ ಒಳಗಾಗೋದು ಖಚಿತ: ಬೇಸಿಗೆಯಲ್ಲಿ ಆದಷ್ಟು ದೂರವೇ ಇರಿ!
ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ಹೆಚ್ಚು ನೀರಿನ ಅಂಶ ಅಗತ್ಯವಾಗಿ ಬೇಕಾಗುತ್ತೆ. ಹಾಗೆ ಡಿ ಹೈಡ್ರೇಷನ್ನಿಂದ ಪಾರಾಗಲು ಹೆಚ್ಚು ದ್ರಾವಣ ಇರುವ ಆಹಾರ ಸೇವಿಸುವುದು ಮುಖ್ಯ. ನಿರ್ಜಲೀಕರಣ ಬೇಸಿಗೆಯಲ್ಲಿ ದೊಡ್ಡ ಸಮಸ್ಯೆಯಾಗಿರುತ್ತದೆ. ದೇಹ ಸರಿಯಾಗಿ ಕೆಲಸ ಮಾಡಬೇಕಾದರೆ ಹೈಡ್ರೇಟ್ ಆಗಿರಬೇಕು. ಇದರಿಂದ ದೇಹವು ಸಂಪೂರ್ಣ ಚಟುವಟಿಕೆಯಿಂದ ಇರಲು ಸಹಾಯವಾಗುತ್ತದೆ.
ಆದ್ರೆ ನೀವು ನೀರು ಅಥವಾ ದ್ರಾವಣ ಅಂಶ ಕಡಿಮೆ ಇರುವ ಆಹಾರ ಸೇವಿಸಿದಾಗ ಇಲ್ಲವೆ ದೇಹಕ್ಕೆ ಅಗತ್ಯವಾಗಿ ಬೇಕಾದ ನೀರಿನ ಪ್ರಮಾಣವನ್ನು ನೀಡದೆ ಇದ್ದಾಗ ಏರುಪೇರಾಗಲಿದೆ. ದೇಹವು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಇರಬಹುದು. ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ಹೋಗುವುದು ನಿಮ್ಮ ದೇಹಕ್ಕೆ ನೀರಿನ ಅಂಶ ಹೆಚ್ಚಾಗಿ ಬೇಕು ಎಂಬುದನ್ನು ವಿವರಿಸುತ್ತದೆ. ಬೇಸಿಗೆಯಲ್ಲಿ ನಿಮ್ಮ ದೇಹ ಡಿ ಹೈಡ್ರೇಷನ್ಗೆ ಒಳಗಾದರೆ ಕೆಲಸ ಮಾಡುವಾಗ ಸಮಸ್ಯೆಗಳು ಎದುರಾಗುತ್ತವೆ. ದೇಹದ ಪ್ರತಿಯೊಂದು ಅಂಗದ ಮೇಲೆಯೂ ಪರಿಣಾಮ ಬೀರಲಿದೆ.

ನಿಮ್ಮ ದೇಹವು ಡಿಹೈಡ್ರೇಷನ್ಗೆ ಒಳಗಾದರೆ ನೀವು ಕುಸಿದು ಬೀಳಬಹುದು. ಹಾಗೆ ದೇಹದ ಚಟುವಟಿಕೆಯಲ್ಲಿ ಏರುಪೇರಾಗಬಹುದು. ಹಾಗಾದ್ರೆ ನೀವು ಸೇವಿಸುವ ಯಾವ ಆಗಾರ ಅಥವಾ ಪಾನಿಯ ನಿಮ್ಮಲ್ಲಿ ಡಿ ಹೈಡ್ರೇಷನ್ಗೆ ಒಳಗಾಗುವಂತೆ ಮಾಡಬಹುದು. ಇದಕ್ಕೆ ಕಾರಣವಾಗುವ ಆಹಾರ ಯಾವುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉಪ್ಪು ಹೆಚ್ಚಾಗಿರುವ ತಿಂಡಿಗಳು
ನೀವು ಬೇಸಿಗೆಯ ಸಮಯದಲ್ಲಿ ಉಪ್ಪು ಹೆಚ್ಚಾಗಿರುವ ಆಹಾರಗಳ ಸೇವಿಸಿದರೆ ನೀರು ಹೆಚ್ಚಾಗಿ ಕುಡಿಯಬೇಕಾಗುತ್ತದೆ. ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕಬೇಕಾದರೆ ನೀರಿನ ಅಂಶ ಹೆಚ್ಚಾಗಿ ಸೇವಿಸಬೇಕಾಗುತ್ತದೆ. ಹೀಗಾಗಿ ನೀರಿನ ಅಂಶ ಹೆಚ್ಚಾಗಿರುವ ಅಂಶ ಸೇವಿಸುವುದು ಉತ್ತಮ. ಹಣ್ಣುಗಳು, ಸೌತೆಕಾಯಿ, ಸೇರಿದಂತೆ ಸೋಡಿಯಂ ಅಂಶ ಕಡಿಮೆ ಇರುವ ಆಹಾರ ಸೇವಿಸುವುದು ನೀವು ಡಿಹೈಡ್ರೇಷನ್ಗೆ ಒಳಗಾಗುವುದನ್ನು ತಪ್ಪಿಸಲಿದೆ.
ಕೆಫೀನ್ ಅಂಶ ಹೊಂದಿರುವ ಪಾನೀಯ
ಕೆಫೀನ್ ನಿಮ್ಮ ವಿಸರ್ಜನೆ ಹೆಚ್ಚು ಮಾಡುವ ಒಂದು ಅಂಶವಾಗಿದೆ. ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅದರ ಬದಲಾಗಿ ಹರ್ಬಲ್ ಟೀ, ನಿಂಬೆ ರಸ, ಗಿಡಮೂಲಿಕೆ ಚಹಾಗಳು, ಶರಬತ್, ಮಜ್ಜಿಗೆ ಮತ್ತು ಹಣ್ಣುಗಳು ಮತ್ತು ಲೆಮನ್ ಟೀ ಅಂತಹ ಪಾನಿಯ ಸವಿಯುವುದು ನಿಮಗೆ ಚೈತನ್ಯ ನೀಡಲಿದೆ.
ಸಕ್ಕರೆಯುಕ್ತ ಆಹಾರಗಳು
ನಿಮ್ಮ ದೇಹಕ್ಕೆ ಸಕ್ಕರೆಯನ್ನು ಸಂಸ್ಕರಿಸಲು ಹೆಚ್ಚಿನ ನೀರು ಬೇಕಾಗುತ್ತದೆ. ಹೆಚ್ಚಿನ ಸಕ್ಕರೆಯನ್ನು ಸೇವಿಸುವುದರಿಂದ ಬಾಯಾರಿಕೆ ಹೆಚ್ಚಾಗುತ್ತದೆ. ಬೇಸಿಗೆ ಕಾಲದಲ್ಲಿ ಸಕ್ಕರೆಯು ನಿಮಗೆ ಹಾನಿಕಾರಕವಾಗಿ ಬದಲಾಗಬಹುದು. ಸಕ್ಕರೆ ಅಂಶ ಪೂರೈಸುವ ಪರ್ಯಾಯ ವಸ್ತುಗಳು ಅಥವಾ ಹಣ್ಣಗಳ ಸೇವಿಸಬಹುದು.
ಸಂಸ್ಕರಿಸಿದ ಆಹಾರ
ಸಂಸ್ಕರಿಸಿದ ಆಹಾರಗಳು ಹೆಚ್ಚಿನ ಉಪ್ಪಿನ ಅಂಶ ಹೊಂದಿರುತ್ತವೆ. ಇದರಿಂದ ನಿಮ್ಮ ದೇಹಕ್ಕೆ ನಿರ್ಜಲೀಕರಣ ಉಂಟಾಗಬಹುದು. ಇದರಲ್ಲೂ ಚಿಪ್ಸ್, ಕರಿದ ತಿಂಡಿಗಳ ಸೇವನೆಯನ್ನು ತಡೆಯುವುದು ಮುಖ್ಯ.
ಆಲ್ಕೋಹಾಲ್
ಬೇಸಿಗೆಯಲ್ಲಿ ಆಲ್ಕೋಹಾಲ್ ಸೇವನೆಯು ನಿಮ್ಮ ದೇಹವು ನಿರ್ಜಲೀಕರಣಕ್ಕೆ ತುತ್ತಾಗಲು ಕಾರಣವಾಗುತ್ತದೆ. ಆಲ್ಕೋಹಾಲ್ ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ನಿರ್ಜಲೀಕರಣಗೊಳಿಸಬಹುದು. ಹೀಗಾಗಿ ಆಲ್ಕೋಹಾಲ್ ಸೇವನೆ ತಡೆಯುವುದು ಮುಖ್ಯ, ಇಲ್ಲವೆ ನೀರು ಹೆಚ್ಚಾಗಿ ಕುಡಿಯುವುದು ಮುಖ್ಯವಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾಗಿರುವ ಸಲಹೆ ಸೇರಿದಂತೆ ಈ ವಿಷಯವು ಅಂತರ್ಜಾಲದಲ್ಲಿ ಲಭ್ಯವಿರುವ ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಈ ಸಲಹೆಗಳ ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ)
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications