Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆಚ್ಚುತ್ತಿರುವ ಕೊರೊನಾ: ಈಗ ಬಂದಿರುವ ಕೊರೊನಾ ರೂಪಾಂತರ JN.1 ಅಪಾಯಕಾರಿಯೇ?
ಕೊರೊನಾ...ಕೊರೊನಾ ಈಗ ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಇದ್ದರದ್ದೇ ಸುದ್ದಿ. ದಿನದಿಂದ ದಿನಕ್ಕೆ ಕೇಸ್ಗಳು ಹೆಚ್ಚಾಗುತ್ತಿದೆ, ಕೋವಿಡ್ 19 ರೂಪಾಂತರ JN.1 ವೇಗವಾಗಿ ಹಬ್ಬುತ್ತಿದೆ. ಕೇರಳದಲ್ಲಿ ಕೋವಿಡ್ ಕೇಸ್ಗಳು ದಿನದಿಂದ ದಿನಕ್ಕೆ ವೇಗವಾಗಿ ಹಬ್ಬುತ್ತಿದೆ, ಈ ರೂಪಾಂತರ ಅಪಾಯಕಾರಿಯೇ, ಇದರ ಬಗ್ಗೆ ತುಂಬಾನೇ ಮುನ್ನೆಚ್ಚರಿಕೆ ಅಗ್ಯತವಿದೆಯೇ? ಎಂಬುವುದರ ಬಗ್ಗೆ ತಜ್ಞರು ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ:

ಕೋವಿಡ್ ರೂಪಾಂತರ JN.1 ಲಕ್ಷಣಗಳೇನು?
ಇದೀಗ ಕೋವಿಡ್ಬಂದಿರುವ ರೋಗಿಗಳಲ್ಲಿ ಈ ಲಕ್ಷಣಗಳು ಕಂಡು ಬರುವುದು:
* ಜ್ವರ, ಶೀತ, ಗಂಟಲು ನೋವು, ತಲೆನೋವು, ಕೆಮ್ಮು, ಮೂಗು ಕಟ್ಟಿದಂತಾಗುವುದು ಈ ಬಗೆಯ ಲಕ್ಷಣಗಳು ಕಂಡು ಬರುವುದು.
ಏನಾದರೂ ಇತರ ಲಕ್ಷಣಗಳು ಕಂಡು ಬಂದಿದೆಯೇ?
ಇದುವರೆಗೆ ಯಾವುದೇ ಪ್ರತ್ಯೇಕ ಲಕ್ಷಣಗಳು ಕಂಡುಬಂದಿಲ್ಲ, ಈ ಹಿಂದೆ ಕೋವಿಡ್ ಬಂದಾಗ ಜನರಿಗೆ ಕಾಣಿಸಿಕೊಂಡಂಥ ರೋಗ ಲಕ್ಷಣಗಳೇ ಈ ರೂಪಾಂತರದಲ್ಲಿಯೂ ಕಂಡು ಬರುತ್ತಿದೆ. ಆದರೆ ಕೆಲವರಲ್ಲಿ ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಂಡು ಬರುತ್ತಿದೆ.
ಈ ರೂಪಾಂತರ ಬಂದ ಮೇಲೆ ಭಾರತದಲ್ಲಿ ಇದುವರೆಗೆ ಎಷ್ಟು ಕೇಸ್ಗಳು ಪತ್ತೆಯಾಗಿವೆ?
JN.1 ರೂಪಾಂತರ ಕೋವಿಡ್ ಕೇಸ್ಗಳು ಭಾರತದಲ್ಲಿ ಇದೀಗ 1,828 ಜನರಲ್ಲಿ ಪತ್ತೆಯಾಗಿದೆ, ಕೇರಳದಲ್ಲಿ ಕೋವಿಡ್ಗೆ 5 ಜನರು ಪ್ರಾಣ ಬಿಟ್ಟಿದ್ದಾರೆ.
ಈ ಹೊಸ ರೂಪಾಂತರ ಅಪಾಯಕಾರಿಯೇ?
* ಸಿಡಿಸಿ ( The Centers for Disease Control and Prevention) ಪ್ರಕಾರ ಇದುವರೆಗೆ ಪತ್ತೆಯಾಗಿರುವ ಕೇಸ್ಗಳಿಂದ ನೋಡುವುದಾದರೆ ಈ ರೂಪಾಂತರ ಅಷ್ಟೇನು ಗಂಭೀರವಲ್ಲ ಎಂದು ಹೇಳಲಾಗುವುದು. ಈ ರೂಪಾಂತರದಿಂದಾಗಿ ಜನರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
* ಜನರು ಆತಂಕ ಪಡಬೇಕಾಗಿಲ್ಲ
ಈ ಕೋವಿಡ್ ರೂಪಾಂತರ ಕುರಿತು ಜನರು ಹೆಚ್ಚೇನು ಆತುರಪಡಬೇಕಾಗಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಎಲ್ಲಾ ರೀತಿಯ ಮುನ್ನೆಚ್ಚರಿಕೆವಹಿಸಲಾಗಿದೆ ಎಂಬುವುದಾಗಿ ರಾಜ್ಯ ಸರ್ಕರ ಹೇಳಿದೆ.
ಯಾರಿಗೆ ಈ ಕೋವಿಡ್ JN.1 ರೂಪಾಂತರ ಹರಡುವ ಸಾಧ್ಯತೆ ಹೆಚ್ಚು?
ಈ ಮೊದಲು ಯಾರಿಗೆ ಕೊರೊನಾ ಸೋಂಕು ತಗುಲಿತ್ತೋ ಅವರಿಗೆ ಹಾಗೂ ಕೊರೊನಾ ಲಸಿಕೆ ಪಡೆಯದೇ ಇರುವವರಿಗೆ ಹರಡುವ ಸಾಧ್ಯತೆ ಇದೆ. ಆದ್ದರಿಂದ ಕೊರೊನಾ ಲಸಿಕೆ ಪಡೆಯದೇ ಇರುವವರು ಲಸಿಕೆಯನ್ನು ಪಡೆಯಿರಿ, ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುವವರು ಈ ಕುರಿತು ಜಾಗ್ರತೆವಹಿಸಬೇಕಾಗಿದೆ.
ಹಿರಿಯ ನಾಗರಿಕರಿಗೆ ಮಾಸ್ಕ್ ಕಡ್ಡಾಯ ಎಂಬ ಸೂಚನೆ ನೀಡಿದ ರಾಜ್ಯ ಸರ್ಕಾರ
ಹಿರಿಯ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆದ್ದರಿಂದ ರಾಜ್ಯ ಸರ್ಕಾರ 60 ವರ್ಷ ಮೇಲ್ಪಟ್ಟವರು ಹೊರಗಡೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಿದೆ. 60 ವರ್ಷ ಮೇಲ್ಪಟ್ಟವರಷ್ಟೇ ಅಲ್ಲ ಈ ಸಮಯದಲ್ಲಿ ಎಲ್ಲರೂ ಮಾಸ್ಕ್ ಧರಿಸಿದರೆ ತುಂಬಾ ಒಳ್ಳೆಯದು.
ಡಾ. ಕೆವಿ ರವಿಯವರ ಸಲಹೆಯೇನು?
ಬೆಂಗಳೂರು ಮೆಡಿಕಲ್ ಕಾಲೇಜ್ನ ಮುಖ್ಯಸ್ಥರಾಗಿರುವ ಡಾ. ಕೆ ರವಿಯವರು ' ಆಪತ್ತು ಬಾರದಂತೆ ತಡೆಯಲು ನಾವು ಸಿದ್ಧತೆ ಮಾಡಿಕೊಂಡಿರಬೇಕು, ಈ ಹಿಂದೆ ನಾವು ಸಿದ್ದತೆ ಮಾಡಿಕೊಂಡಿರಲಿಲ್ಲ, ಹೀಗಾಗಿ ತುಂಬಾ ಅನುಭವಿಸಿದ್ದೆವು, ಆದರೆ ಈಗ ಎಲ್ಲಾ ಸಿದ್ಧತೆ ಮಾಡುಕೊಳ್ಳಬೇಕು' ಎಂಬುವುದಾಗಿ ಹೇಳಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications