Latest Updates
-
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ!
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ಧಗೆ: ಹೀಟ್ಸ್ಟ್ರೋಕ್ನ ಈ ಲಕ್ಷಣ ವ್ಯಕ್ತಿಯಲ್ಲಿ ಕಂಡು ಬಂದರೆ ಜೀವಕ್ಕೆ ಅಪಾಯ!
ರಾಜ್ಯದಲ್ಲಿ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ, ಮಾರ್ಚ್ ಶುರುವಾಗುವ ಮುನ್ನವೇ ಬೇಸಿಗೆ ಶುರುವಾಗಿದೆ. ಏಪ್ರಿಲ್- ಮೇ ತಿಂಗಳು ಇನ್ನಷ್ಟು ಸೆಕೆ ಹೆಚ್ಚಾಗಬಹುದು. ಉತ್ತರ ಕನ್ನಡ, ಮಂಗಳೂರು-ಉಡುಪಿಯಲ್ಲಿ ಹೀಟ್ವೇವ್ ಉಂಟಾಗಿದೆ, ಅಂದರೆ ಫೆಬ್ರವರಿ 26-27ಕ್ಕೆ ಅತ್ಯಧಿಕ ಉಷ್ಣಾಂಶ ತಲುಪಿದೆ.
ಹೊರಗಡೆ ಸ್ವಲ್ಪ ಹೊತ್ತು ಓಡಾಡಿದರ ಸುಸ್ತಾಗಿ ಬಿಡುತ್ತೇವೆ, ಬಿಸಿಲಿನ ತಾಪಮಾನ ಅಷ್ಟೊಂದು ಇದೆ. ತಾಪಮಾನ 38.7°C ತಲುಪಿದರೆ ಹೀಟ್ವೇವ್ ಎಂದು ಕರೆಯಲಾಗುವುದು, ಮಂಗಳೂರಿನಲ್ಲಿ ಫೆಬ್ರವರಿ 26ಕ್ಕೆ 37.2°C ಉಷ್ಣಾಂಶ ತಲುಪಿತ್ತು.

ಬಿಸಿಲಿನ ಧಗೆ ಹೆಚ್ಚಿರುವಾಗ ಜನರು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು, ಏಕೆಂದರೆ ಹೀಟ್ಸ್ಟ್ರೋಕ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದು. ಬೇಸಿಗೆಯಲ್ಲಿ ಆರೋಗ್ಯದ ದೃಷ್ಟಿಯಿಂದ ಈ ರೀತಿ ಆರೈಕೆ ಮಾಡುವುದು ಒಳ್ಳೆಯದು.
1. ಬಿಸಿಲಿನಲ್ಲಿ ಓಡಾಡುವಾಗ ಕೊಡೆ ಹಿಡಿದು ಓಡಾಡಿ
2. ಹತ್ತಿಯ ಬಟ್ಟೆಗಳನ್ನು ಧರಿಸಿ, ಬಿಗಿಯಾದ ಉಡುಪು ಅಥವಾ ಕಡು ಬಣ್ಣದ ಉಡುಪು, ಪಾಲಿಸ್ಟಾರ್ ಮುಂತಾದ ಉಡುಪುಗಳು ಸೆಕೆ ಹೆಚ್ಚಿಸುತ್ತದೆ
ಹೊರಗಡೆ ಓಡಾಡುವಾಗ ಕ್ಯಾಪ್ ಧರಿಸಿ
ಬಿಸಿಲಿನಲ್ಲಿ ಕೆಲಸ ಮಾಡುವವರು ಮಧ್ಯಾಹ್ನ ಹೊತ್ತು ಮಾಡಬೇಡಿ ( ರೋಡ್ ಕೆಲಸ, ಗಾರೆ ಕೆಲಸ ಹೀಗೆ ಬಿಸಿಲಿನಲ್ಲಿ ಕೆಲಸ ಮಾಡುವವರು ಬೆಳಗ್ಗೆ ಮತ್ತು ಸಂಜೆ ಕೆಲಸ ಮಾಡಿ ಮಧ್ಯಾಹ್ನ ವಿಶ್ರಾಂತಿ ತೆಗೆದುಕೊಳ್ಳಬೇಕು)
ಮನೆಯನ್ನು ಕೂಡ ತಂಪಾಗಿ ಇಡಿ
ಸಾಕಷ್ಟು ನೀರು ಕುಡಿಯಿರಿ, ಈ ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವುದು ಒಳ್ಳೆಯದು
ಬಿಸಿಲಿನಲ್ಲಿ ಓಡಾಡುವಾಗ ಯಾರಾದರು ತಲೆ ತಿರುಗಿ ಬಿದ್ದರೆ ಅವರನ್ನು ನೆರಳಿನಲ್ಲಿ ಕೂರಿಸಿ ಆಂಬ್ಯೂಲೆನ್ಸ್ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿ
ಬರಿ ನೀರು ಕುಡಿಯಲು ಬೇಸರವಾದರೆ ನಿಂಬೆ ಜ್ಯೂಸ್, ಮಜ್ಜಿಗೆ, ಪುರ್ನಪುಳಿ, ಕಹಿಕಹಿಳಿ ಜ್ಯೂಸ್ ಅಂತೆಲ್ಲಾ ಮಾಡಿ ಕುಡಿಯಿರಿ.
ಏನು ಮಾಡಬಾರದು?
ಮಧ್ಯಾಹ್ನ ಬಿಸಿಲಿನಲ್ಲಿ ಓಡಾಡಬೇಡಿ
ಬೇಸಿಗೆಯಲ್ಲಿ ಕಾಫಿ, ಟೀ ಕುಡಿಯಬೇಡಿ.
ಹೀಟ್ ಸ್ಟ್ರೋಕ್ ಉಂಟಾದವರಗೆ ಚಿಕಿತ್ಸೆ ಕೊಡಿಸಲು ಮರೆಯದಿರಿ.
ವ್ಯಕ್ತಿಗೆ ಹೀಟ್ಸ್ಟ್ರೋಕ್ ಉಂಟಾಗಿದೆ ಎಂದು ತಿಳಿಯುವುದು ಹೇಗೆ?
ಬಿಸಿಲಿಗೆ ಹೋದಾಗ ವ್ಯಕ್ತಿಯಲ್ಲಿ ಈ ಲಕ್ಷಣಗಳು ಕಂಡು ಬಂದರೆ ಹೀಟ್ಸ್ಟ್ರೋಕ್ ಆಗಿದೆ ಎಂದರ್ಥ:
ಮೈ ಉಷ್ಣಾಂಶ 104 ಡಿಗ್ರಿF ಇರುತ್ತದೆ
ವರ್ತನೆಯಲ್ಲಿ ವ್ಯತ್ಯಾಸ ಉಂಟಾಗುವುದು(ಒಂದು ರೀತಿಯ ಕೋಪ-, ಅವರನ್ನು ಹಿಡಿಯುವುದೇ ಕಷ್ಟವಾಗುವುದು)
ಕಣ್ಣುಗಳು ಮಂಜಾಗುವುದು
ಮಾತನಾಡಲು ಕಷ್ಟವಾಗುವುದು
ತಲೆಸುತ್ತು
ಹೃದಯಬಡಿತ ಹೆಚ್ಚಾಗುವುದು
ರಕ್ತದೊತ್ತಡ ಕಡಿಮೆಯಾಗುವುದು
ವಾಂತಿ
ಮೂರ್ಛೆ ಹೋಗುವುದು
ತ್ವಚೆ ಬಿಳುಚಿಕೊಳ್ಳುವುದು
ತ್ವಚೆ ಡ್ರೈಯಾಗುವುದು
ತುಂಬಾನೇ ಸುಸ್ತು
ಈ ಹೀಟ್ ಸ್ಟ್ರೋಕ್ ಉಂಟಾದಾಗ ಕೂಡಲೇ ಚಿಕಿತ್ಸೆ ದೊರೆಯದಿದ್ದರೆ ಈ ಅಪಾಯಗಳಿವೆ
ವ್ಯಕ್ತಿ ಕೋಮಾಗೆ ಜಾರಬಹುದು
ಸ್ನಾಯುಗಳು ದುರ್ಬಲವಾಗುವುದು
ರಕ್ತದೊತ್ತಡ ತುಂಬಾನೇ ಕಡಿಮೆಯಾಗುವುದು
ಅಂಗಾಂಗ ವೈಫಲ್ಯ(ಉಸಿರಾಟದ ಸಮಸ್ಯೆ,ಕಿಡ್ನಿ ಡ್ಯಾಮೇಜ್, ಹೃದಯಾಘಾತ, ಲಿವರ್ ಸಮಸ್ಯೆ) ಹೀಗೆ ಅನೇಕ ಸಮಸ್ಯೆಗಳು ಉಂಟಾಗಬಹುದು
ವ್ಯಕ್ತಿಗೆ ಸಾವು ಕೂಡ ಸಂಭವಿಸಬಹುದು.
ಹಾಗಾಗಿ ಬಿಸಿಲಿನ ತಾಪಮಾನ ಹೆಚ್ಚಿರುವಾಗ ಬಿಸಿಲಿನಲ್ಲಿ ಓಡಾಡಬೇಡಿ. ಕೆಲಸ ಕಾರ್ಯಗಳನ್ನು ಬೆಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಮಾಡಿ, ಮಧ್ಯಾಹ್ನ ಹೊತ್ತಿನಲ್ಲಿ ನೆರಳಿನಲ್ಲಿ ವಿಶ್ರಾಂತಿ ಪಡೆಯಿರಿ.
ದ್ವಿಚಕ್ರ ವಾಹನದಲ್ಲಿ ಓಡಾಡುವವರು ಈ ಅವಧಿಯಲ್ಲಿ ಓಡಾಡುವಾಗ ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಎಳನೀರು, ಮಜ್ಜಿಗೆ ಅಂತ ಕುಡಿಯಿರಿ. ತುಂಬಾ ಸುಸ್ತು ಅನಿಸಿದಾಗ ತಿನ್ನಲು ಹೋಗಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications