Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಣ್ಣಂಚು ತೇವವಾಗಿಸಿದ ಕ್ಯಾನ್ಸರ್ನಿಂದ ಸಾಯುವ ಮುನ್ನ ಮಹಿಳೆ ಬರೆದ ಕೊನೆಯ ಸಾಲುಗಳು..!!
ಇತ್ತೀಚಿಗೆ ಕ್ಯಾನ್ಸರ್ನಿಂದ ಉಂಟಾಗುತ್ತಿರುವ ಸಾವುಗಳು ಎಲ್ಲರನ್ನು ಆತಂಕಕ್ಕೆ ತಳ್ಳಿದೆ. ಅದರಲ್ಲೂ ಯುವ ಸಮುದಾಯಕ್ಕೆ ಇದೊಂದು ಶಾಪವಾಗುತ್ತಿದೆ. ಆರೋಗ್ಯವಂತರಲ್ಲೂ ಕ್ಯಾನ್ಸರ್ ಕಂಡುಬರುತ್ತಿದೆ. ಹೀಗಾಗಿ ಕ್ಯಾನ್ಸರ್ ಕುರಿತು ಹತ್ತು ಹಲವು ಸಂಸ್ಥೆಗಳು, ಸರ್ಕಾರಗಳು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಲೇ ಇವೆ. ಆದರೆ ಕ್ಯಾನ್ಸರ್ ಹಿಮ್ಮೆಟ್ಟಿಸಲು ಸೂಕ್ತ ಚಿಕಿತ್ಸೆ ಮತ್ತು ಮಾರ್ಗದರ್ಶನದ ಅಗತ್ಯತೆ ಇಂದಿಗೂ ಹಾಗೇ ಉಳಿದಿದೆ.
ಆದರೆ ಇತ್ತೀಚಿಗೆ ಮಹಿಳೆಯೊಬ್ಬರು ಕ್ಯಾನ್ಸರ್ನಿಂದ ಸಾಯುವ ಮುನ್ನ ಹಂಚಿಕೊಂಡಿರುವ ಸಂದೇಶ ವೈರಲ್ ಆಗಿದ್ದು, ಓದುಗರ ಕಣ್ಣಲ್ಲಿ ನೀರು ತರಿಸಿದೆ. ಇಂಗ್ಲೆಂಡ್ ಮೂಲದ ಮಹಿಳೆ ಅಪರೂಪದ ಕ್ಯಾನ್ಸರ್ಗೆ ತುತ್ತಾಗಿ ಕೊನೆಯುಸಿರೆಳೆದಿದ್ದು, ಆಕೆಯ ಕೊನೆಯ ಸಾಲುಗಳು ಓದುಗರ ಕಣ್ಣಂಚ್ಚು ಒದ್ದೆಯಾಗಿಸಿದೆ.

ಇಂಗ್ಲೆಂಡ್ನ ಡೇನಿಯಲ್ಲಾ ಟಿ ಎಂಬಾಕೆ, ಚೋಲಾಂಜಿಯೋಕಾರ್ಸಿನೋಮ ಕ್ಯಾನ್ಸರ್ ಅಂದರೆ ದುಗ್ದರಸ ಗ್ರಂಥಿ, ಪಿತ್ತರಸನಾಳದ ಕ್ಯಾನ್ಸರ್ನಿಂದ ಬಳಲುತ್ತಿದ್ದಳು, ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾರೆ. ಆದರೆ ಆಕೆಯ ಕೊನೆಯ ಸಂದೇಶ ಮಾತ್ರ ಎಲ್ಲರ ಗಮನ ಸೆಳೆದಿದೆ. ಕ್ಯಾನ್ಸರ್ ರೋಗಿಗಳಿಗೆ ಮಾತ್ರವಲ್ಲ ಜೀವನದಲ್ಲಿ ಸಮಸ್ಯೆ ಎದುರಿಸುವ ಪ್ರತಿಯೊಬ್ಬರಿಗೂ ಹೊಸ ಚಿಗುರು ನೀಡುತ್ತಿದೆ.
ಆಕೆ ಮೃತಪಡುವ ಮುನ್ನ ಈ ಸಂದೇಶ ಬರೆದಿಟ್ಟಿತ್ತು ಮೃತಪಟ್ಟ ಬಳಿಕ ಕುಟುಂಬಸ್ಥರು ಅದನ್ನು ಹಂಚಿಕೊಂಡಿದ್ದಾರೆ. ಲಿಂಕ್ಡ್ಇನ್ ಖಾತೆಯಲ್ಲಿ ಆಕೆಯ ಸಂದೇಶ ಸಿಕ್ಕಾಪಟ್ಟೆ ವೈರಲ್ ಆಗಿದೆ.
''ನೀವು ಇದನ್ನು ಓದುತ್ತಿದ್ದರೆ ಇದರರ್ಥ ನಾನು ಕ್ಯಾನ್ಸರ್ನೊಂದಿಗೆ ಯುದ್ಧದಲ್ಲಿ ಸತ್ತಿದ್ದೇನೆ ಮತ್ತು ನನ್ನ ಪರವಾಗಿ ನನ್ನ ಕುಟುಂಬ ನನ್ನ ಅಂತಿಮ ಸಂದೇಶವನ್ನು ಪೋಸ್ಟ್ ಮಾಡುತ್ತಿದೆ. "ಎಲ್ಲಾ ಕ್ಯಾನ್ಸರ್ಗಳು ಜೀವನಶೈಲಿಯ ಆಯ್ಕೆಗಳಿಂದ ಉಂಟಾಗುವುದಿಲ್ಲ". ತನ್ನ ರೋಗನಿರ್ಣಯದ ಬಗ್ಗೆ ವಿವರಗಳನ್ನು ಹಂಚಿಕೊಳ್ಳುತ್ತಾ, "ನನ್ನ ವಿಷಯದಲ್ಲಿ, ನಾನು ತುಂಬಾ ಆರೋಗ್ಯವಾಗಿದ್ದೆ, ನನ್ನ ಪಿತ್ತರಸ ನಾಳಗಳಲ್ಲಿ ಕ್ಯಾನ್ಸರ್ ಪ್ರಾರಂಭವಾಯಿತು, ಅದು ನನ್ನ ನಿಯಂತ್ರಣದಲ್ಲಿ ಏನನ್ನೂ ಉಂಟುಮಾಡಲಿಲ್ಲ ಮತ್ತು ನನ್ನ ಜೀವನವು ಮತ್ತೆ ಎಂದಿಗೂ ಒಂದೇ ಆಗಿರಲಿಲ್ಲ."
"ಚೋಲಾಂಜಿಯೋಕಾರ್ಸಿನೋಮವು ಯಾವುದೇ ಸ್ಪಷ್ಟ ಕಾರಣಗಳಿಲ್ಲದ ಅಪರೂಪದ ಆಕ್ರಮಣಕಾರಿ ಕ್ಯಾನ್ಸರ್ ಆಗಿದೆ ಮತ್ತು ಯಾವುದೇ ಚಿಕಿತ್ಸೆ ಇಲ್ಲ. ಮುಂಬರುವ ವರ್ಷಗಳಲ್ಲಿ ಈ ಭಯಾನಕ ಕ್ರೂರ ಕಾಯಿಲೆಯ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ಮಾಡಲಾಗುತ್ತದೆ, ಇದರಿಂದಾಗಿ ಹೆಚ್ಚಿನ ಜೀವಗಳನ್ನು ಉಳಿಸಬಹುದು" ಎಂದು ಆಕೆ ಹೇಳಿದ್ದಾಳೆ.
''ಆದ್ದರಿಂದ ಹೇಳುವುದಾದರೆ, ನಮಗೆ ಏನಾಗುತ್ತದೆ ಎಂಬುದನ್ನು ನಾವು ನಿಯಂತ್ರಿಸಲು ಸಾಧ್ಯವಾಗದಿದ್ದರೂ, ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನಾವು ನಿಯಂತ್ರಿಸಬಹುದು. ನಾನು ತುಂಬಾ ಕುಗ್ಗಿದರು ನಾನು ಕಳೆದುಕೊಳ್ಳುತ್ತಿರುವ ಜೀವನಕ್ಕೆ ದುಃಖಿಸದೆ, ಬದಲಿಗೆ ನಾನು ಬಿಟ್ಟುಹೋದ ಪ್ರತಿ ಕ್ಷಣವನ್ನು ಆನಂದಿಸಲು ನಿರ್ಧರಿಸಿದೆ.
ನಾನು ಯಾವಾಗಲೂ ಹೇಳಿದಂತೆ ಮತ್ತು ನಂಬಿರುವಂತೆ ನೀವು ಜೀವನದಲ್ಲಿ ಸಣ್ಣ ವಿಷಯಗಳನ್ನು ಆನಂದಿಸಬೇಕು ಮತ್ತು ಪ್ರತಿ ಕ್ಷಣವನ್ನು ಪಾಲಿಸಬೇಕು! ನಿಮ್ಮ ಜೀವನವನ್ನು ರೋಮ್ಯಾಂಟಿಕ್ ಮಾಡಿ! ನಿಮಗೆ ಸಂತೋಷವನ್ನುಂಟುಮಾಡುವದನ್ನು ಮಾಡಿ ಮತ್ತು ಜೀವನದ ಸಂತೋಷವನ್ನು ನಿಮ್ಮಿಂದ ದೂರವಿಡಲು ಯಾರಿಗೂ ಬಿಡಬೇಡಿ.
ನಾನು ನನ್ನ ಜೀವನವನ್ನು ಪ್ರೀತಿಸಿದೆ. ನಾನು ಸಾಧಿಸಿದ್ದೆಲ್ಲವೂ ನನಗೆ ಬೇಕಾಗಿತ್ತು. ನಾನು ನನ್ನ ಕೆಲಸ, ನನ್ನ ಪತಿ, ನನ್ನ ಕುಟುಂಬ, ನನ್ನ ಸ್ನೇಹಿತರು ಮತ್ತು ನನ್ನ ನಾಯಿ, ಮತ್ತು ನಾವು ಖರೀದಿಸಲಿರುವ ಮನೆ ಮತ್ತು ನಾವು ನಮಗಾಗಿ ಮಾಡಿಕೊಳ್ಳುತ್ತಿರುವ ಭವಿಷ್ಯವನ್ನು ಇಷ್ಟಪಟ್ಟೆ. ನನ್ನ ಕತ್ತಲೆಯ ದಿನದಲ್ಲಿ ಜೊತೆಯಾದ ನನ್ನ ಲಿಯೋ.
ಆದ್ದರಿಂದ ನನ್ನ ಜೀವನವನ್ನು ತುಂಬಾ ಮಾಂತ್ರಿಕವಾಗಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಸಣ್ಣ ವಿಷಯಗಳನ್ನು ಆನಂದಿಸುವ ಬಗ್ಗೆ ನಾನು ಹೇಳಿದ್ದನ್ನು ನೆನಪಿಸಿಕೊಳ್ಳಿ
"ನಾವು ಒಟ್ಟಿಗೆ ಇಲ್ಲದಿರುವ ನಾಳೆ ಎಂದಾದರೂ ಇದ್ದರೆ, ನೀವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಅಂಶವಿದೆ. ನೀವು ಅಂದುಕೊಂಡಿದ್ದಕಿಂತ ನೀವು ಹೆಚ್ಚು ಧೈರ್ಯಶಾಲಿ, ನೀವು ತೋರುತ್ತಿರುವುದಕ್ಕಿಂತ ಹೆಚ್ಚು ಬಲಶಾಲಿ ಮತ್ತು ನೀವು ಯೋಚಿಸುವುದಕ್ಕಿಂತ ಹೆಚ್ಚು ಬುದ್ಧಿವಂತರು. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ, ನಾವು ಬೇರೆಯಾಗಿದ್ದರೂ ಸಹ ... ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ.
ಮತ್ತು ಕೊನೆಯದಾಗಿ ನನ್ನ ಪ್ರೀತಿಯ, ಸುಂದರ ಟಾಮ್ಗೆ, ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ಯಾವಾಗಲೂ ಇಷ್ಟಪಡುತ್ತೇನೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನನ್ನ ಜೀವನದಲ್ಲಿ ತುಂಬಾ ಪ್ರೀತಿ ಮತ್ತು ಸಂತೋಷವನ್ನು ತಂದಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಜೀವನವನ್ನು ಆನಂದಿಸಿ, ನೀವು ಅದಕ್ಕೆ ಅರ್ಹರು''
ಆಕೆಯ ಈ ಸಾಲುಗಳು ಓದುಗರಿಗೆ ಸ್ಪೂರ್ತಿ ನೀಡಿದೆ. ಕ್ಯಾನ್ಸರ್ನಿಂದ ಆಕೆ ಮೃತಪಡುವ ಮುನ್ನ ಇದಿಷ್ಟೂ ಸಾಲುಗಳನ್ನು ಆಕೆಯ ಬರೆದಿದ್ದಳು, ಆದರೆ ಕುಟುಂಬಸ್ಥರು ಈಗ ಆಕೆಯ ಕೊನೆಯ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಏನಿದು ದುಗ್ಧರಸ ಕ್ಯಾನ್ಸರ್..?
ಲಿಂಫೋಮಾವು ಅಥವಾ ದುಗ್ಧರಸ ವ್ಯವಸ್ಥೆಯಲ್ಲಿ ಬೆಳವಣಿಗೆಯಾಗುವ ಕ್ಯಾನ್ಸರ್ ಆಗಿದೆ. ದುಗ್ಧರಸ ವ್ಯವಸ್ಥೆಯು ನಾಳಗಳು ಮತ್ತು ಗ್ರಂಥಿಗಳ ಜಾಲವಾಗಿದೆ. ನಾಳಗಳ ಮೂಲಕ ಹರಿಯುವ ದುಗ್ಧರಸವು ಲಿಂಫೋಸೈಟ್ಸ್ ಎಂದು ಕರೆಯಲ್ಪಡುವ ಬಿಳಿ ರಕ್ತ ಕಣಗಳನ್ನು ಹೊಂದಿರುತ್ತದೆ. ಪಿತ್ತರಸ ನಾಳದ ಕ್ಯಾನ್ಸರ್ಗೆ ವೈದ್ಯಕೀಯ ಪದವಾದ ಚೋಲಾಂಜಿಯೋಕಾರ್ಸಿನೋಮವು ಅಪರೂಪದ ಮತ್ತು ಸಂಕೀರ್ಣ ರೀತಿಯ ಕ್ಯಾನ್ಸರ್ ಆಗಿದೆ, ಇದು ಸಣ್ಣ ಕರುಳನ್ನು ಯಕೃತ್ತು ಮತ್ತು ಪಿತ್ತಕೋಶಕ್ಕೆ ಸೇರುವ ಟ್ಯೂಬ್ಗಳಲ್ಲಿ ಪ್ರಾರಂಭವಾಗುತ್ತದೆ.
ಈ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚುವುದು ಕಷ್ಟ ಮತ್ತು ಅನೇಕ ಸಂದರ್ಭಗಳಲ್ಲಿ, ಅದರ ಮುಂದುವರಿದ ಹಂತಗಳಲ್ಲಿ ಗುರುತಿಸಲಾಗುತ್ತದೆ. ದೀರ್ಘಕಾಲದ ಪಿತ್ತರಸ ನಾಳದ ಉರಿಯೂತ, ಪ್ರಾಥಮಿಕ ಸ್ಕ್ಲೆರೋಸಿಂಗ್ ಕೋಲಾಂಜೈಟಿಸ್ (PSC) ಸೋಂಕುಗಳು ಮತ್ತು ನಾಳಗಳೊಳಗೆ ಕಲ್ಲುಗಳ ಬೆಳವಣಿಗೆಯು ಸಂಭಾವ್ಯ ಲಕ್ಷಣವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
