Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಧುಮೇಹಿಗಳಿಗೆ ಗುಡ್ ನ್ಯೂಸ್: ಭಾರತದ ಮೊಟ್ಟ ಮೊದಲ ಬಯೋಬ್ಯಾಂಕ್ ಆರಂಭ..!!
ವಿಶ್ವದಾದ್ಯಂತ ಲಕ್ಷಾಂತರ ಜನರು ಈಗ ಮಧುಮೇಹದಿಂದ ಬಳಲುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಈ ಸಂಖ್ಯೆ ಅತ್ಯಧಿಕವಾಗಿದೆ ಎನ್ನಬಹುದು. ಏಕೆಂದರೆ ಭಾರತದಲ್ಲಿ ಯುವ ಪೀಳಿಗೆಯಿಂದ ಹಿಡಿದು ಹಿರಿಯರಿಗೆ ಈಗ ಮಧುಮೇಹ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಸಂಖ್ಯೆ ನಿತ್ಯ ಏರಿಕೆಯಾಗುತ್ತಲೇ ಇದೆ. 2023 ರ ವೇಳೆಗೆ ಪ್ರಪಂಚದಾದ್ಯಂತ 578 ದಶಲಕ್ಷಕ್ಕೂ ಹೆಚ್ಚು ಜನರು ಮಧುಮೇಹಕ್ಕೆ ಒಳಗಾಗಿದ್ದಾರೆ ಎಂಬ ಆಘಾತಕಾರಿ ವರದಿ ಕೂಡ ಇದೆ.
ವಿಶೇಷವಾಗಿ ಭಾರತದಲ್ಲಿ ಲಕ್ಷಾಂತರ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಒಮ್ಮೆ ಮಧುಮೇಹಕ್ಕೆ ಒಳಗಾದವರು ಜೀವನದ ಉದ್ದಕ್ಕೂ ಅದರ ಮೇಲೆ ನಿಗಾ ಇಡಬೇಕಾಗುತ್ತದೆ. ಯಾವಾಗಲು ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಆದ್ರೆ ಇಂತಹ ಮಧುಮೇಹದಿಂದ ಬಳಲುತ್ತಿರುವವರಿಗೆ ಈಗ ಶುಭ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಭಾರತದಲ್ಲೇ ಮೊಟ್ಟ ಮೊದಲ ಮಧುಮೇಹ ಬಯೋಬ್ಯಾಂಕ್ ಆರಂಭಗೊಂಡಿದೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಈ ಮಧುಮೇಹ ಬಯೋಬ್ಯಾಂಕ್ ಸ್ಥಾಪನೆಗೊಂಡಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ (MDRF) ಸಹಯೋಗದೊಂದಿಗೆ ಈ ಜೈವಿಕ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ.
ಈ ಬಯೋಬ್ಯಾಂಕ್ ಮಧುಮೇಹ ಮತ್ತು ಇತರ ಸಂಬಂಧಿತ ಸಮಸ್ಯೆಗಳ ವಿರುದ್ಧ ಬದಲಾವಣೆ ತರುವ ಉದ್ದೇಶ ಹೊಂದಲಾಗಿದೆ. ಹಾಗೆ ಅಧ್ಯಯನದ ದೃಷ್ಟಿಯಿಂದ ಬಯೋಬ್ಯಾಂಕ್ನಲ್ಲಿ ಮಾದರಿಗಳ ಸಂಗ್ರಹಿಸಲಾಗುತ್ತದೆ. ಹಾಗೆ ಸಂಸ್ಕರಣೆ, ವಿಶ್ಲೇಷಣೆ, ವಿವರಣೆಯಂತಹ ಕೆಲಸಗಳು ನಡೆಯಲಿದೆ. ಇದರಲ್ಲಿ ಮಧುಮೇಹಕ್ಕೆ ಕಾರಣವಾಗುವ ಅಂಶಗಳು, ಪರಿಹಾರಗಳು, ಚಿಕಿತ್ಸಾ ವಿಧಾನ ಅರಿಯಲು ಸಹಕಾರಿಯಾಗಲಿದೆ.
ಚೆನ್ನೈನಲ್ಲಿ ಸ್ಥಾಪಿಸಲಾದ ಮೊದಲ ಮಧುಮೇಹ ಬಯೋಬ್ಯಾಂಕ್ ಹೊಸ ಬಯೋಮಾರ್ಕರ್ಗಳನ್ನು ಗುರುತಿಸಲು ಮತ್ತು ಮಧುಮೇಹದ ಆರಂಭಿಕ ಚಿಕಿತ್ಸೆಗೆ ಸಹಾಯ ಮಾಡುವ ಗುರಿಯನ್ನು ಹೊಂದಲಾಗಿದೆ. ಇದು ಭಾರತದಲ್ಲಿನ ವಿಶಿಷ್ಟ ಮಧುಮೇಹ ಪ್ರಕರಣಗಳ ಕುರಿತ ಅಧ್ಯಯನ ಹಾಗೂ ಚಿಕಿತ್ಸೆಗೂ ನೆರವಾಗಲಿದೆ.
ಅಂಕಿ ಅಂಶಗಳ ಪ್ರಕಾರ 10 ಕೋಟಿಗೂ ಹೆಚ್ಚು ಮಧುಮೇಹ ರೋಗಿಗಳು ಮತ್ತು 13.6 ಕೋಟಿ ಪ್ರಿಡಿಯಾಬಿಟಿಸ್ ಪ್ರಕರಣಗಳಿವೆ. ಇದು ವಿಶ್ವದ ಅತಿ ಹೆಚ್ಚು ಸಂಖ್ಯೆಯಾಗಿದೆ. ಆದರೆ ಮಧುಮೇಹ ಸಂಶೋಧನೆಗೆ ಸಹಾಯ ಮಾಡಲು ಜೈವಿಕ ಮಾದರಿಗಳ ದೊಡ್ಡ ಪ್ರಮಾಣದ ರೆಪೊಸಿಟರಿಗಳ ಕೊರತೆ ಇತ್ತು. ಆದರೆ ಅದರ ಸಣ್ಣ ಪ್ರಮಾಣ ಈಗ ಕಡಿಮೆಯಾದಂತಾಗಿದೆ.
ಮಧುಮೇಹ ಬಯೋಬ್ಯಾಂಕ್ನಲ್ಲಿ ಸುಮಾರು 75 ಸಾವಿರ ರಕ್ತದ ಮಾದರಿಗಳು ಮತ್ತು 10 ಸಾವಿರ ಸೀರಮ್ ಮಾದರಿಗಳನ್ನು ಸಂರಕ್ಷಿಸಲಾಗಿದೆ. ಇದಲ್ಲದೆ 16,000 ಜೆನೆಟಿಕ್ ಮಾದರಿಗಳು ಮತ್ತು 5,000 ಮೂತ್ರದ ಮಾದರಿಗಳನ್ನು ಸಂರಕ್ಷಿಸಲಾಗಿದೆ. ಇದು ಅತೀ ದೊಡ್ಡ ಬಯೋ ಬ್ಯಾಂಕ್ ಎಂಬ ಕೀರ್ತಿ ಪಡೆಯಲು ಕಾರಣವಾಗಿದೆ. ಇಷ್ಟು ಪ್ರಮಾಣದಲ್ಲಿನ ಮಾದರಿಗಳನ್ನು ಮುಂದಿನ ಅಧ್ಯಯನಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಜೈವಿಕ ಬ್ಯಾಂಕ್ಗಳು ಏಕೆ ಮುಖ್ಯವಾಗುತ್ತವೆ?
ಕ್ಯಾನ್ಸರ್ ಮತ್ತು ಯಕೃತ್ತಿನ ಕಾಯಿಲೆಯಂತಹ ಮಾರಣಾಂತಿಕ ಕಾಯಿಲೆಗಳಿಗೆ ಭಾರತವು ಜೈವಿಕ ಬ್ಯಾಂಕ್ಗಳನ್ನು ಹೊಂದಿದೆ. ಆದರೆ ಮಧುಮೇಹಕ್ಕೆ ಯಾವುದೇ ಬಯೋಬ್ಯಾಂಕ್ಗಳಿರಲಿಲ್ಲ. ಅಲ್ಲದೆ ಮಧುಮೇಹ ಕುರಿತ ಅಗತ್ಯ ಚಿಕಿತ್ಸೆ, ಸಂಶೋಧನೆಗೆ ಸೂಕ್ತ ಬ್ಯಾಂಕ್ನ ಅಗತ್ಯತೆ ಹೆಚ್ಚಾಗಿತ್ತು. ಮಧುಮೇಹದ ಬಗ್ಗೆ ಹೆಚ್ಚಾಗಿ ಅರಿಯಲು ಕಾಯಿಲೆಯ ಕುರಿತಂತೆ ಒಂದಿಷ್ಟು ಅಂಶಗಳ ಕಲೆ ಹಾಕಲು ಈ ಬಯೋಬ್ಯಾಂಕ್ಗಳು ನೆರವಾಗಲಿವೆ.
ಐಸಿಎಂಆರ್ ಮತ್ತು ಇಂಡಿಯಾ ಡಯಾಬಿಟಿಸ್ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ 11 ಕೋಟಿಗೂ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. 13 ಕೋಟಿಗೂ ಹೆಚ್ಚು ಜನರಿಗೆ ಮಧುಮೇಹವಿದೆ ಎಂದು ಶಂಕಿಸಲಾಗಿದೆ. ಗೋವಾ ಭಾರತದಲ್ಲಿ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿದೆ (ಶೇ. 26.4). ಅದರ ನಂತರ, ಪುದುಚೇರಿಯಲ್ಲಿ 26.3 ಪ್ರತಿಶತ ಮತ್ತು ಕೇರಳದಲ್ಲಿ 25.5 ರಷ್ಟು ಮಧುಮೇಹಿಗಳಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











